ಮೈಸೂರು

ಕೆ.ಆರ್‌ ಆಸ್ಪತ್ರೆಗೆ ಆಹಾರ ಆಯೋಗದ ಅಧ್ಯಕ್ಷರ ದಿಢೀರ್‌ ಭೆಟಿ : ಪರಿಶೀಲನೆ

ಮೈಸೂರು : ನಗರದ ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಗುರುವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಆಹಾರ ತಯಾರಿಕಾ ಘಟಕಕ್ಕೆ(ಪಾಕಶಾಲೆ) ತೆರಳಿ ಒಳರೋಗಿಗಳಿಗೆ ತಯಾರಿಸುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು.

ಆಹಾರ ಪದಾರ್ಥಗಳ ಗುಣಮಟ್ಟ, ತಾಜಾ ತರಕಾರಿ ಬಳಕೆ, ಅಡುಗೆ ತಯಾರಿಕೆಗೆ ಬಳಸುವ ನೀರು ಬಾಣಂತಿಯರಿಗೆ ನೀಡುವ ಮೊಟ್ಟೆ ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲನೆ ಮಾಡಿದರು.

ಕೆ.ಆರ್.ಆಸ್ಪತ್ರೆಯ ಆಹಾರ ತಯಾರಿಕಾ ಘಟಕ(ಪಾಕಶಾಲೆ)ಕ್ಕೆ ಭೇಟಿ ನೀಡಿ, ಒಳರೋಗಿಗಳಿಗೆ ತಯಾರಿಸುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿದರು. ಈ ಹಿಂದೆ ಭೇಟಿ ನೀಡಿದಾಗ ಆಹಾರ ತಯಾರಿಸುವ ಶ್ರೀ ಜಗದೀಶ್ ಟ್ರೇಡಿಂಗ್ ಕಂಪೆನಿಗೆ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಆಹಾರ ತಯಾರಿಕೆಗೆ ಬಳಕೆ ಮಾಡುವ ತರಕಾರಿ, ಅಡುಗೆ ತಯಾರಿಕೆಗೆ ಬಳಸುವ ನೀರು, ಬಾಣಂತಿಯರಿಗೆ ನೀಡುವ ಮೊಟ್ಟೆ ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಸುಧಾರಣೆಯಾಗಿದೆ. ಈ ರೀತಿ ತಯಾರಾದ ಆಹಾರ ತಾಜಾ ಇರುವಾಗಲೇ ಒಳ ರೋಗಿಗಳಿಗೆ ವಿತರಣೆಯಾಗಬೇಕು. ಟೈಂ ಟೇಬಲ್ ಚಾರ್ಟ್ ಪ್ರಕಾರವೇ ತಿಂಡಿ, ಊಟ ವಿತರಿಸುವಂತೆ ಸಲಹೆ ನೀಡಿದರು.

ಹಳೇ ಜಯದೇವ ವಾರ್ಡ್‌ಗಳಿಗೆ ಭೇಟಿ
ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಹಳೇ ಜಯದೇವ ಕಟ್ಟಡದ ವಾರ್ಡ್‌ಗಳಿಗೆ ತೆರಳಿದ ಅವರು ಶೌಚಾಲಯಗಳು, ಅವುಗಳಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ವಾರ್ಡ್‌ಗಳಲ್ಲಿ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಪ್ರತೀ ವಾರ್ಡ್‌ನಲ್ಲಿಯೂ ಒಳ ರೋಗಿಗಳಿಗೆ ಹತ್ತಿರದಲ್ಲೇ ಲಭ್ಯವಾಗುವಂತೆ ಕುಡಿಯುವ ನೀರಿನ ಕ್ಯಾನ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಗರಂ ಆದ ಅಧ್ಯಕ್ಷರು
ಜಯದೇವ ವಾರ್ಡ್‌ಗಳ ಶೌಚಾಲಯಗಳಲ್ಲಿ ನಲ್ಲಿಯ ನೀರು ಸೋರಿಕೆಯಾಗುತ್ತಿರುವುದು ಹಾಗೂ ಕೆಲವು ನಲ್ಲಿಗಳು, ಶೌಚಾಲಯದ ಬಾಗಿಲುಗಳು, ನೀರಿನ ಸಂಪುಗಳು ಮತ್ತು ಬಿಸಿ ನೀರಿನ ಗೀಸರ್‌ಗಳು ದುರಸ್ತಿಯಾಗದಿರುವುದನ್ನು ಕಂಡು ಗರಂ ಆದ ಅವರು ಕೂಡಲೇ ಶೌಚಾಯಲದಲ್ಲಿರುವ ನಲ್ಲಿಗಳ ನೀರು ಸೋರಿಕೆಯನ್ನು ಸರಿಪಡಿಸುವುದು, ದುಸ್ಥಿತಿಯಲ್ಲಿರುವ ಗೀಸರ್‌ಗಳನ್ನು ಬದಲಾವಣೆ ಮಾಡುವುದರ ಜೊತೆಗೆ ಸೊಳ್ಳೆಗಳ ಉತ್ಪತ್ತಿಯಾಗದೇ ಇರುವ ಹಾಗೆ ಶೌಚಾಲಯದ ಸ್ವಚ್ಛತೆಗೆ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:-ಕಬ್ಬು ಬೆಳೆಗಾರರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿರುವ ಸರ್ಕಾರ : ವಿಪಕ್ಷ ನಾಯಕ ಅಶೋಕ್‌ ಆಕ್ರೋಶ

ಚೆಲುವಾಂಬ ಆಸ್ಪತ್ರೆಗೆ ಭೇಟಿ
ತಾಯಿ ಮತ್ತು ಮಗು ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿ ಸೆಕೆಯಿದೆ, ಫ್ಯಾನ್ ವ್ಯವಸ್ಥೆ ಸರಿಯಿಲ್ಲ ಎಸಿಗಳು ಏಕೆ ಬಂದ ಮಾಡಲಾಗಿದೆ. ಬಿಸಿನೀರಿನ ಹೀಟರ್ ಕೆಟ್ಟುಹೋಗಿದ್ದು ಯಾಕೆ ಸರಿಮಾಡಿಸಿಲ್ಲ ಎಂದು ಪ್ರಶ್ನಿಸಿದ ಆಯೋಗ ದಾಖಲಾದ ಮಕ್ಕಳು ಆರೋಗ್ಯದ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದರು. ಮಕ್ಕಳ ಮಾದರಿ ಚುಚ್ಚು ಮದ್ದು ಕೇಂದ್ರ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ಮಾಹಿತಿ ಪಡೆದರು.

ಸಾರ್ವಜನಿಕರಿಂದ ಅಹವಾಲು
ಮಗುವಿನ ತಾಯಿಯ ಸಮಸ್ಯೆ ಆಲಿಸಿ ವೈದ್ಯರು ಬೇಗ ಸೂಕ್ತ ಚಿಕಿತ್ಸೆ ನೀಡುವುದಿಲ್ಲ ಅನಗತ್ಯವಾಗಿ ಶುಲ್ಕ ವಿಧಿಸುತ್ತಾರೆ. ವೈದ್ಯಕೀಯ ಪ್ರಮಾಣ ಪತ್ರ ಪಡೆಯಲು ಆಸ್ಪತ್ರೆಗೆ ಅಲೆಯುವಂತಾಗಿದೆ. ಆಸ್ಪತ್ರೆಗೆ ಬಂದಂತಹ ರೋಗಿಗಳ ಜೊತೆ ಕೆಲವು ಸಿಬ್ಬಂದಿಗಳು ಗಲಾಟೆ ಮಾಡುತ್ತಾರೆ. ಸಿಜೇರಿಯನ್ ಪ್ರಮಾಣ ಹೆಚ್ಚಾಗಿದ್ದು ಹೆರಿಗೆ ಮಾಡಿಸಲು ಕೆಲವು ಸಿಬ್ಬಂದಿಗಳು ಹಣ ಪಡೆಯುತ್ತಾರೆ. ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳ ಜನನ ಪ್ರಮಾಣ ಪತ್ರ ನೀಡಲು ಸಹ ವಿಳಂಬ ಮಾಡುತ್ತಾರೆ. ಕೆಲವೊಮ್ಮೆ ಲಿಫ್ಟ್ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಅಹವಾಲುಗಳನ್ನು ಹೇಳಿಕೊಂಡರು. ನಂತರ ಅಧ್ಯಕ್ಷ ಡಾ ಎಚ್ ಕೃಷ್ಣ ಅವರು ಕಟ್ಟಡದ ನಿರ್ವಹಣೆ ಹೊತ್ತ ಗುತ್ತಿಗೆದಾರರಿಂದ ಶೀಘ್ರವೇ ಲಿಫ್ಟ್ ದುರಸ್ತಿಪಡಿಸುವಂತೆ ಸೂಚಿಸಿದ್ದು ಆಸ್ಪತ್ರೆ ವೈದ್ಯರ ಬಗ್ಗೆ ಹಾಗೂ ಸೇವೆಗಳು ನಿರ್ವಹಣೆ ಕುರಿತಂತೆ ಸಂಬಂಧಪಟ್ಟ ಅಽಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಆರ್ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕರಾದ ಡಾ ಶೋಭಾ, ಸ್ಥಾನಿಕ ವೈದ್ಯಾಧಿಕಾರಿ ನಯಾಜ್ ಪಾಷಾ, ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಸುಧಾ,ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಡಳಿತಾಧಿಕಾರಿ ಮಹೇಶ್ ಮತ್ತಿತರರು ಇದ್ದರು.

ಆಂದೋಲನ ಡೆಸ್ಕ್

Recent Posts

ಸ್ಮೃತಿ ಇರಾನಿ ಕಾಣುತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವ್ಯಂಗ್ಯ

ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ.…

1 min ago

ಮೃಗಾಲಯದ ಆನೆ ಅಭಿ ಮತ್ತಿಗೋಡಿನಲ್ಲಿ ಕೊನೆಯುಸಿರು

ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.‌ ನಾಗರಹೊಳೆ ರಾಷ್ಟ್ರೀಯ…

11 mins ago

ರಾಜ್ಯದ ಹಲವೆಡೆ ತಾಪಮಾನ ಹೆಚ್ಚಳ: ಹೀಟ್‌ ಸ್ಟ್ರೋಕ್‌ ಭೀತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್‌ ಸ್ಟ್ರೋಕ್‌ ಭೀತಿ ಎದುರಾಗಿದೆ. ಹಲವೆಡೆ…

19 mins ago

ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ

ಚಾಮರಾಜನಗರ: ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ…

1 hour ago

ಓದುಗರ ಪತ್ರ: ಅನಿಲ ಸಿಲಿಂಡರ್ ಬೆಲೆ ಏರಿಕೆ ತರವಲ್ಲ

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ರೂ.೬೦…

1 hour ago

ಓದುಗರ ಪತ್ರ: ಮೈಸೂರು ಆಕಾಶವಾಣಿ ಪ್ರಸರಣ ಸಾಮರ್ಥ್ಯ ಹೆಚ್ಚಿಸಿ

ಭಾರತದಲ್ಲೇ ಮೊದಲ ಆಕಾಶವಾಣಿ ಕೇಂದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರಿನ ಆಕಾಶವಾಣಿ ಕೇಂದ್ರ ೯೦ ವಸಂತಗಳನ್ನು ಪೂರೈಸಿದ್ದು, ಪ್ರಭಾವಿ ಸಾರ್ವಜನಿಕ…

1 hour ago