ಮೈಸೂರು

ಬಿಂದಿಗೆ ಹೊತ್ತು ಓಡಿದ ನಾರಿಯರು, ಗೊಬ್ಬರಮೂಟೆ ಹೊತ್ತು ಓಡಿದ ಪುರುಷರು

ರೈತ ದಸರಾ ಕ್ರೀಡಾಕೂಟದಲ್ಲಿ ಕೃಷಿಕರ ಸಂಭ್ರಮದ ಹೊನಲು

ಮೈಸೂರು: ನೀರಿನ ಬಿಂದಿಗೆ ಹೊತ್ತು ಎದ್ನೋ,ಬಿದ್ನೋ ಅಂಥ ಓಡಿದ ನಾರಿಯರು. ಹೆಣ್ಮಕ್ಕಳಿಗಿಂತ ತಾವೇನೂ ಕಮ್ಮಿ ಇಲ್ಲವೆನ್ನುವಂತೆ ಗೋಣಿಚೀಲದ ಗೊಬ್ಬರ ಮೂಟೆ ಹೊತ್ತು ಓಡಿದ ಪುರುಷರು. ಕೆಸರುಗದ್ದೆ ಓಟದಲ್ಲಿ ಎದ್ದು ಬಿದ್ದು ಗುರಿ ತಲುಪಿದ ರೈತರು.. ನೀರು ತುಂಬಿದ ಬಿಂದಿಗೆ ಹೊತ್ತು ಓಡಿದ ಮಹಿಳಾ ರೈತರು !.. ಇದು ಮೈಸೂರು ದಸರಾ ಮಹೋತ್ಸವ ಅಂಗವಾಗಿ ರೈತದಸರಾ ಪ್ರಯುಕ್ತ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಕಂಡು ಬಂದ ವಿಶೇಷತೆಗಳು. ಹಲವು ದಿನದಿಂದ ತಮ್ಮ ಗದ್ದೆ,ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದ ರೈತರು-ರೈತ ಮಹಿಳೆಯರು ಎಲ್ಲ ಕೆಲಸವನ್ನು ಬದಿಗೊತ್ತಿ ನಾಡಹಬ್ಬ ದಸರಾ ಕ್ರೀಡಾಕೂಟದ ಸಂಭ್ರಮದಲ್ಲಿ ಭಾಗವಹಿಸಿ ಮಿಂಚಿದರು.

ಬಿಂದಿಗೆ ಹೊತ್ತರು: ನಗರದ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಹಲವಾರು ಸ್ಪರ್ಧೆಗಳು ನಡೆಯಿತು. ಸಮಯಕ್ಕೆ ಸರಿಯಾಗಿ ಮನೆಯಿಂದ ಠಾಕುಠೀಕಾಗಿ ಬಂದಿದ್ದ ಮಹಿಳೆಯರು ಓವಲ್ ಮೈದಾನಕ್ಕೆ ಬಂದರು. ಬಳಿಕ ಸ್ಪರ್ಧೆಗೆ ಥೇಟ್ ಹಳ್ಳಿ ಹೆಣ್ಣುಮಕ್ಕಳಂತೆ ಸಜ್ಜಾದರು. ಬಳಿಕ ನೀರಿನ ಬಿಂದಿಗೆ ಹೊತ್ತುಕೊಂಡು ನಿಗಧಿತ ಗುರಿ ತಲುಪಲು ಪೈಪೋಟಿ ನೀಡಿದರೆ, ಸುತ್ತಲೂ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ತಲೆ ಮೇಲೆ ಬಿಂದಿಗೆಯನ್ನು ಹೊತ್ತು ಸರಾಗವಾಗಿ ಬೇಗ ಗುರಿ ತಲುಪಿ ಪ್ರಥಮ,ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರೆ, ಹಲವರು ಸುಸ್ತಾಗಿ ನಿಂತಿದ್ದು ಕಾಣಿಸಿತು. ಇದೇ ರೀತಿ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆಯಲ್ಲೂ ಮಹಿಳೆಯರು ಖುಷಿಯಿಂದಲೇ ಪಾಲ್ಗೊಂಡಿದ್ದರು. ನಗರ ಪ್ರದೇಶದ ಹೆಣ್ಣು ಮಕ್ಕಳಿಗಿಂತ ತಾವೇನೂ ಕಮ್ಮಿ ಎನ್ನುವುದನ್ನು ಸ್ಪರ್ಧೆ ಉತ್ಸಾಹದ ಮೂಲಕವೇ ತೋರಿಸಿಕೊಟ್ಟರು. ಬಾಯಲ್ಲಿ ಚಮಚ ಇಟ್ಟುಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

ಎದ್ದುಬಿದ್ದು ಓಡೋಡಿದರು: ಇನ್ನೂ ೫೦ಕೆಜಿ ತೂಕದ ಗೊಬ್ಬರ ಮೂಟೆ ಹೊತ್ತುವ ಸ್ಪರ್ಧೆ ಬಹಳ ರೋಮಾಂಚನಕಾರಿಯಾಗಿತ್ತು. ಹಳ್ಳಿಯಲ್ಲಿ ಕ್ವಿಂಟಾಲ್ ಚೀಲ ಹೊತ್ತುವ ಅಭ್ಯಾಸ ಇದ್ದರೂ ಪಟ್ಟಣದಲ್ಲಿ ಓಡುವ ಸ್ವಭಾವ ಕಡಿಮೆಯಿರುತ್ತದೆ. ಹೀಗಿದ್ದರೂ ಸುಡುವ ಬಿಸಿಲಲ್ಲೂ ಹೆಗಲ ಮೇಲೆ ಗೊಬ್ಬರದ ಮೂಟೆಯನ್ನು ೧೦೦ ಮೀಟರ್ ಹೊತ್ತು ಓಡಿದರು. ಮೂಟೆ ಹೊತ್ತು ಓಡಿ ಬರುವ ರಭಸಕ್ಕೆ ಎಲ್ಲಾದರೂ ಜಾರಿಬಿದ್ದರೆ ಎನ್ನುವ ಕಾರಣಕ್ಕಾಗಿ ಕೆಲವರು ತಡೆದುಕೊಳ್ಳಲು ಸಜ್ಜಾಗಿದ್ದರು.ಆದರೆ, ಕೆಲವರು ನಿಧಾನವಾಗಿ ಓಡಿದರೆ, ಹಲವರು ಮೂಟೆ ಹೊತ್ತು ನಿಗಧಿತ ಗುರಿ ತಲುಪಿ ಸೈ ಎನ್ನಿಸಿಕೊಂಡರು. ಇನ್ನು ಗೋಣಿಚೀಲದ ಒಳಗೆ ಕಾಲಿಟ್ಟು ಓಡುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರೈತರು ಗೆಲುವಿಗಾಗಿ ಎಲ್ಲ ಶ್ರಮ ಹಾಕಿ ಓಡುವ ಭರದಲ್ಲಿ ಕೆಲವರು ಆಯತಪ್ಪಿ ಬಿದ್ದರೆ,ಹಲವರು ತಮ್ಮ ಜಾಣತನದಿಂದಲೇ ಗುರಿ ತಲುಪಿ ಬಹುಮಾನ ತಮ್ಮದಾಗಿಸಿಕೊಂಡರು. ಇದೇ ರೀತಿ ಪುರುಷರಿಗೆ ಮೂರು ಕಾಲಿನ ಓಟ,ಗುಂಡು ಮಹಿಳಾ ರೈತರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆಯು ಎಲ್ಲರು ಕೂತುಹಲದಿಂದ ನೋಡುವಂತೆ ಮಾಡಿತು. ಪುರುಷರ ಮೂರು ಕಾಲಿನ ಓಟದ ಸ್ಪರ್ಧೆ ನೋಡುಗರ ಗಮನ ಸೆಳೆದರೆ, ಮಹಿಳೆಯರ ಒಂಟಿ ಕಾಲಿನ ಓಟದ ವೇಳೆ ಸುತ್ತುವರಿದಿದ್ದವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

 

 

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

34 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago