ಮೈಸೂರು

ಜೋರು ಮಳೆಗೆ ಕೊಚ್ಚಿಹೋದ ಬೆಳೆ

ಹುಣಸೂರು: ತಾಲೂಕಿನ ಹನಗೋಡು ವ್ಯಾಪ್ತಿಯ ವಿವಿದೆಡೆ ಇಂದು(ಮೇ.12) ಸುರಿದ ಜೋರು ಮಳೆಗೆ ಬೆಳೆ ಕೊಚ್ಚಿ ಹೋಗಿದ್ದು, ಕೃಷಿಗಾಗಿ ಅಳವಡಿಸಿದ್ದ ತುಂತುರು ನೀರಾವರಿಯ ಪರಿಕರಗಳು ಹಾನಿಗೊಳಗಾಗಿವೆ.

ಸಂಜೆ 6 ರ ವೇಳೆಗೆ ಆರಂಭವಾದ ಭಾರಿ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದು ಸಾಕಷ್ಟು ಅವಾಂತರ ಸೃಷ್ಟಿಸಿದ್ದು, ಇಡೀ ಜಮೀನಿನಲ್ಲಿ ಕೆರೆಕಟ್ಟೆಗಳು ಸೃಷ್ಟಿಮಾಡಿತ್ತು. ಹನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಸಾಕಷ್ಟು ಮಳೆ ಬಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿದೆ. ಮುತ್ತುರಾಯನ ಹೊಸಳ್ಳಿ, ಕಲ್ಲಹಳ್ಳಿ, ಆಡಿಗನಹಳ್ಳಿ, ಹರೀನಹಳ್ಳಿ, ಕರ್ಣಕುಪ್ಪೆ, ಕಣಗಾಲು, ಮದ್ಲಿಮನುಗನಹಳ್ಳಿಯ ಸುತ್ತ ಮುತ್ತ ಧಾರಕಾರ ಮಳೆ ಸುರಿದಿದೆ.

ನೂರಾರು ಮಂದಿ ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಿದ್ದರು. ಒಂದೇ ಮಳೆಗೆ ಜಮೀನುಗಳಲ್ಲಿ ಕೆರೆ ಸೃಷ್ಟಿಸಿದ ಮಳೆಯು ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ತಂಬಾಕು ಸಸಿಯನ್ನು ಮಣ್ಣಿನ ಸಹಿತ ಹೊತ್ತೊಯ್ದಿದೆ. ಅಲ್ಲದೆ ಅಲ್ಲಲ್ಲಿ ಶುಂಠಿ ಬೆಳೆಗೂ ಹಾನಿ ಮಾಡಿದೆ.

ಮುತ್ತುರಾಯನ ಹೊಸಹಳ್ಳಿಯ ರಾಜೇಗೌಡ, ಸಣ್ಣೇಗೌಡ, ರಾಮಚಂದ್ರ, ಬೋರೇಗೌಡ, ಅಶೋಕ, ಲೋಹಿತ್‌ಗೌಡ, ರಾಜಶೇಖರ್, ಶಿವರಾಜೇಗೌಡ, ಅಣ್ಣಾಜಿಗೌಡ ಸೇರಿದಂತೆ ಇತರೆ ರೈತರ ತಂಬಾಕು, ಶುಂಠಿ ಬೆಳೆಯನ್ನು ಗೊಬ್ಬರ ಸಹಿತ ಕೊಚ್ಚಿ ಹಾಕಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ಕಲ್ಲಹಳ್ಳಿಯ ಬೈಕಟ್ಟೆ, ದೊಡ್ಡಕೆರೆ, ಆಡಿಗನಹಳ್ಳಿಕೆರೆ, ತಾಳೆ ಮಂಡಿಕಟ್ಟೆ, ಹುಣಸೇಗಾಲದ ಕೆರೆ, ಹರೀನಹಳ್ಳಿ, ಕರ್ಣಕುಪ್ಪೆ, ವದ್ಲಿಮನುಗನಹಳ್ಳಿ ಸೇರಿದಂತೆ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ. ದೊಡ್ಡ ಕೆರೆಗಳಿಗೂ ಸಾಕಷ್ಟು ನೀರು ಹರಿದು ಬಂದಿದೆ. ಮುತ್ತುರಾಯನಹೊಸಹಳ್ಳಿಯ ಸೀತಮ್ಮಮಾದಯ್ಯರ ತೋಟದಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದು ಕಟ್ಟೆಯನ್ನೇ ಒಡೆದು ಹಾಕಿದೆ. ಅಲ್ಲದೆ ತೆಂಗು, ಅಡಿಕೆ ಸಸಿಗಳಿಗೆ ಇತ್ತೀಚೆಗೆ ಹಾಕಿದ್ದ ಟನ್‌ಗಟ್ಟಲೆ ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನೆಲ್ಲಾ ಮಳೆ ನೀರು ಹೊತ್ತೊಯ್ದು ಅಪಾರ ಪ್ರಮಾಣ ನಷ್ಟ ಉಂಟುಮಾಡಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

4 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

6 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

6 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

7 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

7 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

8 hours ago