ಮೈಸೂರು: ದಸರಾ ಹಬ್ಬಕ್ಕೂ ಮುನ್ನವೇ ದೀಪಾಲಂಕಾರದಿಂದ ಝಗಮಗಿಸುತ್ತಿದ್ದ ಮೈಸೂರು ನಗರಿ, ಮಂಗಳವಾರ, ಬುಧವಾರ ಕೂಡ ಅದೇ ರೀತಿ ಬೆಳಗಲಿದೆ.ಪೂರ್ವ ನಿರ್ಧಾರದಂತೆ, ಭಾನುವಾರಕ್ಕೆ ದೀಪಾಲಂಕಾರ ಮುಗಿಯಬೇಕಿತ್ತು. ಆದರೆ, ಅದನ್ನು ಅ. 12ರವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ.
ಈಗಲೂ ಸಾವಿರಾರು ಜನರು ಮೈಸೂರಿನ ರಸ್ತೆಗಳಲ್ಲಿ ಸಂಚರಿಸುತ್ತಾ ದಾರಿಯ ಇಕ್ಕೆಲಗಳಲ್ಲಿಯೂ ಇರುವ ದೀಪಾಲಕಾರಗಳನ್ನು ಕಂಡು ಆನಂದಿಸುತ್ತಿದ್ದಾರೆ. ಇದನ್ನು ಮನಗಂಡ ಮೈಸೂರು ದಸರಾ ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಟಿ. ರಮೇಶ್ ಹಾಗೂ ಸೆಸ್ಕ್ ನ ನಿರ್ದೇಶಕ ಜಯ ವಿಭವ ಸ್ವಾಮಿ ಅವರು, ದೀಪಾಲಂಕಾರವನ್ನು ಇನ್ನೆರಡು ದಿನ (ಅ. 12ರವರೆಗೆ) ವಿಸ್ತರಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಅಲಂಕಾರವು ನಗರದ ಮಧ್ಯಭಾಗದಲ್ಲಿ ಹಾಗೂ ಕೆಲವು ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾತ್ರ ಸಂಜೆಯ 6:30ರಿಂದ ರಾತ್ರಿ 10:30ರವರೆಗೆ ಮಾತ್ರ ಮುಂದುವರಿಸಲಾಗುತ್ತದೆ.
ಅರಮನೆ ಸೇರಿದಂತೆ ಹಲವಾರು ಪಾರಂಪರಿಕ ಕಟ್ಟಡಗಳು, ರಸ್ತೆಗಳು, ರಸ್ತೆ ಪಕ್ಕದ ಮರ, ಪಾರ್ಕು ಎಲ್ಲವೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಇಂಥ ದೀಪಾಲಂಕಾರಗಳಿಂದಾಗಿ ಇಡೀ ನಗರಕ್ಕೆ ಸ್ವರ್ಗವೇ ಇಳಿದು ಬಂದಂತಾಗಿ ರಾತ್ರಿಯ ವೇಳೆ ಇಡೀ ಊರಲ್ಲಿ ಸಂಚರಿಸುವುದೇ ಒಂದು ಸಡಗರ ಎನ್ನುವಂತೆ ಮಾಡಿತ್ತು.
ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…
ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…
ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…
ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…
ಮೈಸೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡಜನರ ಕಲ್ಯಾಣಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಬದ್ಧತೆಯಿಂದ ಅವುಗಳನ್ನು…
ಮೈಸೂರು : ನಾನು ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು…