ಮೈಸೂರು: ಬನ್ನಿ ಸಾರ್.. ಬನ್ನಿ ಮೇಡಂ.. ಮನೆಯಲ್ಲೇ ಮಾಡಿದ ಕೋಡುಬಳೆ ತಗೊಳ್ಳಿ.. ಮಜ್ಜಿಗೆ ಇದೆ ಕುಡೀರಿ.. ಕೊಬ್ಬರಿ ಮಿಠಾಯಿ ಬೇಕೇ.. ರವೆ ಉಂಡೆ ಇದೆ ತಗೊಳ್ಳಿ…
ಇದು ಕಂಡುಬಂದಿದ್ದು ರಂಗಾಯಣದಲ್ಲಿ. ‘ಚಿಣ್ಣರ ಮೇಳ’ದ ಕೊನೆಯ ದಿನವಾದ ಭಾನುವಾರ ಚಿಣ್ಣರಿ ಗಾಗಿ ಏರ್ಪಡಿಸಿದ್ದ ಸಂತೆಯಲ್ಲಿ ಅಕ್ಷರಶಃ ಪುಟಾಣಿಗಳು ತಾವೇ ತಯಾರಿಸಿದ ಪದಾರ್ಥಗಳನ್ನು ಸಂತೆಯಲ್ಲಿಟ್ಟು ಮಾರಾಟ ಮಾಡಿ ಸಾರ್ವಜನಿಕರ ಗಮನ ಸೆಳೆದರು.
ಚುರುಮುರಿ, ಹುರಿದ ಮಂಡಕ್ಕಿ, ಕೊಬ್ಬರಿ ಮಿಠಾಯಿ, ಚಕ್ಕುಲಿ ಕೋಡುಬಳೆ, ಬಿಡಿಸಿದ ಹಲಸಿನ ತೊಳೆ, ಸಣ್ಣಗೆ ಕುಯ್ಡು ಉಪ್ಪುಖಾರ ಸೇರಿಸಿದ ತೋತಾಪುರಿ ಮಾವು ಹೀಗೆ ನಾನಾ ಬಗೆಯ ತಿನಿಸುಗಳು ಸಂತೆಯಲ್ಲಿದ್ದವು. ಬಿಸಿಲಿನಿಂದ ಬಳಲಿದವರಿಗೆ ಮಜ್ಜಿಗೆ, ನಿಂಬೆ ಷರಬತ್ತು, ಖರ್ಬೂಜ ಜ್ಯೂಸ್ ಸಹಿತ ವಿವಿಧ ಪಾನೀ ಯಗಳನ್ನು ಸಂತೆಯಲ್ಲಿ ಇಡಲಾಗಿತ್ತು.
ಕೆಲವರು ಮನೆಯಿಂದಲೇ ರವೆ ಉಂಡೆ, ಚಕ್ಕುಲಿ, ಕುಕ್ಕೀಸ್ ಮೊದಲಾದ ತಿನಿಸುಗಳನ್ನು ಸಿದ್ಧಪಡಿಸಿ ಕೊಂಡು ತಂದಿದ್ದರು. ಇನ್ನೂ ಕೆಲವರು ಸ್ಥಳದಲ್ಲೇ ಒಂದಿಷ್ಟು ತಿನಿಸು ಸಿದ್ಧಪಡಿಸಿ ಸಂತೆಯಲ್ಲಿಟ್ಟರು. ಮಕ್ಕಳು ವ್ಯಾಪಾರಿಗಳಂತೆಯೇ ಕೂಗುತ್ತಾ, ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಪೋಷಕರೂ ಮಕ್ಕಳಿಗೆ ಸಾಥ್ ನೀಡಿದರು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲೆಂಡ್…
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ವರ್ಷವಿಡೀ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದರೂ ಪ್ರತಿ ವರ್ಷವೂ…
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬಿಸಿಲಿನ ತಾಪ ಹೆಚ್ಚಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ರಾಮಸ್ವಾಮಿ…
ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಭಾರತದಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಕಾರ್ಯನಿಮಿತ್ತ…
ಕೊಳೆಗೇರಿಗಳ ೨೭,೦೦೦ ಮನೆಗಳಿಗೆ ಶೌಚಾಲಯ ಸೌಲಭ್ಯ ಪೂನಾದ ಇಂದಿರಾ ವಸಾಹತ್ ಎಂಬ ಪ್ರದೇಶದ ಒಂದು ಸ್ಲಮ್ಮಿನಲ್ಲಿ ವಾಸಿಸುವ ಲತಾ ರತನ್…
ಮಹೇಂದ್ರ ಹಸಗೂಲಿ ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು…