ಮೈಸೂರು: ನಗರದ ದೇವರಾಜು ಅರಸು ರಸ್ತೆಯಲ್ಲಿರುವ ಮೈ ಟಾರ್ಪಾಲಿನ್ಸ್ ಮಾಲೀಕ, ಪಕ್ಕದಲ್ಲೇ ಇರುವ ಹಳೆಯ ಮೈಸೂರು ಟಾರ್ಪಲಿನ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ತಮ್ಮ ವ್ಯಾ ಸಂಗದ ಖರ್ಚಿಗಾಗಿ ಅಲ್ಪಾವಧಿಯ ಕೆಲಸ ನಿಯೋಜಿಸುವ ಏಜೆನ್ಸಿ ಮೂಲಕ ಮೈಸೂರು ಟಾರ್ಪಾಲಿನ್ಸ್ ವ್ಯಾಪಾರ ಸಂಸ್ಥೆಯ ಪ್ರಚಾರಕ್ಕಾಗಿ ಅರಸು ರಸ್ತೆಯಲ್ಲಿರುವ ಪುಟ್ ಪಾತ್ ಗಳಲ್ಲಿ (Look Walker ads promotion) ಕೆಲಸ ಮಾಡುತ್ತಿದ್ದರು.
ಆದರೆ ಅದರ ಪಕ್ಕದಲ್ಲೇ ಇರುವ ಮೈ ಟಾರ್ಪಲಿನ್ಸ್ ಅಂಗಡಿಯ(ಮಳಿಗೆ ಸಂಖ್ಯೆ 87) ಮಾಲೀಕ ನೀವು ಇಲ್ಲಿ ಪ್ರಚಾರದ ಕೆಲಸ ಮಾಡಬೇಡಿ, ನಿಮ್ಮ ಪ್ರಚಾರದ ಕೆಲಸದಿಂದ ನಮ್ಮ ಅಂಗಡಿ(ಮೈ ಟಾರ್ಪಲಿನ್ಸ್)ಗೆ ಬರುವ ಗ್ರಾಹಕರು ಕಡಿಮೆ ಆಗುತ್ತಾರೆ ಎಂದು ಪ್ರಚಾರದ ಯುವಕರ ಮೇಲೆ ಸಿಟ್ಟಿನಿಂದ ಹಲ್ಲೇ ಮಾಡಿ, ಕೆಟ್ಟ ಬೈಗುಳದಿಂದ ನಿಂದಿಸಿದ್ದಾರೆ.
ಅಷ್ಟೆ ಅಲ್ಲದೇ ಸಾರ್ವಜನಿಕವಾಗಿ ಯುವಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಸಾರ್ವಜನಿಕರು ಯುವಕರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆದಿದ್ದಾರೆ.
ಇದೀಗ ಯುವಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿಡಿಯೋ ಎಲ್ಲಡೇ ವೈರಲ್ ಆಗಿದ್ದು, ಮೈ ಟಾರ್ಪಲಿನ್ಸ್ ಸಂಸ್ಥೆಯ ಮಾಲೀಕನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಯುವಕರನ್ನು ವೈದೈಕೀಯ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡುವುದಾಗಿ ಹಲ್ಲೆಗೊಳಗಾದ ಯುವಕರು ತಿಳಿಸಿದ್ದಾರೆ.
ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…
ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…
ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…