ಮೈಸೂರು

ಮೈಸೂರು ಜಿಲ್ಲೆಯಲ್ಲಿ 26,38,487 ಮತದಾರರು

ಮೈಸೂರು: ‘ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಅಂದರೆ ಏ.12ರವರೆಗೆ 13,08,771 ಪುರುಷರು, 13,29,493 ಮಹಿಳೆಯರು ಹಾಗೂ 223 ಇತರರು ಸೇರಿದಂತೆ ಒಟ್ಟು 26,38,487 ಮಂದಿ ಮತದಾರರಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

‘ಇದೇ ವರ್ಷ ಮಾರ್ಚ್‌ 29ರ ಪಟ್ಟಿ ಪ್ರಕಾರ, 13,01,022 ಪುರುಷರು, 13,21,316 ಮಹಿಳೆಯರು ಹಾಗೂ 213 ಇತರರು ಸೇರಿದಂತೆ 26,22,551 ಮತದಾರರಿದ್ದರು. ಈಗ 7,749 ಪುರುಷರು ಹಾಗೂ 8,177 ಮಹಿಳೆಯರು ಹಾಗೂ 10 ಮಂದಿ ಇತರರು ಸೇರಿದಂತೆ 15,936 ಜನ ಸೇರ್ಪಡೆಯಾಗಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 3,535 ಮಂದಿ (1,715 ಪುರುಷರು, 1,818 ಮಹಿಳೆಯರು ಹಾಗೂ ಇಬ್ಬರು ಇತರರು) ಹೊಸದಾಗಿ ಸೇರ್ಪಡೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅಭ್ಯರ್ಥಿಗಳ ಖರ್ಚು–ವೆಚ್ಚದ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 242 ಸೆಕ್ಟರ್ ಅಧಿಕಾರಿಗಳು, 51 ಫ್ಲೈಯಿಂಗ್‌ ಸ್ಕ್ವಾಡ್, 53 ಅಂಕಿ ಸಂಖ್ಯೆ ಪರಿಶೀಲನಾ ತಂಡ, 12 ವಿಡಿಯೊ ಸರ್ವಿಲೆನ್ಸ್‌, 11 ವಿಡಿಯೊ ವೀವಿಂಗ್ ತಂಡ, 11 ಅಕೌಂಟಿಂಗ್ ತಂಡ ಮತ್ತು 17 ಸಹಾಯಕ ವೆಚ್ಚ ಅಬ್ಸರ್ವರ್ಸ್‌ ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

‘ಈವರೆಗೆ ಎಫ್‌ಎಸ್‌ಟಿ ತಂಡದಿಂದ ₹ 11,36 ಲಕ್ಷ, ಎಸ್‌ಎಸ್‌ಟಿಯಿಂದ ₹ 1,31 ಕೋಟಿ, ಪೊಲೀಸರು ₹ 1,39 ಲಕ್ಷ ಸೇರಿ ಒಟ್ಟು ₹ 1,47 ಕೋಟಿ ನಗದು ಜಪ್ತಿ ಮಾಡಲಾಗಿತ್ತು. ಇದರಲ್ಲಿ ದಾಖಲೆ ಒದಗಿಸಿದ್ದರಿಂದ ₹8.64 ಲಕ್ಷ ನಗದನ್ನು ಬಿಡುಗಡೆ ಮಾಡಲಾಗಿದೆ. ₹ 1.39 ಕೋಟಿ ಬಾಕಿ ಇದೆ. 137 ಗ್ರಾಂ. ಚಿನ್ನ ಜಪ್ತಿಯಾಗಿತ್ತು. ಸೂಕ್ತ ದಾಖಲೆ ನೀಡಿದ್ದರಿಂದ ಅದನ್ನು ಹಿಂತಿರುಗಿಸಲಾಗಿದೆ. ಅಬಕಾರಿ ಅಧಿಕಾರಿಗಳು 1.76 ಲಕ್ಷ ಲೀಟರ್‌ ಮದ್ಯವನ್ನು, ಪೊಲೀಸರು 17.53 ಕೆ.ಜಿ. ಮಾದಕ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ 17 ಪ್ರಕರಣಗಳು ದಾಖಲಿಸಲಾಗಿವೆ’ ಎಂದು ವಿವರ ನೀಡಿದರು.

‘ಆಯೋಗದಿಂದ ಬಿಡುಗಡೆ ಮಾಡಿರುವ ‘ಸಿ–ವಿಜಿಲ್’ ಆ್ಯ‌ಪ್‌ನಲ್ಲಿ 32 ದೂರುಗಳು ಬಂದಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಪ್ರಮಾಣ ಕಡಿಮೆ ಇದೆ. ಸಾರ್ವಜನಿಕರು ಹೆಚ್ಚಾಗಿ ಸ್ಪಂದಿಸಬೇಕು. 32ರಲ್ಲಿ 9 ದೂರುಗಳನ್ನು ಕೈಬಿಡಲಾಗಿದೆ’ ಎಂದು ತಿಳಿಸಿದರು.

ಮತದಾರರ ವಿವರ (ಏ.12ಕ್ಕೆ)

ಕ್ಷೇತ್ರ; ಮತಗಟ್ಟೆಗಳು; ಪುರುಷರು; ಮಹಿಳೆಯರು; ಇತರೆ;ಒಟ್ಟು

ಪಿರಿಯಾಪಟ್ಟಣ;235;97,402;96,635;7;1,94,044

ಕೆ.ಆರ್.ನಗರ;250;1,07,684;1,09,114;19;2,16,817

ಹುಣಸೂರು;273;1,20,828;1,21,034;13;2,41,875

ಎಚ್‌.ಡಿ.ಕೋಟೆ;282;1,12,907;1,12,102;11;2,25,020

ನಂಜನಗೂಡು;249;1,09,250;1,09,853;6;2,19,109

ಚಾಮುಂಡೇಶ್ವರಿ;337;1,62,640;1,63,286;33;3,25,959

ಕೃಷ್ಣರಾಜ;265;1,21,590;1,26,947;27;2,48,564

ಚಾಮರಾಜ;244;1,20,215;1,23,614;31;2,43,860

ನರಸಿಂಹರಾಜ;282;1,38,948;1,47,532;49;2,86,529

ವರುಣ;261;1,16,426;1,65,564;13;2,33,003

ತಿ.ನರಸೀಪುರ;227;1,00,881;1,02,812;14;2,03,707

ಒಟ್ಟು;2,905;13,08,771;13,29,493;223;26,38,487

***

ಮಾರ್ಚ್‌ 29ರಿಂದ ಏ.12ರವರೆಗೆ ಸೇರ್ಪಡೆಯಾದ ಹೆಚ್ಚುವರಿ ಮತದಾರರ ವಿವರ

ಕ್ಷೇತ್ರ;ಪುರುಷರು;ಮಹಿಳೆಯರು;ಇತರೆ;ಒಟ್ಟು

ಪಿರಿಯಾಪಟ್ಟಣ;472;399;0;871

ಕೆ.ಆರ್‌.ನಗರ;637;623;0;1,200

ಹುಣಸೂರು;538;560;0;1,098

ಎಚ್‌.ಡಿ.ಕೋಟೆ;443;473;0;916

ನಂಜನಗೂಡು;438;470;0;908

ಚಾಮುಂಡೇಶ್ವರಿ;1,715;1,818;2;3,535

ಕೃಷ್ಣರಾಜ;680;725;2;1,407

ಚಾಮರಾಜ;514;584;2;1,100

ನರಸಿಂಹರಾಜ;1,210;1,413;3;2,626

ವರುಣ;615;657;1;1,273

ತಿ.ನರಸೀಪುರ;487;455;0;942

ಒಟ್ಟು;7,749;8,177;10;15,936

***

ಚುನಾವಣಾಧಿಕಾರಿ ಕಚೇರಿ ಸಂಪರ್ಕ ವಿವರ

ಕ್ಷೇತ್ರ;ದೂರವಾಣಿ ಸಂಖ್ಯೆ

ಪಿರಿಯಾಪಟ್ಟಣ;08223–274175

ಕೆ.ಆರ್.ನಗರ;08223–262234

ಹುಣಸೂರು;08222–252073

ಎಚ್‌.ಡಿ.ಕೋಟೆ;08228–244325

ನಂಜನಗೂಡು;08221–226252

ಚಾಮುಂಡೇಶ್ವರಿ;0821–2414811

ಕೃಷ್ಣರಾಜ;0821–2427201

ಚಾಮರಾಜ;0821–2427202

ನರಸಿಂಹರಾಜ;0821–2427403

ವರುಣ;08221–226253

ತಿ.ನರಸೀಪುರ;08227–260210

andolanait

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

9 hours ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

11 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

13 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

13 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

14 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

15 hours ago