ಮೈಸೂರು: ‘ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಅಂದರೆ ಏ.12ರವರೆಗೆ 13,08,771 ಪುರುಷರು, 13,29,493 ಮಹಿಳೆಯರು ಹಾಗೂ 223 ಇತರರು ಸೇರಿದಂತೆ ಒಟ್ಟು 26,38,487 ಮಂದಿ ಮತದಾರರಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
‘ಇದೇ ವರ್ಷ ಮಾರ್ಚ್ 29ರ ಪಟ್ಟಿ ಪ್ರಕಾರ, 13,01,022 ಪುರುಷರು, 13,21,316 ಮಹಿಳೆಯರು ಹಾಗೂ 213 ಇತರರು ಸೇರಿದಂತೆ 26,22,551 ಮತದಾರರಿದ್ದರು. ಈಗ 7,749 ಪುರುಷರು ಹಾಗೂ 8,177 ಮಹಿಳೆಯರು ಹಾಗೂ 10 ಮಂದಿ ಇತರರು ಸೇರಿದಂತೆ 15,936 ಜನ ಸೇರ್ಪಡೆಯಾಗಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 3,535 ಮಂದಿ (1,715 ಪುರುಷರು, 1,818 ಮಹಿಳೆಯರು ಹಾಗೂ ಇಬ್ಬರು ಇತರರು) ಹೊಸದಾಗಿ ಸೇರ್ಪಡೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಅಭ್ಯರ್ಥಿಗಳ ಖರ್ಚು–ವೆಚ್ಚದ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 242 ಸೆಕ್ಟರ್ ಅಧಿಕಾರಿಗಳು, 51 ಫ್ಲೈಯಿಂಗ್ ಸ್ಕ್ವಾಡ್, 53 ಅಂಕಿ ಸಂಖ್ಯೆ ಪರಿಶೀಲನಾ ತಂಡ, 12 ವಿಡಿಯೊ ಸರ್ವಿಲೆನ್ಸ್, 11 ವಿಡಿಯೊ ವೀವಿಂಗ್ ತಂಡ, 11 ಅಕೌಂಟಿಂಗ್ ತಂಡ ಮತ್ತು 17 ಸಹಾಯಕ ವೆಚ್ಚ ಅಬ್ಸರ್ವರ್ಸ್ ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.
‘ಈವರೆಗೆ ಎಫ್ಎಸ್ಟಿ ತಂಡದಿಂದ ₹ 11,36 ಲಕ್ಷ, ಎಸ್ಎಸ್ಟಿಯಿಂದ ₹ 1,31 ಕೋಟಿ, ಪೊಲೀಸರು ₹ 1,39 ಲಕ್ಷ ಸೇರಿ ಒಟ್ಟು ₹ 1,47 ಕೋಟಿ ನಗದು ಜಪ್ತಿ ಮಾಡಲಾಗಿತ್ತು. ಇದರಲ್ಲಿ ದಾಖಲೆ ಒದಗಿಸಿದ್ದರಿಂದ ₹8.64 ಲಕ್ಷ ನಗದನ್ನು ಬಿಡುಗಡೆ ಮಾಡಲಾಗಿದೆ. ₹ 1.39 ಕೋಟಿ ಬಾಕಿ ಇದೆ. 137 ಗ್ರಾಂ. ಚಿನ್ನ ಜಪ್ತಿಯಾಗಿತ್ತು. ಸೂಕ್ತ ದಾಖಲೆ ನೀಡಿದ್ದರಿಂದ ಅದನ್ನು ಹಿಂತಿರುಗಿಸಲಾಗಿದೆ. ಅಬಕಾರಿ ಅಧಿಕಾರಿಗಳು 1.76 ಲಕ್ಷ ಲೀಟರ್ ಮದ್ಯವನ್ನು, ಪೊಲೀಸರು 17.53 ಕೆ.ಜಿ. ಮಾದಕ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ 17 ಪ್ರಕರಣಗಳು ದಾಖಲಿಸಲಾಗಿವೆ’ ಎಂದು ವಿವರ ನೀಡಿದರು.
‘ಆಯೋಗದಿಂದ ಬಿಡುಗಡೆ ಮಾಡಿರುವ ‘ಸಿ–ವಿಜಿಲ್’ ಆ್ಯಪ್ನಲ್ಲಿ 32 ದೂರುಗಳು ಬಂದಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಪ್ರಮಾಣ ಕಡಿಮೆ ಇದೆ. ಸಾರ್ವಜನಿಕರು ಹೆಚ್ಚಾಗಿ ಸ್ಪಂದಿಸಬೇಕು. 32ರಲ್ಲಿ 9 ದೂರುಗಳನ್ನು ಕೈಬಿಡಲಾಗಿದೆ’ ಎಂದು ತಿಳಿಸಿದರು.
ಮತದಾರರ ವಿವರ (ಏ.12ಕ್ಕೆ)
ಕ್ಷೇತ್ರ; ಮತಗಟ್ಟೆಗಳು; ಪುರುಷರು; ಮಹಿಳೆಯರು; ಇತರೆ;ಒಟ್ಟು
ಪಿರಿಯಾಪಟ್ಟಣ;235;97,402;96,635;7;1,94,044
ಕೆ.ಆರ್.ನಗರ;250;1,07,684;1,09,114;19;2,16,817
ಹುಣಸೂರು;273;1,20,828;1,21,034;13;2,41,875
ಎಚ್.ಡಿ.ಕೋಟೆ;282;1,12,907;1,12,102;11;2,25,020
ನಂಜನಗೂಡು;249;1,09,250;1,09,853;6;2,19,109
ಚಾಮುಂಡೇಶ್ವರಿ;337;1,62,640;1,63,286;33;3,25,959
ಕೃಷ್ಣರಾಜ;265;1,21,590;1,26,947;27;2,48,564
ಚಾಮರಾಜ;244;1,20,215;1,23,614;31;2,43,860
ನರಸಿಂಹರಾಜ;282;1,38,948;1,47,532;49;2,86,529
ವರುಣ;261;1,16,426;1,65,564;13;2,33,003
ತಿ.ನರಸೀಪುರ;227;1,00,881;1,02,812;14;2,03,707
ಒಟ್ಟು;2,905;13,08,771;13,29,493;223;26,38,487
***
ಮಾರ್ಚ್ 29ರಿಂದ ಏ.12ರವರೆಗೆ ಸೇರ್ಪಡೆಯಾದ ಹೆಚ್ಚುವರಿ ಮತದಾರರ ವಿವರ
ಕ್ಷೇತ್ರ;ಪುರುಷರು;ಮಹಿಳೆಯರು;ಇತರೆ;ಒಟ್ಟು
ಪಿರಿಯಾಪಟ್ಟಣ;472;399;0;871
ಕೆ.ಆರ್.ನಗರ;637;623;0;1,200
ಹುಣಸೂರು;538;560;0;1,098
ಎಚ್.ಡಿ.ಕೋಟೆ;443;473;0;916
ನಂಜನಗೂಡು;438;470;0;908
ಚಾಮುಂಡೇಶ್ವರಿ;1,715;1,818;2;3,535
ಕೃಷ್ಣರಾಜ;680;725;2;1,407
ಚಾಮರಾಜ;514;584;2;1,100
ನರಸಿಂಹರಾಜ;1,210;1,413;3;2,626
ವರುಣ;615;657;1;1,273
ತಿ.ನರಸೀಪುರ;487;455;0;942
ಒಟ್ಟು;7,749;8,177;10;15,936
***
ಚುನಾವಣಾಧಿಕಾರಿ ಕಚೇರಿ ಸಂಪರ್ಕ ವಿವರ
ಕ್ಷೇತ್ರ;ದೂರವಾಣಿ ಸಂಖ್ಯೆ
ಪಿರಿಯಾಪಟ್ಟಣ;08223–274175
ಕೆ.ಆರ್.ನಗರ;08223–262234
ಹುಣಸೂರು;08222–252073
ಎಚ್.ಡಿ.ಕೋಟೆ;08228–244325
ನಂಜನಗೂಡು;08221–226252
ಚಾಮುಂಡೇಶ್ವರಿ;0821–2414811
ಕೃಷ್ಣರಾಜ;0821–2427201
ಚಾಮರಾಜ;0821–2427202
ನರಸಿಂಹರಾಜ;0821–2427403
ವರುಣ;08221–226253
ತಿ.ನರಸೀಪುರ;08227–260210
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…
ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಿದೆ. 2026ರ ಜನವರಿ.1ರಿಂದ ಮುಂದಿನ ಆರು…
ಬೆಂಗಳೂರು: ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ. ಎಲ್ಲರ ರೀತಿಯಲ್ಲಿ ನನಗೂ ಆಕಾಂಕ್ಷೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್…
ಬೆಂಗಳೂರು: ಕೋಗಿಲು ಲೇಔಟ್ನಲ್ಲಿ ಅಕ್ರಮ ಶೆಡ್ ತೆರವಿನ ಹಿನ್ನೆಲೆಯಲ್ಲಿ ಮನೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿರಾಶ್ರಿತರಿಗೆ ನಾಳೆಯೇ ಜಿಬಿಎ,…