ಮೈಸೂರು : ಹುಲಿ-ಮಾನವ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವುದರ ನಡುವೆಯೂ ಕಾಡಿನಿಂದ ನಾಡಿಗೆ 20 ಗಳು ಬಂದಿರುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ಜಿಲ್ಲೆಯಲ್ಲಿ ನಿರಂತರ ಹುಲಿ ದಾಳಿಯಿಂದ ಜನರು ಬೆಚ್ಚಿ ಬಿದ್ದಿರುವ ಸಂದರ್ಭದಲ್ಲಿ ಅಧಿಕಾರಿಗಳು ಈ ವಿಚಾರವನ್ನು ಹೊರ ಹಾಕಿರುವುದು ಕಾಡಂಚಿನ ಗ್ರಾಮಗಳ ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿಸಿದೆ. ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆಹೆಚ್ಚಾಗಿರುವುದೇ ಹುಲಿಗಳ ದಾಳಿ ಹೆಚ್ಚಲು ಕಾರಣವಾಗಿದೆ.
ಹುಲಿಗಳ ಸಂತತಿ ಹೆಚ್ಚಳವಾಗಿರುವ ಕಾರಣ ಸೂಕ್ತ ನೆಲೆಗಾಗಿ ಹುಡುಕಾಡುತ್ತಿವೆ. ನೆಲೆಯನ್ನು ಕಂಡುಕೊಳ್ಳಲು ಪರದಾಡುವಾಗ ಅರಣ್ಯದಂಚಿಗೆ ಬರಲು ಸಾಧ್ಯವಾಗುತ್ತಿದೆ. ಚಳಿಗಾಲ ಹುಲಿಗಳ ಮಿಲನದ ಸಮಯವೂ ಆಗಿರುವುದರಿಂದ ಸಂಗಾತಿಯನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ಅರಣ್ಯಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದನ್ನು ಓದಿ: ಹುಲಿ ದಾಳಿಯಿಂದ ತಪ್ಪಿಸಲು ಫೇಸ್ ಮಾಸ್ಕ್ ಮೊರೆ ಹೋದ ಅರಣ್ಯ ಇಲಾಖೆ
ಕಾಡಿನಿಂದ ನಾಡಿನತ್ತ ಮುಖ ಮಾಡುವಾಗ ತನಗೆ ಎದುರಾಗುವ ಮನುಷ್ಯನಿಂದ ಅಪಾಯವಿದೆ ಎಂದು ಭಾವಿಸಿ ದಾಳಿಗೆ ಮುಂದಾಗುತ್ತಿರುವ ಹುಲಿಗಳನ್ನು ಸೆರೆ ಹಿಡಿಯಲು ನಿರಂತರ ಕಾರ್ಯಚರಣೆನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸೆರೆ ಹಿಡಿದ ಹುಲಿಗಳು ಮೈಸೂರಿನ ಕೂರ್ಗಳ್ಳಿಯಲ್ಲಿರುವ ವನ್ಯ ಪ್ರಾಣಿಗಳ ಪುನರ್ವಸತಿ ಕೇಂದ್ರ ಹಾಗೂ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ರವಾನೆ ಮಾಡುತ್ತಿದ್ದಾರೆ.
ಒಂದು ಅಂದಾಜಿನ ಪ್ರಕಾರ ಸುವಾರು 20ಹುಲಿಗಳು ಕಾಡಿನಿಂದ ಹೊರಬಂದು ನಾಡಿನಲ್ಲಿ ಅಲೆದಾಡುತ್ತಿರುವ ಕುರಿತು ಮಾಹಿತಿ ದೊರೆತಿದ್ದು, ಎಚ್.ಡಿ. ಕೋಟೆ ಭಾಗದಲ್ಲಿ 8 ಮೈಸೂರಿನ ಆಸುಪಾಸಿನಲ್ಲಿ 5 ಹುಲಿಗಳು ಓಡಾಡುತ್ತಿವೆ. ಇದರ ಜೊತೆಗೆ ನಂಜನಗೂಡು, ಹುಣಸೂರು ಭಾಗವು ಸೇರಿದಂತೆ ಸುವಾರು 20ಹುಲಿಗಳು ಅಡ್ಡಾಡುತ್ತಿವೆ. ಜನವಸತಿ ಪ್ರದೇಶದ ಆಸುಪಾಸಿನಲ್ಲಿ ಅಲೆದಾಡುತ್ತಿರುವ ಹುಲಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಹೇಳಿದರು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಹುಲಿಗಳನ್ನು ಸೆರೆ ಹಿಡಿುುಂವ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಡ್ರೋನ್ ಕ್ಯಾಮರಾ ಮೂಲಕ ಹುಲಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇಡುವುದಲ್ಲದೆ, ಜನರಿಗೆ ಜಾಗೃತಿ ಮೂಡಿಸುವ ಮೂಲಕವೂ ಮನವರಿಕೆ ಮಾಡಲಾಗುತ್ತಿದೆ. ಹಲವೆಡೆ ಧ್ವನಿವರ್ಧಕದ ಮೂಲಕ ಜನರಿಗೆ ಎಚ್ಚರಿಕೆಯಸಂದೇಶ ರವಾನೆ. ಬೆಳೆ ಕಟಾವು ವಾಡುವ ರೈತರಿಗೆ ಸೂಕ್ತ ರಕ್ಷಣೆ ನೀಡುವುದರಲ್ಲೂ ನಿರತರಾಗಿದ್ದೇವೆ. ಭೀಮ, ಧನಂಜಯ ಸೇರಿದಂತೆ ನುರಿತ ಸಾಕಾನೆಗಳ ನೆರವಿನಿಂದಲೂ ಹುಲಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್…
ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…
ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್ ಮೇಲೆ ಪೊಲೀಸರು…
ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್…
ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…
ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್ ತಿಂಗಳಿನಲ್ಲಿ ಮೂರನೇ…