ಜಿಲ್ಲೆಗಳು

ಬಾಡುತ್ತಿದೆ ಮೈವಿವಿ ತಾಯಿಬೇರು

ಪಾರಂಪರಿಕತೆ ಹೊಂದಿರುವ ಮಹಾರಾಜ ಕಾಲೇಜು ಕಟ್ಟಡಕ್ಕೆ ಶೀಘ್ರ ದುರಸ್ತಿ ಅಗತ್ಯವಿದೆ

ಬಿ.ಎನ್.ಧನಂಜಯಗೌಡ

ಮೈಸೂರು: ಶತಮಾನ ಪೂರೈಸಿರುವ ಮೈಸೂರಿನ ‘ಮಹಾರಾಜ ಕಾಲೇಜು’ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿರುವ ವಿಶೇಷ ಕಟ್ಟಡ. ಇಲ್ಲಿ ನೂರು ವರ್ಷಗಳ ಹಿಂದಿನಿಂದಲೂ ಜ್ಞಾನದಾಹಿಗಳಿಗೆ ನಿರಂತರ ಜ್ಞಾನ ದಾಸೋಹ ಉಣಬಡಿಸಲಾಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಸುಮಾರು ೩ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರು ೧೮೩೩ರಲ್ಲಿ ‘ರಾಜಾಸ್ ಇಂಗ್ಲಿಷ್ ಫ್ರೀ ಸ್ಕೂಲ್’ ಸ್ಥಾಪಿಸಿದರು. ಆನಂತರ ೧೮೯೭ರಲ್ಲಿ ಎರಡನೇ ಸ್ತರದ ಕಾಲೇಜನ್ನಾಗಿ ಮಾಡಲಾಯಿತು. ೧೦ನೇ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅಂದರೆ ೧೮೮೯ರಲ್ಲಿ ಈಗಿನ ಮಹಾರಾಜ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಯಿತು. ನಂತರ ೧೮೯೪ರಲ್ಲಿ ಇದನ್ನು ಪ್ರಥಮ ದರ್ಜೆ ಕಾಲೇಜನ್ನಾಗಿ ಮಾಡಲಾಯಿತು. ಹಾಗಾಗಿ ಈ ಕಾಲೇಜನ್ನು ಮೈಸೂರು ವಿಶ್ವವಿದ್ಯಾನಿಲಯದ ‘ತಾಯಿಬೇರು’ ಎಂದೇ ಹೇಳಲಾಗುತ್ತದೆ.
ಮಹಾರಾಜ ಕಾಲೇಜಿನ ಮುಖ್ಯ ಕಟ್ಟಡದ ಬಣ್ಣ ಮಾಸಿದೆ. ಇಲ್ಲಿನ ಆಡಳಿತ ವಿಭಾಗ ಮತ್ತು ನಗದು ವಿಭಾಗದ ಕೊಠಡಿಗಳ ಮೇಲ್ಚಾವಣಿ ಶಿಥಿಲವಾಗಿದ್ದು, ಮಳೆ ನೀರು ಸೋರಿಕೆಯಿಂದ ಗೋಡೆಯೆಲ್ಲಾ ವಸ್ತಿ ಹಿಡಿದಿದೆ. ಜೂನಿಯರ್ ಬಿ.ಎ. ಹಾಲ್ ಕಿಟಕಿಗಳಲ್ಲಿ ಪಾಚಿ ಬೆಳೆದಿದೆ.
ಪತ್ರಿಕೋದ್ಯಮ ತರಗತಿಗಳು ನಡೆಯುವ ಕಟ್ಟಡವನ್ನು ಯೂನಿಯನ್ ಕಟ್ಟಡ ಎನ್ನಲಾಗುತ್ತದೆ. ಇಲ್ಲಿಯೇ, ಕಂಪ್ಯೂಟರ್ ವಿಭಾಗ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ವಾಚನಾಲಯವೂ ಇದೆ. ಈ ಕಟ್ಟಡ ಹೆಚ್ಚಿನ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಕಟ್ಟಡದ ಮೇಲೆ ಗಿಡ-ಗಂಟಿಗಳು ಬೆಳೆದಿವೆ. ಮಳೆ ಬಂದಾಗ ನೀರು ಸೋರಿಕೆಯಾಗಿ ತರಗತಿಯ ಒಳಗೆಲ್ಲ ನೀರು ನಿಲ್ಲುತ್ತದೆ.

ಮೇಲ್ಚಾವಣಿ ಕುಸಿದಿತ್ತು : ಎರಡು ವರ್ಷದ ಹಿಂದೆ ಇದೇ ಕಾಲೇಜಿನ ಆವರಣದಲ್ಲಿ ಇರುವ ಕ್ರಿಮಿನಾಲಜಿ ತರಗತಿಗಳು ನಡೆಯುವ ಕೊಠಡಿಯೊಂದರ ಮೇಲ್ಚಾವಣಿ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿತ್ತು.

ತಜ್ಞರ ಅಸಮಾಧಾನ: ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಕುಸಿಯುತ್ತಿದ್ದಂತೆ ನಗರದ ಪಾರಂಪರಿಕ ಕಟ್ಟಡಗಳ ಪರಿಶೀಲನೆ ನಡೆಸಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಸದಸ್ಯರು ಮಹಾರಾಜ ಕಾಲೇಜಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಮಹಾರಾಜ ಕಾಲೇಜು ಇತಿಹಾಸ:

* ಮುಮ್ಮಡಿ ಕೃಷ್ಣರಾಜ ಒಡೆಯರ್ ೧೮೩೩ರಲ್ಲಿ ಸ್ಥಾಪಿಸಿದ ‘ರಾಜಾಸ್ ಇಂಗ್ಲಿಷ್ ಫ್ರೀ ಸ್ಕೂಲ್’ ಈ ಕಾಲೇಜಿನ ಮೂಲ

*೧೦ನೇ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಈಗಿರುವ ಜಾಗದಲ್ಲಿ ೧೮೮೯ರಲ್ಲಿ ಈಗಿನ ಕಟ್ಟಡ ನಿರ್ಮಾಣ

* ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿರುವ ಕಟ್ಟಡ ಇದಾಗಿದೆ


ಕಾಲೇಜಿನಲ್ಲಿ ಓದಿದ ಪ್ರಸಿದ್ಧರು

ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಆರ್.ಕೆ.ನಾರಾಯಣ್, ಆರ್.ಕೆ.ಲಕ್ಷ್ಮಣ್, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇವನೂರು ಮಹಾದೇವ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಬಿ. ಪಿ.ಶೌರಿ, ಶ್ರೀಕೃಷ್ಣ ಆಲನಹಳ್ಳಿ, ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಹೀಗೆ ಇನ್ನು ಅನೇಕರು ಈ ಕಾಲೇಜಿನಲ್ಲಿ ಓದಿ ಪ್ರಸಿದ್ಧರಾಗಿದ್ದಾರೆ.



ಮುಮ್ಮಡಿ ಕೃಷ್ಣರಾಜ ಒಡೆಯರು ೧೮೩೩ರಲ್ಲಿ ‘ರಾಜಸ್ ಇಂಗ್ಲಿಷ್ ಫ್ರೀ ಸ್ಕೂಲ್’ ಆರಂಭಿಸಿದರು. ಆನಂತರದ ದಿನಗಳಲ್ಲಿ ಮಹಾರಾಜ ಕಾಲೇಜಾಗಿ ಆಗಿ ಬೆಳೆಯಿತು. ೧೮೮೯ರಲ್ಲಿ ಮಹಾರಾಜ ಕಾಲೇಜು ಕಟ್ಟಡವನ್ನು ಸ್ಥಾಪಿಸಲಾಯಿತು.

– ಈಚನೂರು ಕುಮಾರ್, ಇತಿಹಾಸ ತಜ್ಞ


ಮಹಾರಾಜ ಕಾಲೇಜು ಕಟ್ಟಡದಲ್ಲಿನ ಅನೇಕ ಕೊಠಡಿಗಳಲ್ಲಿ ಮಳೆ ಬಂದಾಗ ನೀರು ಸೋರುತ್ತದೆ. ಪತ್ರಿಕೋದ್ಯಮ ವಿಭಾಗದ ಕಟ್ಟಡವು ಹೆಚ್ಚಿನ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಈ ಬಗ್ಗೆ ದುರಸ್ತಿ ಮಾಡಿಸಲು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ.

-ಪ್ರೊ.ಅನಿತಾ ವಿಮ್ಲಾ ಬ್ರಾಗ್ಸ್, ಪ್ರಾಂಶುಪಾಲರು, ಮಹಾರಾಜ ಕಾಲೇಜು

andolanait

Recent Posts

ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡ ಮೈಸೂರಿಗರು

ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್‌ ಬ್ಯಾಂಡ್‌ನ ಸದ್ದಿನೊಂದಿಗೆ…

41 mins ago

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…

1 hour ago

ಮೈಸೂರು, ಚಾ.ನಗರ, ಮಂಡ್ಯ, ಕೊಡಗು ಎಸ್‌ಪಿಗಳ ವರ್ಗ

ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…

1 hour ago

ಕೊಡಗು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಿಂದುಮಣಿ ನೇಮಕ

ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್‌ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…

1 hour ago

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

5 hours ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

5 hours ago