ಜಿಲ್ಲೆಗಳು

ದಸರೆ ಆಹಾರ ಮೇಳದಲ್ಲಿ ಬಿರಿಯಾನಿ ಸ್ಪೆಶಲ್‌!

ಸಂಗೀತ ಸಂಜೆಯ ಜತೆ ಹೊಟ್ಟೆ ತಣಿಸಲಿವೆ ಬಗೆಬಗೆಯ ಆಹಾರ

ಮೈಸೂರು: ಎರಡು ವರ್ಷಗಳ ನಂತರ ಅದ್ದೂರಿ ದಸರಾ ಆಚರಿಸಲು ಮೈಸೂರು ಸಜ್ಜಾಗಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ನಾನಾ ಬಗೆಯ ಆಹಾರ ಖಾದ್ಯಗಳನ್ನು ಸವಿಯಲು ಮೈಸೂರು ಮತ್ತು ದಸರೆ ವೇಳೆಯಲ್ಲಿ ಭೇಟಿ ನೀಡುವ ಪ್ರವಾಸಿಗರು ಕಾತರರಾಗಿದ್ದಾರೆ.
ದಸರಾ ಮಹೋತ್ಸವ ಪ್ರಯುಕ್ತ ಭಾರತ್ ಸ್ಕೌಟ್ಸ್ ‍ ಅಂಡ್ ಗೈಡ್ಸ್ ಮೈದಾನದಲ್ಲಿ ಈ ಬಾರಿಯೂ ಭರ್ಜರಿ ಭಕ್ಷ್ಯ ಭೋಜನ ಉಣಬಡಿಸಲು ಆಹಾರ ಮೇಳ ಉಪ ಸಮಿತಿ ಸರ್ವ ಸನ್ನದ್ಧವಾಗಿದೆ. ಈ ಬಾರಿ ನಾನಾ ಬಗೆಯ ಬಿರಿಯಾನಿಗಳನ್ನು ಪರಿಚಯಿಸಲು ಸಮಿತಿ ನಿರ್ಧರಿಸಿದೆ. ಪ್ರತೀ ವರ್ಷದಂತೆ ಈ ಸಲವೂ ಬೊಂಬು ಬಿರಿಯಾನಿ ಜತೆಗೆ ಮಡಿಕೆ ಬಿರಿಯಾನಿ ಮಾಂಸಾಹಾರಿ ಪ್ರಿಯರನ್ನು ಸೆಳೆಯಲಿದೆ. ಹಾಡಿಯ ಮಂದಿ ಕಾಡಿನಲ್ಲಿ ದೊರೆಯುವ ಬಿದಿರು ಬೊಂಬಿನಲ್ಲಿ ಬಿರಿಯಾನಿ ಮಾಡಿ ಉಣಬಡಿಸುತ್ತಿದ್ದರು. ಈ ಬಾರಿ ಮಣ್ಣಿನ ಮಡಿಕೆಯಲ್ಲಿ ತಯಾರಿಸುವ ಮಟನ್ ಬಿರಿಯಾನಿಯನ್ನು ತಯಾರಿಸಿ ರುಚಿ ತೋರಿಸಲಿದ್ದಾರೆ.

ಈಗಾಗಲೇ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ಮೈದಾನದ ಅಲದ ಮರ ಬಳಿ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನುರಿತ ಬಾಣಸಿಗರು ಮಾಂಸಪ್ರಿಯರ ಬೇಡಿಕೆಗೆ ತಕ್ಕಂತೆ ಬಿರಿಯಾನಿ ತಯಾರಿಸಲು ಆಗಮಿಸಿರುವುದು ವಿಶೇಷವಾಗಿದೆ. ಇತರ ಜತೆಗೆ ಉತ್ತರಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಖಾದ್ಯಗಳು, ಆಂಧ್ರ ಮತ್ತು ತೆಲಂಗಾಣದ ತಿನಿಸುಗಳೂ, ಉತ್ತರಭಾರತದ ವಿಶೇಷ ಖಾದ್ಯಗಳು, ಚೈನಿಸ್ ಮತ್ತು ಕಾಂಟಿನೆಂಟಲ್ ಫುಡ್, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖಾದ್ಯಗಳು ದೊರೆಯಲಿವೆ.
ತಿಂಡಿ ಸವಿಯುವ ಜತೆಗೆ ಒಂದಿಷ್ಟು ಮಜಾ ಜೊತೆಗೆ ಮನರಂಜನೆಯು ದೊರೆಯಲಿವೆ. ಅಡುಗೆ ಮಾಡುವ ಸ್ಪರ್ಧೆ, ಹಾಸ್ಯಭರಿತ ಸ್ಪರ್ಧೆಗಳು, ತಿನ್ನುವ ಸ್ಪರ್ಧೆಗಳು ನಡೆದರೆ, ಸಂಜೆ ಹಾಸ್ಯ ಸಂಜೆ, ಸಂಗೀತಸಂಜೆ, ಮನರಂಜನಾ ಕಾರ್ಯಕ್ರಮಗಳು ಜರುಗಿ ತಿಂಡಿತಿನಿಸುಗಳನ್ನು ಸವಿಯುವವರಿಗೆ ಸಂಗೀತದ ಮುದ ಸಿಗುವಂತೆ ಮಾಡಲಾಗಿದೆ.
ಈ ಚುರುಮುರಿ,ಪಾನಿಪುರಿ,ಮಂಗಳೂರು ಬಜ್ಜಿ,ದಾವಣಗೆರೆ ಬೆಣ್ಣೆ ದೋಸೆ ಒಂದು ಕಡೆ ಸವಿಯಬಹುದಾದರೆ,ಮತ್ತೊಂದು ಕಡೆ ಈ ಬಾರಿ ಮಡಿಕೆ, ಬೊಂಬು ಬಿರಿಯಾನಿ ಘಮಲು ಬಾಯಿ ಚಪ್ಪರಿಸುವವರನ್ನುಕೈ ಬೀಸಿ ಕರೆಯಲು ಸಜ್ಜಾಗಿದೆ.

ಮಳಿಗೆಗಳ ನಿರ್ಮಾಣ: ಪ್ರತಿ ವರ್ಷದಂತೆ ಈ ಬಾರಿಯೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದ್ದು, ಸ್ಕೌಟ್ಸ್ ಮೈದಾನದಲ್ಲಿ 118 ಮಳಿಗೆಗಳಿದ್ದು,ಇದರಲ್ಲಿ ಒಂದು ಬದಿಯಲ್ಲಿ 40 ಮಾಂಸಾಹಾರಿ ಮಳಿಗೆಗಳು ಇವೆ. ಚಿಕನ್, ಮಟನ್ ಕಬಾಬ್, ಧಮ್‌ ಬಿರಿಯಾನಿ, ಮಂಗಳೂರು ಫಿಶ್, ಬನ್ನೂರುಕುರಿ ಬಿರಿಯಾನಿ, ಫಿಶ್‌ಕಬಾಬ್, ಫಿಶ್‌ ಫ್ರೈ ಮೊದಲಾದ ತರಹೇವಾರಿ ಖಾದ್ಯಗಳು ನಾನ್‌ ವೆಜ್‌ ಪ್ರಿಯರ ಹೊಟ್ಟೆ ತಣಿಸಲಿವೆ.
ಅದೇ ರೀತಿ ಚುರುಮುರಿ,ಪಾನಿಪುರಿ, ಐಸ್‌ಕ್ರೀಂ, ಪುಳಿಯೋಗರೆ, ಬಂಗಾರಪೇಟೆ ಪಾನಿ ಪುರಿ , ದಾವಣಗೆರೆ ಮಸಾಲೆ ದೋಸೆ, ಧಾರವಾಡ ಪೇಡ ಸೇರಿದಂತೆ ನೂರಾರು ಬಗೆಯ ತಿನಿಸುಗಳು ಆಹಾರ ಪ್ರಿಯರ ಮನಗೆಲ್ಲಲಿವೆ.

ಲಲಿತಮಹಲ್‌ ಪ್ಯಾಲೇಸ್‌ ಮೈದಾನದಲ್ಲಿ 74 ಮಳಿಗೆಗಳನ್ನು ನಿರ್ಮಿಸಲಿದ್ದು, ಇಲ್ಲಿಯೂ ಸ್ಥಳೀಯ ಮತ್ತು ಹೊರಗಿನವರು ವಿವಿಧ ಖಾದ್ಯಗಳನ್ನು ಉಣಬಡಿಸಲಿದ್ದಾರೆ. ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಮಾಡಲಾಗಿದ್ದು, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಳೆ ಬಂದರೆ ಯಾವುದೇ ತೊಂದರೆ ಆಗದಂತೆ ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದ್ದು, ವಿದ್ಯುತ್,ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲು ಪ್ರತ್ಯೇಕ ಪೌರ ಕಾರ್ಮಿಕರು,ವಿಶೇಷ ಕಾರ್ಮಿಕರನ್ನು ನೇಮಿಸಿದ್ದು, ತಿಂಡಿ-ತಿನಿಸುಗಳನ್ನು ಸವಿದ ಮೇಲೆ ತಟ್ಟೆಗಳನ್ನು ಕಸದ ಡಬ್ಬಿಗೆ ಹಾಕುವಂತೆ ಮಾಡಲು ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಸ್ವಚ್ಛ ಮೈಸೂರಿನ ಹಿರಿಮೆಯನ್ನು ಉಳಿಸಿಕೊಳ್ಳುತ್ತಲೇ ಆಹಾರ ಮೇಳ ಯಶಸ್ವಿಗೊಳಿಸಲು ಸಮಿತಿ ಸಜ್ಜಾಗಿದೆ.

andolanait

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

3 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

3 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

4 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

4 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

4 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

4 hours ago