ಜಿಲ್ಲೆಗಳು

ದಸರೆ ಆಹಾರ ಮೇಳದಲ್ಲಿ ಬಿರಿಯಾನಿ ಸ್ಪೆಶಲ್‌!

ಸಂಗೀತ ಸಂಜೆಯ ಜತೆ ಹೊಟ್ಟೆ ತಣಿಸಲಿವೆ ಬಗೆಬಗೆಯ ಆಹಾರ

ಮೈಸೂರು: ಎರಡು ವರ್ಷಗಳ ನಂತರ ಅದ್ದೂರಿ ದಸರಾ ಆಚರಿಸಲು ಮೈಸೂರು ಸಜ್ಜಾಗಿದೆ. ದಸರೆಯ ಪ್ರಮುಖ ಆಕರ್ಷಣೆಯಾದ ಆಹಾರ ಮೇಳದಲ್ಲಿ ನಾನಾ ಬಗೆಯ ಆಹಾರ ಖಾದ್ಯಗಳನ್ನು ಸವಿಯಲು ಮೈಸೂರು ಮತ್ತು ದಸರೆ ವೇಳೆಯಲ್ಲಿ ಭೇಟಿ ನೀಡುವ ಪ್ರವಾಸಿಗರು ಕಾತರರಾಗಿದ್ದಾರೆ.
ದಸರಾ ಮಹೋತ್ಸವ ಪ್ರಯುಕ್ತ ಭಾರತ್ ಸ್ಕೌಟ್ಸ್ ‍ ಅಂಡ್ ಗೈಡ್ಸ್ ಮೈದಾನದಲ್ಲಿ ಈ ಬಾರಿಯೂ ಭರ್ಜರಿ ಭಕ್ಷ್ಯ ಭೋಜನ ಉಣಬಡಿಸಲು ಆಹಾರ ಮೇಳ ಉಪ ಸಮಿತಿ ಸರ್ವ ಸನ್ನದ್ಧವಾಗಿದೆ. ಈ ಬಾರಿ ನಾನಾ ಬಗೆಯ ಬಿರಿಯಾನಿಗಳನ್ನು ಪರಿಚಯಿಸಲು ಸಮಿತಿ ನಿರ್ಧರಿಸಿದೆ. ಪ್ರತೀ ವರ್ಷದಂತೆ ಈ ಸಲವೂ ಬೊಂಬು ಬಿರಿಯಾನಿ ಜತೆಗೆ ಮಡಿಕೆ ಬಿರಿಯಾನಿ ಮಾಂಸಾಹಾರಿ ಪ್ರಿಯರನ್ನು ಸೆಳೆಯಲಿದೆ. ಹಾಡಿಯ ಮಂದಿ ಕಾಡಿನಲ್ಲಿ ದೊರೆಯುವ ಬಿದಿರು ಬೊಂಬಿನಲ್ಲಿ ಬಿರಿಯಾನಿ ಮಾಡಿ ಉಣಬಡಿಸುತ್ತಿದ್ದರು. ಈ ಬಾರಿ ಮಣ್ಣಿನ ಮಡಿಕೆಯಲ್ಲಿ ತಯಾರಿಸುವ ಮಟನ್ ಬಿರಿಯಾನಿಯನ್ನು ತಯಾರಿಸಿ ರುಚಿ ತೋರಿಸಲಿದ್ದಾರೆ.

ಈಗಾಗಲೇ ಸ್ಕೌಟ್ಸ್‌ ಆಂಡ್‌ ಗೈಡ್ಸ್‌ ಮೈದಾನದ ಅಲದ ಮರ ಬಳಿ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನುರಿತ ಬಾಣಸಿಗರು ಮಾಂಸಪ್ರಿಯರ ಬೇಡಿಕೆಗೆ ತಕ್ಕಂತೆ ಬಿರಿಯಾನಿ ತಯಾರಿಸಲು ಆಗಮಿಸಿರುವುದು ವಿಶೇಷವಾಗಿದೆ. ಇತರ ಜತೆಗೆ ಉತ್ತರಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಖಾದ್ಯಗಳು, ಆಂಧ್ರ ಮತ್ತು ತೆಲಂಗಾಣದ ತಿನಿಸುಗಳೂ, ಉತ್ತರಭಾರತದ ವಿಶೇಷ ಖಾದ್ಯಗಳು, ಚೈನಿಸ್ ಮತ್ತು ಕಾಂಟಿನೆಂಟಲ್ ಫುಡ್, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖಾದ್ಯಗಳು ದೊರೆಯಲಿವೆ.
ತಿಂಡಿ ಸವಿಯುವ ಜತೆಗೆ ಒಂದಿಷ್ಟು ಮಜಾ ಜೊತೆಗೆ ಮನರಂಜನೆಯು ದೊರೆಯಲಿವೆ. ಅಡುಗೆ ಮಾಡುವ ಸ್ಪರ್ಧೆ, ಹಾಸ್ಯಭರಿತ ಸ್ಪರ್ಧೆಗಳು, ತಿನ್ನುವ ಸ್ಪರ್ಧೆಗಳು ನಡೆದರೆ, ಸಂಜೆ ಹಾಸ್ಯ ಸಂಜೆ, ಸಂಗೀತಸಂಜೆ, ಮನರಂಜನಾ ಕಾರ್ಯಕ್ರಮಗಳು ಜರುಗಿ ತಿಂಡಿತಿನಿಸುಗಳನ್ನು ಸವಿಯುವವರಿಗೆ ಸಂಗೀತದ ಮುದ ಸಿಗುವಂತೆ ಮಾಡಲಾಗಿದೆ.
ಈ ಚುರುಮುರಿ,ಪಾನಿಪುರಿ,ಮಂಗಳೂರು ಬಜ್ಜಿ,ದಾವಣಗೆರೆ ಬೆಣ್ಣೆ ದೋಸೆ ಒಂದು ಕಡೆ ಸವಿಯಬಹುದಾದರೆ,ಮತ್ತೊಂದು ಕಡೆ ಈ ಬಾರಿ ಮಡಿಕೆ, ಬೊಂಬು ಬಿರಿಯಾನಿ ಘಮಲು ಬಾಯಿ ಚಪ್ಪರಿಸುವವರನ್ನುಕೈ ಬೀಸಿ ಕರೆಯಲು ಸಜ್ಜಾಗಿದೆ.

ಮಳಿಗೆಗಳ ನಿರ್ಮಾಣ: ಪ್ರತಿ ವರ್ಷದಂತೆ ಈ ಬಾರಿಯೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ ನಡೆಯಲಿದ್ದು, ಸ್ಕೌಟ್ಸ್ ಮೈದಾನದಲ್ಲಿ 118 ಮಳಿಗೆಗಳಿದ್ದು,ಇದರಲ್ಲಿ ಒಂದು ಬದಿಯಲ್ಲಿ 40 ಮಾಂಸಾಹಾರಿ ಮಳಿಗೆಗಳು ಇವೆ. ಚಿಕನ್, ಮಟನ್ ಕಬಾಬ್, ಧಮ್‌ ಬಿರಿಯಾನಿ, ಮಂಗಳೂರು ಫಿಶ್, ಬನ್ನೂರುಕುರಿ ಬಿರಿಯಾನಿ, ಫಿಶ್‌ಕಬಾಬ್, ಫಿಶ್‌ ಫ್ರೈ ಮೊದಲಾದ ತರಹೇವಾರಿ ಖಾದ್ಯಗಳು ನಾನ್‌ ವೆಜ್‌ ಪ್ರಿಯರ ಹೊಟ್ಟೆ ತಣಿಸಲಿವೆ.
ಅದೇ ರೀತಿ ಚುರುಮುರಿ,ಪಾನಿಪುರಿ, ಐಸ್‌ಕ್ರೀಂ, ಪುಳಿಯೋಗರೆ, ಬಂಗಾರಪೇಟೆ ಪಾನಿ ಪುರಿ , ದಾವಣಗೆರೆ ಮಸಾಲೆ ದೋಸೆ, ಧಾರವಾಡ ಪೇಡ ಸೇರಿದಂತೆ ನೂರಾರು ಬಗೆಯ ತಿನಿಸುಗಳು ಆಹಾರ ಪ್ರಿಯರ ಮನಗೆಲ್ಲಲಿವೆ.

ಲಲಿತಮಹಲ್‌ ಪ್ಯಾಲೇಸ್‌ ಮೈದಾನದಲ್ಲಿ 74 ಮಳಿಗೆಗಳನ್ನು ನಿರ್ಮಿಸಲಿದ್ದು, ಇಲ್ಲಿಯೂ ಸ್ಥಳೀಯ ಮತ್ತು ಹೊರಗಿನವರು ವಿವಿಧ ಖಾದ್ಯಗಳನ್ನು ಉಣಬಡಿಸಲಿದ್ದಾರೆ. ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಮಾಡಲಾಗಿದ್ದು, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಳೆ ಬಂದರೆ ಯಾವುದೇ ತೊಂದರೆ ಆಗದಂತೆ ವಾಟರ್ ಪ್ರೂಫ್ ಶಾಮಿಯಾನ ಹಾಕಲಾಗಿದ್ದು, ವಿದ್ಯುತ್,ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲು ಪ್ರತ್ಯೇಕ ಪೌರ ಕಾರ್ಮಿಕರು,ವಿಶೇಷ ಕಾರ್ಮಿಕರನ್ನು ನೇಮಿಸಿದ್ದು, ತಿಂಡಿ-ತಿನಿಸುಗಳನ್ನು ಸವಿದ ಮೇಲೆ ತಟ್ಟೆಗಳನ್ನು ಕಸದ ಡಬ್ಬಿಗೆ ಹಾಕುವಂತೆ ಮಾಡಲು ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಸ್ವಚ್ಛ ಮೈಸೂರಿನ ಹಿರಿಮೆಯನ್ನು ಉಳಿಸಿಕೊಳ್ಳುತ್ತಲೇ ಆಹಾರ ಮೇಳ ಯಶಸ್ವಿಗೊಳಿಸಲು ಸಮಿತಿ ಸಜ್ಜಾಗಿದೆ.

andolanait

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

51 mins ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

2 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

4 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

5 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

6 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

6 hours ago