ಕ್ವಾರಿ ಮಾಲೀಕ ಕಮಲೇಶ್ ಕುಮಾರ್ ಆರೋಪ
ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನನಗೆ ಸೇರಿದ ಕಪ್ಪುಕಲ್ಲು ಕ್ವಾರಿ ಖರೀದಿಸಿ ಬಾಕಿ ಹಣ ೯ ಕೋಟಿ ರೂ.ನೀಡದೆ ವಂಚಿಸಲು ಮುಂದಾಗಿದ್ದಾರೆ ಎಂದು ಗುಜರಾತ್ ಮೂಲದ ಡಾ.ಕಮಲೇಶ್ಕುಮಾರ್ ಆರೋಪಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ವೆ ನಂ. ೩೩೫/೧, ೩೩೬/೪, ೩೩೬/೬ ಹಾಗೂ ೩೩೯/೧ರಲ್ಲಿ ೪ ಎಕರೆ ೩೩ ಗುಂಟೆಯಲ್ಲಿ ನಡೆಯುತ್ತಿದ್ದ ಕಪ್ಪುಕಲ್ಲು ಕ್ವಾರಿಯನ್ನು ಹಿತೇಂದ್ರಜೋಶಿ ಎಂಬುವರಿಂದ ನಾನು ಖರೀದಿಸಿದ್ದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕ್ವಾರಿಗೆ ಹೊಂದಿಕೊಂಡಂತಿದ್ದ ಸರ್ವೆ ೩೩೭ರಲ್ಲಿ ೪ ಎಕರೆ ೧ ಗುಂಟೆ ಭೂಮಿಯನ್ನು ಖರೀದಿಸಿದ್ದೇನೆ. ಈ ಭೂಮಿಯಲ್ಲಿ ನಾನು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ೨೦೨೧ ನವೆಂಬರ್ವರಗೆ ಗಣಿಗಾರಿಕೆ ನಡೆಸಿದ್ದೇನೆ ಎಂದು ತಿಳಿಸಿದರು.
೨೦೨೧ ಅಕ್ಟೋಬರ್ನಲ್ಲಿ ಸ್ಥಳೀಯರು ಕಿರಿಕಿರಿ ಮಾಡಿದರು. ಇದನ್ನು ಸರಿಪಡಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದ್ದೆ. ನೀವು ಹೊರ ರಾಜ್ಯದವರು ಹಾಗಾಗಿ ಸ್ಥಳೀಯರು ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ಆ ಕ್ವಾರೆಯನ್ನು ನನಗೆ ಮಾರಾಟ ಮಾಡುವಂತೆ ಶಾಸಕರು ಸೂಚಿಸಿದರು ಎಂದು ಆರೋಪಿಸಿದರು.
ನಾನು ಒಪ್ಪಿಕೊಂಡು ೧೪ ಕೋಟಿ ರೂ.ಗೆ ಕ್ರಯ ಒಪ್ಪಂದ ಮಾಡಿಕೊಂಡು ಮುಂಗಡವಾಗಿ ಶಾಸಕರಿಂದ ೧ ಲಕ್ಷ ರೂ. ಪಡೆದಿದ್ದೇನೆ. ನಂತರ ಕ್ವಾರಿ ಕ್ರಯ ಮಾಡಿಕೊಡುವಂತೆ ನನ್ನನು ಕರೆದರು. ಆ ದಿನ ನನ್ನನ್ನು ಹೆದರಿಸಿ ೧೪ ಕೋಟಿ ರೂ. ನೀಡಲು ಸಾಧ್ಯವಿಲ್ಲವೆಂದು ಧಮಕಿ ಹಾಕಿದರು ಎಂದು ಆಪಾದಿಸಿದರು.
ಬಳಿಕ ಕ್ವಾರಿಯನ್ನು ೧೨.೫೦ ಕೋಟಿ ರೂ.ಗೆ ಕ್ರಯದ ಅಗ್ರಿಮೆಂಟ್ ಮಾಡಿದಾಗ ಶಾಸಕರ ವೈಯುಕ್ತಿಕ ಬ್ಯಾಂಕ್ ಖಾತೆಯಿಂದ ನನಗೆ ೧ ಕೋಟಿ ರೂ. ಬಂದಿದೆ. ನಂತರದ ಪ್ರಕ್ರಿಯೆಯನ್ನು ಮಾಡದೆ ಕ್ವಾರಿ ಆರಂಭಿಸಿದರು. ಇದನ್ನು ಪ್ರಶ್ನಿಸಿದ ನನಗೆ ಕೊಲೆ ಬೆದರಿಕೆ ಹಾಕಿಸಿದ್ದಾರೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕ್ವಾರಿ ನಿಲ್ಲಿಸಿದ್ದಾರೆ ಎಂದು ದೂರಿದರು.
೧ ಕೋಟಿ ಜೊತೆಗೆ ೨.೫೪ ಲಕ್ಷ ರೂ. ೨೦೨೨ರ ಮಾರ್ಚ್ನಲ್ಲಿ ನನಗೆ ಸಂದಾಯವಾಗಿದೆ. ಶಾಸಕರು ಬಾಕಿ ೯ ಕೋಟಿ ರೂ. ವಂಚಿಸಲು ಯತ್ನಿಸಿದ್ದಾರೆ. ಅವರ ಅಳಿಯ ಬೆದರಿಕೆ ಹಾಕಿರುವ ೫೭೧ ಕರೆಗಳ ಧ್ವನಿಮುದ್ರಿಕೆ ನನ್ನ ಬಳಿಯಿದೆ. ಶಾಸಕರ ವಿರುದ್ದ ಪ್ರಧಾನಿ, ಗೃಹ ಸಚಿವರು ಹಾಗೂ ಸಂಬಂಧಪಟ್ಟ ಎಲ್ಲರಿಗೂ ದೂರು ಸಲ್ಲಿಸುತ್ತೇನೆ ಎಂದರು
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…