ಮಂಡ್ಯ

ಕೋರಮಂಡಲ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘನೆ: ಹೇಮಾವತಿ ನದಿಗೆ ತ್ಯಾಜ್ಯದ ಕಲುಷಿತ ನೀರು

ಕೆ.ಆರ್.ಪೇಟೆ : ತಾಲ್ಲೂಕಿನ ಮಾಕವಳ್ಳಿಯ ಕೋರಮಂಡಲ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘಿಸಿ ಅಪಾಯಕಾರಿ ತ್ಯಾಜ್ಯದ ನೀರನ್ನು ಹೇಮಾವತಿ ನದಿ ಒಡಲಿಗೆ ವಿಸರ್ಜಿಸುತ್ತಿರುವ ಪರಿಣಾಮ ನದಿ ನೀರು ಕಲುಷಿತಗೊಳ್ಳುತ್ತಿದೆ.
ಕಾರ್ಖಾನೆ ಪ್ರತಿ ದಿನ ಸುಮಾರು ನಾಲ್ಕು ಸಾವಿರ ಟನ್ ಕಬ್ಬನ್ನು ಹರಿಯುವ ಸಾಮರ್ಥ್ಯವಿದ್ದು ಸಕ್ಕರೆ ಉತ್ಪಾದನೆ ವೇಳೆ ತ್ಯಾಜ್ಯವಾಗಿ ಬರುವ ಅಪಾಯಕಾರಿ ರಾಸಾಯನಿಕ ಅಂಶವುಳ್ಳ ಮಲಿನ ದ್ರವ ತ್ಯಾಜ್ಯವನ್ನು ಸಂಸ್ಕರಿಸದೇ ಕಾರ್ಖಾನೆ ಹರಿಯಬಿಡುತ್ತಿದೆ.

ಕಲುಷಿತಗೊಂಡಿರುವ ನೀರನ್ನು ಕೃಷಿ ಮತ್ತು ಕಡಿಯುವ ನೀರು ಪೂರೈಕೆಗೆ ಬಳಸುತ್ತಿರುವುದರಿಂದ ಕೃಷಿ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗುತ್ತಿರುವುದಲ್ಲದೇ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ಈ ಭಾಗದ ಜನ ಕಾರ್ಖಾನೆ ವಿರುದ್ಧ ಹಲವು ರೀತಿಯ ಹೋರಾಟ ಮಾಡಿ ತ್ಯಾಜ್ಯ ಬಿಡದಂತೆ ನಿಯಂತ್ರಿಸಿದ್ದರು. ಜನಾಕ್ರೋಶಕ್ಕೆ ಬೆದರಿದ ಕಾರ್ಖಾನೆ ಕೆಲವು ವರ್ಷಗಳ ಕಾಲ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಾರ್ಖಾನೆಯ ವ್ಯಾಪ್ತಿಯಲ್ಲಿರುವ ಕೇನ್ ಫಾರಂನಲ್ಲಿರುವ ಕಬ್ಬು, ತೆಂಗಿಗೆ ಬಿಡುತ್ತಿತ್ತು. ಆದರೆ ತ್ಯಾಜ್ಯ ನೀರನ್ನು ಸಂಸ್ಕರಿಸುವುದರಿಂದ ಕಾರ್ಖಾನೆಗೆ ಆದಾಯವಿಲ್ಲ.

ತ್ಯಾಜ್ಯ ನೀರು ಬಿಡಲು ಕಾರ್ಖಾನೆ ಕಾಂಪೌಂಡಿಗೆ ಪಿವಿಸಿ ಪೈಪ್‍ಗಳನ್ನು ನೆಲಮಟ್ಟದಲ್ಲಿ ಅಕ್ರಮವಾಗಿ ಅಳವಡಿಸಿದೆ. ಕಾಂಪೌಂಡ್‍ಗೆ ಪೈಪ್ ಅಳವಡಿಸುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಕಾರ್ಖಾನೆಯ ಮೊಲಾಸಿಸ್ ಸ್ಟೋರೆಜ್ ಟ್ಯಾಂಕ್ ಬಳಿಯ ಕಾಂಪೌಂಡ್‍ಗೆ ತ್ಯಾಜ್ಯ ನೀರನ್ನು ಹೊರಬಿಡಲೆಂದೆ ನೆಲಮಟ್ಟದಲ್ಲಿ 2.5 ಇಂಚಿನ ಹಲವು ಪಿವಿಸಿ ಪೈಪ್‍ಗಳನ್ನು ಉದ್ದೇಶಪೂರಕವಾಗಿಯೇ ಅಳವಡಿಸಿದ್ದಾರೆ.

ಕಾರ್ಖಾನೆಯ ಕೆಳಭಾಗದಲ್ಲಿರುವ ಹೇಮಗಿರಿಯಿಂದ ಹೇಮಾವತಿ ನದಿ ನೀರನ್ನು ಕೆ.ಆರ್.ಪಟ್ಟಣದ 30 ಸಾವಿರಕ್ಕೂ ಅಧಿಕ ಜನ ಕುಡಿಯಲು ಬಳಸುತ್ತಾರೆ. ಇದಲ್ಲದೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ 25 ಗ್ರಾಮಗಳು, ಬೂಕನಕೆರೆ ಹೋಬಳಿಯ 21 ಗ್ರಾಮಗಳು, ನೆರೆಯ ಕೆ.ಆರ್.ನಗರದ ತಾಲ್ಲೂಕಿನ  ಗುಳುವಿನ ಅತ್ತಿಗುಪ್ಪೆ ಮತ್ತು ಅದರ ಸುತ್ತಮುತ್ತಲ 31 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಹೇಮಾವತಿ ನೀರು ಪೂರೈಕೆ ಮಾಡುತ್ತಿದ್ದು ಅಲ್ಲಿನ ಜನರು ಮಲೀನಯುಕ್ತ ನೀರನ್ನು ಸೇವಿಸುವಂತಾಗಿದೆ.

ತಕ್ಷಣವೇ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಖಾನೆಯ ವಿರುದ್ದ ಕ್ರಮ  ಜರುಗಿಸಿ ಜನರ ಆರೋಗ್ಯ ಮತ್ತು ರೈತರ ಕೃಷಿಯನ್ನು ಸಂರಕ್ಷಿಸುವಂತೆ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.

 

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

10 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

10 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

12 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

12 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

1 day ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago