ಚಿತ್ರ ಮಂಜರಿ

ಹೆಡ್ ಬುಷ್ ಸಿನಿಮಾ ವಿವಾದ ಅಂತ್ಯ, ಆಕ್ಷೇಪಾರ್ಹ ಡೈಲಾಗ್ ಮ್ಯೂಟ್ ಮಾಡಲು ಒಪ್ಪಿಗೆ

ಬೆಂಗಳೂರು: ವೀರಗಾಸೆ ಕುಣಿತಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಹೆಡ್ ಬುಷ್ ಸಿನಿಮಾ ವಿರುದ್ಧ ಎದ್ದಿದ್ದ ವಿವಾದ ಕೊನೆಗೂ ಅಂತ್ಯವಾಗಿದೆ. ವಿವಾದಾತ್ಮಕ ಡೈಲಾಗ್ ಮ್ಯೂಟ್ ಮಾಡಲು ಚಿತ್ರ ತಂಡ ಒಪ್ಪಿಗೆ ನೀಡಿದೆ.

ಸಿನಿಮಾದಲ್ಲಿ ಬೆಂಗಳೂರಿನ ಕರಗೋತ್ಸವಕ್ಕೆ, ವೀರಗಾಸೆ ಕುಣಿತಕ್ಕೆ ಹಾಗೂ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ದೂರಲಾಗಿತ್ತು. ಈ ಬಗ್ಗೆ ನಟ ಡಾಲಿ ಧನಂಜಯ್ ವಿವರಣೆ ನೀಡಿ, ವೀರಗಾಸೆಗೆ ಯಾವುದೇ ಅಪಮಾನ ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಆದರೂ ಕೂಡ ಚಿತ್ರತಂಡದ ವಿರುದ್ಧ ವಿರೋಧ ಮುಂದುವರಿದಿತ್ತು. ಆ ದೃಶ್ಯಗಳನ್ನು ಕತ್ತರಿಸಿ ಎಂದು ಕೆಲವರು ಬೇಡಿಕೆ ಇಟ್ಟಿದ್ದರು. ಇದೀಗ ಪಿಲ್ಮ್ ಚೇಂಬರ್ ಹಾಗೂ ಚಿತ್ರ ತಂಡ ಜಂಟಿಯಾಗಿ ಸುದ್ದಿಗೋಷ್ಠಿ ಕರೆದು, ವಿವಾದ ಅಂತ್ಯವಾಗಿರುವುದಾಗಿ ತಿಳಿಸಿದೆ.

ಫಿಲ್ಮ್ ಚೇಂಬರ್‌ನಲ್ಲಿ ಸುದ್ದಿಗೋಷ್ಠಿ
ಬೆಂಗಳೂರಿನ ಫಿಲ್ಮ್ ಚೇಂಬರ್ನಲ್ಲಿ ಗುರುವಾರ ಹೆಡ್ ಬುಷ್ ಚಿತ್ರತಂಡ ಹಾಗೂ ಫಿಲ್ಮ್ ಚೇಂಬರ್ ಪದಾದಿಕಾರಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಈ ಸ್ಪಷ್ಟನೆ ನೀಡಿದರು. ನಟ ಡಾಲಿ ಧನಂಜಯ, ಅಗ್ನಿ ಶ್ರೀಧರ್, ಕರಗ ಸಮಿತಿ ಹಾಗೂ ಫಿಲ್ಮ್ ಚೇಂಬರ್ ಪಧಾದಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಸಮಸ್ಯೆ ಈಗ ಬಗೆಹರಿದಿದೆ ಎಂದು ಮಾಹಿತಿ ನೀಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಸುಂದರ್ ರಾಜ್ ಹೇಳಿದ್ದಾರೆ.

ವಿವಾದಾತ್ಮಕ ಡೈಲಾಗ್ ಮ್ಯೂಟ್ ಮಾಡಲು ಒಪ್ಪಿಗೆ
ಚಿತ್ರದಲ್ಲಿ ಬರುವ ವಿವಾದಾತ್ಮಕ ಸಂಭಾಷಣೆಯನ್ನ ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿದೆ ಅಂತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡು ದಿನದಲ್ಲಿ ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ ಹಾಕಲು ಚಿತ್ರ ತಂಡ ಒಪ್ಪಿರುವುದಾಗಿ ತಿಳಿಸಲಾಗಿದೆ.

ಡಾಲಿ ಧನಂಜಯ್ ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಡಾಲಿ ಧನಂಜಯ ಅವರು, “ಎಲ್ಲ ಇಲ್ಲಿ ಕೂತು ಮಾತನಾಡಿದ್ದು ತುಂಬಾ ಖುಷಿಯಾಯ್ತು. ಎಲ್ಲರೂ ನೀಟಾಗಿ ಅ ವಿಚಾರದ ಬಗ್ಗೆ ಮಾತನಾಡಿದ್ರು ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಕೇಳ್ತಿನಿ. ಎಲ್ಲರಿಗೂ ಧನ್ಯವಾದಗಳು. ಖಂಡಿತ ನಾನು ಆ ಡೈಲಾಗ್ ಮ್ಯೂಟ್ ಮಾಡ್ತಿನಿ. ವೀರಗಾಸೆ ವಿಚಾರವನ್ನು ಕ್ಲೀಯರ್ ಮಾಡಿದ್ದೀನಿ. ನಾನು ಇಲ್ಲಿಗೆ ಬಂದಿರೋದು ಸಿನಿಮಾ ಮಾಡೋಕೆ ಕಾಂಟ್ರವರ್ಸಿ ಮಾಡೋಕಲ್ಲʼʼ ಎಂದು ಹೇಳಿದರು.

ವಿವಾದ ಮಾಡಿದ್ದು ಆರ್ ಎಸ್ಎಸ್ ಅಲ್ಲ, ಕಿಡಿಗೇಡಿಗಳು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗ್ನಿಶ್ರೀಧರ್, ವೇದಿಕೆ ಮೇಲೆ ಎದುರಾಳಿಗಳಾಗಿ ಕೂತಿರೋರು ಎಲ್ಲ ನನ್ನವರೇ. ನಮ್ಮ ಸಮಸ್ಯೆ ಹಾಗೂ ಅವರ ನೋವು ನಮಗೆ ಅರ್ಥ ಆಗುತ್ತದೆ. ನಿನ್ನೆ ನಾನು ಕೋಪದಲ್ಲಿ ಕಿಡಿಗೇಡಿಗಳ ವಿರುದ್ದ ಕೂಗಾಡಿದ್ದೆ. ಈ ವಿವಾದ ಮಾಡಿದ್ದು ಅರ್ ಎಸ್ ಎಸ್ ಅಲ್ಲ ಕಿಡಿಗೇಡಿಗಳು ಎಂದರು.

ಮಳೆಬಿದ್ದು ತಣ್ಣಗಾದಂತಹ ಅನುಭವ ಆಗಿದೆ
ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಚಿನ್ನೆಗೌಡ ಮಾತನಾಡಿ, ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಏನೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸಿಕೊಂಡು ಬಂದಿದ್ದೀವಿ. ಈಗ ಮಳೆಬಿದ್ದು ತಣ್ಣಗಾದಂತಹ ಅನುಭವ ಆಗಿದೆ. ಎಲ್ಲರೂ ಹೋಗಿ ಸಿನಿಮಾ ನೋಡ್ತಿವಿ ಎಂದರು.

andolana

Recent Posts

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

3 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

3 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

3 hours ago

‘ರಾಮ ರಾಜಕಾರಣಕ್ಕೆ ಅಗ್ನಿ ಪರೀಕ್ಷೆ..!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…

3 hours ago

ಇದು ಶೌಚಾಲಯ… ಈಗ ಅನುಪಯುಕ್ತ ವಸ್ತುಗಳ ಗೋದಾಮು!

ಎಚ್.ಎಸ್.ದಿನೇಶ್ ಕುಮಾರ್ ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ…

3 hours ago