ಮೇಲುಕೋಟೆ:ಮೇಲುಕೋಟೆ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವದ ವಿಶೇಷ ಉತ್ಸವಗಳಲ್ಲಿ ಚೆಲುವನಾರಾಯಣಸ್ವಾಮಿ ಅಲಂಕಾರಕ್ಕಾಗಿ 56 ಬಗೆಯ ವೈವಿಧ್ಯಮಯ ಪುರಾತನ ಆಭರಣಗಳನ್ನು ಸ್ಥಾನೀಕರು ಅರ್ಚಕರು, ಪರಿಚಾರಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹಸ್ತಾಂತರಿಸಿದರು.
ಪಾಂಡವಪುರ ತಾಲ್ಲೂಕು ಖಜಾನೆಯಲ್ಲಿದ್ದ ತಿರುವಾಭರಣಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆಮಾಡಲಾಯಿತು. ಬಂಗಾರ, ಮುತ್ತು ಹಾಗೂ ವಜ್ರಖಚಿತ ಆಭರಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಚೆಲುವನಾರಾಯಣಸ್ವಾಮಿಯ ಅಲಂಕಾರಕ್ಕಾಗಿ ನೀಡಲಾಯಿತು.
ಶಂಖ, ಚಕ್ರ, ಗದಾಂಗಿ ಕಿರೀಟ ಬಂಗಾರದ ಬಟ್ಟಲು ಮುತ್ತುಮುಡಿ, ಮುತ್ತಿನ ಸರಗಳು ಕೋರಂಬ ಹೀಗೆ 56 ವೈವಿಧ್ಯಮಯ ಆಭರಣಗಳನ್ನು ಒಂದೊಂದಾಗಿ ಪರಿಶೀಲಿಸಿ ದಾಖಲಿಸಿದ ನಂತರ ದೇವಾಲಯದ ಕೈಂಕರ್ಯಪರಿಗೆ ಹಸ್ತಾಂತರ ಮಾಡಲಾಯಿತು.
ಈ ವೇಳೆ ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ, ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್, ಸ್ಥಾನೀಕಂ ಸಂಪತ್ಕುಮಾರನ್, ಸ್ಥಾನೀಕಂ ಶ್ರೀರಾಮನ್, ಪರಿಚಾರಕ ಪಾರ್ಥಸಾರಥಿ, ಅರ್ಚಕ ವರದರಾಜಭಟ್, ಪರಕಾಲಮಠದ ಪ್ರತಿನಿಧಿ ನರಸಿಂಹರಂಗನ್, ಅಕೌಂಟೆಂಟ್ ಹೇಮಂತಕುಮಾರ್, ಪ್ರಥಮದರ್ಜೆ ಸಹಾಯಕ ಪ್ರಕಾಶ್ ಪಾರ್ಕಾವಣೆಯಲ್ಲಿ ಭಾಗವಹಿಸಿದ್ದರು.
ಈ ಅಮೂಲ್ಯ ಪುರಾತನ ಆಭರಣಗಳು ಯುಗಾದಿ ಹಬ್ಬದಿಂದಲೇ ಚೆಲುವನಾರಾಯಣನನ್ನು ಅಲಂಕರಿಸಲಿವೆ. ಮಾರ್ಚ 24ರಂದು ರಾತ್ರಿ ನಡೆಯುವ ಪ್ರಥಮ ತೆಪ್ಪೋತ್ಸವದಂದು ಮುತ್ತುಮುಡಿ ಅಲಂಕಾರದೊಂದಿಗೆ ಈ ಎಲ್ಲಾ ಆಭರಣಗಳನ್ನು ಧರಿಸಲಾಗುತ್ತದೆ.
ಇದರ ಜೊತೆಗೆ ವೈರಮುಡಿಯಂದು ಜಿಲ್ಲಾ ಖಜಾನೆಯಿಂದ ಬರುವ ವೈರಮುಡಿ-ರಾಜಮುಡಿ ಹಾಗೂ 16 ಬಗೆಯ ವಜ್ರಖಚಿತ ಆಭರಣಗಳೂ ಸಹ ಚೆಲುನಾರಾಯಣನನ್ನು ಬ್ರಹ್ಮೋತ್ಸವದಲ್ಲಿ ಅಲಂಕರಿಸಲಿದೆ. ವೈರಮುಡಿ ಕಿರೀಟಮಾತ್ರ ಒಂದು ರಾತ್ರಿ ಚೆಲುವನಾರಾಯಣನ್ನು ಅಲಂಕರಿಸಿದರೆ ಉಳಿದ ಆಭರಣಗಳು ಬ್ರಹ್ಮೋತ್ಸವ ಪೂರ್ತ ಸ್ವಾಮಿಯನ್ನು ಅಲಂಕರಿಸಿರುತ್ತವೆ.
ಈ ವೇಳೆ ಮಾಹಿತಿ ನೀಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಭಾರತದ ಅತ್ಯಂತ ಪುರಾತನ ಹಾಗೂ ಧಾರ್ಮಿಕ ವಿಶೇಷವಾದ ವೈರಮುಡಿ ಜಾತ್ರಾಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಬ್ರಹ್ಮೋತ್ಸವದ ಎಲ್ಲಾ ಉತ್ಸವಗಳನ್ನೂ ವೈಭವಯುತವಾಗಿ ನಡೆಸಲು ಶ್ರಮಿಸಲಾಗುತ್ತದೆ ಉತ್ಸವದಲ್ಲಿ ಸೇವೆಮಾಡುವ ಭಾಗ್ಯ ನಮಗೆ ದೊರೆತಿರುವುದೇ ದೊಡ್ಡಭಾಗ್ಯ ಎಂದೇ ಭಾವಿಸಿ ಭಕ್ತಸ್ನೇಹಿಯಾಗಿ ವ್ಯವಸ್ಥೆಮಾಡಲಾಗುತ್ತಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚೆಲುವನಾರಾಯಣಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದರು.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್ಪೆಕ್ಟರ್ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…