ಮಂಡ್ಯ

ವೈರಮುಡಿ ಬ್ರಹ್ಮೋತ್ಸವದ  ಪುರಾತನ ಆಭರಣಗಳ ಹಸ್ತಾಂತರ

ಮೇಲುಕೋಟೆ:ಮೇಲುಕೋಟೆ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವದ ವಿಶೇಷ ಉತ್ಸವಗಳಲ್ಲಿ ಚೆಲುವನಾರಾಯಣಸ್ವಾಮಿ ಅಲಂಕಾರಕ್ಕಾಗಿ 56 ಬಗೆಯ ವೈವಿಧ್ಯಮಯ ಪುರಾತನ ಆಭರಣಗಳನ್ನು ಸ್ಥಾನೀಕರು ಅರ್ಚಕರು, ಪರಿಚಾರಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಹಸ್ತಾಂತರಿಸಿದರು.
ಪಾಂಡವಪುರ ತಾಲ್ಲೂಕು ಖಜಾನೆಯಲ್ಲಿದ್ದ ತಿರುವಾಭರಣಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆಮಾಡಲಾಯಿತು. ಬಂಗಾರ, ಮುತ್ತು ಹಾಗೂ ವಜ್ರಖಚಿತ ಆಭರಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಚೆಲುವನಾರಾಯಣಸ್ವಾಮಿಯ ಅಲಂಕಾರಕ್ಕಾಗಿ ನೀಡಲಾಯಿತು.

ಶಂಖ, ಚಕ್ರ, ಗದಾಂಗಿ ಕಿರೀಟ ಬಂಗಾರದ ಬಟ್ಟಲು ಮುತ್ತುಮುಡಿ, ಮುತ್ತಿನ ಸರಗಳು ಕೋರಂಬ ಹೀಗೆ 56 ವೈವಿಧ್ಯಮಯ ಆಭರಣಗಳನ್ನು ಒಂದೊಂದಾಗಿ ಪರಿಶೀಲಿಸಿ ದಾಖಲಿಸಿದ ನಂತರ ದೇವಾಲಯದ ಕೈಂಕರ್ಯಪರಿಗೆ ಹಸ್ತಾಂತರ ಮಾಡಲಾಯಿತು.

ಈ ವೇಳೆ ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ, ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್, ಸ್ಥಾನೀಕಂ ಸಂಪತ್ಕುಮಾರನ್, ಸ್ಥಾನೀಕಂ ಶ್ರೀರಾಮನ್, ಪರಿಚಾರಕ ಪಾರ್ಥಸಾರಥಿ, ಅರ್ಚಕ ವರದರಾಜಭಟ್, ಪರಕಾಲಮಠದ ಪ್ರತಿನಿಧಿ ನರಸಿಂಹರಂಗನ್, ಅಕೌಂಟೆಂಟ್ ಹೇಮಂತಕುಮಾರ್, ಪ್ರಥಮದರ್ಜೆ ಸಹಾಯಕ ಪ್ರಕಾಶ್ ಪಾರ್ಕಾವಣೆಯಲ್ಲಿ ಭಾಗವಹಿಸಿದ್ದರು.

ಈ ಅಮೂಲ್ಯ ಪುರಾತನ ಆಭರಣಗಳು ಯುಗಾದಿ ಹಬ್ಬದಿಂದಲೇ ಚೆಲುವನಾರಾಯಣನನ್ನು ಅಲಂಕರಿಸಲಿವೆ. ಮಾರ್ಚ 24ರಂದು ರಾತ್ರಿ ನಡೆಯುವ ಪ್ರಥಮ ತೆಪ್ಪೋತ್ಸವದಂದು ಮುತ್ತುಮುಡಿ ಅಲಂಕಾರದೊಂದಿಗೆ ಈ ಎಲ್ಲಾ ಆಭರಣಗಳನ್ನು ಧರಿಸಲಾಗುತ್ತದೆ.
ಇದರ ಜೊತೆಗೆ ವೈರಮುಡಿಯಂದು ಜಿಲ್ಲಾ ಖಜಾನೆಯಿಂದ ಬರುವ ವೈರಮುಡಿ-ರಾಜಮುಡಿ ಹಾಗೂ 16 ಬಗೆಯ ವಜ್ರಖಚಿತ ಆಭರಣಗಳೂ ಸಹ ಚೆಲುನಾರಾಯಣನನ್ನು ಬ್ರಹ್ಮೋತ್ಸವದಲ್ಲಿ ಅಲಂಕರಿಸಲಿದೆ. ವೈರಮುಡಿ ಕಿರೀಟಮಾತ್ರ ಒಂದು ರಾತ್ರಿ ಚೆಲುವನಾರಾಯಣನ್ನು ಅಲಂಕರಿಸಿದರೆ ಉಳಿದ ಆಭರಣಗಳು ಬ್ರಹ್ಮೋತ್ಸವ ಪೂರ್ತ ಸ್ವಾಮಿಯನ್ನು ಅಲಂಕರಿಸಿರುತ್ತವೆ.

ಈ ವೇಳೆ ಮಾಹಿತಿ ನೀಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಭಾರತದ ಅತ್ಯಂತ ಪುರಾತನ ಹಾಗೂ ಧಾರ್ಮಿಕ ವಿಶೇಷವಾದ ವೈರಮುಡಿ ಜಾತ್ರಾಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಬ್ರಹ್ಮೋತ್ಸವದ ಎಲ್ಲಾ ಉತ್ಸವಗಳನ್ನೂ ವೈಭವಯುತವಾಗಿ ನಡೆಸಲು ಶ್ರಮಿಸಲಾಗುತ್ತದೆ ಉತ್ಸವದಲ್ಲಿ ಸೇವೆಮಾಡುವ ಭಾಗ್ಯ ನಮಗೆ ದೊರೆತಿರುವುದೇ ದೊಡ್ಡಭಾಗ್ಯ ಎಂದೇ ಭಾವಿಸಿ ಭಕ್ತಸ್ನೇಹಿಯಾಗಿ ವ್ಯವಸ್ಥೆಮಾಡಲಾಗುತ್ತಿದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚೆಲುವನಾರಾಯಣಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದರು.

andolanait

Recent Posts

ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡೀಸೆಲ್‌ ಸಮಸ್ಯೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ತಕ್ಷಣಕ್ಕೆ ಡೀಸೆಲ್‌ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇರಾನ್‌-ಇಸ್ರೇಲ್‌ ಸಂಘರ್ಷ…

49 mins ago

ನಂಜನಗೂಡು| ನಂಜುಂಡೇಶ್ವರನ ದೊಡ್ಡ ಜಾತ್ರೆಯಲ್ಲಿ ಕಾಲ್ತುಳಿತ: ಇಬ್ಬರಿಗೆ ಗಾಯ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಜರುಗಿದ ಗೌತಮ ಪಂಚಮಹಾರಥೋತ್ಸವದಲ್ಲಿ ಕಾಲ್ತುಳಿತ ಸಂಭವಿಸಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ನಂಜನಗೂಡಿನ…

53 mins ago

ರಾಜ್ಯದ ಹಲವೆಡೆ ಇಂದೂ ಕೂಡ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ…

1 hour ago

ಕುವೈತ್‌ ಮೇಲೆ ಇರಾನ್‌ ಭೀಕರ ದಾಳಿ: ಭಾರತೀಯ ಕಾರ್ಮಿಕ ಸಾವು

ಟೆಹರಾನ್:‌ ಕುವೈತ್‌ ವಿದ್ಯುತ್‌ ಸ್ಥಾವರದ ಮೇಲೆ ಇರಾನ್‌ ಭೀಕರ ದಾಳಿ ನಡೆಸಿದ ಪರಿಣಾಮ ಭಾರತೀಯ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಇದು ದೇಶದ…

2 hours ago

ನಂಜನಗೂಡಿನ ಗೌತಮ ಪಂಚಮಹಾರಥೋತ್ಸವದಲ್ಲಿ ದುರಂತ: ಓರ್ವ ಭಕ್ತ ಸಾವು

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದು ನಡೆದ ಗೌತಮ ಪಂಚಮಹಾರಥೋತ್ಸವದಲ್ಲಿ ದುರಂತವೊಂದು ಸಂಭವಿಸಿದ್ದು, ಜಗಜಂಗುಳಿಯಲ್ಲಿ ಸಿಲುಕಿ ಓರ್ವ ಭಕ್ತ ಸಾವನ್ನಪ್ಪಿರುವ…

2 hours ago

ಹುಣಸೂರು: ಒಣಗಿದ್ದ ದಾಸವಾಳ ಹೂ ನುಂಗಿ ಮಗು ಸಾವು

ಹುಣಸೂರು: ಒಣಗಿದ್ದ ದಾಸವಾಳ ಹೂ ನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರಿನಲ್ಲಿ ನಡೆದಿದೆ. ದೊಡ್ಡಹೆಜ್ಜೂರಿನ…

2 hours ago