ಶ್ರೀರಂಗಪಟ್ಟಣ: ವಿಶ್ವ ವಿಖ್ಯಾತ ಕೃಷ್ಣರಾಜಸಾಗರದ ಬೃಂದಾವನದಲ್ಲಿ ಶನಿವಾರ ಸಂಜೆ ತಾಂತ್ರಿಕ ಕಾರಣದಿಂದ ಸಂಗೀತ ಕಾರಂಜಿ ಪ್ರಾರಂಭ ವಾಗುವುದು ತಡವಾದ ಕಾರಣ ಪ್ರವಾಸಿಗರ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ನ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸತತ ರಜಾ ಹಿನ್ನಲೆಯಲ್ಲಿ ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು, ಶನಿವಾರ ಸಂಜೆ ಎಂದಿನಂತೆ ೬.೪೫ ಕ್ಕೆ ನೃತ್ಯ ಕಾರಂಜಿ ಪ್ರಾರಂಭವಾಗ ಬೇಕಾಗಿತ್ತು. ಸಂಗೀತಾ ಕಾರಂಜಿಯು ತಾಂತ್ರಿಕ ಕಾರಣದಿಂದ ಸುಮಾರು ೧ ಘಂಟೆಯಾದರೂ ಪ್ರಾರಂಭವಾಗದ ಕಾರಣ ರೊಚ್ಚಗೆದ್ದ ಪ್ರವಾಸಿಗರು, ನೃತ್ಯ ಕಾರಂಜಿ ಬಳಿ ಪ್ರವಾಸಿಗರು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಜೊತೆ ಜಗಳವಾಡಿ ನಂತರ ಪ್ರವೇಶ ಟೆಕೆಟ್ ಕೌಂಟರ್ ಬಳಿ ಬಂದು ಟಿಕೆಟ್ ನೀಡಲು ನಿಯೋಜನೆಗೊಂಡಿರುವ ಕೆ.ಸಿ.ಐ.ಸಿ ಸಿಬ್ಬಂದಿಗಳ ಜೊತೆ ಜಗಳವಾಡಿ ನಂತರ ಆಕ್ರೋಷಗೊಂಡ ಪ್ರವಾಸಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿರುವ ಬಗ್ಗೆ ವರದಿಯಾಗಿದೆ.
ತಾಂತ್ರಿಕ ಕಾರಣದಿಂದ ನೃತ್ಯ ಕಾರಂಜಿ ತಡವಾಗಿದ್ದು, ನಮ್ಮ ಸಿಬ್ಬಂದಿಗಳು ಚುನಾವಣೆ ಕರ್ತವ್ಯ ಮುಗಿಸಿಕೊಂಡು ಕೂಡ ಬಂದಿದ್ದು, ಪ್ರವಾಸಿಗರು ಸಂಹವನ ಸಮಸ್ಯೆಯಿಂದ ಟೆಕೆಟ್ ಕೌಂಟರ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದು ಬೇಸರವಾಗಿದೆ, ಈ ಘಟನೆ ಕುರಿತು ನಮ್ಮ ಕಾ.ನೀ.ನಿಗಮ ಮತ್ತು ಕೆ.ಎಸ್.ಐ.ಎಸ್.ಎಫ್, ಹಾಗೂ ಟೆಕಟ್ ಕೌಂಟರ್ ನಿರ್ವಹಣೆ ಮಾಡುವ ಕೆ.ಸಿ.ಐ.ಸಿ ಕಂಪನಿ ಜೊತೆ ಸೊಮವಾರ ಸಭೆ ನಡೆಸಿ ಮುಂದೆ ಈ ರೀತಿ ಘಟನೆ ನಡೆಯದಂತೆ ಕ್ರಮ ಜರುಗಿಸಲಾಗುತ್ತದೆ.
-ರಘುರಾಮ್, ಅಧೀಕ್ಷಕ ಅಭಿಯಂತರ , ಕಾವೇರಿ ನೀರಾವರಿ ನಿಗಮ, ಮಂಡ್ಯ
ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…
ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…
ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…
ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…
ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…
ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…