ಜಿಲ್ಲೆಗಳು

ಮಲೆಯಾಳ ಸಮಾಜದಿಂದ ವೈವಿದ್ಯಮಯ ಓಣಂ ಆಚರಣೆ

ಚಾಮರಾಜನಗರ: ಜಿಲ್ಲಾ ಮಲೆಯಾಳ ಸಮಾಜದಿಂದ ಜೋಡಿರಸ್ತೆಯ ಸಂತ ಪೌಲರ ಸಮುದಾಯ ಭವನದಲ್ಲಿ ವೈವಿದ್ಯಮಯ ಓಣಂ ಆಚರಣೆ ನಡೆಯಿತು.ಆಕರ್ಷಕ ಹೂವಿನ ರಂಗೋಲಿ ಸಿಂಗಾರಿಮೇಳ ಓಣಂಸಾಧ್ಯ ಪ್ರಮುಖ ಆಕರ್ಷಣೆ ಯಾಗಿತ್ತು .

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಸಮಾಜದ ಅದ್ಯಕ್ಷ ರಾಜು ವರ್ಗೀಸ್ ೧೯೭೫ ರಲ್ಲಿ ನಾನು ಚಾಮರಾಜನಗರಕ್ಕೆ ಬಂದಾಗ ಒಂದೆರಡು ಮಲೆಯಾಳಿ ಕುಟುಂಬಗಳಿದ್ದವು ಈಗ ಬಹಳಷ್ಟು ಕುಟುಂಬಗಳಿವೆ ಎಲ್ಲರನ್ನು ಸಂಘಟಿಸುವ ಗುರುತರ ಜವಾಬ್ದಾರಿ ಇದೆ ನಾವು ಮೂಲತಃ ಕೇರಳದವರಾದರೂ ಈಗ ಜಿಲ್ಲೆಯಲ್ಲಿ ನೆಲೆಸಿದ್ದೇವೆ ಕನ್ನಡ ಭಾಷೆ ಕಲಿಯಬೇಕು ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಬೆಳವಳಿಸಿಕೊಳ್ಳಬೇಕು ಎಂದರು.

೨೦೦೮ ರಲ್ಲಿ ಜಿಲ್ಲಾ ಮಲೆಯಾಳ ಸಮಾಜ ಸ್ಥಾಪನೆಯಾಯಿತು ಆದರೆ ೨೦೧೮ ರಲ್ಲಿ ನೋಂದಣಿ ಯಾಯಿತು ಅಲ್ಲಿಂದ ಪ್ರತಿವರ್ಷ ಓಣಂ ಆಚರಿಸಿಕೊಂಡು ಬರುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಮತ್ತು ವಯನಾಡ್ ನಲ್ಲಿ ಮನೆಗಳು ಕುಸಿದು ಅನೇಕರು ಮರಣ ಹೊಂದಿದ್ದರಿಂದ ಆಚರಿಸಲು ಸಾಧ್ಯ ವಾಗಲಿಲ್ಲ ಈ ವರ್ಷ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ನಾವು ಕೆಲವು ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ ಎಂದರು.

ಮೊಟ್ಟಮೊದಲಿಗೆ ಶವಸಾಗಾಣಿಕೆ ವಾಹನವನ್ನು ಪರಿಚಯಿಸಿ ಎಲ್ಲಾ ಸಮಾಜದವರಿಗೂ ವಿಶೇಷ ವಾಗಿ ಬಡವರಿಗೆ ಉಚಿತವಾಗಿ ಒದಗಿಸಿಕೊಟ್ಟಿದ್ದೇವೆ ಇತ್ತೀಚಿಗೆ ಯಾರೂ ದಿಕ್ಕಿಲ್ಕದೆ ಮಳೆಯಲ್ಲಿ ನೆನೆಯುತ್ತಿದ್ದ ವೃದ್ದೆಯೊಬ್ಬರಿಗೆ ಮೂಡಲಧ್ವನಿ ವೃದ್ದಾಶ್ರಮದಲ್ಲಿ ಆಸರೆ ಒದಗಿಸಲಾಯಿತು ಎಂದರು.

ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಮೂಡಲಧ್ವನಿ ವೃದ್ದಾಶ್ರಮದ ಶಂಕರ್ ಹಾಗೂ ಬಹುವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಸಿರುವ ಗೋಪಕುಮಾರ್ ಸ್ವಾಮಿನಾಥನ್ ಸ್ವಾಮಿನಾಥ ಅಯ್ಯರ್ ಸುಬ್ರಹ್ಮಣ್ಯ ವೇಣುಗೋಪಾಲ್ ರಾಜಮ್ಮ ಗಂಗಾಧರನ್ ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾರ್ಯದರ್ಶಿ ಸೆಬಾಸ್ಟಿಯನ್ ಜೋಕಿಂ ಸಿ ಆರ್ ಹರೀಶ್ ಕೆ ಕೆ ಮೊಹಮ್ಮದ್ ಆಲಿ ಸುಧಾ ರವಿ ಇದ್ದರು ಓಣಂ ವಿಶೇಷ ನೃತ್ಯ ಹಾಗೂ ಸಿಂಗಾರಿ ಮೇಳ ಆಯೋಜಿಸಲಾಗಿತ್ತು.

andolanait

Recent Posts

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

2 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

8 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

8 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

8 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

9 hours ago

ಮಳೆಗಾಲದಲ್ಲಿ ಶುದ್ಧ ಕುಡಿಯುವ ನೀರು, ಬಿಸಿ ನೀರು ಒದಗಿಸಿ

ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…

9 hours ago