ಚಾಮರಾಜನಗರ: ಜಿಲ್ಲಾ ಮಲೆಯಾಳ ಸಮಾಜದಿಂದ ಜೋಡಿರಸ್ತೆಯ ಸಂತ ಪೌಲರ ಸಮುದಾಯ ಭವನದಲ್ಲಿ ವೈವಿದ್ಯಮಯ ಓಣಂ ಆಚರಣೆ ನಡೆಯಿತು.ಆಕರ್ಷಕ ಹೂವಿನ ರಂಗೋಲಿ ಸಿಂಗಾರಿಮೇಳ ಓಣಂಸಾಧ್ಯ ಪ್ರಮುಖ ಆಕರ್ಷಣೆ ಯಾಗಿತ್ತು .
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಸಮಾಜದ ಅದ್ಯಕ್ಷ ರಾಜು ವರ್ಗೀಸ್ ೧೯೭೫ ರಲ್ಲಿ ನಾನು ಚಾಮರಾಜನಗರಕ್ಕೆ ಬಂದಾಗ ಒಂದೆರಡು ಮಲೆಯಾಳಿ ಕುಟುಂಬಗಳಿದ್ದವು ಈಗ ಬಹಳಷ್ಟು ಕುಟುಂಬಗಳಿವೆ ಎಲ್ಲರನ್ನು ಸಂಘಟಿಸುವ ಗುರುತರ ಜವಾಬ್ದಾರಿ ಇದೆ ನಾವು ಮೂಲತಃ ಕೇರಳದವರಾದರೂ ಈಗ ಜಿಲ್ಲೆಯಲ್ಲಿ ನೆಲೆಸಿದ್ದೇವೆ ಕನ್ನಡ ಭಾಷೆ ಕಲಿಯಬೇಕು ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಬೆಳವಳಿಸಿಕೊಳ್ಳಬೇಕು ಎಂದರು.
೨೦೦೮ ರಲ್ಲಿ ಜಿಲ್ಲಾ ಮಲೆಯಾಳ ಸಮಾಜ ಸ್ಥಾಪನೆಯಾಯಿತು ಆದರೆ ೨೦೧೮ ರಲ್ಲಿ ನೋಂದಣಿ ಯಾಯಿತು ಅಲ್ಲಿಂದ ಪ್ರತಿವರ್ಷ ಓಣಂ ಆಚರಿಸಿಕೊಂಡು ಬರುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಮತ್ತು ವಯನಾಡ್ ನಲ್ಲಿ ಮನೆಗಳು ಕುಸಿದು ಅನೇಕರು ಮರಣ ಹೊಂದಿದ್ದರಿಂದ ಆಚರಿಸಲು ಸಾಧ್ಯ ವಾಗಲಿಲ್ಲ ಈ ವರ್ಷ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ನಾವು ಕೆಲವು ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ ಎಂದರು.
ಮೊಟ್ಟಮೊದಲಿಗೆ ಶವಸಾಗಾಣಿಕೆ ವಾಹನವನ್ನು ಪರಿಚಯಿಸಿ ಎಲ್ಲಾ ಸಮಾಜದವರಿಗೂ ವಿಶೇಷ ವಾಗಿ ಬಡವರಿಗೆ ಉಚಿತವಾಗಿ ಒದಗಿಸಿಕೊಟ್ಟಿದ್ದೇವೆ ಇತ್ತೀಚಿಗೆ ಯಾರೂ ದಿಕ್ಕಿಲ್ಕದೆ ಮಳೆಯಲ್ಲಿ ನೆನೆಯುತ್ತಿದ್ದ ವೃದ್ದೆಯೊಬ್ಬರಿಗೆ ಮೂಡಲಧ್ವನಿ ವೃದ್ದಾಶ್ರಮದಲ್ಲಿ ಆಸರೆ ಒದಗಿಸಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಮೂಡಲಧ್ವನಿ ವೃದ್ದಾಶ್ರಮದ ಶಂಕರ್ ಹಾಗೂ ಬಹುವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಸಿರುವ ಗೋಪಕುಮಾರ್ ಸ್ವಾಮಿನಾಥನ್ ಸ್ವಾಮಿನಾಥ ಅಯ್ಯರ್ ಸುಬ್ರಹ್ಮಣ್ಯ ವೇಣುಗೋಪಾಲ್ ರಾಜಮ್ಮ ಗಂಗಾಧರನ್ ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯದರ್ಶಿ ಸೆಬಾಸ್ಟಿಯನ್ ಜೋಕಿಂ ಸಿ ಆರ್ ಹರೀಶ್ ಕೆ ಕೆ ಮೊಹಮ್ಮದ್ ಆಲಿ ಸುಧಾ ರವಿ ಇದ್ದರು ಓಣಂ ವಿಶೇಷ ನೃತ್ಯ ಹಾಗೂ ಸಿಂಗಾರಿ ಮೇಳ ಆಯೋಜಿಸಲಾಗಿತ್ತು.
ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…
ಗಿರೀಶ್ ಹುಣಸೂರು ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…
ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…