ಜಿಲ್ಲೆಗಳು

ಮತೀಯ ದೃಷ್ಟಿ ಬಿಟ್ಟು ಕನಕರ ಚಿಂತನೆ ವಿಸ್ತಾರಗೊಳಿಸಲು ಮಾಲಗತ್ತಿ ಸಲಹೆ

ಮೈಸೂರು : ಮತೀಯಗುಡಿಯ ಕಿಟಕಿಯಲ್ಲಿ ಪರಿಶೋಧಕರು ಗರ್ಭಿಣಿಯಾಗಿ ಕನಕದಾಸರನ್ನು ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಮತದ ಗರ್ಭಗುಡಿಯ ಕಾರಣಕ್ಕಾಗಿ ಮೀಸಲಿಟ್ಟ ಕನಕದಾಸರ ಕೀರ್ತನೆ,ಚಿಂತನೆಗಳು ವಿಸ್ತಾರಗೊಳ್ಳಲಿಲ್ಲ ಎಂದು ಸಾಹಿತಿ,ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

ನಗರದ ಕಲಾಮಂದಿರದಲ್ಲಿ ನಡೆದ ಕನಕ ಜಯಂತಿಯಲ್ಲಿ ಮುಖ್ಯಭಾಷಣ ಮಾಡಿದ ಅವರು, ಎರಡು ಸಾವಿರ ವರ್ಷಗಳ ಹಿಂದೆ ಕನಕದಾಸರನ್ನು ನೋಡುವ ಮತ್ತು ನಂತರ ನೋಡುವ ದೃಷ್ಟಿಕೋನ, ಆಲೋಚನಾ ಕ್ರಮ ಬದಲಾಗಿದೆ. ಒಬ್ಬರು ಮಾಧ್ವ ಸಿದ್ಧಾಂತಗಳನ್ನು ತಿಳಿಯಾಗಿಸಿದ್ದಾರೆಂದು ಹೇಳಿದ್ದಾರೆ, ಮತ್ತೊಬ್ಬರು ಕನಕದಾಸರ ಕೀರ್ತನೆಗಳಲ್ಲಿ ವೈಷ್ಣವ ಪಂಥದ ಚಿಂತನೆಗಳಿಲ್ಲ ಎನ್ನುತ್ತಾರೆ. ಕನಕದಾಸರು ಬಯಲಿನಲ್ಲಿ ನಿಂತು ಕೃಷ್ಣನನ್ನು ಕಿಂಡಿಯ ಮೂಲಕ ನೋಡಿದರು ಎಂಬ ಮಾತು ಸಂಶೋಧಕರು ಮತೀಯ ಗರ್ಭಗುಡಿಯ ಕಿಟಕಿಯಿಂದ ಅರ್ಥವಾಗಿದ್ದಾರೆ.ಅವರು ಮತ (ಜಾತಿ)ವಿಚಾರಗಳನ್ನು ನೋಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ನ ಸಿಕ್ಕಿದ ಮೇಲೆ ಎರಡನೆಯದು ಸ್ವಾಭಿಮಾನ ಎನ್ನಿಸಿತು. ಆದರೆ,ಈಗ ಅನ್ನವಿಲ್ಲದೆ ಬದುಕಬಹುದು. ಸ್ವಾಭಿಮಾನ ಬಿಟ್ಟು ಬದುಕಿರಲಾಗದು. ಕೆಳಜಾತಿಯಲ್ಲಿ ಹುಟ್ಟಿ ಉತ್ತರ ಕೊಡುವುದು ಸ್ವಾಭಿಮಾನದ ಸಂಕೇತ. ನೋವು ಅನುಭವಿಸಿದವರಿಗೆ ಅದೆಲ್ಲವೂ ಗೊತ್ತಾಗಲ್ಲ.ಅಂತಹವರು ಸಶಕ್ತತೆ ಹೊಂದಿರುವ ನಾಯಕರಾಗಿ ಹೊರ ಹೊಮ್ಮುತ್ತಿಲ್ಲ .ನಮ್ಮಲ್ಲಿ ಸಂವಿಧಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಸಂತರು,ಸೂಫಿಗಳು,ಕ್ರೈಸ್ತರು,ಪಾದ್ರಿಗಳು ಒಟ್ಟಾಗಿ ಸಂವಿಧಾನವನ್ನು ಉಳಿಸಬೇಕಾಗಿದೆ. ಒಂದುಗೂಡುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ತಿಳಿಯಬೇಕು ಎಂದು ಸೂಕ್ಷ್ಮವಾಗಿ ಹೇಳಿದರು. 

ಕನಕದಾಸರು ಬದುಕಿನಲ್ಲಿ ಎದುರಿಸಿದ ವಿಚಾರಗಳನ್ನು ನೋಡಿದರೆ ಸುಧಾರಣಾವಾದಿಯಾಗಿದ್ದರು.ಕನಕದಾಸರನ್ನು ಸಮಾಜ ಸಂಪೂರ್ಣವಾಗಿ ನೋಡಲಿಲ್ಲ,ಅರ್ಥಮಾಡಿಕೊಳ್ಳಲಿಲ್ಲ ಎಂದು ನುಡಿದರು.

ಸಿದ್ದರಾಮಯ್ಯರಿಗೆ ಮತ್ತೆ ಸಿಎಂ ಆಗುವ ಅವಕಾಶವಿದೆ

ಸ್ವಾಭಿಮಾನದ ಪ್ರತೀಕವಾದ ಸಿದ್ದರಾಮಯ್ಯನವರು ಸಾಮಾಜಿಕ ವಿಷಯ ಬಂದಾಗ ಕನಕದಾಸರಂತೆ ಸೆಟೆದು ನಿಲ್ಲುತ್ತಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಎಲ್ಲಾ ಅವಕಾಶಗಳಿವೆ, ತಾವೆಲ್ಲರೂ ಮತಚಲಾಯಿಸಬೇಕು ಎಂದು ಮಾಲಗತ್ತಿ ಸಲಹೆ ನೀಡಿ.

ಕನಕದಾಸರು ಭಕ್ತಿಯ ವಿಷಯದಲ್ಲಿ ಬಾಣದಂತೆ ಬಾಗುತ್ತಿದ್ದರು. ಆದರೆ ಸಾಮಾಜಿಕ ವ್ಯವಸ್ಥೆಯ ವಿಷಯ ಬಂದಾಗ ಬಿಲ್ಲಿನಂತೆ ಸೆಟೆದು ನಿಲ್ಲಲು. ಹಾಗೆ ಹೂಡಿದ ಬಾಣ ಕೊನೆಯಲ್ಲಿ ಹೂವನ್ನು ಚೆಲ್ಲುತ್ತಿತ್ತು. ಹಾಗೆಯೇ ಸ್ವಾಭಿಮಾನ ಎಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದರೆ ಸ್ವಾಭಿಮಾನ ಎನ್ನುವಂತಿರುವ ಸಿದ್ದರಾಮಯ್ಯನವರು ಸಾಮಾಜಿಕ ವಿಷಯದಲ್ಲಿ ಬಾಣದಂತ ಸೆಟೆದು ನಿಲ್ಲುತ್ತಾರೆ.

ಸಿದ್ದರಾಮಯ್ಯ ಅವರಿಗೆ ಮತ್ತೊಂದು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ ಭಾರತೀಯ ಸಂತರ ಪರಂಪರೆಯನ್ನು ಪುನರ್ಜೀವನಗೊಳಿಸಿ, ಎಲ್ಲಾ ಸಂತರನ್ನು ಒಂದು ಕಡೆ ಸೇರಿಸುವ ಗ್ರಂಥಗಳನ್ನು ಹೊರತರಬೇಕು. ಸಿದ್ದರಾಮಯ್ಯ ಅವರ ಭಾಷಣಗಳು ಸಂಗ್ರಹವಾಗಿ ಗ್ರಂಥದಲ್ಲಿ ಹೊರಬರಬೇಕು ಎಂದು ಹೇಳಿದರು.

andolana

Recent Posts

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

52 mins ago

ನೀಟ್-ಯುಜಿ ಪತ್ರಿಕೆ ಸೋರಿಕೆ ಪ್ರಕರಣ : ವೈದ್ಯ ಸೇರಿ ಇಬ್ಬರ ಬಂಧನ

ಹೊಸದಿಲ್ಲಿ : ನೀಟ್ ಯುಜಿ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಲಾತೂರ್ ಮೂಲದ ವೈದ್ಯರು ಮತ್ತು ಪುಣೆಯ ಕೋಚಿಂಗ್ ಸಂಸ್ಥೆಯ ಭೌತಶಾಸ್ತ್ರ…

1 hour ago

ನಾಳೆ ಸಿಎಂ-ಡಿಸಿಎಂ ಉಪಹಾರ ಸಭೆ!

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಗುರುವಾರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ…

2 hours ago

ಎಂ.ಬಿ.ನಾಗಣ್ಣಗೌಡ ವಿರುದ್ಧ ಉಪ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲು

ಮಂಡ್ಯ: ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡ ವಿರುದ್ಧ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಮಾನಹಾನಿಗೆ ಸಂಬಂಧಿಸಿದಂತೆ…

2 hours ago

ನಾಳೆ ಸಿಎಂ-ಡಿಸಿಎಂ ಉಪಹಾರ ಸಭೆ

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಗುರುವಾರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ…

3 hours ago

ಜೂನ್ 4ರಿಂದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ : ಈಶ್ವರ ಖಂಡ್ರೆ

ಬೆಂಗಳೂರು : ಕಳೆದ ಏಪ್ರಿಲ್ 18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಶಿವಂಗಿಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಜೂನ್…

3 hours ago