ಜಿಲ್ಲೆಗಳು

2022ಕ್ಕೆ ವಿದಾಯ ಹೇಳೋಣ: ಅವಲೋಕನ ಆಗಲಿ

ಕಹಿ ಅನುಭವಗಳ ಮರೆತು ಹೊಸತನ್ನು ಸ್ವಾಗತಿಸುವ ಅನವಾರ್ಯತೆ

ಬಿ.ಎನ್.ಧನಂಜಯಗೌಡ

ಮೈಸೂರು: ದೇಶದ ರಾಜಕೀಯ, ಕೃಷಿ, ಧಾರ್ಮಿಕ ಸೇರಿ ವಿವಿಧ ವಲಯಗಳಲ್ಲಿ ೨೦೨೨ರಲ್ಲಿ ನಡೆದ ಸಂತೋಷ ಮತ್ತು ತಲ್ಲಣದ ಸಂಗತಿಗಳನ್ನು ಮೆಲುಕು ಹಾಕುತ್ತಲೇ, ೨೦೨೨ಕ್ಕೆ ವಿದಾಯ ಹೇಳುವ ಹಾಗೂ ಹೊಸ ವರ್ಷ-೨೦೨೩ಅನ್ನು ಸ್ವಾಗತಿಸುವ ದಿನ ಇದಾಗಿದ್ದು, ಕಳೆದ ಈ ವರ್ಷದ ದಿನಗಳ ಬಗ್ಗೆ ಕೊಂಚ ಅವಲೋಕನ ಮಾಡುವುದು, ಮುಂದಿನ ಹೆಜ್ಜೆಯಿಡಲು ಅಗತ್ಯ.

ಅಂತೂ, ಇಂತೂ ಇದು ೨೦೨೨ಕ್ಕೆ ವಿದಾಯ ಹೇಳಿ ೨೦೨೩ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವ ದಿನವಾಗಿದೆ. ಹಳೆಯ ವರ್ಷದ ಕಹಿ ಅನುಭವಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾನುವಾರದಿಂದ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಸುಂದರ, ಸದೃಢ ಮತ್ತು ಸ್ವಸ್ಥ ಆಲೋಚನೆಗಳು ಎಲ್ಲರಲ್ಲೂ ಚಿಗುರುವುದಾದರೆ ಒಳ್ಳೆಯದು.
ಕುಣಿದು, ಪಾರ್ಟಿ ಮಾಡಿ, ಬರೀ ಕ್ಯಾಲೆಂಡರ್ ಬದಲಾಯಿಸುವುದೇ ಹೊಸ ವರ್ಷವಲ್ಲ. ನಾಳೆಯಿಂದ ಆರಂಭವಾಗುವ ೨೦೨೩ರ ಹೊಸ ೩೬೫ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂಬ ಅರಿವಿನೊಂದಿಗೆ ೨೦೨೨ರ ಕಳೆದ ದಿನಗಳನ್ನು ಅವಲೋಕನ ಮಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಹಾಗಾಗಿ, ಈ ವರ್ಷದ ನಮ್ಮ ಸರಿ-ತಪ್ಪು ಅನುಭವಗಳು ಹೊಸ ವರ್ಷಕ್ಕೆ ಪಾಠವಾಗಲಿ. ಹೊಸ ಹೆಜ್ಜೆಗಳು ಸರಿ ಮಾರ್ಗದಲ್ಲಿ ಇರಬೇಕು.
೨೦೨೨ರಲ್ಲಿ ನಾನಾ ವಿವಾದಗಳಿಂದಾಗಿ ಸಾಕಷ್ಟು ಅವಘಡಗಳು, ಪ್ರಾಣಿಹಾನಿಯಂತಹ ಘಟನೆಗಳು ಆಗಿವೆ. ಇದಕ್ಕೆ ಜನರ ಆಲೋಚನೆ ಮತ್ತು ಮನಸ್ಥಿತಿಯೂ ಕಾರಣವಾಗಿದೆ. ಹಾಗಾಗಿ, ಜನರು ಯಾವುದೇ ವಿಷಯ ಅಥವಾ ಘಟನೆಗಳ ಬಗ್ಗೆಯೂ ಪಕ್ಷ ಮತ್ತು ಪಂಥದ ಆಧಾರಿತವಾಗಿ ಆಲೋಚಿಸದೆ, ವಸ್ತುನಿಷ್ಠವಾಗಿ ನೋಡುವ ದೃಷಿಕೋನವನ್ನು ಬೆಳಸಿಕೊಳ್ಳಬೇಕು. ಆಗ ಸಮಾಜದಲ್ಲಿ ಶಾಂತಿ ಕದಡುವ ತಂತ್ರಗಳಿಗೆ ಸಫಲವಾಗುವುದನ್ನು ತಡೆಯಬಹುದು. ಹಾಗಾಗಿ, ೨೦೨೩ರಲ್ಲಿ ಹುಟ್ಟಿಸಬಹುದಾದ ವಿವಾದ, ಗಲಭೆಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಮೂಲಕ ಸಮಾಜದಲ್ಲಿ, ದೇಶದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಆದ್ಯತೆಯಾಗಲಿ.


೨೦೨೨ರಲ್ಲಿ ಆಗಿರುವ ಕೆಲವು ಅನುಭವಗಳಿಂದ ಜೀವನದಲ್ಲಿ ಹೊಸ ಪಾಠಗಳನ್ನು ಕಲಿತ್ತಿದ್ದೇನೆ. ಹಾಗಾಗಿ, ನಾನು ಹೊಸ ವರ್ಷ-೨೦೨೩ ಅನ್ನು ಬರ ಮಾಡಿಕೊಳ್ಳುವ ಕ್ಷಣವನ್ನು ಕಲಿತ ಪಾಠಗಳನ್ನು ಕಾರ್ಯರೂಪಕ್ಕೆ ತರುವ ಮೊದಲ ಕ್ಷಣವಾಗಿ ಆಚರಿಸುತ್ತೇನೆ. ಈ ವರ್ಷದ ಅವಲೋಕನದ ಜೊತೆಗೆ ನಾಳೆಯಿಂದ ಹೊಸ ಚಿಂತನೆ ಮತ್ತು ಕನಸುಗಳನ್ನು ಅನುಷ್ಠಾನಗೊಳಿಸುವ ಯೋಜನೆ, ಯೋಚನೆ ಅಚಲವಾಗಿದೆ.

-ರವಿಕೀರ್ತಿ, ಹವ್ಯಾಸಿ ಫೋಟೋಗ್ರಾಫರ್

———————————

ಹೊಸ ವರ್ಷವನ್ನು ಆಚರಿಸುವುದಕ್ಕಿಂತ ಮುಖ್ಯವಾಗಿ ಈ ವರ್ಷದ ದಿನಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ನಾಳೆಯಿಂದ ಆದಷ್ಟು ಬದಲಾಗಬೇಕು ಎಂಬುದು ನನ್ನ ಆಲೋಚನೆ. ಈ ಆಲೋಚನೆಗಳನ್ನು ಆಚರಣೆಗೆ ತರುವುದೇ ನನಗೆ ಹೊಸ ವರ್ಷ. ಅದನ್ನು ಬಿಟ್ಟರೆ, ಆತ್ಮೀಯರಿಗೆ ಶುಭಾಶಯ ಹೇಳಿ ಹಾರೈಸುವುದು ಅಷ್ಟೆ.

-ರಮ್ಯಶ್ರೀ, ಉಪನ್ಯಾಸಕಿ

 

 

 

andolanait

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

3 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

3 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

3 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

3 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

3 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

3 hours ago