ಜಿಲ್ಲೆಗಳು

2022ಕ್ಕೆ ವಿದಾಯ ಹೇಳೋಣ: ಅವಲೋಕನ ಆಗಲಿ

ಕಹಿ ಅನುಭವಗಳ ಮರೆತು ಹೊಸತನ್ನು ಸ್ವಾಗತಿಸುವ ಅನವಾರ್ಯತೆ

ಬಿ.ಎನ್.ಧನಂಜಯಗೌಡ

ಮೈಸೂರು: ದೇಶದ ರಾಜಕೀಯ, ಕೃಷಿ, ಧಾರ್ಮಿಕ ಸೇರಿ ವಿವಿಧ ವಲಯಗಳಲ್ಲಿ ೨೦೨೨ರಲ್ಲಿ ನಡೆದ ಸಂತೋಷ ಮತ್ತು ತಲ್ಲಣದ ಸಂಗತಿಗಳನ್ನು ಮೆಲುಕು ಹಾಕುತ್ತಲೇ, ೨೦೨೨ಕ್ಕೆ ವಿದಾಯ ಹೇಳುವ ಹಾಗೂ ಹೊಸ ವರ್ಷ-೨೦೨೩ಅನ್ನು ಸ್ವಾಗತಿಸುವ ದಿನ ಇದಾಗಿದ್ದು, ಕಳೆದ ಈ ವರ್ಷದ ದಿನಗಳ ಬಗ್ಗೆ ಕೊಂಚ ಅವಲೋಕನ ಮಾಡುವುದು, ಮುಂದಿನ ಹೆಜ್ಜೆಯಿಡಲು ಅಗತ್ಯ.

ಅಂತೂ, ಇಂತೂ ಇದು ೨೦೨೨ಕ್ಕೆ ವಿದಾಯ ಹೇಳಿ ೨೦೨೩ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವ ದಿನವಾಗಿದೆ. ಹಳೆಯ ವರ್ಷದ ಕಹಿ ಅನುಭವಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾನುವಾರದಿಂದ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಸುಂದರ, ಸದೃಢ ಮತ್ತು ಸ್ವಸ್ಥ ಆಲೋಚನೆಗಳು ಎಲ್ಲರಲ್ಲೂ ಚಿಗುರುವುದಾದರೆ ಒಳ್ಳೆಯದು.
ಕುಣಿದು, ಪಾರ್ಟಿ ಮಾಡಿ, ಬರೀ ಕ್ಯಾಲೆಂಡರ್ ಬದಲಾಯಿಸುವುದೇ ಹೊಸ ವರ್ಷವಲ್ಲ. ನಾಳೆಯಿಂದ ಆರಂಭವಾಗುವ ೨೦೨೩ರ ಹೊಸ ೩೬೫ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂಬ ಅರಿವಿನೊಂದಿಗೆ ೨೦೨೨ರ ಕಳೆದ ದಿನಗಳನ್ನು ಅವಲೋಕನ ಮಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಹಾಗಾಗಿ, ಈ ವರ್ಷದ ನಮ್ಮ ಸರಿ-ತಪ್ಪು ಅನುಭವಗಳು ಹೊಸ ವರ್ಷಕ್ಕೆ ಪಾಠವಾಗಲಿ. ಹೊಸ ಹೆಜ್ಜೆಗಳು ಸರಿ ಮಾರ್ಗದಲ್ಲಿ ಇರಬೇಕು.
೨೦೨೨ರಲ್ಲಿ ನಾನಾ ವಿವಾದಗಳಿಂದಾಗಿ ಸಾಕಷ್ಟು ಅವಘಡಗಳು, ಪ್ರಾಣಿಹಾನಿಯಂತಹ ಘಟನೆಗಳು ಆಗಿವೆ. ಇದಕ್ಕೆ ಜನರ ಆಲೋಚನೆ ಮತ್ತು ಮನಸ್ಥಿತಿಯೂ ಕಾರಣವಾಗಿದೆ. ಹಾಗಾಗಿ, ಜನರು ಯಾವುದೇ ವಿಷಯ ಅಥವಾ ಘಟನೆಗಳ ಬಗ್ಗೆಯೂ ಪಕ್ಷ ಮತ್ತು ಪಂಥದ ಆಧಾರಿತವಾಗಿ ಆಲೋಚಿಸದೆ, ವಸ್ತುನಿಷ್ಠವಾಗಿ ನೋಡುವ ದೃಷಿಕೋನವನ್ನು ಬೆಳಸಿಕೊಳ್ಳಬೇಕು. ಆಗ ಸಮಾಜದಲ್ಲಿ ಶಾಂತಿ ಕದಡುವ ತಂತ್ರಗಳಿಗೆ ಸಫಲವಾಗುವುದನ್ನು ತಡೆಯಬಹುದು. ಹಾಗಾಗಿ, ೨೦೨೩ರಲ್ಲಿ ಹುಟ್ಟಿಸಬಹುದಾದ ವಿವಾದ, ಗಲಭೆಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಮೂಲಕ ಸಮಾಜದಲ್ಲಿ, ದೇಶದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಆದ್ಯತೆಯಾಗಲಿ.


೨೦೨೨ರಲ್ಲಿ ಆಗಿರುವ ಕೆಲವು ಅನುಭವಗಳಿಂದ ಜೀವನದಲ್ಲಿ ಹೊಸ ಪಾಠಗಳನ್ನು ಕಲಿತ್ತಿದ್ದೇನೆ. ಹಾಗಾಗಿ, ನಾನು ಹೊಸ ವರ್ಷ-೨೦೨೩ ಅನ್ನು ಬರ ಮಾಡಿಕೊಳ್ಳುವ ಕ್ಷಣವನ್ನು ಕಲಿತ ಪಾಠಗಳನ್ನು ಕಾರ್ಯರೂಪಕ್ಕೆ ತರುವ ಮೊದಲ ಕ್ಷಣವಾಗಿ ಆಚರಿಸುತ್ತೇನೆ. ಈ ವರ್ಷದ ಅವಲೋಕನದ ಜೊತೆಗೆ ನಾಳೆಯಿಂದ ಹೊಸ ಚಿಂತನೆ ಮತ್ತು ಕನಸುಗಳನ್ನು ಅನುಷ್ಠಾನಗೊಳಿಸುವ ಯೋಜನೆ, ಯೋಚನೆ ಅಚಲವಾಗಿದೆ.

-ರವಿಕೀರ್ತಿ, ಹವ್ಯಾಸಿ ಫೋಟೋಗ್ರಾಫರ್

———————————

ಹೊಸ ವರ್ಷವನ್ನು ಆಚರಿಸುವುದಕ್ಕಿಂತ ಮುಖ್ಯವಾಗಿ ಈ ವರ್ಷದ ದಿನಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ನಾಳೆಯಿಂದ ಆದಷ್ಟು ಬದಲಾಗಬೇಕು ಎಂಬುದು ನನ್ನ ಆಲೋಚನೆ. ಈ ಆಲೋಚನೆಗಳನ್ನು ಆಚರಣೆಗೆ ತರುವುದೇ ನನಗೆ ಹೊಸ ವರ್ಷ. ಅದನ್ನು ಬಿಟ್ಟರೆ, ಆತ್ಮೀಯರಿಗೆ ಶುಭಾಶಯ ಹೇಳಿ ಹಾರೈಸುವುದು ಅಷ್ಟೆ.

-ರಮ್ಯಶ್ರೀ, ಉಪನ್ಯಾಸಕಿ

 

 

 

andolanait

Recent Posts

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 14 ನಕ್ಸಲರ ಹತ್ಯೆ

ಸುಕ್ಮಾ/ಬಿಜಾಪುರ: ಛತ್ತಿಸ್‍ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್‍ಕೌಂಟರ್‌ಗಳಲಿ ಕುಖ್ಯಾತ ಮಾವೋವಾದಿ ಮಾಂಗ್ಟು (ಮತ್ತು ಹಂಗಾ ಮಡ್ಕಮ್…

6 mins ago

ಬಳ್ಳಾರಿ ಗಲಾಟೆ: ಸಸ್ಪೆಂಡ್‌ ಆಗಿದ್ದ ಎಸ್‌ಪಿ ಪವನ್‌ ನಜ್ಜೂರ್‌ ಆತ್ಮಹತ್ಯೆಗೆ ಯತ್ನ

ತುಮಕೂರು: ಬಳ್ಳಾರಿಯಲ್ಲಿ ನಡೆದಿದ್ದ ಫೈರಿಂಗ್‌ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಸ್ಪೆಂಡ್‌ ಆಗಿದ್ದ ಎಸ್‌ಪಿ ಪವನ್‌ ನಜ್ಜೂರ್‌ ಆತ್ಮಹತ್ಯೆಗೆ ಯತ್ನಿಸಿರುವ…

29 mins ago

ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶ ಪಡಿಸಲು ಮುಂದಾಗಿದೆ ಎಂದು…

49 mins ago

ಚಿಕ್ಕಬಳ್ಳಾಪುರ: 60ಕ್ಕೂ ಹೆಚ್ಚು ಕುರಿಗಳ ಅನುಮಾನಾಸ್ಪದ ಸಾವು

ಚಿಕ್ಕಬಳ್ಳಾಪುರ: ಸುಮಾರು 60ಕ್ಕೂ ಹೆಚ್ಚು ಕುರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಕಾಚಹಳ್ಳಿಯಲ್ಲಿ ನಡೆದಿದೆ. ಸಾವಿಗೆ ನಿಖರ ಕಾರಣ…

2 hours ago

ಕೋಗಿಲು ಲೇಔಟ್‌ ಅಕ್ರಮ ಮನೆಗಳ ತೆರವು ವಿಚಾರ: ಜಿಬಿಎ ಕೈಸೇರಿದ ನಿರಾಶ್ರಿತರ ಮಾಹಿತಿ

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರ ಮಾಹಿತಿ ಜಿಬಿಎ ಕೈಸೇರಿದ್ದು ಒಟ್ಟು 188 ಮನೆಗಳನ್ನು…

2 hours ago

ಬಳ್ಳಾರಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಡಿಐಜಿ ವರ್ತಿಕಾ ಕಟಿಯಾರ್‌

ಬಳ್ಳಾರಿ: ಬಳ್ಳಾರಿಯಲ್ಲಿ ಗಲಾಟೆ, ಫೈರಿಂಗ್‌ ಪ್ರಕರಣ ಸಂಬಂಧ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರನ್ನೂ ಬಂಧಿಸಿಲ್ಲ ಎಂದು ಬಳ್ಳಾರಿ ವಲಯ ಡಿಐಜಿ ವರ್ತಿಕಾ…

3 hours ago