ಜಿಲ್ಲೆಗಳು

2022ಕ್ಕೆ ವಿದಾಯ ಹೇಳೋಣ: ಅವಲೋಕನ ಆಗಲಿ

ಕಹಿ ಅನುಭವಗಳ ಮರೆತು ಹೊಸತನ್ನು ಸ್ವಾಗತಿಸುವ ಅನವಾರ್ಯತೆ

ಬಿ.ಎನ್.ಧನಂಜಯಗೌಡ

ಮೈಸೂರು: ದೇಶದ ರಾಜಕೀಯ, ಕೃಷಿ, ಧಾರ್ಮಿಕ ಸೇರಿ ವಿವಿಧ ವಲಯಗಳಲ್ಲಿ ೨೦೨೨ರಲ್ಲಿ ನಡೆದ ಸಂತೋಷ ಮತ್ತು ತಲ್ಲಣದ ಸಂಗತಿಗಳನ್ನು ಮೆಲುಕು ಹಾಕುತ್ತಲೇ, ೨೦೨೨ಕ್ಕೆ ವಿದಾಯ ಹೇಳುವ ಹಾಗೂ ಹೊಸ ವರ್ಷ-೨೦೨೩ಅನ್ನು ಸ್ವಾಗತಿಸುವ ದಿನ ಇದಾಗಿದ್ದು, ಕಳೆದ ಈ ವರ್ಷದ ದಿನಗಳ ಬಗ್ಗೆ ಕೊಂಚ ಅವಲೋಕನ ಮಾಡುವುದು, ಮುಂದಿನ ಹೆಜ್ಜೆಯಿಡಲು ಅಗತ್ಯ.

ಅಂತೂ, ಇಂತೂ ಇದು ೨೦೨೨ಕ್ಕೆ ವಿದಾಯ ಹೇಳಿ ೨೦೨೩ನೇ ಇಸವಿಯನ್ನು ಹರುಷದಿಂದ ಸ್ವಾಗತಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವ ದಿನವಾಗಿದೆ. ಹಳೆಯ ವರ್ಷದ ಕಹಿ ಅನುಭವಗಳನ್ನು ಮರೆತು, ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ, ಜೀವನದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಭಾನುವಾರದಿಂದ ಹೊಸ ಕನಸುಗಳೊಂದಿಗೆ ಸುಂದರ ಭವಿಷ್ಯದತ್ತ ಹೆಜ್ಜೆ ಇಡುವ ಸುಂದರ, ಸದೃಢ ಮತ್ತು ಸ್ವಸ್ಥ ಆಲೋಚನೆಗಳು ಎಲ್ಲರಲ್ಲೂ ಚಿಗುರುವುದಾದರೆ ಒಳ್ಳೆಯದು.
ಕುಣಿದು, ಪಾರ್ಟಿ ಮಾಡಿ, ಬರೀ ಕ್ಯಾಲೆಂಡರ್ ಬದಲಾಯಿಸುವುದೇ ಹೊಸ ವರ್ಷವಲ್ಲ. ನಾಳೆಯಿಂದ ಆರಂಭವಾಗುವ ೨೦೨೩ರ ಹೊಸ ೩೬೫ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂಬ ಅರಿವಿನೊಂದಿಗೆ ೨೦೨೨ರ ಕಳೆದ ದಿನಗಳನ್ನು ಅವಲೋಕನ ಮಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ. ಹಾಗಾಗಿ, ಈ ವರ್ಷದ ನಮ್ಮ ಸರಿ-ತಪ್ಪು ಅನುಭವಗಳು ಹೊಸ ವರ್ಷಕ್ಕೆ ಪಾಠವಾಗಲಿ. ಹೊಸ ಹೆಜ್ಜೆಗಳು ಸರಿ ಮಾರ್ಗದಲ್ಲಿ ಇರಬೇಕು.
೨೦೨೨ರಲ್ಲಿ ನಾನಾ ವಿವಾದಗಳಿಂದಾಗಿ ಸಾಕಷ್ಟು ಅವಘಡಗಳು, ಪ್ರಾಣಿಹಾನಿಯಂತಹ ಘಟನೆಗಳು ಆಗಿವೆ. ಇದಕ್ಕೆ ಜನರ ಆಲೋಚನೆ ಮತ್ತು ಮನಸ್ಥಿತಿಯೂ ಕಾರಣವಾಗಿದೆ. ಹಾಗಾಗಿ, ಜನರು ಯಾವುದೇ ವಿಷಯ ಅಥವಾ ಘಟನೆಗಳ ಬಗ್ಗೆಯೂ ಪಕ್ಷ ಮತ್ತು ಪಂಥದ ಆಧಾರಿತವಾಗಿ ಆಲೋಚಿಸದೆ, ವಸ್ತುನಿಷ್ಠವಾಗಿ ನೋಡುವ ದೃಷಿಕೋನವನ್ನು ಬೆಳಸಿಕೊಳ್ಳಬೇಕು. ಆಗ ಸಮಾಜದಲ್ಲಿ ಶಾಂತಿ ಕದಡುವ ತಂತ್ರಗಳಿಗೆ ಸಫಲವಾಗುವುದನ್ನು ತಡೆಯಬಹುದು. ಹಾಗಾಗಿ, ೨೦೨೩ರಲ್ಲಿ ಹುಟ್ಟಿಸಬಹುದಾದ ವಿವಾದ, ಗಲಭೆಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕುವ ಮೂಲಕ ಸಮಾಜದಲ್ಲಿ, ದೇಶದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಆದ್ಯತೆಯಾಗಲಿ.


೨೦೨೨ರಲ್ಲಿ ಆಗಿರುವ ಕೆಲವು ಅನುಭವಗಳಿಂದ ಜೀವನದಲ್ಲಿ ಹೊಸ ಪಾಠಗಳನ್ನು ಕಲಿತ್ತಿದ್ದೇನೆ. ಹಾಗಾಗಿ, ನಾನು ಹೊಸ ವರ್ಷ-೨೦೨೩ ಅನ್ನು ಬರ ಮಾಡಿಕೊಳ್ಳುವ ಕ್ಷಣವನ್ನು ಕಲಿತ ಪಾಠಗಳನ್ನು ಕಾರ್ಯರೂಪಕ್ಕೆ ತರುವ ಮೊದಲ ಕ್ಷಣವಾಗಿ ಆಚರಿಸುತ್ತೇನೆ. ಈ ವರ್ಷದ ಅವಲೋಕನದ ಜೊತೆಗೆ ನಾಳೆಯಿಂದ ಹೊಸ ಚಿಂತನೆ ಮತ್ತು ಕನಸುಗಳನ್ನು ಅನುಷ್ಠಾನಗೊಳಿಸುವ ಯೋಜನೆ, ಯೋಚನೆ ಅಚಲವಾಗಿದೆ.

-ರವಿಕೀರ್ತಿ, ಹವ್ಯಾಸಿ ಫೋಟೋಗ್ರಾಫರ್

———————————

ಹೊಸ ವರ್ಷವನ್ನು ಆಚರಿಸುವುದಕ್ಕಿಂತ ಮುಖ್ಯವಾಗಿ ಈ ವರ್ಷದ ದಿನಗಳಲ್ಲಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ನಾಳೆಯಿಂದ ಆದಷ್ಟು ಬದಲಾಗಬೇಕು ಎಂಬುದು ನನ್ನ ಆಲೋಚನೆ. ಈ ಆಲೋಚನೆಗಳನ್ನು ಆಚರಣೆಗೆ ತರುವುದೇ ನನಗೆ ಹೊಸ ವರ್ಷ. ಅದನ್ನು ಬಿಟ್ಟರೆ, ಆತ್ಮೀಯರಿಗೆ ಶುಭಾಶಯ ಹೇಳಿ ಹಾರೈಸುವುದು ಅಷ್ಟೆ.

-ರಮ್ಯಶ್ರೀ, ಉಪನ್ಯಾಸಕಿ

 

 

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

30 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago