ಜಿಲ್ಲೆಗಳು

KSOU 2013-14, 2014-15 ಸಾಲಿನ ವಿದ್ಯಾರ್ಥಿಗಳಿಗೆ ಕೊನೆಗೂ ನೆಮ್ಮದಿ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ೨೦೧೩-೧೪, ೨೦೧೪-೨೦೧೫ ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ ಇನ್‌ಹೌಸ್ ಅಡ್ಮಿಟೆಡ್ ನಾನ್ ಟೆಕ್ನಿಕಲ್ ಕೋರ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಗುರುವಾರ ಸಿಹಿ ಸುದ್ಧಿ ನೀಡಿದೆ.

ಕರಾಮುವಿ ೨ ತಿಂಗಳ ಅವಧಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಉಚ್ಚ ನ್ಯಾಯಾಲಯ  ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಹಿನ್ನೆಲೆ ಇಂತಿದೆ.

೨೦೧೩ ನೇ ಸಾಲಿಗಿಂತ ಹಿಂದಿನ ಮಾನ್ಯತೆ ಇದ್ದ ಅವದಿಯ ವಿವಿ ಪದವಿಗಳನ್ನೂ ತಿರಸ್ಕರಿಸುತ್ತಿದ್ದ ಕಾರಣ ರಾಜ್ಯ ಸರ್ಕಾರ ಹಾಗೂ ಕೆಪಿಎಸ್‌ಸಿ ವಿರುದ್ದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ( ಡಬ್ಲ್ಯುಪಿ ೩೪೨೫೫/೨೦೧೬ರ ೨೭.೬.೨೦೧೭). ಪ್ರಕರಣದಲ್ಲಿ ವಿವಿ ಪರ ತೀರ್ಪಿನಂತೆ ವಿವಿ ಪದವೀದರನ್ನು ಪರಿಗಣಿಸಲು ಅನುಕೂಲ ಮಾಡಿಕೊಡಲಾಗಿತ್ತು.

ಕರಾಮುವಿ ಶಿಕ್ಷಕೇತರ ನೌಕರರ ಸಂಘ(ರಿ) ಸಲ್ಲಿಸಿರುವ ಡಬ್ಲ್ಯುಪಿ ೪೮೩೭೯/೨೦೧೭ ಪ್ರಕರಣದಲ್ಲಿನ ೦೧.೦೨.೨೦೧೮ರ ಮಧ್ಯಂತರ ಆದೇಶ  ಅನ್ವಯ ರಾಜ್ಯ ಸರ್ಕಾರ ೦೩.೦೫.೨೦೧೮ ರಂದು ಆದೇಶ ಹೊರಡಿಸಿ ಕರಾಮುವಿಯ ೨೦೧೩-೧೪, ೨೦೧೪-೨೦೧೫ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ ಇನ್‌ಹೌಸ್ ಅಡ್ಮಿಟೆಡ್ ನಾನ್ ಟೆಕ್ನಿಕಲ್ ಕೋರ್ಸ್ ವಿದ್ಯಾರ್ಥಿಗಳ ಪದವಿಗಳನ್ನು ನೇಮಕಾತಿ/ಬಡ್ತಿ ಹಾಗೂ ಉನ್ನತ ವ್ಯಾಸಂಗಕ್ಕೆ ಪರಿಗಣಿಸಲು ಆದೇಶಿಸಿತ್ತು. ಈ ಅವಧಿಯಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ಮೂಲಕ ಅವರ ಹಿಂದಿನ  ಶ್ರಮವೂ ನ್ಯಾಯಾಲಯದ ಈ ಆದೇಶಕ್ಕೆ ಕಾರಣವಾಗಿದೆ.

ಮೇಲಿನ ತೀರ್ಪಿಗೊಳಪಟ್ಟಿರುವ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ಆಧಾರದಲ್ಲಿ ವಿವಿಯು ೨೦೧೯ ರಿಂದಲೂ ಅಂಕಪಟ್ಟಿ ಹಾಗೂ ಪ್ರಾವಿಷನಲ್ ಪಾಸ್ ಸರ್ಟಿಫಿಕೇಟ್ ನೀಡುತ್ತಾ ಬರುತ್ತಿದೆ.

ಪ್ರಸ್ತುತ ೦೩.೦೮.೨೦೨೨ರ ಸಾಮಾನ್ಯ ಆದೇಶಕ್ಕೆ ಒಳಪಟ್ಟಿರುವ  ಒಳಪಟ್ಟಿರುವ ೨೦೧೩-೧೪ ಮತ್ತು ೨೦೧೪-೧೫ ಇನ್ ಹೌಸ್ ವಿದ್ಯಾರ್ಥಿಗಳ ಈ ಪ್ರಕರಣಗಳಲ್ಲಿ ಯುಜಿಸಿ ವಿರುದ್ಧ ಮುಖ್ಯ ಮನವಿ  ಇದ್ದು, ಅವರ ಶಿಕ್ಷಣ ಕ್ರಮ ಮತ್ತು ಪದವಿಗಳು ತಾಂತ್ರಿಕವಾಗಿ ನಿಯಮಾನುಸಾರ ವಿದ್ದುದರಿಂದ ಹಾಗೂ ಯುಜಿಸಿ ತಜ್ಞರ ಸಮಿತಿ ವಿವಿಯಿಂದ ನೇರವಾಗಿ ನಿರ್ವಹಿಸಲ್ಪಡುವ ಈ ಪ್ರವೇಶಾತಿ/ ಪದವಿಗಳ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸದಿದ್ದುದರಿಂದ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿಯೇ ವಿವಿ ಪರವಾದ ಹಾಗೂ ದಾಖಲೆಗಳನ್ನು ಮಂಡಿಸಲಾಗಿದ್ದು ಈ ದಿವಸ ಈ ಮಹತ್ವದ ತೀರ್ಪಿಗೆ ದಾರಿಯಾಗಿದೆ.

ತೀರ್ಪಿನಲ್ಲಿ, ಕರಾಮುವಿಯು ೨ ತಿಂಗಳ ಅವಧಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆ ಸೂಚಿಸಿದೆ.

ಯುಜಿಸಿ, ೬ ವಾರಗಳ ಅವದಿಯೊಳಗೆ ವಿಚಾರಣೆಯನ್ನು ನಡೆಸಿ ಕರಾಮುವಿಯ ಒಡಿಎಲ್  ಮತ್ತು ಇನ್ ಹೌಸ್ ವ್ಯವಸ್ಥೆಯ ಮೂಲಕ ರಿಟ್ ಅರ್ಜಿದಾರರ ವ್ಯಾಸಂಗವಾಗಿದೆಯೇ, ಈ ಸಂದರ್ಭದಲ್ಲಿ ವಿವಿಯಿಂದ ಯುಜಿಸಿಯ ನಿಯಮಗಳು, ಶೈಕ್ಷಣಿಕ ಮಾನದಂಡಗಳೇನಾದರೂ ಉಲ್ಲಂಘನೆಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಮಾನ್ಯತೆ ನೀಡಲು ಪರಿಗಣಿಸತಕ್ಕದ್ದು ಹಾಗೂ ಈ ಪ್ರಕ್ರಿಯೆಗೆ ಕರಾಮುವಿಯು ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದೆಂದು ಆದೇಶಿಸಿದೆ.

andolanait

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

6 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

6 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

7 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

8 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

8 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

8 hours ago