onam
ಮಡಿಕೇರಿ : ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಗೆ ಹಿಂದಿನಿಂದಲೂ ಅವಿನಾವಭಾವ ಸಂಬಂಧವಿದೆ. ಕೇರಳ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಓಣಂ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆದಿದ್ದು, ಕೊಡಗು ಜಿಲ್ಲೆಯಲ್ಲೂ ಇಂದು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಓಣಂ ಆಚರಿಸಲಾಗುತ್ತಿದೆ.
ಓಣಂನ್ನು ವಿಶೇಷವಾಗಿ ಕೇರಳ ರಾಜ್ಯದಲ್ಲಿ ಸಡಗರ, ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ೧೦ ದಿನಗಳ ಕಾಲ ನಡೆಯುತ್ತದೆ. ಹತ್ತನೆ ದಿನವನ್ನು ತಿರುಓಣಂ ಎಂದು ಕರೆಯಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್ನ ಚಿಂಗಮ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ೧೦ ದಿನಗಳ ಕಾಲ ನಡೆಯುವ ಈ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದ್ದು, ಈ ವರ್ಷ ಹಬ್ಬವು ಅಥಮ್ನೊಂದಿಗೆ ಪ್ರಾರಂಭವಾಗಿದೆ. ಅದರ ಪ್ರಮುಖ ಹಬ್ಬವಾದ ತಿರುವೋಣಂ ಅನ್ನು ಶುಕ್ರವಾರ ಆಚರಿಸಲಾಗುತ್ತಿದ್ದು, ಜನರು ಮಹಾಬಲಿಯನ್ನು ಸ್ವಾಗತಿಸಲು ಪುಷ್ಪ ರಂಗೋಲಿ ಹಾಕಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಓಣಂ ಏಕೆ ವಿಶೇಷ?:
ರಾಜ ಮಹಾಬಲಿಯ ಪುನರಾಗಮನವನ್ನು ಸೂಚಿಸುವ ಈ ಹಬ್ಬವು ಪುರಾಣಗಳಲ್ಲಿ ಪ್ರಸಿದ್ಧಿ ಪಡೆದಿದೆ. ರಾಜ ಮಹಾಬಲಿ ತನ್ನ ಪ್ರಜೆಗಳನ್ನು ಭೇಟಿ ಮಾಡಲು ಭೂಮಿಗೆ ಹಿಂದಿರುಗುವುದನ್ನು ಸೂಚಿಸುವ ಹಬ್ಬ ಇದಾಗಿದ್ದು, ತನ್ನ ಆಳ್ವಿಕೆಯ ಕಾಲಾವಧಿಯಲ್ಲಿ ನ್ಯಾಯಯುತ ಮತ್ತು ಉದಾರ ಅರಸನಾಗಿದ್ದನೆಂದು ನಂಬಲಾಗಿದೆ.
ಮಹಾಬಲಿ ರಾಜನ ಆಳ್ವಿಕೆಯಲ್ಲಿ ಕೇರಳವು ಸಮೃದ್ಧವಾಗಿತ್ತು. ಅವನು ಹೆಚ್ಚು ಜನಪ್ರಿಯತೆಗಳಿಸುತ್ತಿದ್ದು ದೇವರಾಜ ಇಂದ್ರನನ್ನು ಅಸುರಕ್ಷಿತನನ್ನಾಗಿ ಮಾಡಿತು. ತನ್ನ ಕೀರ್ತಿಗೆ ದಕ್ಕೆಯಾಗುವುದನ್ನು ಅರಿತು ಇಂದ್ರನು ವಿಷ್ಣುವಿನಲ್ಲಿ ಸಹಾಯ ಬೇಡಿದನು. ಮಹಾ ವಿಷ್ಣು ವಾಮನ (ಕುಬ್ಜ ಬ್ರಾಹ್ಮಣ) ರೂಪವನ್ನು ತಾಳಿ ರಾಜ ಮಹಾಬಲಿಯಿಂದ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಮಹಾಬಲಿ ಸಂತೋಷದಿಂದ ಈ ದಾನವನ್ನು ನೀಡಿದನು.
ಮೊದಲ ಹೆಜ್ಜೆಯಲ್ಲಿ, ವಾಮನನು ಇಡೀ ಭೂಮಿಯನ್ನು ಮತ್ತು ಎರಡನೇ ಹೆಜ್ಜೆಯಲ್ಲಿ ಇಡೀ ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಸ್ಥಳವಿಲ್ಲದಿದ್ದಾಗ, ರಾಜ ಮಹಾಬಲಿ ತನ್ನ ತಲೆಯ ಮೇಲೆ ಪಾದವನ್ನು ಇಡುವಂತೆ ಹೇಳಿದನು. ರಾಜನ ಔದಾರ್ಯ ಮತ್ತು ಭಕ್ತಿಗೆ ಮೆಚ್ಚಿದ ವಿಷ್ಣು, ರಾಜನನ್ನು ಪಾತಾಳ ಲೋಕಕ್ಕೆ ಕಳುಹಿಸಿದನು. ಆದರೆ ವರ್ಷಕ್ಕೆ ಹತ್ತುದಿನಗಳ ಕಾಲ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಹಿಂತಿರುಗುವ ವರವನ್ನು ನೀಡಿದನು. ಓಣಂ ದಿನದಂದು ಕೇರಳದ ಜನರು ತಮ್ಮ ರಾಜನನ್ನು ಸ್ವಾಗತಿಸಲು ತಯಾರಿ ನಡೆಸುವುದು ಇದೇ ಕಾರಣಕ್ಕೆ.
ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿರುವ…
ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…
ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…
ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…
ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…
ಪಂಜು ಗಂಗೊಳ್ಳಿ ಅವರ ವಾರದ ಅಂಕಣ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…