onam
ಮಡಿಕೇರಿ : ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಗೆ ಹಿಂದಿನಿಂದಲೂ ಅವಿನಾವಭಾವ ಸಂಬಂಧವಿದೆ. ಕೇರಳ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಓಣಂ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆದಿದ್ದು, ಕೊಡಗು ಜಿಲ್ಲೆಯಲ್ಲೂ ಇಂದು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಓಣಂ ಆಚರಿಸಲಾಗುತ್ತಿದೆ.
ಓಣಂನ್ನು ವಿಶೇಷವಾಗಿ ಕೇರಳ ರಾಜ್ಯದಲ್ಲಿ ಸಡಗರ, ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ೧೦ ದಿನಗಳ ಕಾಲ ನಡೆಯುತ್ತದೆ. ಹತ್ತನೆ ದಿನವನ್ನು ತಿರುಓಣಂ ಎಂದು ಕರೆಯಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್ನ ಚಿಂಗಮ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ೧೦ ದಿನಗಳ ಕಾಲ ನಡೆಯುವ ಈ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದ್ದು, ಈ ವರ್ಷ ಹಬ್ಬವು ಅಥಮ್ನೊಂದಿಗೆ ಪ್ರಾರಂಭವಾಗಿದೆ. ಅದರ ಪ್ರಮುಖ ಹಬ್ಬವಾದ ತಿರುವೋಣಂ ಅನ್ನು ಶುಕ್ರವಾರ ಆಚರಿಸಲಾಗುತ್ತಿದ್ದು, ಜನರು ಮಹಾಬಲಿಯನ್ನು ಸ್ವಾಗತಿಸಲು ಪುಷ್ಪ ರಂಗೋಲಿ ಹಾಕಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಓಣಂ ಏಕೆ ವಿಶೇಷ?:
ರಾಜ ಮಹಾಬಲಿಯ ಪುನರಾಗಮನವನ್ನು ಸೂಚಿಸುವ ಈ ಹಬ್ಬವು ಪುರಾಣಗಳಲ್ಲಿ ಪ್ರಸಿದ್ಧಿ ಪಡೆದಿದೆ. ರಾಜ ಮಹಾಬಲಿ ತನ್ನ ಪ್ರಜೆಗಳನ್ನು ಭೇಟಿ ಮಾಡಲು ಭೂಮಿಗೆ ಹಿಂದಿರುಗುವುದನ್ನು ಸೂಚಿಸುವ ಹಬ್ಬ ಇದಾಗಿದ್ದು, ತನ್ನ ಆಳ್ವಿಕೆಯ ಕಾಲಾವಧಿಯಲ್ಲಿ ನ್ಯಾಯಯುತ ಮತ್ತು ಉದಾರ ಅರಸನಾಗಿದ್ದನೆಂದು ನಂಬಲಾಗಿದೆ.
ಮಹಾಬಲಿ ರಾಜನ ಆಳ್ವಿಕೆಯಲ್ಲಿ ಕೇರಳವು ಸಮೃದ್ಧವಾಗಿತ್ತು. ಅವನು ಹೆಚ್ಚು ಜನಪ್ರಿಯತೆಗಳಿಸುತ್ತಿದ್ದು ದೇವರಾಜ ಇಂದ್ರನನ್ನು ಅಸುರಕ್ಷಿತನನ್ನಾಗಿ ಮಾಡಿತು. ತನ್ನ ಕೀರ್ತಿಗೆ ದಕ್ಕೆಯಾಗುವುದನ್ನು ಅರಿತು ಇಂದ್ರನು ವಿಷ್ಣುವಿನಲ್ಲಿ ಸಹಾಯ ಬೇಡಿದನು. ಮಹಾ ವಿಷ್ಣು ವಾಮನ (ಕುಬ್ಜ ಬ್ರಾಹ್ಮಣ) ರೂಪವನ್ನು ತಾಳಿ ರಾಜ ಮಹಾಬಲಿಯಿಂದ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಮಹಾಬಲಿ ಸಂತೋಷದಿಂದ ಈ ದಾನವನ್ನು ನೀಡಿದನು.
ಮೊದಲ ಹೆಜ್ಜೆಯಲ್ಲಿ, ವಾಮನನು ಇಡೀ ಭೂಮಿಯನ್ನು ಮತ್ತು ಎರಡನೇ ಹೆಜ್ಜೆಯಲ್ಲಿ ಇಡೀ ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಸ್ಥಳವಿಲ್ಲದಿದ್ದಾಗ, ರಾಜ ಮಹಾಬಲಿ ತನ್ನ ತಲೆಯ ಮೇಲೆ ಪಾದವನ್ನು ಇಡುವಂತೆ ಹೇಳಿದನು. ರಾಜನ ಔದಾರ್ಯ ಮತ್ತು ಭಕ್ತಿಗೆ ಮೆಚ್ಚಿದ ವಿಷ್ಣು, ರಾಜನನ್ನು ಪಾತಾಳ ಲೋಕಕ್ಕೆ ಕಳುಹಿಸಿದನು. ಆದರೆ ವರ್ಷಕ್ಕೆ ಹತ್ತುದಿನಗಳ ಕಾಲ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಹಿಂತಿರುಗುವ ವರವನ್ನು ನೀಡಿದನು. ಓಣಂ ದಿನದಂದು ಕೇರಳದ ಜನರು ತಮ್ಮ ರಾಜನನ್ನು ಸ್ವಾಗತಿಸಲು ತಯಾರಿ ನಡೆಸುವುದು ಇದೇ ಕಾರಣಕ್ಕೆ.
ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ…
ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಾಡಹಬ್ಬ ದಸರಾ ೧೬೧೦ ರಲ್ಲಿ ಪ್ರಾರಂಭವಾಗಿ, ಇಲ್ಲಿನ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಇತ್ತೀಚಿನ…
ಆರ್.ಪಿ.ವೆಂಕಟೇಶಮೂರ್ತಿ ಬೆಂಗಳೂರು ಮತ್ತು ಸುತ್ತಮುತ್ತಲಿನ ದುಃಸ್ಥಿತಿಗೆ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆ ಇದೆ, ರಾಜಕೀಯ ನಾಯಕರು ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಬೇಕು.…
ಹಲವು ದಶಕಗಳ ಹೋರಾಟದಿಂದ ಎರಡೂವರೆ ವರ್ಷಗಳ ಹಿಂದೆ ನನಸಾದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀರಾಮ ಮಂದಿರದಗಿರುವ ಭಕ್ತರ ಕಾಣಿಕೆಯ…
ಕೆ.ಎಸ್.ಚಂದ್ರಶೇಖರ ಮೂರ್ತಿ ‘ಸಂವಿಧಾನಬದ್ಧ ಪ್ರಕ್ರಿಯೆ; ಕಾರ್ಯವಿಧಾನದ ಬಗ್ಗೆ ಅಸಮಾಧಾನ’ ಸಾಹಿತಿಗಳು, ಗಣ್ಯರು, ಮುಖಂಡರ ಅಭಿಪ್ರಾಯ ಮೈಸೂರು: ಭಾರತೀಯ ಚುನಾವಣಾ ಆಯೋಗದ…