ಜಿಲ್ಲೆಗಳು

ಹೆಚ್ಚಿದ ಚಿರತೆಗಳ ಹಾವಳಿ; ಬೋನುಗಳ ಕೊರತೆ

ಚಿರಂಜೀವಿ ಸಿ ಹುಲ್ಲಹಳ್ಳಿ

ಗ್ರಾಮೀಣ ಪ್ರದೇಶಗಳ ಜನರಲ್ಲಿ ಆತಂಕ; ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇಕ್ಕಟ್ಟು

ಮೈಸೂರು: ಜಿಲ್ಲೆಯ ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿರುವುದಲ್ಲದೆ, ಮನುಷ್ಯರ ಸಾವಿಗೂ ಕಾರಣವಾಗಿವೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಸತತ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಚಿರತೆಗಳನ್ನು ಸೆರೆ ಹಿಡಿಯುವುದಕ್ಕೆ ಬೋನುಗಳ ಕೊರತೆ ಎದುರಾಗಿದೆ.

ಚಿರತೆಗಳ ಸಂಖ್ಯೆ ಹಾಗೂ ಅವು ನಡೆಸುವ ದಾಳಿ ಸಂಖ್ಯೆಗಳು ಅರಣ್ಯ ಇಲಾಖೆ ಅಧಿಕಾರಿಗಳ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ರಾತ್ರಿ ವೇಳೆ ಆಹಾರ ಅರಸಿ ಚಿರತೆಗಳು ಕಬ್ಬು, ಜೋಳವನ್ನು ಬೆಳೆದಿರುವ ಜಮೀನುಗಳಿಗೆ ನುಗ್ಗುತ್ತಿವೆ. ಚಿರತೆಗಳು ಆಗಾಗ ಗ್ರಾಮಗಳಿಗೆ ನುಗ್ಗಿ ಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ಇದಲ್ಲದೆ, ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಮೂವರು ಮೃತಪಟ್ಟಿದ್ದಾರೆ.

ಮೈಸೂರು ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಮೆಟಲ್ ರಾಡ್ ಕೇಜ್‌ನ 12 ಬೋನುಗಳನ್ನು ಮತ್ತು 2 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಚಿರತೆ ಹಾವಳಿಯಿಂದ 3 ಮಂದಿ ಜೀವ ಕಳೆದುಕೊಂಡಿರುವ ತಿ.ನರಸೀಪುರ ತಾಲ್ಲೂಕಿನಲ್ಲಿ 5 ಫೈಬರ್ ಕೇಜ್ ಮತ್ತು 4 ಮೆಟಲ್ ರಾಡ್ ಕೇಜ್ ಮತ್ತು 39  ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸರಗೂರು ತಾಲ್ಲೂಕಿನಲ್ಲಿ 3 ಮೆಟಲ್ ರಾಡ್ ಕೇಜ್ ಇಡಲಾಗಿದ್ದು, ನಂಜನಗೂಡು ತಾಲ್ಲೂಕಿನ 4 ಪ್ರದೇಶದಲ್ಲಿ ಫೈಬರ್ ಕೇಜ್ ಮತ್ತು 7 ಭಾಗದಲ್ಲಿ ಮೆಟಲ್ ರಾಡ್ ಕೇಜ್ ಅಳವಡಿಸಲಾಗಿದೆ. ಇನ್ನು ಹುಲಿ ದಾಳಿಗೆ ಆದಿವಾಸಿ ಯುವಕನೊಬ್ಬ ಪ್ರಾಣತೆತ್ತಿರುವ ಎಚ್.ಡಿ.ಕೋಟೆ ತಾಲ್ಲೂಕಿನ 3 ಭಾಗದಲ್ಲಿ ಫೈಬರ್ ಕೇಜ್ ಮತ್ತು 7 ಮೆಟಲ್ ರಾಡ್ ಕೇಜ್ ಅನ್ನು ಅಳವಡಿಸಲಾಗಿದೆ.

ಹುಣಸೂರು ವಲಯದ 11 ಭಾಗಗಳಲ್ಲಿ ಮೆಟಲ್ ರಾಡ್ ಕೇಜ್ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 9 ಮತ್ತು ಕೆ.ಆರ್.ನಗರ ತಾಲ್ಲೂಕಿನಲ್ಲಿ 5 ಮೆಟಲ್ ರಾಡ್ ಕೇಜ್ ಅಳವಡಿಸಲಾಗಿದೆ. ಇಷ್ಟಾದರೂ ಸಾರ್ವಜನಿಕರು ಚಿರತೆ ಮತ್ತು ಹುಲಿಯನ್ನು ಕಂಡ ತಕ್ಷಣ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿ ಬೋನು ಇಡುವಂತೆ ಮನವಿ ಮಾಡುತ್ತಿದ್ದಾರೆ. ಕೆಲವೊಂದು ಭಾಗದಲ್ಲಿ ಮೂರು ನಾಲ್ಕು ಬಾರಿ ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಬೋನು ಅಳಡಿಸುವುದೇ ಪರಿಹಾರವಲ್ಲ:
ಚಿರತೆಗಳ ಹಾವಳಿ ಇರುವ ತಾಲ್ಲೂಕಿನ ಆರ್‌ಎಫ್‌ಓ ಮತ್ತು ಅರಣ್ಯ ಸಿಬ್ಬಂದಿಗೆ ಪ್ರತಿದಿನ ಐದಾರು ಫೋನ್ ಕರೆಗಳು ಬರತೊಡಗಿವೆ. ಕೆಲವರು ಡಿಸಿಎಫ್‌ಗಳಿಗೆ ಕರೆ ಮಾಡಿ ಚಿರತೆ ಸೆರೆಗೆ ಒತ್ತಾಯಿಸಿದ್ದಾರೆ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆ ಅಥವಾ ಹುಲಿಯ ಹೆಜ್ಜೆಗಳನ್ನು ಪತ್ತೆ ಹಚ್ಚಲು ಕಾರ್ಯಪ್ರವೃತ್ತರಾಗುತ್ತಾರೆ. ಎಲ್ಲ ಪ್ರದೇಶಗಳಲ್ಲಿ ಬೋನು ಅಳವಡಿಸುವುದೇ ಪರಿಹಾರವಲ್ಲ. ಕೆಲವೊಂದು ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಿ ಪ್ರಾಣಿಗಳ ಚಲನವಲನಗಳನ್ನು ವೀಕ್ಷಿಸಿ ಸೆರೆಯ ಕಾರ್ಯಾಚರಣೆ ನಡೆಯಲಿದೆ. ಚಿರತೆಯಿಂದ ಅತಿಯಾದ ಉಪಟಳ ಮತ್ತು ಚಿರತೆ ಇರುವುದು ಖಚಿತವಾದ ಸ್ಥಳಗಳಲ್ಲಿ ಬೋನುಗಳನ್ನು ಅಳವಡಿಸಲಾಗುವುದು ಎಂಬುದಾಗಿ ಮೈಸೂರು ವಲಯದ ಸಿಎಫ್ ಮಾಲತಿ ಪ್ರಿಯ ಹೇಳುತ್ತಾರೆ.


ಇನ್ನೊಂದು ವಾರದೊಳಗೆ ಕಂಟ್ರೋಲ್ ರೂಂ :

ಮೈಸೂರು ಅರಣ್ಯ ಭವನದಲ್ಲಿ ಒಂದು ವಾರದೊಳಗೆ ಚಿರತೆ ಕಾರ್ಯಪಡೆ ನಿಯಂತ್ರಣ ಕೊಠಡಿ ಸ್ಥಾಪಿಸಿ, ದಿನದ 24 ಗಂಟೆಗಳ ಕಾಲವೂ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದು ಟಾಸ್ಕ್ ಫೋರ್ಸ್ ಮುಖ್ಯಸ್ಥರಾಗಿರುವ ಡಿಸಿಎಫ್ ಸೌರಭ್ ಕುಮಾರ್ ಮಾಹಿತಿ ನೀಡಿದರು.


ಚಿರತೆ ಸೆರೆ ಹಿಡಿಯುವ ಕಾರ್ಯವೈಖರಿ :

ಮೈಸೂರು: ಸಾಮಾನ್ಯವಾಗಿ ಚಿರತೆಯನ್ನು ಸೆರೆಹಿಡಿಯಲು ಬೋನಿನ ಒಂದು ವಿಭಾಗದಲ್ಲಿ ನಾಯಿ ಅಥವಾ ಮೇಕೆಯನ್ನು ಕಟ್ಟುತ್ತಾರೆ. ನಾಯಿ ಅಥವಾ ಮೇಕೆಯ ಸದ್ದು ಮತ್ತು ವಾಸನೆಗೆ ಆಕರ್ಷಿತವಾಗಿ ಚಿರತೆ ಬೋನಿನೊಳಗೆ ಹೋಗುತ್ತದೆ. ಬೋನಿನ ಒಳಗಡೆ ಭಾರಕ್ಕೆ ಮುಚ್ಚಿಕೊಳ್ಳುವ ಒಂದು ಸಣ್ಣ ಅಲ್ಯೂಮಿನಿಯಂ ಹಲಗೆಯನ್ನು ನೆಲದ ಮೇಲೆ ಇರಿಸಿರುತ್ತಾರೆ ಮತ್ತು ಅದನ್ನು ತಂತಿಯ ಮೂಲಕ ಬೋನಿನ ಬಾಗಿಲಿಗೆ ಕಟ್ಟಿರುತ್ತಾರೆ. ಆ ಅಲ್ಯೂಮಿನಿಯಂ ಹಲಗೆಯ ಮೇಲೆ ಚಿರತೆ ಕಾಲಿಟ್ಟ ಕೂಡಲೇ ಮಾರ್ಜಾಲದ ಭಾರಕ್ಕೆ ಹಲಗೆ ಕೆಳಗೆ ಹೋಗುತ್ತದೆ. ಹಲಗೆ ಕೆಳಗೆ ಹೋದ ಕೂಡಲೇ ಅದಕ್ಕೆ ಕಟ್ಟಿರುವ ಕಬ್ಬಿಣದ ತಂತಿ ಬಾಗಿಲನ್ನು ಮುಚ್ಚಿಕೊಳ್ಳುತ್ತದೆ. ಜೊತೆಗೆ ಚಿರತೆಯ ಚಲನವಲನವನ್ನು ಕ್ಯಾಮೆರಾ ಕೂಂಬಿಂಗ್‌ನಲ್ಲಿ ಗಮನಿಸಿ ಚಿರತೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗುವುದು ಎನ್ನುತ್ತಾರೆ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ.


ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಮತ್ತು ಕಾರ್ಯ ಮುಖ್ಯ ರಸ್ತೆಯಲ್ಲಿ ಜೋಳದ ಮೆದೆಯೊಳಗೆ ಚಿರತೆ ಸದ್ದು ಕೇಳಿಸಿದ್ದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜೊತೆಗೆ ಈ ಚಿರತೆ ಕೆಲ ದಿನಗಳ ಹಿಂದೆ ಅಕ್ಕ-ಪಕ್ಕದ ಮನೆಗಳ ನಾಯಿಗಳನ್ನು ಭಕ್ಷಿಸಿದೆ. ಜೊತೆಗೆ ಗದ್ದೆ ಕೆಲಸ ಮತ್ತು ರಸ್ತೆಯಲ್ಲಿ ಸಂಚರಿಸುವ ವೇಳೆ ಅನೇಕರಿಗೆ ಚಿರತೆ ಕಾಣಿಸಿಕೊಂಡಿದೆ. ಆದರೆ, ಈವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಬೋನುಗಳ ಸಂಖ್ಯೆ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿದು ಜನರ ಆತಂಕ ದೂರ ಮಾಡಬೇಕು.

– ಚಂದ್ರು, ಸ್ಥಳೀಯ.

 

 

 

 

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago