ಜಿಲ್ಲೆಗಳು

ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎರಡು ದಿನ ‘ಇಳೆ-ಮಳೆ’ ನಾಟಕ ಪ್ರದರ್ಶನ

ಮೈಸೂರು : ನೃತ್ಯ ಗಿರಿಯ ಬೆಳ್ಳಿ ಹಬ್ಬ ಅಂಗವಾಗಿ ಮತ್ತು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಮೋನೋಡ್ರಾಮ ‘ಇಳೆ – ಮಳೆ’ ಏಕವ್ಯಕ್ತಿಯ ನಾಟಕವನ್ನು  ನಗರದ ಗಾನಭಾರತೀಯಲ್ಲಿ ಪ್ರದರ್ಶಿಸಲಾಗುತ್ತಿದೆ. ನಾಟಕವು ಆಗಸ್ಟ್ 13 ಹಾಗೂ 14ನೇ ತಾರೀಖಿನಂದು ಸಂಜೆ 6:30ಕ್ಕೆ ಮೊದಲ ಪ್ರದರ್ಶನ ಮತ್ತು 7:30ಕ್ಕೆ ಎರಡನೇ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ನಾಟಕ ನೋಡಲು ಬರುವವರಿಗೆ ಪ್ರವೇಶ ದರವು 50 ರೂ ಗಳನ್ನು ನಿಗದಿ ಮಾಡಲಾಗಿದೆ.

ಇಳೆ – ಮಳೆ ನಾಟಕವನ್ನು ಎಂ. ಎಸ್. ವೇಣು ಗೋಪಾಲ್ ರವರು ರಚನೆ ಮಾಡಿದ್ದು, ನಾಟಕದ ನಿರ್ದೇಶನವನ್ನು ನಾ. ಶ್ರೀನಿವಾಸ್, ಹಾಗೂ ಸಂಗೀತ ಪ್ರಭು ರಾವ್ ಹಾಗೂ ಮೃತ್ಯುಂಜಯ ಹಿರೇಮಠ್ ರವರು ನೀಡಿದ್ದಾರೆ.

 

ತಂಡದಲ್ಲಿ

ತಬಲಾ – ರಮೇಶ್ ಧನುರ್,

ರಂಗ ವಿನ್ಯಾಸ – ಡಾ. ಗೀತಾಂಜಲಿ ಆಚಾರ್,

ವಿಶೇಷ ವಾದ್ಯ – ಡಿಡ್ ಗಿರೋ – ಮೇಘಾ

ಇವರುಗಳು ನಿರ್ವಹಣೆ ಮಾಡಲಿದ್ದಾರೆ. ಎಂದು ನೃತ್ಯ ಗಿರಿ ನಿರ್ದೇಶಕರಾದ ಡಾ. ಕೃಪಾ ಫಡ್ಕೆ ರವರು ತಿಳಿಸಿದ್ದಾರೆ.

andolanait

Recent Posts

ಕಾರು ಅಪಘಾತ : ಕಾರಿನಲ್ಲಿ‌10ಕ್ಕೂ ಹೆಚ್ಚು ಕರುಗಳು ಪತ್ತೆ

ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…

3 hours ago

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

6 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

7 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

7 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

8 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

8 hours ago