ಜಿಲ್ಲೆಗಳು

ಹನೂರಿಗೂ ಸಂಚಾರಿ ಕೃಷಿ ಚಿಕಿತ್ಸಾ ವಾಹನ

ಜಿಲ್ಲೆಗೆ ಇದು 3ನೇ ಸಂಚಾರಿ ಘಟಕ; ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಚಾಮರಾಜನಗರ: ಬೆಳೆಗಳಲ್ಲಿ ರೋಗ, ಕಳೆ- ಕೀಟಬಾಧೆ ಕಂಡುಬಂದರೆ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಉಂಟಾದರೆ ಮತ್ತು ರಸಗೊಬ್ಬರ ಕಳಪೆಯಿಂದ ಕೂಡಿದ್ದರೆ ಅದರ ತಡೆಗೆ ‘ಸಂಚಾರಿ ಕೃಷಿ ಚಿಕಿತ್ಸಾ’ ವಾಹನ ಇನ್ನು ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿಯೂ ಸಂಚಾರ ಮಾಡಲಿದೆ!
ಮೊದಲಿಗೆ ಚಾಮರಾಜನಗರ,ನಂತರ ಗುಂಡ್ಲುಪೇಟೆಗೆ ಈ ಅನುಕೂಲವಿತ್ತು. ಬುಧವಾರ(ಫೆ. 1)ವಷ್ಟೇಸಂಚಾರಿ ವಾಹನ ಹನೂರು ತಾಲ್ಲೂಕಿಗೂ ಬಂದಿದ್ದು ಹೊಸ ವಾಹನ ಅಣಿಯಾಗಿ ನಿಂತಿದೆ. ಇದರೊಂದಿಗೆ, ಜಿಲ್ಲೆ ಇದುವರೆಗೆ
ಮೂರು ಸಂಚಾರಿ ವಾಹನಗಳನ್ನು ಕಂಡಂತಾಗಿದೆ.

ವಾಸ್ತವವಾಗಿ ಹೋಬಳಿಗೊಂದು ವಾಹನ ಸೇವೆ ಒದಗಿಸುವುದು ಸರ್ಕಾರದ ಆಶಯ. ಅಲ್ಲಿಯವರೆಗೆ ಒಂದೊಂದು ವಾಹನವನ್ನೂ ಆಯಾ ತಾಲ್ಲೂಕಿನಾದ್ಯಂತ ಬಳಸಿಕೊಳ್ಳುವ ಪ್ರಯತ್ನದಲ್ಲಿ ಕೃಷಿ ಇಲಾಖೆ ತೊಡಗಿದೆ.

ಏನಿದು ಸಂಚಾರಿ ವಾಹನ?: ಧ್ವನಿವರ್ಧಕ, ಮೈಕ್ರೋ ಸ್ಕೋಪ್, ಮಣ್ಣು-ಗೊಬ್ಬರ ಗುಣಮಟ್ಟ ಪರೀಕ್ಷಿಸುವ ಲ್ಯಾಬ್ ಮತ್ತು ರೈತರಿಗೆ ವಿಡಿಯೋ ಮೂಲಕ ಸಂದೇಶ ನೀಡಲು ಡಿಜಿಟಲ್ ಬೋರ್ಡ್ ಇತ್ಯಾದಿ ಸೌಲಭ್ಯಗಳುಳ್ಳ ಸಂಚಾರಿ ವಾಹನದಲ್ಲಿ ಕೃಷಿ ತಾಂತ್ರಿಕ ಸಹಾಯಕ ಮತ್ತು ಚಾಲಕ ಇರಲಿದ್ದಾರೆ.
155313 ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗೆ ಅಥವಾ ನಿಯೋಜಿತ ತಾಂತ್ರಿಕ ಸಹಾಯಕರ ಮೊಬೈಲ್‌ಗೆ ಕರೆ ಮಾಡಿದ ರೈತರ ಹೆಸರನ್ನು ನೋಂದಾಯಿಸಿಕೊಂಡು ಸಾಮಾನ್ಯ ಸಮಸ್ಯೆಯಾಗಿದ್ದರೆ ವಾಟ್ಸಾಪ್ ಸಂದೇಶದ ಮೂಲಕವೇ ಪರಿಹರಿಸಲಾಗುತ್ತದೆ. ಸಮಸ್ಯೆ ಕಠಿಣವಾಗಿದ್ದರೆ ಅಥವಾ ರೈತ ಅಷ್ಟೊಂದು ತಿಳುವಳಿಕೆ ಹೊಂದಿಲ್ಲದವರಾದರೆ ಸಂಚಾರಿ ವಾಹನದಲ್ಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗುತ್ತದೆ.
ಬೆಳೆ ,ಮಣ್ಣಿನ ಸಮಸ್ಯೆ ಯಾವತರ ಇದೆ ಎನ್ನುವುದರ ಮೇಲೆ ಕೃಷಿ ಅಧಿಕಾರಿಗಳನ್ನು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ವಾಹನದಲ್ಲಿ ಕರೆದೊಯ್ದು ಪರಿಶೀಲಿಸಿ ಅವರು ನೀಡುವ ಶಿಫಾರಸುಗಳನ್ನು ಪಾಲನೆ ಮಾಡುವಂತೆ ಹೇಳಲಾಗುತ್ತದೆ. ಇಲ್ಲದಿದ್ದಲ್ಲಿ ಬೆಳೆ ಮತ್ತು ಮಣ್ಣಿನ ಮೇಲೆ ಆಗುವ ಪರಿಣಾಮಗಳನ್ನು ಸ್ಥೂಲವಾಗಿ ತಿಳಿಸುವ ಕೆಲಸವನ್ನು ಸಂಚಾರಿ ತಾಂತ್ರಿಕ ಸಹಾಯಕರು ಮಾಡುತ್ತಾರೆ.
ಇದಲ್ಲದೇ, ಬೆಳೆವಿಮೆ, ಕಿಸಾನ್ ಸಮ್ಮಾನ್‌ ಸಹಿತ ಕೃಷಿ ಇಲಾಖೆ ಯೋಜನೆ ಮತ್ತು ಪ್ರಯೋಜನಗಳ ಬಗ್ಗೆಯೂ ಜಪದಟ್ಟಣೆ ಇರುವ ಸ್ಥಳಗಳಲ್ಲಿ ವಿಡಿಯೋ ಮತ್ತು ಧ್ವನಿವರ್ಧಕ ಮುಖಾಂತರ ಈ ವಾಹನದಲ್ಲಿ ತಿಳಿಸಲಾಗುತ್ತದೆ.
ಒಳ್ಳೆಯಯ ಬೆಳೆ ಬೆಳೆಯಬೇಕಾದರೆ ಸಾವಯವ ಇಂಗಾಲ,ರಸಸಾರ ಬಹಳ ಮುಖ್ಯ.ಇದು ಕನಿಷ್ಠ 1ಯೂನಿಟ್ ಆದರೂ ಇರಲೇ ಬೇಕು.ಅತಿಯಾ ದ ರಾಸಾಯನಿಕ ಗೊಬ್ಬರ, ಔಷಧಿ ಬಳಕೆಯಿಂದ ಇದರ ಪ್ರಮಾಣ ಅನೇಕ ಕಡೆ 0.5 ಯೂನಿಟ್ ಗೆ ಕುಸಿದಿದ್ದು ಇದರ ಮಟ್ಟವನ್ನು ಪರೀಕ್ಷೆ ಮೂಲಕ ಸ್ಥಳದಲ್ಲಿಯೇ ತಿಳಿಸಲಾಗುತ್ತದೆಮತ್ತು ಮಣ್ಣಿನ ಮಟ್ಟ ಸುಧಾರಿಸುವ ಮಾರ್ಗೋಪಾಯಗಳನ್ನು ಸಂಚಾರಿ ಘಟಕ ಸಿಬ್ಬಂದಿ ತಿಳಿಸಿಕೊಡಲಿದ್ದಾರೆ.
ಮಣ್ಣಿನ ಪಿಎಚ್ ಮಟ್ಟ ಕಡಿಮೆಯಾಗಿ ಭೂಮಿ ಕರಳಾಗುವ ಅಪಾಯವಿದೆ. ಈ ಬಗ್ಗೆಯೂ ಪರೀಕ್ಷೆ ನಡೆಸಿ ಜಿಪ್ಸಂ ಇತ್ಯಾದಿ ಶಿಫಾರಸು ಮಾಡಲಾಗುತ್ತದೆ.
ಬೆಳೆಮತ್ತು ಭೂಮಿಗೆ ಏನೇನು ಲಘು ಪೋಷಕಾಂಶಗಳ ಅಗತ್ಯ ಇದೆ ಎಂಬುದನ್ನು ಪರೀಕ್ಷೆ ನಡೆಸಿದ ನಂತರ ರೈತರಿಗೆ ತಿಳಿಸಿಕೊಡಲಾಗುತ್ತದೆ.
ಒಟ್ಟಾರೆ ಮಣ್ಣು, ಬೆಳೆಗಳ ಆರೋಗ್ಯ ಪರೀಕ್ಷೆ ನಡೆಸಿ ಉತ್ಪಾದನೆ ಹೆಚ್ಚಿಸುವ ರೈತ ಸ್ನೇಹಿಯಾಗಿ ಸಂಚಾರಿ ಘಟಕ ಕಾರ್ಯ ನಿರ್ವಹಿಸಲಿದೆ.
ಪ್ರಕೃತಿ ವಿಕೋಪ ಸಂದರ್ಭದಲ್ಲೂ ಇದರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ವಾಹನ ಜಿಪಿಎಸ್ ತಂತ್ರಜ್ಞಾನ ಹೊಂದಿದ್ದು ಅದರ ಇರುವಿಕೆಯನ್ನು ಕೇಂದ್ರ ಕಚೇರಿಯಲ್ಲಿಯೇ ಕುಳಿತು ಪತ್ತೆ ಮಾಡಬಹುದಾಗಿದೆ.


ಸಂಚಾರಿ ಕೃಷಿ ಚಿಕಿತ್ಸಾ ವಾಹನ ಹನೂರು ತಾಲ್ಲೂಕಿಗೆ ಬಂದಿದ್ದು ಚಾಲಕ ಹಾಗೂ ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆ ಪೂರ್ಣ ಆದ ಕೂಡಲೇ ಸೇವೆಗೆ ತೊಡಗಿಸಿಕೊಳ್ಳಲಿದೆ.
ಸಂತೋಷ್ ಕುಮಾರ್, ಸ.ಕೃಷಿ ನಿರ್ದೇಶಕರು(ವಿಷಯ ತಜ್ಞ) ಜೆಡಿಎ ಕಚೇರಿ,ಚಾ.ನಗರ.


ಸಂಚಾರಿ ಕೃಷಿ ಚಿಕಿತ್ಸಾ ವಾಹನ ಸೇವೆ ಪಡೆಯಲು ಸಹಾಯವಾಣಿಗಾಗಲಿ ಅಥವಾ ಚಾ.ನಗರದ ತಾಂತ್ರಿಕ ಸಹಾಯಕರಿಗಾಗಲಿ 9972120069ಕರೆ ಮಾಡಬಹುದು. ಹಾಗೆೆಯೇ ಗುಂಡ್ಲುಪೇಟೆ ವಾಹನ ಸೇವೆಗಾಗಿ 8277930780ಗೆ ಕರೆ ಮಾಡಬೇಕಿದೆ. ನೇಮಕಾತಿ ನಂತರ ಹನೂರು ವಾಹನದ ತಾಂತ್ರಿಕ ಸಹಾಯಕರ ಮೊಬೈಲ್ ಸಂಖ್ಯೆ ತಿಳಿಸಲಾಗುವುದು. ಇಷ್ಟರಲ್ಲೇ ಈ ನೇಮಕಾತಿ ಪೂರ್ಣ ಗೊಳ್ಳಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

andolanait

Recent Posts

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

12 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

16 hours ago

ಶೂಟೌಟ್‌ ಪ್ರಕರಣ ; ಮೃತರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಹನೂರು : ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​​ ಸಿಗುತ್ತಿದೆ. ದನ ಹುಡುಕಲು ಹೋಗಿದ್ದವರ…

16 hours ago

ನಕಲಿ ಔಷಧ ಜಾಲ ಪತ್ತೆ ಪ್ರಕರಣ ; ಎಸ್‌ಐಟಿ ತನಿಖೆಗೆ ಆದೇಶ

ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡೇರಿಯಲ್ಲಿ ಬೃಹತ್ ನಕಲಿ ಔಷಧ ಜಾಲ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಪ್ರಕರಣವನ್ನು…

17 hours ago

ಮುಡಾ ಬದಲಿ ನಿವೇಶನಗಳ ಹಂಚಿಕೆ ಆದೇಶ ರದ್ದು ; ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಸಚಿವ ಯತೀಂದ್ರ

ಸದ್ದಿಲ್ಲದೆ ಕೈಗೊಂಡ ತೀರ್ಮಾನಕ್ಕೆ ಬೆಚ್ಚಿದ ರಿಯಲ್‌ ಎಸ್ಟೇಟ್ ಉದ್ಯಮಿಗಳು; ಮೂರು ಪಕ್ಷಗಳಲ್ಲೂ ತಳಮಳ ಕೆ.ಬಿ.ರಮೇಶನಾಯಕ ಮೈಸೂರು : ಕಳೆದ ಎರಡು…

17 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ   72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…

18 hours ago