ಜಿಲ್ಲೆಗಳು

ಗೋಣಿಕೊಪ್ಪ ದಸರಾ ಜನೋತ್ಸವ : ಕಣ್ಮನ ಸೆಳೆದ ಸ್ತಬ್ಧಚಿತ್ರ, ಜಾನಪದ ಕಲಾತಂಡ

ಗೋಣಿಕೊಪ್ಪ : ಸಂಸ್ಕೃತಿ ,ನಾಡು -ನುಡಿ, ಆರೋಗ್ಯ, ಪರಿಸರದ ಕಾಳಜಿಯೊಂದಿಗೆ ೪೪ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸ್ತಬ್ಧಚಿತ್ರಗಳು ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಕಣ್ಮನ ಸೆಳೆಯಿತು.

ನಾಡ ಹಬ್ಬ ದಸರಾ ಸಮಿತಿ ಆಯೋಜಿಸಿದ ಸ್ತಬ್ಧ ಚಿತ್ರ ಮೆರವಣಿಯಲ್ಲಿ ಸಾಮಾಜಿಕ ಕಳಕಳಿ ಪರಿಸರ ಪ್ರೇಮ ಆರೋಗ್ಯ ಶಿಕ್ಷಣ ದೇಶಭಕ್ತಿ ಬಿಂಬಿಸುವ ಜವಾಬ್ದಾರಿಗಳನ್ನು ಸಂಘಟನೆಗಳು ಹೊತ್ತಿದ್ದವು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಶಾಸಕ ಕೆ ಜಿ ಬೋಪಯ್ಯ ,ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ ಮಹೇಶ್ ಜೋಶಿ ಡೋಲು ಬಾರಿಸುವ ಮೂಲಕ ಸ್ತಬ್ದ ಚಿತ್ರ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಸರ್ಕಾರಿ ಇಲಾಖೆಯ ಹಾಗೂ ವಿವಿಧ ಸಂಘ-ಸಂಸ್ಥೆಗಳು ನಿರ್ಮಿಸಿದ ಸ್ತಬ್ದಚಿತ್ರಗಳ ಮೆರವಣಿಗೆ ಹೊರಟಿತು.

ಸರ್ವಂ ದಸರಾ ಸಮಿತಿ ನಿರ್ಮಿಸಿದ ಕಾಡಿನಿಂದ ನಾಡಿನಡೆಗೆ ನಾಡಿನಿಂದ ರಾಷ್ಟ್ರಪತಿ ಭವನದವರೆಗೆ ಎಂಬ ಬುಡಕಟ್ಟು ಸಮುದಾಯದ ಸಾಧಕಿ ರಾಷ್ಟ್ರಪತಿ ದ್ರೌಪದಿ ಮರ್ಮೋ ಅವರ ಸಾಧನೆಯನ್ನ ಬಿಂಬಿಸಿರುವುದು ಗಮನರ್ಹ ವಿಚಾರವಾಗಿತ್ತು.

ತಿತಿಮತಿ ರಾಮ ಮಂದಿರ ಸಮಿತಿ ನಿರ್ಮಿಸಿದ ವೀರ ಸಾವರ್ಕರ ಅವರ ಅಂಡಮಾನ್ ಕಾರಾಗೃಹ ಶಿಕ್ಷೆಯನ್ನು ತೋರಿಸುವ ಚಿತ್ರ ಸಾರ್ವಜನಿಕರಿಗೆ ಇತಿಹಾಸದ ಸಂದೇಶವಾಗಿತ್ತು.

ಅರುವತೊಕ್ಲು ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘ ಮತ್ತು ಶಾರದಾಂಭ ದಸರಾ ಸಮಿತಿ ನಮ್ಮ ಮಕ್ಕಳು ನಮ್ಮ ಆಸ್ತಿ ಎಂಬ ತಲೆಬರಹದಡಿ ಮಾದಕ ವ್ಯಸನದಿಂದ ಮಕ್ಕಳನ್ನ ಹೊರಗೆ ತನ್ನಿ ಮಕ್ಕಳನ್ನು ದೇಶದ ಆಸ್ತಿಯಾಗಿ ಮಾಡಿ ಎಂಬ ಸಂದೇಶ ಗಮನಹರವಾಗಿತ್ತು.

ಪೊನ್ನಂಪೇಟೆ ಜಿಬಿ ಪುರುಷರ ಸ್ವ ಸಹಾಯ ಸಂಘದ ಸ್ತಬ್ಧ ಚಿತ್ರದಲ್ಲಿ ಕಾಡು ಬೆಳಸಿ ಉಸಿರುಗಳಿಸಿ ಮರ ಕಡಿಯದಿರಿ ನಾಡು ತೊರೆಯಿದಿರಿ ಎಂಬ ಸಂದೇಶ ಇತ್ತು.

ಗೋಣಿಕೊಪ್ಪ ಭಗತ್ ಸಿಂಗ್ ಯುವಕ ಸಂಘದ ವಿಶ್ವವನ್ನೇ ನುಂಗಿದ ಮಾನವ ಕೃತಕ ಬಾಂಬ್ ಕೊರೋನಾ ಮತ್ತು ದೇವತೆಗಳು ಸಮುದ್ರಮಂತನ ಮಾಡುತ್ತಿರುವ ಬಗ್ಗೆ ಕಟ್ಟಿಕೊಟ್ಟ ಚಿತ್ರಣ ಜನರ ನೇರ ದೃಷ್ಟಿ ನೆಟಿತು.

ಕೈಕೇರಿ ಪರಿಸರ ಪ್ರೇಮಿ ಸಂಘದ ಸ್ವಚ್ಛ ಭಾರತ್ ಅಭಿಯಾನದ ಮೂಲಕ ಆರೋಗ್ಯ ಕಾಳಜಿಯನ್ನು ತೋರಿಸಿದರು.

ಅರ್ವತೋಕ್ಲು ಕಡ್ಲಯ್ಯಪ್ಪ ದಸರಾ ಸಮಿತಿ ರಚನೆಯ ಮೂಕ ಸಂದೇಶದಲ್ಲಿ ಹಾಲು ಮತ್ತು ಆಲ್ಕೋಹಾಲಿನ ಸೇವನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಸಂದೇಶ ಸಾರಿತು.

ದೇವರಪುರ ಭಗತ್ ಸಿಂಗ್ ಯುವಕ ಸಂಘದ ರಾಮ ಮಂದಿರ ನಿರ್ಮಾಣದ ಚಿತ್ರಣವನ್ನು ಕಟ್ಟಿಕೊಟ್ಟು ಹಿಂದುತ್ವದ ಪ್ರತೀಕವಾಗಿತ್ತು.

ಕೈಕೇರಿ ಹಿಂದುಸ್ತಾನ್ ಸಂಸ್ಥೆಯ ರೈತ ಮತ್ತು ಯೋಧ ಒಂದೇ ಮುಖದ ನಾಣ್ಯ ಹಾಗೂ ದೇಶದ ಮಾನ್ಯ ಸಂದೇಶದ ಚಿತ್ರ ಜನರ ಮನಸ್ಸಿನಾಳಕ್ಕೆ ಇಳಿಯಿತು.

ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಮಿಸಿದ ಚಿತ್ರ ಭೇಷ್ ಎನಿಸಿಕೊಂಡರೆ ಶಿಕ್ಷಣ ಇಲಾಖೆಯ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ದೇಶದ ಆಸ್ತಿಯನ್ನಾಗಿ ನೋಡಿ ಎಂಬ ಸಂದೇಶ ಸಾರಿತು.

ಆರೋಗ್ಯ ಇಲಾಖೆಯ ಯೋಜನೆಳಗಳ ಬಗ್ಗೆ ಗಮನಹರ ಸಂದೇಶವನ್ನು ಕೇಂದ್ರೀಕರಿಸಿತು.

ತಾಲೂಕು ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಒಳಗೊಂಡ ಚಿತ್ರಣವನ್ನು ಸರೋಜನಿಕರಿಗೆ ಪ್ರದರ್ಶನ ಮಾಡಲಾಯಿತು.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago