ಜಿಲ್ಲೆಗಳು

ದಸರೆ ಸಂಭ್ರಮ ಹೆಚ್ಚಿಸಿದ ಕಲಾ ಪ್ರಕಾರಗಳ ಮೆರುಗು

ಜಂಬೂ ಸವಾರಿಯಲ್ಲಿ 70ಕ್ಕೂ ಹೆಚ್ಚು ಕಲಾ ಪ್ರಕಾರಗಳ ವೈಭವ ಪ್ರದರ್ಶನ

ಮೈಸೂರು:ನಾನಾ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಹಿಂದಿನಿಂದಲೂ ವೇದಿಕೆಯಾಗಿರುವ ಮೈಸೂರು ದಸರೆ ಜಂಬೂ ಸವಾರಿಯಲ್ಲಿ ಈ ಬಾರಿ ರಾಜ್ಯ ಮಟ್ಟದ ಮಾತ್ರವಲ್ಲ ರಾಷ್ಟ್ರಮಟ್ಟದ ಹಲವು ಕಲಾವೈಭವ ಅನಾವರಣಗೊಂಡಿತು.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಾಣದ ಕಲಾ ತಂಡಗಳ ಮೆರುಗನ್ನು ಕಂಡ ದಸರಾ ವೀಕ್ಷಕರು ಈ ಬಾರಿ ಮತ್ತೆ ಸಂಭ್ರಮಿಸಿದರು. ಕಲಾವಿದರು ಹೊಸ ಹುರುಪಿನೊಂದಿಗೆ ಪ್ರದರ್ಶನ ನೀಡಿ ಗಮನ ಸೆಳೆದರು.

ಮೈಸೂರಿನ ನಂದಿಧ್ವಜದ ಜತೆ ವಿವಿಧ ಕಲಾ ತಂಡಗಳಾದ ನಂಜನಗೂಡಿನ ವೀರಗಾಸೆ ಕುಣಿತ, ರಾಮನಗರ ಜಿಲ್ಲೆಯ ಪಟಕುಣಿತ, ಹಾವೇರಿ ಜಿಲ್ಲೆಯ ಪುರವಂತಿಗೆ, ಮೈಸೂರು ಜಿಲ್ಲೆಯ ವರಕೂಡಿನ ಕಂಸಾಳೆ ನೃತ್ಯ , ವಿಜಯಪುರದ ಕೀಲುಕುದುರೆ, ಹಾವೇರಿ ಜಿಲ್ಲೆಯ ಕೋಲಾಟ, ಹಾಸನ ಜಿಲ್ಲೆಯ ಚಿಟ್ ಮೇಳ, ಧಾರವಾಡ ಜಿಲ್ಲೆಯ ಕಣಿವಾದನ, ಬಾಗಲಕೋಟೆಯ ಹೂವಿನ ನೃತ್ಯ , ಹೆಜ್ಜೆಯ ಮೇಳ, ಮೈಸೂರಿನ ತಮಟೆ ನಗಾರಿ, ಯಕ್ಷಗಾನ ಗೊಂಬೆ ಇವು ಜಂಬೂ ಸವಾರಿಯಲ್ಲಿ ಗಮನ ಸೆಳೆದವು.

ಅಲ್ಲದೆ, ಟಿ,ನರಸೀಪುರದ ಬನ್ನೂರಿನ ಪೂಜಾ ಕುಣಿತ, ಬೀದರಿನ ಲಂಬಾಣಿ ನೃತ್ಯ, ಬಳ್ಳಾರಿ ಜಿಲ್ಲೆಯ ಹಗಲುವೇಷ , ಕೋಲಾರದ ತಮಟೆ ವಾದನ ಗಮನ ಸೆಳೆಯಿತು. ಉಡುಪಿ ಜಿಲ್ಲೆಯ ದಟ್ಟಿ ಕುಣಿತ ,ಕುಡುಬಿ ನೃತ್ಯ, ಉತ್ತರ ಕನ್ನಡದ ಗೊಂಡರ ಡಕ್ಕೆ , ಟಿ. ನರಸೀಪುರದ ತಲಕಾಡಿನ ಚಿಲಿಪಿಲಿ ಗೊಂಬೆ, ಉಡುಪಿ ಜಿಲ್ಲೆಯ ಸಿಂಗಾರಿ ಮೇಳ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮರಗಾಲು ಕುಣಿತ, ದೊಣ್ಣೆವರಸೆ ರಸಮಯವಾಗಿತ್ತು.

ಜಮ್ಮು ಕಾಶ್ಮೀರದ -ಡೋಂಗ್ರಿ ನೃತ್ಯ, ತೆಲಂಗಾಣದ -ಮಥುರಿ ನೃತ್ಯ, ಪಂಜಾಬಿನ -ಬಾಂಗ್ರಾ ಮತ್ತು ಜಿಂದುವಾ ನೃತ್ಯ, ಪಶ್ಚಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ, ರಾಜಸ್ಥಾನದ ಚಕ್ರಿ ಮತ್ತು ಗೊಮರ್ ನೃತ್ಯ, ತಮಿಳು ನಾಡಿನ – ತಪ್ಪೆಟಂ ನೃತ್ಯ ದಸರೆ ಕಲಾವೈಭವಕ್ಕೆ ರಾಷ್ಟ್ರಮಟ್ಟದ ಮೆರುಗನ್ನು ತಂದುಕೊಟ್ಟಿತು.

ಬೆಳಗಾವಿ ಜಿಲ್ಲೆಯ ಜಗ್ಗಲಗಿ ಮೇಳ , ಮಂಡ್ಯಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ ಕೀಲುಕುದುರೆ, ಬೆಂಗಳೂರಿನ ಹಾಲಕ್ಕಿ ಸುಗ್ಗಿ, ಚಾಮರಾಜ ನಗರ ಜಿಲ್ಲೆಯ ಗೇರ್ ನೃತ್ಯ, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ನಂದೀಕೋಲು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜಡೆ ಕೋಲಾಟ, ಕೋಲಾರದ ಕೀಲು ಕುದುರೆ, ಕೊಡಗಿನ ಜನರ ಗಿರಿಜನ ನೃತ್ಯ, ಹಾವೇರಿ ಜಿಲ್ಲೆಯ ಬೇಡರ ವೇಷ, ಚಿಕ್ಕಬಳ್ಳಾಪುರದ ಕೀಲುಕುದುರೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಉರುಮೆ ವಾದ್ಯ ಪ್ರೇಕ್ಷಕರ ಗಮನ ಸೆಳೆಯಿತು.

ಬೆಂಗಳೂರಿನ ಕೃಷ್ಣ ಜಾನಪದ ನವಿಲು ನೃತ್ಯ ತಂಡದ ನವಿಲು ನೃತ್ಯ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಳ್ಳು ಕುಣಿತ, ಕೊಪ್ಪಳದ ಸಮ್ಮಾಳ ಮೇಳ , ಹಗಲು ವೇಷ, ಧಾರವಾಡ ಜಿಲ್ಲೆಯ ದಾಲಪಟ, ಬೆಳಗಾವಿ ಜಿಲ್ಲೆ ಅಥಣಿಯ ಕರಡಿ ಮಜಲು, ಮಂಡ್ಯದ ಕೋಲಾಟ, ದೊಣ್ಣೆವರಸೆ, ಬಾಗಲಕೋಟೆ ಮುಧೋಳ ತಾಲ್ಲೂಕಿನ ಝಾಂಜ್ ಫಥಕ್, ಧಾರವಾಡ ಜಿಲ್ಲೆಯ ಲಿಂಗೇಶ್ವರ ನಗರದ ಕಥಕಳಿ ಗೊಂಬೆ , ಚಾಮರಾಜ ನಗರ ಜಿಲ್ಲೆಯ ಮಲ್ಲಿಕಾರ್ಜುಣ ಕಲಾ ತಂಡದ ಗೊರವರ ಕುಣಿತ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಡೊಳ್ಳು ಕುಣಿತ, ಮೈಸೂರಿನ ಮಹಾಲಿಂಗೇಶ್ವರ ಸೇವಾ ಸಮಿತಿಯ ಮೂಡಲ ಪಾಯ ಯಕ್ಷಗಾನ ನೃತ್ಯ ಮನಮೋಹಕವಾಗಿ ಜನರನ್ನು ರಂಜಿಸಿದವು.

ಮಂಡ್ಯ ಜಿಲ್ಲೆ ಪಾಂಡವಪುರದ ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಂದೀಕೋಲು, ಬಾಗಲಕೋಟೆಯ ಚಿನ್ನಿಕೋಲು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದ ನಗಾರಿ ಕುಣಿತ, ವಿಜಯಪುರ ಜಿಲ್ಲೆಯ ಸತ್ತಿಗೆ ಕುಣಿತ, ಬಬಲೇಶ್ವರ ತಾಲ್ಲೂಕಿನ ಕೀಲುಕುದುರೆ, ಉಡುಪಿಯ ಕಂಗಿಲು ನೃತ್ಯ, ಶಿವಮೊಗ್ಗದ ಡೊಳ್ಳು ಕುಣಿತ, ಮೈಸೂರಿನ ಗಣೇಶ ನಗರದ ಸ್ಯಾಕ್ಸೋಪೋನ್, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಝಾಂಜ್ ಫಥಕ್, ನಾಡ ಹಬ್ಬ ದಸರಾದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದವು.

andolana

Recent Posts

ಸಾಲ ಬಾಧೆ ; ದಂಪತಿ ಆತ್ಮಹತ್ಯೆ

ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…

3 hours ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

16 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

16 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

16 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

16 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

16 hours ago