ಜಿಲ್ಲೆಗಳು

ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಶವವಾಗಿ ಪತ್ತೆ

ವೀರಾಜಪೇಟೆ :ಅರಣ್ಯ ವೀಕ್ಷಕರು ಅರಣ್ಯದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತಿದ್ದ ವೇಳೆ ಕಾಣೆಯಾಗಿದ್ದರು ಇಂದು ನದಿಯ ತಳಭಾಗದಲ್ಲಿ ಅರಣ್ಯ ವೀಕ್ಷಕನ ಮೃತ್ತ ದೇಹ ಪತ್ತೆಯಾಗಿರುವ ಘಟನೆ ವೀರಾಜಪೇಟೆ ಗ್ರಾಮಾಂತರ. ವಿ.ಬಾಡಗ ಗ್ರಾಮ ಉಗ್ಗಿಹೊಳೆ, ಕೊಕ್ಕ ಭಾಗದಲ್ಲಿ ನಡೆದಿದೆ.
ವೀರಾಜಪೇಟೆ ಮಾಕೂಟ್ಟ ಬ್ರಹ್ಮಗಿರಿ ವನ್ಯಜೀವಿ ವಲಯದಲ್ಲಿ ಕೊಕ್ಕ ಕಳ್ಳಬೇಟೆ ತಡೆ ಶಿಬಿರದ ದಿನಗೂಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತಿದ್ದ ಬೆಂಗಳೂರು ದೊಮ್ಮಲೂರು ನಿವಾಸಿ ಹಾಲಿ ವಾಸ ಬಾಳಲೆ ಗಂಧದಗುಡಿ ನಿವಾಸಿಯಾಗಿದ್ದ ಮುನಿಯಪ್ಪ ಬಿ. ಎಂಬುವವರ ಪುತ್ರ ತರುಣ್ ಕುಮಾರ್ ಎಂ. ಪ್ರಾಯ ೨೩ ವರ್ಷ ಕರ್ತವ್ಯದ ವೇಳೆ ಮೃತರಾಗಿರುವ ವ್ಯಕ್ತಿ.
ಘಟನೆಯ ವಿವರ:

ತರುಣ್ ಕರ್ತವ್ಯಕ್ಕೆ ಸೇರಿ ಎರಡು ವರ್ಷಗಳಾಗಿವೆ. ಬಾಳಲೆಯ ಗ್ರಾಮದ ಗಂಧದಗುಡಿ ಎಂಬಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ತಂಗಿ ಸೇವೆಗೆ ಬರುತಿದ್ದರು ಎನ್ನಲಾಗಿದೆ. ಬ್ರಹ್ಮಗಿರಿ ವನ್ಯಜೀವಿ ಮಾಕೂಟ್ಟ ವಲಯಕ್ಕೆ ಹೊಂದಿಕೊಂಡಿರುವ ವಿ.ಭಾಡಗ ಗ್ರಾಮದ ಕೊಕ್ಕ ಎಂಬಲ್ಲಿ ಅರಣ್ಯ ಶಿಭಿರದ ವ್ಯಾಪ್ತಿಯಲ್ಲಿ ಕಾಡುಬೇಟೆ ತಡೆ ಶಿಭಿರದಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತಿದ್ದರು. ದಿನಾಂಕ ೨೩-೦೯-೨೦೨೨ ರಂದು ವಲಯ ಅರಣ್ಯಧೀಕಾರಿಗಳ ಆದೇಶದ ಮೇರೆಗೆ ಗಸ್ತು ನಿರ್ವಹಿಸಲು ಅರಣ್ಯ ರಕ್ಷಕರಾದ ಮಂಜುನಾಥ, ಮತ್ತು ದಿನಗೂಲಿ ಅರಣ್ಯ ವೀಕ್ಷಕರುಗಳಾದ ದರ್ಶನ್, ಮೋನಪ್ಪ, ಚೇತನ್ ಮತ್ತು ತರುಣ್ ಅವರೋಂದಿಗೆ ಬೆಳಿಗ್ಗೆ ೧೦-೦೦ ರ ಸಮಯದಲ್ಲಿ ಕೊಕ್ಕ ಶಿಭಿರದಿಂದ ಹೊರಡುತ್ತಾರೆ. ಕೊಕ್ಕ ಭಾಗದಲ್ಲಿ ಗಸ್ತು ನಿರ್ವಹಿಸುತಿದ್ದ ವೇಳೆ ತರುಣ್ ಅರಣ್ಯದ ಅಂಚಿನಲ್ಲಿ ಹರಿಯುತ್ತಿರುವ ಉಗ್ಗಿ ಹೊಳೆಗೆ ಕಾಲು ಜಾರಿ ಬಿದ್ದು ಕಾಣೆಯಾಗುತ್ತಾರೆ. ಈ ಸಂದರ್ಭದಲ್ಲಿ ಗಸ್ತುನಿರ್ವಹಿಸುತಿದ್ದ ಇತರರು ಹುಡುಕಾಟ ಆರಂಭಿಸುತ್ತಾರೆ. ತರುಣ್ ಅವರು ದೊರಕದಿದ್ದಾಗ ಸಂಜೆ ೦೬ ಗಂಟೆಯ ವೇಳೆಗೆ ಅರಣ್ಯಾಧೀಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಲಾಗುತ್ತದೆ. ಅರಣ್ಯಧೀಕಾರಿಗಳು ಸ್ಥಳಕ್ಕೆ ಆಗಮಿಸುತ್ತಾರೆ. ಅಧಿಕಾರಿಗಳ ಮನವಿ ಮೇರೆಗೆ ಎನ್.ಡಿ.ಆರ್.ಎಫ್ ತಂಡವು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವೆರೆಸುತ್ತಾರೆ. ಉಗ್ಗಿ ಹೊಳೆಯು ಕಿರಿದಾಗಿದ್ದರು. ಹೊಳೆಯಲ್ಲಿ ಕಿರಿದಾದ ಜಲಪಾತವಿದೆ ಮೃತರಾದ ತರುಣ್ ಅವರ ತಂದೆ ಮುನಿಯಪ್ಪ ಅವರು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ ೨೪-೦೯-೨೦೨೨ ರಂದು ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡುತ್ತಾರೆ. ಉಗ್ಗಿ ಹೊಳೆಯು ಕಿರಿದಾಗಿದ್ದರು. ಹೊಳೆಯಲ್ಲಿ ಕಿರಿದಾದ ಜಲಪಾತವಿದೆ, ಹೊಳೆಯಲ್ಲಿ ನೀರಿನ ಹರಿವು ಮೆಲ್ಬಾಗದಲ್ಲಿ ಕಡಿಮೆವಿದ್ದರು ತಳಮಟ್ಟದಲ್ಲಿ ಅತಿವೇಗವಾಗಿರುವುದರಿಂದ ಶೋಧ ಕಾರ್ಯದಲ್ಲಿ ವಿಳಂಬವಾಗುತ್ತದೆ. ಎನ್.ಡಿ.ಆರ್.ಎಫ್ ತಂಡದೊಂದಿಗೆ, ಮಂಗಳೂರಿನ ಮುಳುಗು ತಜ್ಞರ ಸಹಕಾರ ಪಡೆಯಲಾಗುತ್ತದೆ. ಸತತ ಮೂರು ದಿನಗಳ ಶೋಧ ಕಾರ್ಯಾಚರಣೆಯ ಮೂಲಕ ಇಂದು ಬೆಳಿಗ್ಗೆ ಸುಮಾರು ೮-೩೦ ಗಂಟೆಗೆ ಉಗ್ಗಿ ಹೊಳೆಯ ತಳಭಾಗದಲ್ಲಿದ್ದ ತರುಣ್ ಮೃತದೇಹವು ಪತ್ತೆಯಾಗಿದೆ. ಮೃತರ ತಂದೆ ಮುನಿಯಪ್ಪ ಅವರು ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿರುತ್ತದೆ. ತದನಂತರದಲ್ಲಿ ಮೃತ ಶರೀರವನ್ನು ಸಂಭದಿಕರಿಗೆ ಹಸ್ತಾಂತರ ಮಾಡಲಾಗಿ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ.

ಶೋಧ ಕಾರ್ಯದ ವೇಳೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಸಿಬ್ಬಂದಿಗಳು, ಎನ್.ಡಿ.ಅರ್.ಎಫ್ ತಂಡದ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

andolanait

Recent Posts

ಹುದ್ದೆಗಳ ಭರ್ತಿ ನಡೆಯಲಿ; ಯುವಶಕ್ತಿಯನ್ನು ಕಡೆಗಣಿಸದಿರಲಿ

ಸರ್ಕಾರಿ ನೌಕರಿ ಕನಸಾಗಿಯೇ ಉಳಿದಿದೆ ಎಂಬ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಧಾರವಾಡದಲ್ಲಿ ಮೊದಲ ಬಾರಿಗೆ ಸ್ಛೋಟಗೊಂಡಿದೆ. ಅದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, …

3 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಬಿಜೆಪಿ-ಜಾ.ದಳ ಪಾಳೆಯಗಳಿಗೆ  ಹರ್ಷ ತಂದಿರುವ ರಾಜ್ಯ ರಾಜಕಾರಣ

ಜಾ.ದಳ ಸಮಾವೇಶ, ಯಡಿಯೂರೋತ್ಸವದ ಮೂಲಕ ಮತದಾರರ ಗಮನ ಸೆಳೆಯಲು ಯತ್ನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬಿಜೆಪಿ-ಜಾ.ದಳ ಪಾಳೆಯಗಳಿಗೆ ಹರ್ಷ ತಂದಿರುವುದು…

15 mins ago

ರಾಜ್ಯ ಬಜೆಟ್; ಕೊಡಗು ಜಿಲ್ಲೆಯಲ್ಲಿವೆ ಹತ್ತಾರು ನಿರೀಕ್ಷೆ

ನವೀನ್ ಡಿಸೋಜ ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೬ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ಕೊಡಗು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು,…

3 hours ago

ರಾಜಕೀಯದಿಂದ ದೂರವಾಗಿ ಕೃಷಿಯಲ್ಲಿ ಸಾಧಿಸಿದ ರೈತ

ಮಹೇಂದ್ರ ಹಸಗೂಲಿ ಸೂರ್ಯಕಾಂತಿ, ಬಾಳೆ, ಆಲೂಗಡ್ಡೆ ಅರಿಶಿನ, ಈರುಳ್ಳಿ ಬೆಳೆದು ಸೂರ್ತಿಯಾದ ಎಚ್.ಎಂ.ನಂದೀಶ್ ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದ ಎಚ್.…

3 hours ago

ಬಜೆಟ್; ಚಾಮರಾಜನಗರ ಜಿಲ್ಲೆಯ ಜನರಿಗಿದೆ ಬಹಳಷ್ಟು ನಿರೀಕ್ಷೆ

ಪ್ರಸಾದ್ ಲಕ್ಕೂರು ಚಾ.ನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ, ಎಂಸಿಡಿಸಿಸಿ ಬ್ಯಾಂಕ್ ರಚನೆ ಸೇರಿ ಹಲವು ಆಶಾಭಾವನೆ ಚಾಮರಾಜನಗರ: ರಾಜ್ಯ…

3 hours ago

ಕ್ರೀಡಾಂಗಣ ಓಕೆ.. ಕೆಎಸ್‌ಐಸಿ ಜಾಗವೇ ಯಾಕೆ?

ಜಾಗದ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ರೈತರು, ಮುಖಂಡರು ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ಕೆಎಸ್‌ಐಸಿಗೆ ಸೇರಿದ ಜಾಗದಲ್ಲಿ…

4 hours ago