ಜಿಲ್ಲೆಗಳು

ವೈಯಕ್ತಿಕ ತೇಜೋವಧೆ ಬಿಟ್ಟು ಸಂಘಟನೆಯತ್ತ ಗಮನ ಹರಿಸಿ : ಗೋಪಾಲ್

ಹನೂರು :ವೈಯಕ್ತಿಕ ತೇಜೋವದೆ ಬಿಟ್ಟು ನಾವೆಲ್ಲರೂ ಒಂದು ಎಂದು ತೋರಿಸುವ ಮೂಲಕ ನಮ್ಮ ಸಂಘಟನೆ ಬೆಳೆಯಬೇಕು.ನಾವು ಕೂಡ ಈ ಸಂಘಟನೆ ಬೆಳೆಯಲು ಶಕ್ತಿ ಮೀರಿ ಸಹಕಾರ ಕೊಡುತ್ತೇನೆ ಎಂದು ಸಿ ಬಿ ಐ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಹೇಳಿದರು..

ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಛಲವಾದಿ ತಾಲೂಕು ಸಮಿತಿಯ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ಸಂಘಟನೆ ಸದಸ್ಯರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಸರ್ಕಾರಿ ನೌಕರರನ್ನು ತಾವು ಪಟ್ಟಿಯನ್ನು ತಯಾರಿಸಬೇಕು. ಕೆ ಶಿವರಾಮ್ ರವರು ಪ್ರಸ್ತುತ ಅಧ್ಯಕ್ಷರಾಗಿದ್ದು ಉದಾತ್ತ ಉದ್ದೇಶ ಇಟ್ಟುಕೊಂಡು ಮಹಾಸಭಾ ಮಾಡಿದ್ದಾರೆ.. ಬಾಬಾ ಸಾಹೇಬರ ಉದ್ದೇಶ ಏನಿತ್ತು ಅದು ದುರದೃಷ್ಟ ಅವರ ಉದ್ದೇಶ ಮಾಯಾವಾಗುತ್ತಿದೆ ಕಾರಣ ಜಾತಿವಾರು ಮಠಗಳು ಮಾಡಿ ತಮ್ಮ ಪ್ರಾಮುಖ್ಯತೆ ತೋರಿ ಸರ್ಕಾರದ ಮೇಲೆ ಪ್ರಭಾವ ಬೀರಿ ಅನುಕೂಲ ಪಡೆದುಕೊಳ್ಳುತ್ತಿದ್ದೂ ಇದು ದುರದೃಷ್ಟ ಎಂದರು.
ಈ ವ್ಯವಸ್ಥೆಯಲ್ಲಿ ಸಹಬಾಳ್ವೆಯಿಂದ ನಡೆಯಬೇಕು ಜನಸಂಖ್ಯೆಯಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರು ಸಹ ಮೀಸಲಾತಿ ಅನುಕೂಲತೆಯಿಂದ ವಂಚಿತರಾಗುತ್ತಿದ್ದೇವೆ. 101 ಜಾತಿಯಲ್ಲಿ ಎರಡು ಮೂರು ಜನಾಂಗ ಬಿಟ್ಟರೆ ಉಳಿದ ಯಾರು ಸಹ ಪರಿಶಿಷ್ಟ ಜಾತಿ ಎಂದು ಗುರುತಿಸಿಕೊಳ್ಳಲ್ಲ ಆದರೇ ಸೌಲಭ್ಯಗಳನ್ನ ಮಾತ್ರ ಹೆಚ್ಚು ಪಡೆದುಕೊಳ್ಳತ್ತಿದ್ದಾರೆ.
ದಲಿತರು ಅವರ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ ಎಂದರೆ ಹಿಂದೆ ನಮ್ಮ ಪೂರ್ವಜರು ಹಾಕಿದ ಹೆಜ್ಜೆ.. ನಮ್ಮ ಛಲವಾದಿ ಬಂದುಗಳು ಈಗೇ ಮುಂದಿನ ದಿನಗಳಲ್ಲಿ ಸಹ ಒಗ್ಗಟ್ಟಾಗಿರಬೇಕು…ನಮ್ಮ ಜನಾಂಗದ ಜನ ಯಾವ ಪಕ್ಷಕ್ಕಾದರೂ ಹೋಗಲಿ ಆದ್ರೆ ಜನಾಂಗದ ಏಳ್ಗೆಗಾಗಿ ದುಡಿಯಬೇಕು. ಶೋಷಿತ ಜನಾಂಗಕ್ಕೆ ದುಡಿದ ಶಿವರಾಮ್ ರವರು ಶಕ್ತಿಯನ್ನು ಮೀರಿ ದುಡಿದಿದ್ದಾರೆ ಎಂದರು..

ಡಿ ವೈ ಎಸ್ ಪಿ ಹೆಚ್ ಕೆ ಮಹಾನಂದ್ ಮಾತನಾಡಿ ಛಲ ಮತ್ತು ವಾದ ಎರಡು ಇದ್ದಾಗ ಮಾತ್ರ ಬಲ ಸಾಧ್ಯ..ನಮ್ಮ ಸಂಘಟನೆಯಲ್ಲಿ ಎಡ ಬಲ ಎರಡು ಸಹ ಒಂದಾಗಬೇಕು. ಅಲ್ಲದೆ ಮಹಾನ್ ವ್ಯಕ್ತಿ ಗಳನ್ನು ಒಂದು ಸಮಾಜಕ್ಕೆ ಸೀಮಿತ ಮಾಡಬಾರದು.ಸಮಾನ ಮನಸ್ಕರಾದಾಗ ಮಾತ್ರ ಅಭಿವೃದ್ಧಿ ಸಾಧ್ಯ… ಬಾಬಾ ಸಾಹೇಬರು ಕೊಟ್ಟಂತಹ ಋಣದಿಂದ ಮಾತ್ರ ಇದು ಸಾದ್ಯ ಎಂದರು.

ಇದೆ ಸಂದರ್ಭದಲ್ಲಿ ಉಪ ನೊಂದಣಾಧಿಕಾರಿ ಶಿವಶಂಕರ ಮೂರ್ತಿ, ಗುತ್ತಿಗೆದಾರ ಓಲೆ ಮಹಾದೇವ, ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಡಿ ದೇವರಾಜು, ಛಲವಾದಿ ಮಹಾಸಭಾದ ಕಾರ್ಯದರ್ಶಿ ಹಂಸರಾಜು, ಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ಕನಕರಾಜು, ಮಾದೇಶ್, ಗುಂಡಾಪುರ ಸೋಮಣ್ಣ, ಸುಶೀಲ, ಶಿವನಂಜಯ್ಯ, ಯಜಮಾನರಾದ ಸಿದ್ದರಾಜು, ಚಿಕ್ಕಣ್ಣ,ಇನ್ನಿತರರು ಉಪಸ್ಥಿತರಿದ್ದರು.

andolanait

Recent Posts

ಚಾಮರಾಜನಗರದಲ್ಲಿ ಮತ್ತೊಂದು ಹುಲಿ ಸೆರೆ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…

8 mins ago

ಓದುಗರ ಪತ್ರ: ಇಸ್ಕಾನ್ ಕೃಷ್ಣ ದೇವಾಲಯದ ಬಳಿಯಿದ್ದ ಕಸ ತೆರವು

ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…

3 hours ago

ಓದುಗರ ಪತ್ರ: ಪ್ರಮುಖ ವೃತ್ತಗಳಲ್ಲಿ ಭಿಕ್ಷುಕರ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ವೃತ್ತಗಳಾದ ಸಿದ್ದಪ್ಪ ಸ್ಕ್ವೇರ್, ಸಂಸ್ಕೃತ ಪಾಠಶಾಲೆ, ವಿ.ವಿ.ಪುರಂ, ತಾತಯ್ಯ ವೃತ್ತ ಮೊದಲಾದ ಕಡೆಗಳಲ್ಲಿ ಭಿಕ್ಷುಕರು, ಅಂಗವಿಕಲರು ಪ್ರತಿನಿತ್ಯ…

3 hours ago

ಓದುಗರ ಪತ್ರ: ರಸ್ತೆಗೆ ಡಾಂಬರೀಕರಣ ಮಾಡಿ, ಯುಜಿಡಿ ಪೈಪ್ ಬದಲಿಸಿ

ಮೈಸೂರಿನ ವೀಣೆ ಶಾಮಣ್ಣ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿದಿನವೂ ನಿವಾಸಿಗಳು ಹೊಲಸು ನೀರನ್ನು…

3 hours ago

ಓದುಗರ ಪತ್ರ: ಹೊಸ ವರ್ಷದ ಸಂಕಲ್ಪ

ಹೊಸ ವರ್ಷದ ಆಗಮನವೆಂದರೆ ಬಣ್ಣಬಣ್ಣದ ದೀಪಗಳ ಅಲಂಕಾರ, ಸಿಹಿ ವಿತರಣೆ ಅಥವಾ ಮಧ್ಯರಾತ್ರಿಯ ಸಂಭ್ರಮಾಚರಣೆಯಷ್ಟೇ ಅಲ್ಲ. ಅದು ಕಾಲ ಚಕ್ರದ…

3 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎಚ್‌ಐವಿ ಮಕ್ಕಳಿಗಾಗಿ ಉದ್ಯೋಗ ಬಿಟ್ಟ ದತ್ತಾ-ಸಂಧ್ಯಾ ದಂಪತಿ

ಪಂಜುಗಂಗೊಳ್ಳಿ  ಸಮಾಜದಿಂದ ಪರಿತ್ಯಕ್ತರಾದ ಮಕ್ಕಳ ಬಾಳಲ್ಲಿ ಬೆಳಕು ಮೂಡಿಸಿದ ಆನಂದ ಗ್ರಾಮ ಮಹಾರಾಷ್ಟ್ರದ ಬೀಡ್‌ನ ಜಿಲ್ಲಾ ಆಸ್ಪತ್ರೆಯ ರಕ್ತದ ಬ್ಯಾಂಕಿನಲ್ಲಿ…

3 hours ago