ಮೈಸೂರು : ‘ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಲ್ಲ, ಅದು ಭಾವ ಮತ್ತು ಜ್ಞಾನ ಸಂಪನ್ಮೂಲ’ ಎಂದು ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ನಗರದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ವತಿಯಿಂದ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಪ್ರಪಂಚದ ಎಲ್ಲಿಯೂ ಭಾಷೆಯ ಹಬ್ಬವನ್ನು ಇಷ್ಟು ಸಡಗರದಿಂದ, ದೊಡ್ಡ ಮಟ್ಟದಲ್ಲಿ ಕನ್ನಡಿಗರನ್ನು ಬಿಟ್ಟರೇ ಮತ್ಯಾರೂ ಆಚರಿಸುವುದಿಲ್ಲ. ನಾಡಿನ ಭಾಷೆ, ನೆಲ, ಜಲ, ಸಾಂಸ್ಕೃತಿ, ಆಚಾರ-ವಿಚಾರ ಎಲ್ಲವನ್ನು ಒಳಗೊಂಡಂತೆ ಕನ್ನಡ ನಾಡು ಸಮೃದ್ಧವಾಗಿ ಇರಬೇಕು ಎಂಬುದೇ ಕನ್ನಡ ರಾಜ್ಯೋತ್ಸವ ಆಚರಣೆಯ ಉದ್ದೇಶ’ ಎಂದರು.
‘ಜಗತ್ತಿನ ಎಲ್ಲ ಭಾಷೆಗಳನ್ನು ಪ್ರೀತಿಸುವುದನ್ನು ಕನ್ನಡಿಗರಿಂದ ನೋಡಿ ಕಲಿಯಬೇಕು. ಹಾಗೆಯೇ, ತಮ್ಮ ತಮ್ಮ ಭಾಷೆಯನ್ನು ಹೇಗೆ, ಎಷ್ಟು ಪ್ರೀತ್ರಿಸಬೇಕು ಎಂಬುದನ್ನು ಕನ್ನಡಿಗರು ಬೇರೆ ಬೇರೆ ಭಾಷೆಯವರನ್ನು ನೋಡಿ ಕಲಿಯಬೇಕು’ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಕಣಕಾರ, ಲೇಖಕ ಶ್ರೀವತ್ಸ ಜೋಶಿ, ‘ಮಾತೃ ಭಾಷೆ ಎಂಬುದು ತಾಯಿಯಿದ್ದಂತೆ. ಮಗುವಿನ ಲಾಲನೆ-ಪಾಲನೆಯಲ್ಲಿ ತಾಯಿಯ ಪಾತ್ರಯಿರುವಂತೆ, ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನದಲ್ಲಿ ಭಾಷೆಯ ಪಾತ್ರ ಸಾಕಷ್ಟು ಇದೆ’ ಎಂದರು.
ಕನ್ನಡದಲ್ಲಿ ಕಲಿತವರಿಗೆ ಕನ್ನಡದ ಬಗ್ಗೆ ಕೀಳರಿಮೆ ಇದೆ. ಇದನ್ನು ಬಿಡಬೇಕು. ಕನ್ನಡ ಅಳಿವಿನಲ್ಲಿ ಇದೆ ಎಂಬ ಮಾತುಗಳಿಗೆ ಆಸ್ಪಾದ ನೀಡದಂತೆ ಕನ್ನಡವನ್ನು ಉಳಿಸುವ, ಬಳಸುವ ಮತ್ತು ಬದುಕುವ ಕಿಚ್ಚನ್ನು ಇಟ್ಟುಕೊಳ್ಳಬೇಕು ಎಂದರು.
‘ಹಚ್ಚೋಣ ಕನ್ನಡದ ದೀಪ ಎಂದು ಹಾಡುತ್ತೇವೆ. ಕೊಚ್ಚೋಣ ಕನ್ನಡದ ಶೇಫಾ ಎಂಬಂತೆ ಆಗಬಾರದು. ಕನ್ನಡ ನಮಗೆ ವಿಶೇಷ ಗೌರವ ನೀಡಿದೆ. ಆ ಭಾಷೆಯನ್ನು ಅಗೌರವ ತೋರುವ ರೀತಿ ಭಾಷೆಯನ್ನು ಬಳಸಬಾರದು’ಎಂದು ಕಿವಿಮಾತು ಹೇಳಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ಗಣ್ಯರು ಬಹುಮಾನ ವಿತರಿಸಿದರು. ಭಾಷಾವಾರು ರಾಜ್ಯಗಳ ಹಿನ್ನೆಲೆ, ಉದ್ದೇಶ, ಇದಕ್ಕಾಗಿ ನಡೆದ ಹೋರಾಟಗಳ ಬಗ್ಗೆ ತಿಳಿಸಿಕೊಟ್ಟ ಪ್ರೊ.ಎಂ.ಕೃಷ್ಣೇಗೌಡರು ಕವಿ ಹುಯಿಲಗೋಳ ನಾರಾಯಣ ಅವರ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಹಾಡಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.
ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ರೆಕ್ಟರ್ ರೆ.ಫಾ.ಡಾ.ಬರ್ನಾರ್ಡ್ ಪ್ರಕಾಶ್ ಬಾರ್ನಿಸ್, ಕಾಲೇಜಿನ ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಲ್ಡಾನ್ಹಾ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಟಿ.ಸದೆಬೋಸ್ ಇದ್ದರು.
ಪೋಟೋ : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ವತಿಯಿಂದ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಶ್ರೀವತ್ಸ ಜೋಶಿ ಉದ್ಘಾಟಿಸಿದರು. ಪ್ರೊ.ಎಂ.ಕೃಷ್ಣೇಗೌಡ ಇತರರು ಇದ್ದರು.
ಪೋಟೋ ಬರಲಿದೆ))
ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…
ನಾಪೋಕ್ಲು : ಕಾಡಾನೆಗಳ ದಾಳಿಯಿಂದ ವಾಹನಗಳು ಜಖಂಗೊಂಡ ಘಟನೆ ಮಂಜಾಟ್ ಗಿರಿಜನ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಇಲ್ಲಿಗೆ ಸಮೀಪದ…
ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…
ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…
ನಂಜನಗೂಡು : ಬೈಕ್ ಸಮೇತ ಯುವಕ ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನ ಕೊರೆಹುಂಡಿ ಗ್ರಾಮದ ಹುಲ್ಲಹಳ್ಳಿ ನಾಲೆ ಬಳಿ ನಡೆದಿದೆ.…
ಹನೂರು : ಯಾರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಅನ್ನೋದು ಮುಖ್ಯವಲ್ಲ. ಅಭಿವೃದ್ಧಿ ಮಾಡ್ತಿದ್ದಾರಾ, ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರಾ ಅನ್ನೋದೇ…