ಜಿಲ್ಲೆಗಳು

ಶಿಕ್ಷಣದಿಂದ ಮಾತ್ರ ಬಡತನ ಮೆಟ್ಟಿ ನಿಲ್ಲಲು ಸಾಧ್ಯ : ಪ್ರತಿಬಿಂಬ ಟ್ರಸ್ಟ್ ಮುಖ್ಯಸ್ಥ ಮುರುಳಿ

ಹನೂರು : ಗ್ರಾಮೀಣ ಭಾಗದ ಮಕ್ಕಳು ಸಹ ಈಗಿನಿಂದಲೇ  ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಆ ನಿಟ್ಟಿನಲ್ಲಿ ಕಂಪ್ಯೂಟರ್ ಸದುಪಯೋಗ ಮಾಡಿಕೊಳ್ಳಿ  ಅಲ್ಲದೆ ಶಿಕ್ಷಣದಿಂದ ಮಾತ್ರ ಬಡತನ ಮೆಟ್ಟಿ ನಿಲ್ಲಲು ಸಾಧ್ಯ  ಎಂದು ಪ್ರತಿಬಿಂಬ ಟ್ರಸ್ಟ್ ನ ಮುಖ್ಯಸ್ಥರಾದ ಮುರುಳಿ ಹೇಳಿದರು..

ತಾಲ್ಲೂಕಿನ ಕುರಟ್ಟಿ ಹೊಸೂರು ಕಾಲೋನಿ ಶಾಲೆಗೆ ಉಚಿತವಾಗಿ ಕಂಪ್ಯೂಟರ್, ಹಾಗೂ ಬ್ಯಾಗ್, ಲೇಖನ ಸಾಮಾಗ್ರಿಗಳು,ಶಾಲಾ ಕಟ್ಟಡಗಳಿಗೆ ಬಣ್ಣದ ಸಾಮಗ್ರಿಗಳು  ವಿತರಣೆ ಮಾಡಿ ಮಾತನಾಡಿದರು..
ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವ ನಮಗೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಾಗಿದೆ.ಆ ನಿಟ್ಟಿನಲ್ಲಿ ಮಕ್ಕಳು ಈಗಿಂದಲೇ ಅಭ್ಯಾಸ ಮಾಡುವಂತವರಾಗಬೇಕು ಅಲ್ಲದೆ ಓದಿಗೆ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಲೇಖನ ಸಾಮಗ್ರಿಗಳು, ಬ್ಯಾಗ್ ನೀಡುತ್ತಿದ್ದು ಎಲ್ಲರೂ ಸಹ ಸದುಪಯೋಗ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಅಲ್ಲದೆ ಮಕ್ಕಳು ಕಲಿಕೆಯಲ್ಲಿ ಮುಂದೆ ಬರಲು ಶಾಲಾ ವಾತಾವರಣ ಸಹ ತುಂಬಾ ಮುಖ್ಯ ಪಾತ್ರವಹಿಸಲಿದೆ ಆ ನಿಟ್ಟಿನಲ್ಲಿ ಶಾಲೆಗೆ ತುಂಬಾ ಅಗತ್ಯವಾದ ಬಣ್ಣ ಬಳಿಯುವ ಕೆಲಸ ಸಹ ಆಗಬೇಕಿದೆ. ಅದನ್ನು ಸಹ ನಾವು ಕೊಡುತ್ತೇವೆ ಒಟ್ಟಿನಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಆಗಬೇಕು ಓದಿನಲ್ಲಿ ಮುಂದೆ ಬಂದು ತಮ್ಮ ಜೀವನ ಸುಗಮವಾಗಿ ಕಟ್ಟಿಕೊಳ್ಳಲು ಅನುಕೂಲ ಆಗಬೇಕು ಎಂದರು..
ಕುರಟ್ಟಿ ಹೊಸೂರು ಕಾಲೋನಿ ಶಾಲೆಯ ಶಿಕ್ಷಕ ಭರತ್ ಮಾತನಾಡಿ ನಮ್ಮ  ಕಾಡಂಚಿನ  ಶಾಲೆ ಗುರುತಿಸಿ ಶಾಲೆಯಲ್ಲಿನ   ಮಕ್ಕಳು  ಓದಿನಲ್ಲಿ ಮುಂದೆ ಬರಲಿ ಎಂಬ ಉದ್ದೇಶದಿಂದ ಪ್ರತಿಬಿಂಬ ಟ್ರಸ್ಟ್ ಇಂದು ಸಾಕಷ್ಟು ವಸ್ತುಗಳನ್ನು ದಾನ ನೀಡಿದೆ  ನಮ್ಮ ಕಾಡಂಚಿನ ಶಾಲೆ ಗುರುತಿಸಿದ್ದಕ್ಕಾಗಿ ಹಾಗೂ ದಾನಿಗಳಾಗಿ ಸಾಕಷ್ಟು ವಸ್ತು ನೀಡಿದ್ದಕ್ಕಾಗಿ  ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲರಿಗೂ ಶಾಲೆಯ ಪರವಾಗಿ ಅಭಿನಂದನೆಗಳು ಎಂದರು.

ಇದೆ ಸಂದರ್ಭದಲ್ಲಿ ಶಿಕ್ಷಕ ರಾಮಕೃಷ್ಣ, ರಾಜೇಂದ್ರ ಬಾಬು, ಅತಿಥಿ ಶಿಕ್ಷಕರಾದ ಮಹೇಶ್, ವಸಂತ,  ಹಾಗೂ ಪ್ರತಿಬಿಂಬ ಟ್ರಸ್ಟ್ ನ ಪದಾಧಿಕಾರಿಗಳು, ಮಕ್ಕಳು, ಪೋಷಕರು  ಉಪಸ್ಥಿತರಿದ್ದರು..

andolanait

Recent Posts

ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…

5 hours ago

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

10 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

10 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

11 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

11 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

12 hours ago