ಜಿಲ್ಲೆಗಳು

ದಸರೆ ಪಂಜಿನ ಕವಾಯತಿನ ವಿಶೇಷ ಆಕರ್ಷಣೆ ಡ್ರೋನ್‌ ಶೋ

ಮೈಸೂರು: ಆಕಾಶದಲ್ಲಿ ಹಾರಾಡುತ್ತಾ ನಾನಾ ಬಗೆಯ ಕಲಾಕೃತಿಗಳನ್ನು ರಚಿಸುವ ಡ್ರೋನ್‌ ಶೋ ಈ ಬಾರಿಯ ದಸರೆ ಪಂಜಿನ ಕವಾಯತಿನ ವಿಶೇಷ ಆಕರ್ಷಣೆಯಾಗಲಿದೆ.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಪೂರ್ವ ಭಾವಿ ಪ್ರದರ್ಶನದಲ್ಲಿ ಡ್ರೋನ್ ಶೋ ಎಲ್ಲರ ಗಮನಸೆಳೆಯಿತು. ಸಾವಿರಾರು ಡ್ರೋನ್ ಗಳು ನಿಧಾನಕ್ಕೆ ನೆಲದಿಂದ ಮೇಲಕ್ಕೇರಿ ಆಗಸದಲ್ಲಿ ತಮ್ಮ ಯೋಜಿತ ಚಲನೆಯಿಂದಲೇ ಚಿತ್ತಾಕರ್ಷಕ ಕಲಾಕೃತಿಗಳನ್ನು ರೂಪಿಸುವ ಮೂಲಕ ಗಮನ ಸೆಳೆದವು.

 

ಆರಂಭದಲ್ಲಿಯೇ “ಮೈಸೂರು ದಸರಾʼ ಎಂದು ಆಕಾಶದಲ್ಲಿ ಬೆಳಕಿನ ಅಕ್ಷರ ಲೋಕವನ್ನು ತೆರೆದಿಟ್ಟ ಡ್ರೋನ್‌ ತಂಡ ಬಳಿಕ ಮೈಸೂರು ಅರಮನೆ, ಅಂಬಾರಿ, ಗಂಢಬೇರುಂಡ, ಆನೆಗಳ ಸಾಲು…ಹೀಗೆ ಸುಮಾರು 15 ನಿಮಿಷಗಳ ಮೂಲಕ ಮೈಸೂರು ಮತ್ತು ದಸರೆ ಪರಂಪರೆ ಬಿಂಬಿಸುವ ಮೂಲಕ ನೋಡುಗರ ಗಮನ ಸೆಳೆಯಿತು. ಇದೇ ಮೊದಲ ಬಾರಿಗೆ ಡ್ರೋನ್‌ ಶೋ ಏರ್ಪಡಿಸಿದ್ದ ಕಾರಣ ಜನರು ಈ ದೃಶ್ಯಗಳನ್ನು ತಮ್ಮ ಮೊಬೈಲ್‌ ಗಳಲ್ಲಿ ಸರೆ ಹಿಡಿಯಲು ಪೈಪೋಟಿ ನಡೆಸಿದರು.

ಪ್ರತೀ ವರ್ಷ ಜನರನ್ನು ರಂಜಿಸುತ್ತಿದ್ದ ಬೈಕ್‌ ಸ್ಟಂಟ್ ಇಲ್ಲದಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾದರೂ ಡ್ರೋನ್‌ ಶೋ ಈ ಬೇಸರವನ್ನು ನೀಗಿಸುವಂತಿತ್ತು. ಉಳಿದಂತೆ
ಎದೆ ಝಲ್ಲೆನ್ನುವ ಕಸರತ್ತು, ಬೆಂಕಿಯೊಂದಿಗೆ ಸರಸಾಟ, ಅತ್ಯಾಕರ್ಷಕ ನೃತ್ಯ ವೈಭವ, ಲೇಸರ್ ಬೆಳಕಿನ ನರ್ತನ, ಬಾಣ ಬಿರುಸುಗಳ ಚಿತ್ತಾರ… ಇವೆಲ್ಲವನ್ನೂ ವಿಜಯದಶಮಿಯ ಹಿಂದಿನ ದಿನವೇ ಸಾವಿರಾರು ಜನರು ಕಣ್ತುಂಬಿಕೊಂಡರು.

ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಪ್ರದರ್ಶನ ನೆರೆದ ಸಹಸ್ರಾರು ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಿತು. ಚಿತ್ತಾಕರ್ಷಕ ಪಥ ಸಂಚನಲ ನೆರೆದಿದ್ದ ಪ್ರೇಕ್ಷಕರೆದೆಯಲ್ಲಿ ದೇಶಪ್ರೇಮ ಉಕ್ಕಿಹರಿಯುವಂತೆ ಮಾಡಿದರೆ, ಮೈಸೂರು ಅಶ್ವಾರೋಹಿ ಪೊಲೀಸ್‌ ದಳದ ಟೆಂಟ್‌ ಪೆಗ್ಗಿಂಗ್‌ ಪ್ರದರ್ಶನ ಎಲ್ಲರನ್ನೂ ಉಸಿರು ಬಿಗಿಹಿಡಿಯುವಂತೆ ಮಾಡಿತು. ನೂರಾರು ಕಲಾವಿದರು ನೃತ್ಯ ವೈಭವದ ಮೂಲಕ ಜನರಿಗೆ ಮನರಂಜನೆ ಉಣಬಡಿಸಿದರು.

ಕಾರ್ಯಕ್ರಮದ ಆರಂಭದಲ್ಲಿ 21 ಸುತ್ತು ಕುಶಾಲತೋಪು ಸಿಡಿಸಲಾಯಿತು. ಆ ಬಳಿಕ ಅಶ್ವಾರೋಹಿ ಪಡೆ, ಕೆಎಸ್ಆರ್ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳ, ಎನ್ಸಿಸಿ, ಸೇವಾದಳ ಒಳಗೊಂಡಂತೆ ನಾನಾ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡು ವಂದನೆ ಸಲ್ಲಿಸಿದರು. ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌ ಗೌರವ ವಂದನೆ ಸ್ವೀಕರಿಸಿದರು.

ಅಶ್ವಾರೋಹಿ ಪಡೆ ಸುಮಾರು ಅರ್ಧ ಗಂಟೆ ಕಾಲ ನಡೆಸಿದ ಟೆಂಟ್ ಪೆಗ್ಗಿಂಗ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ವೇಗವಾಗಿ ಕುದುರೆ ಸವಾರಿ ಮಾಡುತ್ತಾ ಬಂದು ಭರ್ಚಿಯಿಂದ ಮೇಲಕ್ಕೆತ್ತುವ ಸಾಹಸಕ್ಕೆ ಎಲ್ಲರೂ ತಲೆದೂಗಿದರು.

ಕೊನೆಯಲ್ಲಿ ಪ್ರಶಿಕ್ಷಣಾರ್ಥಿಗಳು ಪಂಜಿನ ಕವಾಯತು ಪ್ರದರ್ಶಿಸಿದರು. ‘ವೆಲ್‌ ಕಮ್ ’, ‘ಕರ್ನಾಟಕ ಪೊಲೀಸ್’, ‘ವೆಲ್ಕಂ ಟು ಆಲ್’, ‘ಜೈ ಚಾಮುಂಡಿ’ ಆಕೃತಿಗಳನ್ನು ನಿರ್ಮಿಸಿದರು. ಆಕರ್ಷಕ ಬಾಣ ಬಿರುಸುಗಳ ಚಿತ್ತಾರದೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.
ಇಂದು ರಾತ್ರಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಪಂಜಿನ ಕವಾಯತು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.

andolana

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

35 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

40 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

49 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago