ಜಿಲ್ಲೆಗಳು

ದಸರಾ ಸಡಗರ ಸರಣಿ – 1 : ಪ್ರವಾಸೋದ್ಯಮಕ್ಕೆ ದಸರಾ ಹಬ್ಬವೇ ಟಾನಿಕ್!

ಪ್ರವಾಸಿಗರ ಸ್ವರ್ಗ, ದಕ್ಷಿಣ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರವಾಣ ಕಡಿಮೆಯಾಗಿದ್ದು, ಪ್ರವಾಸೋದ್ಯಮ ಚೇತರಿಸಿ ಕೊಳ್ಳುತ್ತಿದೆ. ಏಳು-ಬೀಳುಗಳ ನಡುವೆ ಪ್ರವಾಸೋದ್ಯಮ ಅವಲಂಭಿತರು ಲಾಭದತ್ತ ಮುಖ ವಾಡಿದ್ದಾರೆ. ಪ್ರವಾಸೋದ್ಯಮ ಚೇತರಿಕೆ ಸಂಬಂಧ ಇಂದಿನಿಂದ ‘ಆಂದೋಲನ’ ದಿನಪತ್ರಿಕೆ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಲಿದೆ.

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ನಿರ್ಧಾರ; ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ

ನವೀನ್ ಡಿಸೋಜ

ಮಡಿಕೇರಿ: ಪ್ರಕೃತಿ ವಿಕೋಪ, ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿದ್ದ ಕೊಡಗು ಪ್ರವಾಸೋದ್ಯಮ ಚೇತರಿಕೆಯಲ್ಲಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆದಿದ್ದು, ಚೇತರಿಕೆುಂಲ್ಲಿರುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಟಾನಿಕ್ ಒದಗಿಸಲಿದೆ.
೨೦೧೮ರಿಂದ ಪ್ರಕೃತಿ ವಿಕೋಪ ಹಾಗೂ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಗಳಿಂದ ಕೊಡಗಿನ ಪ್ರವಾಸೋದ್ಯಮ ನಷ್ಟ ಅನುಭ ವಿಸುವಂತಾಗಿತ್ತು. ಆದರೆ, ಈ ಬಾರಿ ಬೇಸಿಗೆ ರಜೆಯಲ್ಲಿಯೇ  ಪ್ರವಾಸೋದ್ಯಮ ಚೇತರಿಕೆ ಕಂಡಿತ್ತು. ಮಳೆಯಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಲು ಕೊಂಚ ಹಿಂದೇಟು ಹಾಕಿದರೂ ಪ್ರವಾಸೋದ್ಯಮ ಲಾಭದಲ್ಲಿಯೇ ಮುಂದುವರಿದಿತ್ತು. ಈ ನಡುವೆ ಈ ಬಾರಿ ಅದ್ಧೂರಿ ದಸ ರಾ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸಿರುವುದು ಪ್ರವಾಸೋದ್ಯಮ ಅವಲಂಭಿತರಲ್ಲಿ ಭರವಸೆ ಮೂಡಿಸಿದೆ.

ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದೆ. ದಸರಾವನ್ನು ಮೈಸೂರು ಸ್ವಾಗತಿಸಿದರೆ ಮಡಿಕೇರಿ ಬೀಳ್ಕೊಡುತ್ತದೆ ಎನ್ನಲಾಗುತ್ತದೆ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂ ಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ  ರಾತ್ರಿ ನಡೆುುಂ ವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. ಹೀಗಾಗಿ ಮೈಸೂರು ದಸರಾ ನೋಡಿಕೊಂಡು ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.

ಈ ಬಾರಿ ಮಡಿಕೇರಿ ದಸರಾಕ್ಕೆ ೧ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ವಾಡಿದೆ. ಹೀಗಾಗಿ ವಿಜೃಂಭಣೆಯಿಂದ ದಸರಾ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ನಿರ್ಧರಿಸಿವೆ. ಅದ್ಧೂರಿ ದಸರಾ ಆಚರಣೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ.
ಚಲನವಲನಗಳನ್ನು ಒಳಗೊಂಡ ಕಲಾಕೃತಿಗಳ ಕಥಾ ಹಂದರವನ್ನು ಮಂಟಪಗಳಲ್ಲಿ ಅಳವಡಿಸಿ ನೋಡುಗರನ್ನು ಸೆಳೆಯಲು ದಶ ಮಂಟಪಗಳು ನಿರ್ಧರಿಸಿವೆ. ವಿಜಯದಶಮಿ ದಿನ ರಾತ್ರಿ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮಂಟಪಗಳ ಶೋಭಾ ಯಾತ್ರೆ ವೀಕ್ಷಿಸಲು ಜಿಲ್ಲೆಯ ಜನರೇ ಸಾವಿರಾರು ಸಂಖ್ಯೆಯಲ್ಲಿ ಜವಾಯಿಸುತ್ತಾರೆ. ಇದರೊಂದಿಗೆ ಪ್ರವಾಸಿಗರು ಆಗಮಿಸಲಿದ್ದು, ಪ್ರವಾಸಿಗರನ್ನು ಅವಲಂಭಿಸಿರುವ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಹೊಂದಲಾಗಿದೆ.
ಹೊಟೇಲ್, ಹೋಂಸ್ಟೆ, ರೆಸಾರ್ಟ್, ಸ್ಪ್ತ್ಯೈಸಸ್ ಮಳಿಗೆಗಳು ಸೇರಿದಂತೆ ಕೊಡಗಿನ ಆಟೋ, ಟ್ಯಾಕ್ಸಿ ಮತ್ತಿತರ ಉದ್ಯಮಗಳಿಗೂ ಪ್ರವಾಸಿಗರ ಆಗಮನದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿಲಿದೆ.


ಎಂ.ಪಿ.ಅಪ್ಪಚ್ಚು ರಂಜನ್, ಶಾಸಕರು, ಮಡಿಕೇರಿ ಕ್ಷೇತ್ರ

 

 

 

 

 

ಕಳೆದ ಬಾರಿ ದಸರಾ ಉತ್ಸವಕ್ಕೆ ೧ ಕೋಟಿ ರೂ. ಅನುದಾನ ಬಿಡುಗಡೆಾಂಗಿತ್ತು. ಅದರಲ್ಲಿ ೨೫ ಲಕ್ಷ ರೂ. ದಸರಾ ಉತ್ಸವಕ್ಕೆ ಬಳಸಿ ಉಳಿದ ೭೫ ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾಂರ್ುಕ್ಕೆ ಬಳಸಲಾಗಿತ್ತು. ಈ ಬಾರಿ ೧ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಎಲ್ಲ ಅನುದಾನವನ್ನು ದಸರಾಕ್ಕೆ ಬಳಸಲಾಗುತ್ತದೆ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು


ಮನು ಮಂಜುನಾಥ್, ಅಧ್ಯಕ್ಷರು, ದಶಮಂಟಪ ಸಮಿತಿ.

 

 

 

 

 

 

ಈ ಬಾರಿ ದಸರಾವನ್ನು ಅದ್ಧೂರಿಾಂಗಿ ಆಚರಿಸುವ ನಿಟ್ಟಿನಲ್ಲಿ ದಶಮಂಟಪಗಳು ಸಿದ್ಧತೆ ಕೈಗೊಂಡಿವೆ. ಮಂಟಪಗಳ ತೀರ್ಪುಗಾರಿಕೆಗೆ ಉತ್ತಮ ತೀರ್ಪುಗಾರರನ್ನೇ ನೇಮಿಸಿ ಪಾರದರ್ಶಕವಾಗಿ ತೀರ್ಪುಗಾರಿಕೆ ನಡೆಸಲಾಗುತ್ತದೆ. ೧ ಕೋಟಿ ರೂ. ಅನುದಾನದಲ್ಲಿ ಕರಗ ಹಾಗೂ ಮಂಟಪಗಳಿಗೆ ಸೇರಿಸಿ ೬೦ ಲಕ್ಷೃ ರೂ. ಅನುದಾನಕ್ಕೆ ದಸರಾ ಸಮಿತಿಗೆ ಮನವಿ ವಾಡಲು ಚಿಂತನೆ ನಡೆಸಲಾಗಿದೆ.

andolanait

Recent Posts

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಂಜುಂಡೇಶ್ವರ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ

ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…

2 hours ago

ಸುಂಟಿಕೊಪ್ಪ: ನೂತನ ಪೊಲೀಸ್‌ ವಸತಿ ಗೃಹ ಉದ್ಘಾಟಿಸಿದ ಸಚಿವ ಪರಮೇಶ್ವರ್‌

ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ‌ ವೆಚ್ಚದಲ್ಲಿ…

2 hours ago

ನಂಜುಂಡೇಶ್ವರನ ದೇವಸ್ಥಾನದಲ್ಲಿ ಇನ್ಮುಂದೆ ದಿನ 24 ಗಂಟೆಯೂ ಪ್ರಸಾದ ವಿತರಣೆ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…

2 hours ago

ಗುಂಡಾಲ್ ಜಲಾಶಯದಲ್ಲಿ ಹುಲಿ ಮೃತ ದೇಹ ಪತ್ತೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…

2 hours ago

ಫೆ.17ರಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್‌ ಪ್ರಮಾಣವಚನ ಸ್ವೀಕಾರ: ಪ್ರಧಾನಿ ಮೋದಿಗೆ ಆಹ್ವಾನ

ಢಾಕಾ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರು ಫೆಬ್ರವರಿ.17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ…

4 hours ago

ಮಾದಪ್ಪನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಶಿವಕುಮಾರ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ…

4 hours ago