ಜಿಲ್ಲೆಗಳು

ದಸರಾ ಅಂಗವಾಗಿ ʼಗ್ರ್ಯಾಂಡ್ ಸಿತಾರ್ ಸಿಂಫೋನಿʼ ಕಾರ್ಯಕ್ರಮ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅ.1ರಂದು ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಸಿತಾರ್ ಸಿಂಫೋನಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಂಗಳೂರಿನ ಮನೋ ಮ್ಯೂಸಿಕ್ ಲೈನ್ಸ್ ತಂಡ ಈ ವಿಶಿಷ್ಟ ಕಾರ್ಯಕ್ರಮವನ್ನು ಒಂದೂವರೆ ಗಂಟೆಯವರೆಗೆ ಪ್ರಸ್ತುತಪಡಿಸಲಿದೆ. ಸುಮಾರಾಣಿ, ಶ್ರುತಿ ಕಾಮತ್, ಜ್ಯೋತಿ ಶ್ಯಾಮ್, ಸಿ.ಎಸ್. ಸರ್ವಮಂಗಳಾ, ಹಂಸಿಣಿ ಭಾರದ್ವಾಜ್, ಎಚ್.ಪಿ. ಶ್ರೀನಿವಾಸನ್, ವಿಜಯ್ ಗೋನಾಳ ಹಾಗೂ ಋತ್ವಿಕ್‌ ರಾವ್ ಅವರು ಸಿತಾರ್ ನುಡಿಸುವರು. ಇವರಿಗೆ ಕೊಳಲಿನಲ್ಲಿ ಗಣೇಶ್, ತಬಲಾದಲ್ಲಿ ಪ್ರದ್ಯುಮ್ನ ಸೊರಬ ಹಾಗೂ ಕಾರ್ತೀಕ್ ಭಟ್ ಸಾಥ್ ನೀಡುವರು.
ಪ್ರವೀಣ್ ಷಣ್ಮುಗಂ ಅವರು ಡ್ರಮ್, ಕೀಬೋರ್ಡ್ ನಲ್ಲಿ ವೇಣುಗೋಪಾಲ್ ಸಹಕರಿಸುವರು. ಸುಮುಖ್ ರವಿಶಂಕರ್ ಅವರು ಇತರ ಲಯವಾದ್ಯಗಳನ್ನು ನುಡಿಸುವರು.
ಸಿತಾರ್ ಜೊತೆಗೆ ತಬಲಾ, ಕೊಳಲು, ಡ್ರಮ್ ಹಾಗೂ ಕೀ ಬೋರ್ಡ್ ವಾದ್ಯಗಳ‌ ಮೂಲಕ
ಶಾಸ್ತ್ರೀಯವಾಗಿ ರಾಗಗಳನ್ನು ಸಂಯೋಜಿಸಿ ಭಿನ್ನವಾದ ಸಂಗೀತ ನೀಡುವ ಮೂಲಕ ಎಲ್ಲ ವರ್ಗದ ಅದರಲ್ಲೂ ಯುವ ತಲೆಮಾರು ತಲುಪುವ ಉದ್ದೇಶ ತಂಡಕ್ಕಿದೆ.
ಈಗಾಗಲೇ ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈ ತಂಡದ್ದು.
ಸಿತಾರ್ ಸಿಂಫೋನಿಯ ರೂವಾರಿ ಸಂದೀಪ್ ವಸಿಷ್ಠ. ಅವರು ಕೊಳಲು ಹಾಗೂ ಸ್ಯಾಕ್ಸ್ ಫೋನ್ ನುಡಿಸುವ ಕಲಾವಿದರು.
ಕನ್ನಡಿಗರೇ ಇರುವ, ಎಲ್ಲ ವಯೋಮಾನದವರು ಇರುವ ಈ ತಂಡದಲ್ಲಿ ಸಿತಾರ್ ಸಂಗೀತವನ್ನು ಹೆಚ್ಚು ಜನರ ಬಳಿಗೆ ಕೊಂಡೊಯ್ಯಲು ಹಾಗೂ ಆಕರ್ಷಿಸಲು ಈ ತಂಡ ಸಜ್ಜಾಗಿದೆ.

andolanait

Recent Posts

ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡ ಮೈಸೂರಿಗರು

ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್‌ ಬ್ಯಾಂಡ್‌ನ ಸದ್ದಿನೊಂದಿಗೆ…

3 hours ago

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…

3 hours ago

ಮೈಸೂರು, ಚಾ.ನಗರ, ಮಂಡ್ಯ, ಕೊಡಗು ಎಸ್‌ಪಿಗಳ ವರ್ಗ

ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…

3 hours ago

ಕೊಡಗು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಿಂದುಮಣಿ ನೇಮಕ

ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್‌ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…

3 hours ago

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

7 hours ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

7 hours ago