ಜಿಲ್ಲೆಗಳು

ದಸರಾ ಅಂಗವಾಗಿ ʼಗ್ರ್ಯಾಂಡ್ ಸಿತಾರ್ ಸಿಂಫೋನಿʼ ಕಾರ್ಯಕ್ರಮ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅ.1ರಂದು ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಸಿತಾರ್ ಸಿಂಫೋನಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಂಗಳೂರಿನ ಮನೋ ಮ್ಯೂಸಿಕ್ ಲೈನ್ಸ್ ತಂಡ ಈ ವಿಶಿಷ್ಟ ಕಾರ್ಯಕ್ರಮವನ್ನು ಒಂದೂವರೆ ಗಂಟೆಯವರೆಗೆ ಪ್ರಸ್ತುತಪಡಿಸಲಿದೆ. ಸುಮಾರಾಣಿ, ಶ್ರುತಿ ಕಾಮತ್, ಜ್ಯೋತಿ ಶ್ಯಾಮ್, ಸಿ.ಎಸ್. ಸರ್ವಮಂಗಳಾ, ಹಂಸಿಣಿ ಭಾರದ್ವಾಜ್, ಎಚ್.ಪಿ. ಶ್ರೀನಿವಾಸನ್, ವಿಜಯ್ ಗೋನಾಳ ಹಾಗೂ ಋತ್ವಿಕ್‌ ರಾವ್ ಅವರು ಸಿತಾರ್ ನುಡಿಸುವರು. ಇವರಿಗೆ ಕೊಳಲಿನಲ್ಲಿ ಗಣೇಶ್, ತಬಲಾದಲ್ಲಿ ಪ್ರದ್ಯುಮ್ನ ಸೊರಬ ಹಾಗೂ ಕಾರ್ತೀಕ್ ಭಟ್ ಸಾಥ್ ನೀಡುವರು.
ಪ್ರವೀಣ್ ಷಣ್ಮುಗಂ ಅವರು ಡ್ರಮ್, ಕೀಬೋರ್ಡ್ ನಲ್ಲಿ ವೇಣುಗೋಪಾಲ್ ಸಹಕರಿಸುವರು. ಸುಮುಖ್ ರವಿಶಂಕರ್ ಅವರು ಇತರ ಲಯವಾದ್ಯಗಳನ್ನು ನುಡಿಸುವರು.
ಸಿತಾರ್ ಜೊತೆಗೆ ತಬಲಾ, ಕೊಳಲು, ಡ್ರಮ್ ಹಾಗೂ ಕೀ ಬೋರ್ಡ್ ವಾದ್ಯಗಳ‌ ಮೂಲಕ
ಶಾಸ್ತ್ರೀಯವಾಗಿ ರಾಗಗಳನ್ನು ಸಂಯೋಜಿಸಿ ಭಿನ್ನವಾದ ಸಂಗೀತ ನೀಡುವ ಮೂಲಕ ಎಲ್ಲ ವರ್ಗದ ಅದರಲ್ಲೂ ಯುವ ತಲೆಮಾರು ತಲುಪುವ ಉದ್ದೇಶ ತಂಡಕ್ಕಿದೆ.
ಈಗಾಗಲೇ ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈ ತಂಡದ್ದು.
ಸಿತಾರ್ ಸಿಂಫೋನಿಯ ರೂವಾರಿ ಸಂದೀಪ್ ವಸಿಷ್ಠ. ಅವರು ಕೊಳಲು ಹಾಗೂ ಸ್ಯಾಕ್ಸ್ ಫೋನ್ ನುಡಿಸುವ ಕಲಾವಿದರು.
ಕನ್ನಡಿಗರೇ ಇರುವ, ಎಲ್ಲ ವಯೋಮಾನದವರು ಇರುವ ಈ ತಂಡದಲ್ಲಿ ಸಿತಾರ್ ಸಂಗೀತವನ್ನು ಹೆಚ್ಚು ಜನರ ಬಳಿಗೆ ಕೊಂಡೊಯ್ಯಲು ಹಾಗೂ ಆಕರ್ಷಿಸಲು ಈ ತಂಡ ಸಜ್ಜಾಗಿದೆ.

andolanait

Recent Posts

ಇರಾನ್‌ ಜೊತೆ ಕದನ ವಿರಾಮ ಇಲ್ಲ: ಡೊನಾಲ್ಡ್‌ ಟ್ರಂಪ್‌ ಸ್ಪಷ್ಟನೆ

ವಾಷಿಂಗ್ಟನ್:‌ ಇರಾನ್‌ ಜೊತೆ ಕದನ ವಿರಾಮ್‌ ಮಾಡಿಕೊಳ್ಳಲು ಬಯಸಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. NATO ಮಿತ್ರರಾಷ್ಟ್ರಗಳನ್ನು…

18 mins ago

ಓದುಗರ ಪತ್ರ: ನಗುಮೊಗದ ಮೌನ ಸಾಧಕ!

ದಣಿವರಿಯದೆ ದುಡಿದಿರಿ ಆರೋಗ್ಯ ಶಿಕ್ಷಣ ಕ್ಷೇತ್ರಗಳಲಿ ಉಸಿರಾಗಿತ್ತು ನಿಮಗೆ ಸಮಾಜಸೇವೆ! ಧಿಕ್ಕರಿಸಿದಿರಿ ಮೌಢ್ಯಕಂದಾಚಾರಗಳ ಪ್ರೀತಿಸಿದಿರಿ ಎಲ್ಲರನೂ ಸಮಭಾವದಲಿ! ಮನಮಾಗಿದ ನಗುಮೊಗದ…

1 hour ago

ಓದುಗರ ಪತ್ರ: ಮಂಗನ ಕೈಗೆ ……….

ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ( ನಾಟೋ) ದೇಶಗಳ ಗುಂಪಿಗೆ ಸೇರಿದ ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮುಂತಾದ ದೇಶಗಳು ಇರಾನಿನ…

1 hour ago

ಓದುಗರ ಪತ್ರ: ಡೇಟಾ ತೆರಿಗೆ ಎಂಬ ಹೊರೆ

ಮೊಬೈಲ್ ಡೇಟಾ ಬಳಕೆಯ ಮೇಲೆ ಪ್ರತಿ ಜಿಬಿಗೆ  ತೆರಿಗೆ ವಿಧಿಸುವ ಸರ್ಕಾರದ ಪ್ರಸ್ತಾವನೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ…

1 hour ago

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ವಾಹನ ಚಾಲನೆ ಅಪಾಯ

ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೧೮ರ ಬುಧವಾರ ಆರಂಭವಾಗಿದೆ. ಅಂದು ಬಹುತೇಕ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಮವಸ್ತ್ರ…

4 hours ago

ಯುಗಾದಿ; ಹೊನ್ನೇರು ಕಟ್ಟಿ ಸಂಭ್ರಮಿಸಿದ ರೈತರು

ಭೇರ್ಯ ಮಹೇಶ್ ಕೆ.ಆರ್.ನಗರ: ಯುಗಾದಿ ಹಬ್ಬದ ಅಂಗವಾಗಿ ಕೆ.ಆರ್.ನಗರ ಮತ್ತು ಸಾಲಿ ಗ್ರಾಮ ಅವಳಿ ತಾಲ್ಲೂಕುಗಳ ಹಲವೆಡೆ ರೈತರು ಸಂಭ್ರಮದಿಂದ…

4 hours ago