ಆಂದೋಲನ ವಿಶೇಷ
ಮೈಸೂರು: ಮೈಸೂರು: ಗಂಡಾನೆ ಮರಿಗೆ ಜನ್ಮ ನೀಡಿರುವ ದಸರೆ ಆನೆ ಲಕ್ಷ್ಮಿ ಈಗ ಮೈಸೂರು ಅರಮನೆ ಆವರಣದಲ್ಲಿ ಬಾಣಂತನದ ಸಂಭ್ರಮದಲ್ಲಿದೆ. ಲಕ್ಷ್ಮಿ ಪುತ್ರನಿಗೆ ಸ್ವತ: ರಾಜವಂಶಸ್ಥೆ ಪ್ರಮೋದಾದೇವಿ ಅವರೇ “ಶ್ರೀ ದತ್ತಾತ್ತೇಯʼ ಎಂದು ನಾಮಕರಣವನ್ನೂ ಮಾಡಿದ್ದಾರೆ. ಆದರೆ ಲಕ್ಷ್ಮಿಗೂ ರಾಜಮನೆತನಕ್ಕೂ ಇರುವ ನಿಕಟ ಸಂಬಂಧದ ವಿಚಾರ ನಿಮಗೆ ಗೊತ್ತಾ ? ಮರಿಯಾಗಿದ್ದ ಈ ಆನೆಯನ್ನು ಪೋಷಿಸಿ ಬೆಳೆಸಿದ್ದು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಕೊನೆಯ ಪುತ್ರಿ ವಿಶಾಲಾಕ್ಷಿ ದೇವಿ ಅವರು. ಶ್ರೀಕಂಠದತ್ತ ಒಡೆಯರ್ ಅವರ ಕೊನೆಯ ತಂಗಿ ವಿಶಾಲಾಕ್ಷಿ ದೇವಿ ಮತ್ತವರ ಪತಿ ಗಜೇಂದ್ರ ಸಿಂಗ್ ದಂಪತಿಯ ವನ್ಯಜೀವಿ ಪ್ರೇಮ ಮೈಸೂರಿನ ಎಲ್ಲರಿಗೂ ತಿಳಿದ ವಿಚಾರ.
ಕಾಡು ಸೇರಿದ ಲಕ್ಷ್ಮಿ ಅಲ್ಲಿನ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟಪಟ್ಟಿದ್ದಳು. ನಂತರ ಆಕೆಯನ್ನು ಅರಣ್ಯ ಇಲಾಖೆ ಶಿಬಿರಕ್ಕೆ ಸೇರಿಸಲಾಗಿತ್ತು. ಮೊದಲಿನಿಂದಲೂ ಮನುಷ್ಯರ ಒಡನಾಟದಲ್ಲಿ ಬೆಳೆದ ಆಕೆಯನ್ನು ದಸರೆ ಗಜಪಡೆಗೂ ಸೇರಿಸಿಕೊಳ್ಳಲಾಗಿತ್ತು. ಈ ಬಾರಿಯೂ ಗಜ ಪಡೆಯ ಭಾಗವಾಗಲು ಬಂದ ಆಕೆ ಗರ್ಭಿಣಿಯಾಗಿರುವ ವಿಚಾರ ಅರಣ್ಯ ಇಲಾಖೆಗೆ ತಿಳಿದಿರಲಿಲ್ಲ.
ದಸರೆಯ ತಂಡದ ಭಾಗವಾಗಿ ಕಳೆದ ಒಂದು ತಿಂಗಳಿನಿಂದ ಉತ್ತಮ ಆರೈಕೆ ಪಡೆದ ಲಕ್ಷ್ಮಿ ಈಗ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಅರಮನೆಯ ಆವರಣದಲ್ಲಿಯೇ ಬಾಣಂತನದ ಆರೈಕೆ ಪಡೆಯುತ್ತಿದ್ದಾಳೆ. ಲಕ್ಷ್ಮಿಯನ್ನು ಬಾಲ್ಯದಲ್ಲಿ ಸಾಕಿ ಬೆಳೆಸಿದ ರಾಜವಂಶಸ್ಥೆ ವಿಶಾಲಾಕ್ಷಿ ಈಗ ನಮ್ಮೊಂದಿಗಿಲ್ಲ. 2018ರ ಅಕ್ಟೋಬರಿನಲ್ಲಿ ವಿಜಯ ದಶಮಿ ದಿನವೇ ಅವರು ನಿಧನರಾಗಿದ್ದರು. ಅವರು ಇದ್ದಿದ್ದರೆ ಲಕ್ಷ್ಮಿಯನ್ನು ಕಂಡು ಎಲ್ಲರಿಗಿಂತ ಹೆಚ್ಚು ಸಂಭ್ರಮಿಸುತ್ತಿದ್ದರು. ಇದೇ ನೆನಪಿನಲ್ಲಿ ಡಿಸಿಎಫ್ ಡಾ. ವಿ.ಕರಿಕಾಳನ್ ಅವರು ಲಕ್ಷ್ಮಿಗೆ ಹೆಸರಿಡುವಂತೆ ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಕೇಳಿಕೊಂಡಿದ್ದರು. ಅವರು ಅರಮನೆ ನಂಟಿರುವ ಆನೆಗೆ ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರ ನೆನಪಿನಲ್ಲಿ ʼ ಶ್ರೀ ದತ್ತಾತ್ತೇಯʼ ಎಂದು ಹೆಸರಿಟ್ಟಿದ್ದಾರೆ.
ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…
ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…
ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…
ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…
ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…
ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…