ಜಿಲ್ಲೆಗಳು

ದಲಿತರು ಹಿಂದುಳಿದವರು ಸಬಲರಾಗದಿದ್ದರೆ ದೇಶ ಪ್ರಗತಿ ಕಾಣಲ್ಲ: ಶಾಸಕ ಎನ್.ಮಹೇಶ್

ಮೈಸೂರು : ಗಾಂಧಿನಗರದ ಚಿಕ್ಕಗರಡಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಧನಶಕ್ತಿ ಕೋ ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎನ್‌  ಮಹೇಶ್  ಅವರು ಸಹಕಾರ ಕ್ಷೇತ್ರದಲ್ಲಿ ದಲಿತರು,ಹಿಂದುಳಿದ ವರ್ಗಗಳ ಜನರು ಸಕ್ರಿಯವಾಗಿ ಭಾಗಿಯಾದರೆ ಆರ್ಥಿಕವಾಗಿ ಸಬಲರಾಗಲು ನೆರವಾಗಲಿದೆ. ಸಮಾಜದ ಮನಸ್ಥಿತಿ, ಯುವಕರ ಮನಸ್ಥಿತಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಇಲ್ಲದ ಬದುಕು,ವ್ಯಕ್ತಿ ಜೀವಂತ ಶವ ಇದ್ದಾಗೆ. ಬರೀ‌ ಭಾಷಣ,ಸ್ಲೋಗನ್ ನಿಂದ ಸಾಧ್ಯವಿಲ್ಲ. ‌ಸ್ವಾಭಿಮಾನಕ್ಕೆ ಶಕ್ತಿ ಅರ್ಥ ಬರಬೇಕಾದರೆ ಆರ್ಥಿಕ ಶಕ್ತಿ ಬರಬೇಕು. ತನ್ನ ಊಟ‌ಬಟ್ಟೆ,ಮನೆ,ಮಕ್ಕಳ ಶಿಕ್ಷಣ, ಹಬ್ಬ ಹರಿದಿನವನ್ನು ನಿಭಾಯಿಸುವ ಶಕ್ತಿ ಇದ್ದರೆ ಆತ ಸ್ವಾವಲಂಬನೆ ಆಗಬೇಕು. ಅಕ್ಕಿ ಕೊಟ್ಟಿದ್ದು ಪರಾವಲಂಬಿ ಎನ್ನುತ್ತೇನೆ. ಆದರೆ ಅದಕ್ಕೆ ತಕ್ಕಂತೆ
ಮನೆ,ಊಟ ಕೊಡಿ ಎನ್ನುವ ಸ್ಥಿತಿ ಬಂದಿರುವುದು ಪರಾವಲಂಬಿ. ‌ಸ್ವಾವಲಂಬನೆ.‌ ಆರ್ಥಿಕವಾಗಿ ಸ್ವಾವಲಂಬನೆ ಹೊಂದಿದರೆ ದೇಶದ ಪ್ರಗತಿಗೆ ಕಾರಣವಾಗಲಿದೆ. ೧೯೮೦ರ ದಶಕದಲ್ಲಿ ಹೆಚ್ಚು ಗಳಗಳು,ಹೆಂಚು ಕೊಡುವುದೇ ಆಶ್ರಯ ಯೋಜನೆಯ ಕಲ್ಪನೆಯಾಗಿತ್ತು. ನನ್ನನ್ನು ಸೇರಿದಂತೆ ಅನೇಕರು ಕೊಠಡಿಯಲ್ಲಿ ‌ಹುಟ್ಟಿಲ್ಲ.ಹಾಲ್‌ನಲ್ಲಿ ಹುಟ್ಟಿಲ್ಲ. ನಿರಂತರ ಪರಾವಲಂಬಿ ಬದುಕಿಗೆ ಒಗ್ಗಿದ್ದೇವೆ. ಅದನ್ನು ಕಳಚಿ ಸ್ವಾವಲಂಬನೆ ಬದುಕಿನ ದಾರಿಯನ್ನು ಕಂಡುಕೊಳ್ಳಲು ಮುಂದಾಗಬೇಕು. ದೇಶದ ನೀತಿಗಳು ಬದಲಾವಣೆ ಆಗುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ ಸಾಕಷ್ಟು ವ್ಯವಸ್ಥೆ, ಸುಧಾರಣೆ ತರಲಾಗುತ್ತಿದೆ. ಜನರನ್ನು ಮತದಾರರೆಂದು ಪರಿಗಣಿಸದೆ ಒನ್ ನೇಷನ್ ಒನ್ ರೇಷನ್ ಎನ್ನುವ ಹೆಸರಿನಲ್ಲಿ ಗರೀಬ್ ಕಲ್ಯಾಣ್ ಯೋಜನ ಜಾರಿಗೆ ತಂದರು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಬಡವರ ಸ್ಥಿತಿ ಬದಲಿಸಬೇಕು.‌ ಸ್ವಾಭಿಮಾನ ಕೆಲವೊಮ್ಮೆ ದುರಾಭಿಮಾನಕ್ಮೆ ಕಾರಣವಾಗಲಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎನ್.ಸದಾನಂದ,ನಾಮ ನಿರ್ದೇಶಿತ ನಿರ್ದೇಶಕ ಪ್ರಭಾಕರ್ ಸಿಂಧ್ಯಾ, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ‌ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್, ಸಿಟಿ‌ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ರಾಜೇಶ್, ನಿರ್ದೇಶಕ ಸ್ವಾಮಿ, ಎಸ್ ಸಿ‌ ಮೋರ್ಚಾದ ಪರಮಾನಂದ ಹಾಜರಿದ್ದರು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

6 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

34 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago