ಜಿಲ್ಲೆಗಳು

ನಗರ ಪೊಲೀಸರಿಗೆ 4 ವರ್ಷಗಳಿಂದ ವೀಕ್ ಆಫ್ ಸಂಬಳವಿಲ್ಲ

ವಾರದ ರಜೆ ಸಿಗೋದು ಕಷ್ಟ;, ನಮಗೂ ಆರೋಗ್ಯ ಸಮಸ್ಯೆಗಳಿರುತ್ತವೆ; ಸಿಬ್ಬಂದಿ ಅಳಲು

ಬಿ.ಎನ್.ಧನಂಜಯಗೌಡ
ಮೈಸೂರು : ‘ವೀಕ್ ಆಫ್ ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಬಂದಿಲ್ಲ. ವೀಕ್ ಆಫ್ ಕೂಡ ಸರಿಯಾಗಿ ಸಿಗಲ್ಲ’
ಇದು ಮಳೆ, ಬಿಸಿಲು ಎನ್ನದೆ ಕೆಲಸ ಮಾಡುವ ನಗರದ ಪೊಲೀಸ ಸಿಬ್ಬಂದಿ ಅಳಲು. ಮನೆ, ಮಡದಿ, ಮಕ್ಕಳು, ಕುಟುಂಬದವರೊಂದಿಗಿಂತ ಜನರ ನಡುವೆ ಇದ್ದು, ನಗರದಲ್ಲಿನ ಶಾಂತಿ ಸುವ್ಯವ್ಥೆಯನ್ನು ಕಾಪಾಡುವ, ಅಪರಾಧ ತಡೆಗೆ ಶ್ರಮಿಸುವ ಆರಕ್ಷಕರಿಂದ ಇಂತಹದೊಂದು ದೂರು ಕೇಳಿ ಬಂದಿದೆ.
ಕೊರೊನಾ ಸಮಯದಲ್ಲಿ ಕೊರೊನಾ ವಾರಿಯರ್ಸ್ ರೀತಿ ಕೋವಿಡ್ ಹರಡುವಿಯನ್ನು ತಪ್ಪಿಸಲು ದುಡಿದ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸರು, ಹಗಲಿರುಳು ಎನ್ನದೇ, ಮಳೆ, ಬಿಸಿಲು ನೋಡದೆ ವರ್ಷವೀಡಿ ದುಡಿಯುವ ಪೊಲೀಸ್ ಸಿಬ್ಬಂದಿಗೆ ತಿಂಗಳಿಗೆ ನಾಲ್ಕು ವಾರದ ರಜೆಗಳು ಇವೆ. ಆದರೆ, ಇದು ಶೇ.೮೦ ರಷ್ಟು ವಾರದ ರಜೆ ನೀಡುವ ನಿಯಮ ಪಾಲನೆಯಾಗುತ್ತಿಲ್ಲ.
ವಾರದ ರಜೆ ಸಿಗೋದು ಕಷ್ಟ: ನಮಗೂ ಸಂಸಾರವಿದೆ. ಅವರೊಂದಿಗೆ ಒಂದು ದಿನವಾದರೂ ಕಳೆಯಬೇಕು ಎಂಬ ಆಸೆ ಇರುತ್ತದೆ. ಕೆಲವು ಬಾರಿ ಎಂತಹ ಒತ್ತಡವಿದ್ದರೂ, ಅನಾರೋಗ್ಯವಿದ್ದರೂ ರಜೆ ಕೇಳದೆ ಕೆಲಸ ಮಾಡಿರುತ್ತೇವೆ. ಆದರೆ, ಇಲಾಖೆಯಿಂದ ನೀಡಿರುವ ತಿಂಗಳ ನಾಲ್ಕು ವಾರದ ರಜೆ ಕೂಡ ಸರಿಯಾಗಿ ಸಿಗುವುದಿಲ್ಲ. ಈ ನಾಲ್ಕು ರಜೆಗಳ ಪೈಕಿ ಎರಡು ವಾರದ ರಜೆಗಳಿಗೆ, ಬಂದೋಬಸ್ತ್ ಮತ್ತು ಇತ್ಯಾದಿ ಕಾರಣಗಳಿಂದ ಕತ್ತರಿ ಬೀಳುತ್ತದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ನಾಲ್ಕು ವರ್ಷದ ವೀಕ್ ಆಫ್ ಸಂಬಳ ಬಂದಿಲ್ಲ : ವಾರದ ರಜೆಗಳಲ್ಲಿ ಕೆಲಸ ಮಾಡಿದರೆ. ಅದಕ್ಕೆ, ಸಂಬಳ ನೀಡಬೇಕು. ಆದರೆ, ನಗರ ಪೊಲೀಸ್ ಸಿಬ್ಬಂದಿಗೆ ನಾಲ್ಕು ವರ್ಷಗಳಿಂದ ವಾರದ ರಜೆಯ ಸಂಬಳವೇ ಬಂದಿಲ್ಲ ಎನ್ನಲಾಗಿದೆ. ಇತ್ತ ವಾರದ ರಜೆಯೂ ಸರಿಯಾಗಿ ಸಿಗಲ್ಲ. ಆ ದಿನ ಕೆಲಸ ಮಾಡಿದ ಸಂಬಳವೂ ಇಲ್ಲ ಎಂದು ಸಿಬ್ಬಂದಿ ‘ಆಂದೋಲನ’ ದಿನಪತ್ರಿಕೆಯ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.
ನಮಗೂ ಆರೋಗ್ಯ ಸಮಸ್ಯೆಗಳು ಇರುತ್ತವೆ: ಪೊಲೀಸರಾದ ಮಾತ್ರಕ್ಕೆ ನಮಗೇನು ಆರೋಗ್ಯ ಸಮಸ್ಯೆಗಳು ಇರುವುದಿಲ್ಲವೇ?. ಆದರೂ, ರಜೆಗಳನ್ನು ಕೇಳದೆ ಕೆಲಸ ಮಾಡುತ್ತೇವೆ. ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲ ಎಂದರೇ ಊರಿಗೆ ಹೋಗಿ ನೋಡಿಕೊಂಡು ಬರಲು, ಅವರನ್ನು ವೈದ್ಯರ ಬಳಿ ಕರೆದೊಯ್ಯಲು ಸಹ ನಮಗೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಒಂದು ದಿನವಾದರೂ ನಾವು ರೆಸ್ಟ್ ಮಾಡಬಾರದೇ? ಹೀಗಿರುವಾಗ ವಾರದ ರಜೆಯನ್ನು ಸಮರ್ಪಕವಾಗಿಯಾದರೂ ನೀಡಬೇಕು ಎಂಬುದು ನಮ್ಮ ಮನವಿ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ನಗರದ ಪೊಲೀಸ್ ಸಿಬ್ಬಂದಿಗಳು.



ನಾಲ್ಕು ವರ್ಷಗಳಿಂದ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳ ನೀಡಿಲ್ಲ ಎಂಬುದರ ಬಗ್ಗೆ ಗಮನಹರಿಸುವೆ. ಈ ಬಾರಿಯ ದಸರಾ ಸಮಯದಲ್ಲಿ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳವನ್ನು ನೀಡಲು ತಿಳಿಸಿದ್ದೇನೆ. ವಾರದ ರಜೆಯನ್ನು ಕಡ್ಡಾಯವಾಗಿ ನೀಡಲು ಸೂಚನೆ ನೀಡಲಾಗುವುದು. ಬಂದೋಬಸ್ತ್ ಮತ್ತು ಇತ್ಯಾದಿ ತೀರಾ ಅಗತ್ಯದ ಸಮಯದಲ್ಲಿ ಸಿಬ್ಬಂದಿ ವಾರದ ರಜೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ, ಸಂಬಳ ಪಾವತಿಸಲಾಗುವುದು. ಸಿಬ್ಬಂದಿ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು.
-ರಮೇಶ್ ಬಿ.ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು


ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಹೆಚ್ಚು ಕಂಡು ಬರುತ್ತಿದೆ. ಹಾಗಾಗಿ, ಪೊಲೀಸ ಸಿಬ್ಬಂದಿಗೂ ವಿರಾಮ ಅಗತ್ಯ. ಇಲ್ಲವಾದರೆ, ಅವರಿಗೆ ಕೆಲಸದಲ್ಲಿ ಉತ್ಸಾಹ ಬರುವುದು ಹೇಗೆ?. ಆದ್ದರಿಂದ, ಅವರಿಗೆ ವಾರದ ರಜೆಗಳನ್ನು ನೀಡುವ ವ್ಯವಸ್ಥಿತವಾಗಿ ಕೊಡಬೇಕು.
ಶಂಕರೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ

 

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

6 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

6 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

7 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

8 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

13 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

13 hours ago