ಜಿಲ್ಲೆಗಳು

ನಗರ ಪೊಲೀಸರಿಗೆ 4 ವರ್ಷಗಳಿಂದ ವೀಕ್ ಆಫ್ ಸಂಬಳವಿಲ್ಲ

ವಾರದ ರಜೆ ಸಿಗೋದು ಕಷ್ಟ;, ನಮಗೂ ಆರೋಗ್ಯ ಸಮಸ್ಯೆಗಳಿರುತ್ತವೆ; ಸಿಬ್ಬಂದಿ ಅಳಲು

ಬಿ.ಎನ್.ಧನಂಜಯಗೌಡ
ಮೈಸೂರು : ‘ವೀಕ್ ಆಫ್ ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಬಂದಿಲ್ಲ. ವೀಕ್ ಆಫ್ ಕೂಡ ಸರಿಯಾಗಿ ಸಿಗಲ್ಲ’
ಇದು ಮಳೆ, ಬಿಸಿಲು ಎನ್ನದೆ ಕೆಲಸ ಮಾಡುವ ನಗರದ ಪೊಲೀಸ ಸಿಬ್ಬಂದಿ ಅಳಲು. ಮನೆ, ಮಡದಿ, ಮಕ್ಕಳು, ಕುಟುಂಬದವರೊಂದಿಗಿಂತ ಜನರ ನಡುವೆ ಇದ್ದು, ನಗರದಲ್ಲಿನ ಶಾಂತಿ ಸುವ್ಯವ್ಥೆಯನ್ನು ಕಾಪಾಡುವ, ಅಪರಾಧ ತಡೆಗೆ ಶ್ರಮಿಸುವ ಆರಕ್ಷಕರಿಂದ ಇಂತಹದೊಂದು ದೂರು ಕೇಳಿ ಬಂದಿದೆ.
ಕೊರೊನಾ ಸಮಯದಲ್ಲಿ ಕೊರೊನಾ ವಾರಿಯರ್ಸ್ ರೀತಿ ಕೋವಿಡ್ ಹರಡುವಿಯನ್ನು ತಪ್ಪಿಸಲು ದುಡಿದ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸರು, ಹಗಲಿರುಳು ಎನ್ನದೇ, ಮಳೆ, ಬಿಸಿಲು ನೋಡದೆ ವರ್ಷವೀಡಿ ದುಡಿಯುವ ಪೊಲೀಸ್ ಸಿಬ್ಬಂದಿಗೆ ತಿಂಗಳಿಗೆ ನಾಲ್ಕು ವಾರದ ರಜೆಗಳು ಇವೆ. ಆದರೆ, ಇದು ಶೇ.೮೦ ರಷ್ಟು ವಾರದ ರಜೆ ನೀಡುವ ನಿಯಮ ಪಾಲನೆಯಾಗುತ್ತಿಲ್ಲ.
ವಾರದ ರಜೆ ಸಿಗೋದು ಕಷ್ಟ: ನಮಗೂ ಸಂಸಾರವಿದೆ. ಅವರೊಂದಿಗೆ ಒಂದು ದಿನವಾದರೂ ಕಳೆಯಬೇಕು ಎಂಬ ಆಸೆ ಇರುತ್ತದೆ. ಕೆಲವು ಬಾರಿ ಎಂತಹ ಒತ್ತಡವಿದ್ದರೂ, ಅನಾರೋಗ್ಯವಿದ್ದರೂ ರಜೆ ಕೇಳದೆ ಕೆಲಸ ಮಾಡಿರುತ್ತೇವೆ. ಆದರೆ, ಇಲಾಖೆಯಿಂದ ನೀಡಿರುವ ತಿಂಗಳ ನಾಲ್ಕು ವಾರದ ರಜೆ ಕೂಡ ಸರಿಯಾಗಿ ಸಿಗುವುದಿಲ್ಲ. ಈ ನಾಲ್ಕು ರಜೆಗಳ ಪೈಕಿ ಎರಡು ವಾರದ ರಜೆಗಳಿಗೆ, ಬಂದೋಬಸ್ತ್ ಮತ್ತು ಇತ್ಯಾದಿ ಕಾರಣಗಳಿಂದ ಕತ್ತರಿ ಬೀಳುತ್ತದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ನಾಲ್ಕು ವರ್ಷದ ವೀಕ್ ಆಫ್ ಸಂಬಳ ಬಂದಿಲ್ಲ : ವಾರದ ರಜೆಗಳಲ್ಲಿ ಕೆಲಸ ಮಾಡಿದರೆ. ಅದಕ್ಕೆ, ಸಂಬಳ ನೀಡಬೇಕು. ಆದರೆ, ನಗರ ಪೊಲೀಸ್ ಸಿಬ್ಬಂದಿಗೆ ನಾಲ್ಕು ವರ್ಷಗಳಿಂದ ವಾರದ ರಜೆಯ ಸಂಬಳವೇ ಬಂದಿಲ್ಲ ಎನ್ನಲಾಗಿದೆ. ಇತ್ತ ವಾರದ ರಜೆಯೂ ಸರಿಯಾಗಿ ಸಿಗಲ್ಲ. ಆ ದಿನ ಕೆಲಸ ಮಾಡಿದ ಸಂಬಳವೂ ಇಲ್ಲ ಎಂದು ಸಿಬ್ಬಂದಿ ‘ಆಂದೋಲನ’ ದಿನಪತ್ರಿಕೆಯ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.
ನಮಗೂ ಆರೋಗ್ಯ ಸಮಸ್ಯೆಗಳು ಇರುತ್ತವೆ: ಪೊಲೀಸರಾದ ಮಾತ್ರಕ್ಕೆ ನಮಗೇನು ಆರೋಗ್ಯ ಸಮಸ್ಯೆಗಳು ಇರುವುದಿಲ್ಲವೇ?. ಆದರೂ, ರಜೆಗಳನ್ನು ಕೇಳದೆ ಕೆಲಸ ಮಾಡುತ್ತೇವೆ. ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲ ಎಂದರೇ ಊರಿಗೆ ಹೋಗಿ ನೋಡಿಕೊಂಡು ಬರಲು, ಅವರನ್ನು ವೈದ್ಯರ ಬಳಿ ಕರೆದೊಯ್ಯಲು ಸಹ ನಮಗೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಒಂದು ದಿನವಾದರೂ ನಾವು ರೆಸ್ಟ್ ಮಾಡಬಾರದೇ? ಹೀಗಿರುವಾಗ ವಾರದ ರಜೆಯನ್ನು ಸಮರ್ಪಕವಾಗಿಯಾದರೂ ನೀಡಬೇಕು ಎಂಬುದು ನಮ್ಮ ಮನವಿ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ನಗರದ ಪೊಲೀಸ್ ಸಿಬ್ಬಂದಿಗಳು.



ನಾಲ್ಕು ವರ್ಷಗಳಿಂದ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳ ನೀಡಿಲ್ಲ ಎಂಬುದರ ಬಗ್ಗೆ ಗಮನಹರಿಸುವೆ. ಈ ಬಾರಿಯ ದಸರಾ ಸಮಯದಲ್ಲಿ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳವನ್ನು ನೀಡಲು ತಿಳಿಸಿದ್ದೇನೆ. ವಾರದ ರಜೆಯನ್ನು ಕಡ್ಡಾಯವಾಗಿ ನೀಡಲು ಸೂಚನೆ ನೀಡಲಾಗುವುದು. ಬಂದೋಬಸ್ತ್ ಮತ್ತು ಇತ್ಯಾದಿ ತೀರಾ ಅಗತ್ಯದ ಸಮಯದಲ್ಲಿ ಸಿಬ್ಬಂದಿ ವಾರದ ರಜೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ, ಸಂಬಳ ಪಾವತಿಸಲಾಗುವುದು. ಸಿಬ್ಬಂದಿ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು.
-ರಮೇಶ್ ಬಿ.ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು


ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಹೆಚ್ಚು ಕಂಡು ಬರುತ್ತಿದೆ. ಹಾಗಾಗಿ, ಪೊಲೀಸ ಸಿಬ್ಬಂದಿಗೂ ವಿರಾಮ ಅಗತ್ಯ. ಇಲ್ಲವಾದರೆ, ಅವರಿಗೆ ಕೆಲಸದಲ್ಲಿ ಉತ್ಸಾಹ ಬರುವುದು ಹೇಗೆ?. ಆದ್ದರಿಂದ, ಅವರಿಗೆ ವಾರದ ರಜೆಗಳನ್ನು ನೀಡುವ ವ್ಯವಸ್ಥಿತವಾಗಿ ಕೊಡಬೇಕು.
ಶಂಕರೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago