ಜಿಲ್ಲೆಗಳು

ನಗರ ಪೊಲೀಸರಿಗೆ 4 ವರ್ಷಗಳಿಂದ ವೀಕ್ ಆಫ್ ಸಂಬಳವಿಲ್ಲ

ವಾರದ ರಜೆ ಸಿಗೋದು ಕಷ್ಟ;, ನಮಗೂ ಆರೋಗ್ಯ ಸಮಸ್ಯೆಗಳಿರುತ್ತವೆ; ಸಿಬ್ಬಂದಿ ಅಳಲು

ಬಿ.ಎನ್.ಧನಂಜಯಗೌಡ
ಮೈಸೂರು : ‘ವೀಕ್ ಆಫ್ ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಬಂದಿಲ್ಲ. ವೀಕ್ ಆಫ್ ಕೂಡ ಸರಿಯಾಗಿ ಸಿಗಲ್ಲ’
ಇದು ಮಳೆ, ಬಿಸಿಲು ಎನ್ನದೆ ಕೆಲಸ ಮಾಡುವ ನಗರದ ಪೊಲೀಸ ಸಿಬ್ಬಂದಿ ಅಳಲು. ಮನೆ, ಮಡದಿ, ಮಕ್ಕಳು, ಕುಟುಂಬದವರೊಂದಿಗಿಂತ ಜನರ ನಡುವೆ ಇದ್ದು, ನಗರದಲ್ಲಿನ ಶಾಂತಿ ಸುವ್ಯವ್ಥೆಯನ್ನು ಕಾಪಾಡುವ, ಅಪರಾಧ ತಡೆಗೆ ಶ್ರಮಿಸುವ ಆರಕ್ಷಕರಿಂದ ಇಂತಹದೊಂದು ದೂರು ಕೇಳಿ ಬಂದಿದೆ.
ಕೊರೊನಾ ಸಮಯದಲ್ಲಿ ಕೊರೊನಾ ವಾರಿಯರ್ಸ್ ರೀತಿ ಕೋವಿಡ್ ಹರಡುವಿಯನ್ನು ತಪ್ಪಿಸಲು ದುಡಿದ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸರು, ಹಗಲಿರುಳು ಎನ್ನದೇ, ಮಳೆ, ಬಿಸಿಲು ನೋಡದೆ ವರ್ಷವೀಡಿ ದುಡಿಯುವ ಪೊಲೀಸ್ ಸಿಬ್ಬಂದಿಗೆ ತಿಂಗಳಿಗೆ ನಾಲ್ಕು ವಾರದ ರಜೆಗಳು ಇವೆ. ಆದರೆ, ಇದು ಶೇ.೮೦ ರಷ್ಟು ವಾರದ ರಜೆ ನೀಡುವ ನಿಯಮ ಪಾಲನೆಯಾಗುತ್ತಿಲ್ಲ.
ವಾರದ ರಜೆ ಸಿಗೋದು ಕಷ್ಟ: ನಮಗೂ ಸಂಸಾರವಿದೆ. ಅವರೊಂದಿಗೆ ಒಂದು ದಿನವಾದರೂ ಕಳೆಯಬೇಕು ಎಂಬ ಆಸೆ ಇರುತ್ತದೆ. ಕೆಲವು ಬಾರಿ ಎಂತಹ ಒತ್ತಡವಿದ್ದರೂ, ಅನಾರೋಗ್ಯವಿದ್ದರೂ ರಜೆ ಕೇಳದೆ ಕೆಲಸ ಮಾಡಿರುತ್ತೇವೆ. ಆದರೆ, ಇಲಾಖೆಯಿಂದ ನೀಡಿರುವ ತಿಂಗಳ ನಾಲ್ಕು ವಾರದ ರಜೆ ಕೂಡ ಸರಿಯಾಗಿ ಸಿಗುವುದಿಲ್ಲ. ಈ ನಾಲ್ಕು ರಜೆಗಳ ಪೈಕಿ ಎರಡು ವಾರದ ರಜೆಗಳಿಗೆ, ಬಂದೋಬಸ್ತ್ ಮತ್ತು ಇತ್ಯಾದಿ ಕಾರಣಗಳಿಂದ ಕತ್ತರಿ ಬೀಳುತ್ತದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ನಾಲ್ಕು ವರ್ಷದ ವೀಕ್ ಆಫ್ ಸಂಬಳ ಬಂದಿಲ್ಲ : ವಾರದ ರಜೆಗಳಲ್ಲಿ ಕೆಲಸ ಮಾಡಿದರೆ. ಅದಕ್ಕೆ, ಸಂಬಳ ನೀಡಬೇಕು. ಆದರೆ, ನಗರ ಪೊಲೀಸ್ ಸಿಬ್ಬಂದಿಗೆ ನಾಲ್ಕು ವರ್ಷಗಳಿಂದ ವಾರದ ರಜೆಯ ಸಂಬಳವೇ ಬಂದಿಲ್ಲ ಎನ್ನಲಾಗಿದೆ. ಇತ್ತ ವಾರದ ರಜೆಯೂ ಸರಿಯಾಗಿ ಸಿಗಲ್ಲ. ಆ ದಿನ ಕೆಲಸ ಮಾಡಿದ ಸಂಬಳವೂ ಇಲ್ಲ ಎಂದು ಸಿಬ್ಬಂದಿ ‘ಆಂದೋಲನ’ ದಿನಪತ್ರಿಕೆಯ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.
ನಮಗೂ ಆರೋಗ್ಯ ಸಮಸ್ಯೆಗಳು ಇರುತ್ತವೆ: ಪೊಲೀಸರಾದ ಮಾತ್ರಕ್ಕೆ ನಮಗೇನು ಆರೋಗ್ಯ ಸಮಸ್ಯೆಗಳು ಇರುವುದಿಲ್ಲವೇ?. ಆದರೂ, ರಜೆಗಳನ್ನು ಕೇಳದೆ ಕೆಲಸ ಮಾಡುತ್ತೇವೆ. ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲ ಎಂದರೇ ಊರಿಗೆ ಹೋಗಿ ನೋಡಿಕೊಂಡು ಬರಲು, ಅವರನ್ನು ವೈದ್ಯರ ಬಳಿ ಕರೆದೊಯ್ಯಲು ಸಹ ನಮಗೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಒಂದು ದಿನವಾದರೂ ನಾವು ರೆಸ್ಟ್ ಮಾಡಬಾರದೇ? ಹೀಗಿರುವಾಗ ವಾರದ ರಜೆಯನ್ನು ಸಮರ್ಪಕವಾಗಿಯಾದರೂ ನೀಡಬೇಕು ಎಂಬುದು ನಮ್ಮ ಮನವಿ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ನಗರದ ಪೊಲೀಸ್ ಸಿಬ್ಬಂದಿಗಳು.



ನಾಲ್ಕು ವರ್ಷಗಳಿಂದ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳ ನೀಡಿಲ್ಲ ಎಂಬುದರ ಬಗ್ಗೆ ಗಮನಹರಿಸುವೆ. ಈ ಬಾರಿಯ ದಸರಾ ಸಮಯದಲ್ಲಿ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳವನ್ನು ನೀಡಲು ತಿಳಿಸಿದ್ದೇನೆ. ವಾರದ ರಜೆಯನ್ನು ಕಡ್ಡಾಯವಾಗಿ ನೀಡಲು ಸೂಚನೆ ನೀಡಲಾಗುವುದು. ಬಂದೋಬಸ್ತ್ ಮತ್ತು ಇತ್ಯಾದಿ ತೀರಾ ಅಗತ್ಯದ ಸಮಯದಲ್ಲಿ ಸಿಬ್ಬಂದಿ ವಾರದ ರಜೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ, ಸಂಬಳ ಪಾವತಿಸಲಾಗುವುದು. ಸಿಬ್ಬಂದಿ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು.
-ರಮೇಶ್ ಬಿ.ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು


ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಹೆಚ್ಚು ಕಂಡು ಬರುತ್ತಿದೆ. ಹಾಗಾಗಿ, ಪೊಲೀಸ ಸಿಬ್ಬಂದಿಗೂ ವಿರಾಮ ಅಗತ್ಯ. ಇಲ್ಲವಾದರೆ, ಅವರಿಗೆ ಕೆಲಸದಲ್ಲಿ ಉತ್ಸಾಹ ಬರುವುದು ಹೇಗೆ?. ಆದ್ದರಿಂದ, ಅವರಿಗೆ ವಾರದ ರಜೆಗಳನ್ನು ನೀಡುವ ವ್ಯವಸ್ಥಿತವಾಗಿ ಕೊಡಬೇಕು.
ಶಂಕರೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ

 

andolanait

Recent Posts

ವಾಹನ ಸವಾರರ ಗಮನಕ್ಕೆ ; ಏಪ್ರಿಲ್‌ 1 ರಿಂದ ಟೋಲ್‌ಗಳಲ್ಲಿ ಇಲ್ಲ ನಗದು ಪಾವತಿ

ಹೊಸದಿಲ್ಲಿ : ಮುಂಬರುವ ಏಪ್ರಿಲ್‌ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ ಎಂದು ರಸ್ತೆ…

5 hours ago

ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಗಂಭೀರ ; ಅರಣ್ಯ ಇಲಾಖೆ ಸಿಬ್ಬಂದಿಗೂ ಗಾಯ

ಸಿದ್ದಾಪುರ : ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ತಟ್ಟಳ್ಳಿಯಲ್ಲಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ…

7 hours ago

ಫೆ.28ರಿಂದ ಪಿಯುಸಿ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿ

ಮೈಸೂರು : ಫೆ.28ರಿಂದ ಮಾ.17ರವರೆಗೆ ಮೈಸೂರು ನಗರದ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಸದರಿ ಪರೀಕ್ಷೆಗಳನ್ನು…

7 hours ago

ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ತಿ.ನರಸೀಪುರ : ತಾಲ್ಲೂಕಿನ ಕೇತಹಳ್ಳಿ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿದ್ದುದನ್ನು ಯುವಕರಿಬ್ಬರು…

7 hours ago

ಸ್ನೇಹಮಯಿ ಕೃಷ್ಣ ಮನೆಯಲ್ಲಿ ಸಿಸಿಬಿ ಪೊಲೀಸರಿಂದ ತಲಾಶ್‌ ; ಮಹತ್ವದ ದಾಖಲೆ ಲಭ್ಯ

ಮೈಸೂರು : ಈ ಹಿಂದೆ ಎಂಡಿಎ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಡಿ.ಬಿ.ನಟೇಶ್ ಅವರ ವಿರುದ್ಧ ಲಂಚ ನೀಡಿರುವ ಆರೋಪ ಹೊರಿಸಿದ್ದ…

7 hours ago

ಹುಲಿ ಕಳೇಬರ ಪತ್ತೆ ಪ್ರಕರಣ : ಓರ್ವ ಬಂಧನ

ಹನೂರು : ಇಲ್ಲಿನ ಗುಂಡಾಲ್ ಜಲಾಶಯದಲ್ಲಿ ಹುಲಿ ಕಳೇಬರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.…

7 hours ago