೧೧೨ ಜನರಿಗೆ ಸಾಗುವಳಿ ಮಂಜೂರು
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ದೊಡ್ಡಮಾರಗೌಡನಹಳ್ಳಿ -೧೬, ಕಮರಹಳ್ಳಿ-೨, ಕರಕರನಹಳ್ಳಿ ೫ ಜನ, ಯಚಲಹಳ್ಳಿ ೮ ಜನ, ಬೊಮ್ಮೇನಹಳ್ಳಿ ೧೯ ಜನ, ನಾಗವಾಲ ೧೬ ಜನ, ಚಿಕ್ಕನಹಳ್ಳಿ ೨೭ ಜನ, ರಟ್ನಹಳ್ಳಿ ೬ ಜನ, ದಡದಹಳ್ಳಿ ೩ ಜನ, ಎಸ್.ಹೆಮ್ಮನಹಳ್ಳಿ ೧ ಜನ, ಗುಂಗ್ರಾಲ್ಛತ್ರ ೪ ಜನ, ಕಲೂರು ನಾಗನಹಳ್ಳಿ ೦೫ ಜನರಿಗೆ ಒಟ್ಟು ೧೧೨ ಜನರಿಗೆ ಸಾಗುವಳಿಯನ್ನು ಇಂದು ನಡೆದ ಅಕ್ರಮ-ಸಕ್ರಮ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ನಮೂನೆ-೫೩ ಮತ್ತು ನಮೂನೆ-೫೭ ರಲ್ಲಿ ಒಟ್ಟು ೧೬೯೨ ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ೪೦೨ ಅರ್ಜಿಗಳು ಮೈಸೂರು ನಗರದಿಂದ ೧೦ ಕಿ.ಮೀ.ವ್ಯಾಪ್ತಿಯೊಳಗೆ ಬರುವುದರಿಂದ ತಿರಸ್ಕರಿಸಿದ್ದು, ಉಳಿಕೆ ೧೧೭೮ ಅರ್ಜಿಗಳ ಪೈಕಿ ೯೧೭ ಅರ್ಜಿಗಳು ಸ್ವೀಕೃತವಾಗಿದ್ದು, ಸದರಿ ಅರ್ಜಿಗಳು ಗೋಮಾಳ, ಹಿಡುವಳಿ, ಕೆರೆ/ಕಟ್ಟೆ ಜಮೀನುಗಳಿಗೆ ಸಂಬoಧಪಟ್ಟವರಿoದ. ೨೬೧ ಅರ್ಜಿಗಳು ವರದಿಗಾಗಿ ಬಾಕಿ ಇರುತ್ತವೆ ಎಂದು ತಿಳಿಸಿದ್ದಾರೆ.
ಚಿಕ್ಕನಹಳ್ಳಿ, ಮಾವಿನಹಳ್ಳಿ, ಗುಮ್ಮಚನಹಳ್ಳಿ, ಮದ್ದೂರು, ಅರಸನಕೆರೆ ಗ್ರಾಮಗಳಿಗೆ ಸಂಬoಧಿಸಿದoತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆ ಮಾಡಬೇಕಾಗಿರುವುದರಿಂದ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆ ಮಾಡಿ ವರದರಿಯನ್ನು ಡಿಸೆಂಬರ್ ತಿಂಗಳೊಳಗೆ ನೀಡಲು ಸೂಚಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರ್ ಗಿರೀಶ್, ಸದಸ್ಯರುಗಳಾದ ಹೂಟಗಳ್ಳಿ ರವಿ, ಪ್ರಮೀಳಾ ನಾಯಕ್, ಜೆ.ಪಿ.ರತ್ನಮ್ಮ, ಎ.ಡಿ.ಎಲ್.ಆರ್. ವಿವೇಕ್, ಆರ್.ಎಫ್.ಓ. ಸುರೇಂದ್ರ, ಉಪತಶೀಲ್ದಾರ್ಗಳಾದ ನಿಂಗಪ್ಪ, ಕುಬೇರ, ಲೋಕೇಶ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಮೈಸೂರು : ಕೆಎಸ್ಆರ್ಟಿಸಿ ನೌಕರರು ಮೇ 20ರಿಂದ ಅನಿಧಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ…
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಸ್ ಬಂದ್ ಆಗುವುದು ನಿಶ್ಚಿತವಾಗಿದೆ. ಸೋಮವಾರ…
ಹೊಸದಿಲ್ಲಿ: ಅಮೆರಿಕದ ನಿರ್ಬಂಧಗಳ ವಿನಾಯಿತಿಯ ಸ್ಥಿತಿಯನ್ನು ಲೆಕ್ಕಿಸದೆ ಭಾರತವು ರಷ್ಯಾದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಪೆಟ್ರೋಲಿಯಂ…
ಮೈಸೂರು : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ…
ಬೆಂಗಳೂರು : ರಾಜ್ಯದಲ್ಲಿ ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ…
ದುಬಾರೆಯಲ್ಲಿ ಆನೆ ಕಾದಾಟದ ವೇಳೆ ಮಹಿಳೆ ಸಾವು : ಈಶ್ವರ ಖಂಡ್ವೆ ಸಂತಾಪ ಬೆಂಗಳೂರು : ಕೊಡಗು ಜಿಲ್ಲೆ ದುಬಾರೆ…