ಬಂಡೀಪುರ : ಹುಲಿಯೊಂದು ಗಾಂಭೀರ್ಯದಿಂದ ಹೆಜ್ಜೆ ಇಡುವ ಪೋಟೋವೊಂದೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ಪೋಟೋವನ್ನು ಎಲ್ಲರೂ ಬಲು ಕುತೂಹಲದಿಂದ ನೋಡುತ್ತಿದ್ದಾರೆ. ಹೀಗಾಗಿ, ಈ ಪೋಟೋ ಈಗ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.
ಬೇಟೆ ಕಾಡಿನ ಜೀವನ… ಇಲ್ಲಿ ಮತ್ತೊಂದು ಪ್ರಾಣಿಯನ್ನು ತಿಂದೇ ಇನ್ನೊಂದು ಜೀವಿಗಳು ಬದುಕಬೇಕು… ಇದು ಕಾಡಿನ ಆಹಾರ ಕ್ರಮವೂ ಹೌದು. ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಅವುಗಳಲ್ಲಿ ಹುಲಿಗಳು ಕೂಡಾ ಒಂದು. ಹೊಂಚು ಹಾಕಿ ಹುಲಿಗಳು ಬೇಟೆಗೆ ನಿಂತರೆ ವಿಫಲವಾಗುವುದು ಬಹಳ ಅಪರೂಪ. ಹಾಗಂತ, ಬೇಟೆಯಾಡಲೇಬೇಕೆಂದು ಹುಲಿಗಳು ಬೇಟೆಯಾಡುವುದಿಲ್ಲ. ಹಸಿದರಷ್ಟೇ ಅವುಗಳ ಬೇಟೆ. ಇಲ್ಲದಿದ್ದರೆ ದುರ್ಬಲ ಪ್ರಾಣಿ ಪಕ್ಕದಲ್ಲಿದ್ದರೂ ಅವುಗಳು ಅದರತ್ತ ಚಿತ್ತವನ್ನೇ ಹರಿಸುವುದಿಲ್ಲ. ಅಂತಹ ಶಿಸ್ತು ಈ ಪ್ರಾಣಿಗಳಲ್ಲಿ ನೋಡಬಹುದು. ಅದಕ್ಕೆ ಸಾಕ್ಷಿಯಾದ ಪೋಟೋ ಈಗ ವೈರಲ್ ಆಗುತ್ತಿದೆ. ವನ್ಯಜೀವಿಗಳ ಬಗ್ಗೆ ಕುತೂಹಲವುಳ್ಳವರು ಈ ದೃಶ್ಯವನ್ನು ಬಲು ಆಸಕ್ತಿಯಿಂದಲೇ ನೋಡುತ್ತಿದ್ದಾರೆ. ಸಹಜವಾಗಿಯೇ ಪೋಟೋ ಎಲ್ಲರಲ್ಲೂ ಆಸಕ್ತಿ ಮೂಡಿಸಿದೆ.
ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…
ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್ಬಾರ್) ನಲ್ಲಿ ಸಂಭವಿಸಿದ ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…
ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…
೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…