ಗುಂಡ್ಲುಪೇಟೆ: ಪಟ್ಟಣದ ತಾಯಿ ಮಕ್ಕಳ ಅಸ್ಪತ್ರೆಗೆ ಗುಣಾಂಭ ಟ್ರಸ್ಟ್ ವತಿಯಿಂದ ರಾಜಮಾತೆ ಪ್ರಮೋದಾದೇವಿ ಅವರು 20 ಮಕ್ಕಳ ವಾರ್ಮರ್ ಮತ್ತು ಮಾನಿಟರ್ಗಳನ್ನು ಕೊಡುಗೆಯಾಗಿ ನೀಡಿದರು.
ನಂತರ ಮಾತನಾಡಿದ ಅವರು, ತಾಯಿ ಮಕ್ಕಳ ಅನುಕೂಲಕ್ಕಾಗಿಯೇ ನಾವು ಇ ಟ್ರಸ್ಟ್ ಮೂಲಕ ಜನನವಾದ ಮಕ್ಕಳಿಗೆ ಹಾಗೂ ತಾಯಂದಿರಿಗೆ ಅನುಕೂಲವಾಗುವ ಉಪಕರಣಗಳನ್ನು ನೀಡುತ್ತಾ ಬರುತ್ತಿದ್ದೇವೆ. ಗುಂಡ್ಲುಪೇಟೆ ಹಾಗೂ ನಮ್ಮ ಸಂಬಂಧ ಹಳೆಯದು. ಇಲ್ಲಿನ ಸರ್ಕಾರಿ ಅಸ್ಪತ್ರೆಗೆ ಅನುಕೂಲವಾಗಲಿ ಎಂದು ಇವುಗಳನ್ನು ನೀಡುತ್ತಿದ್ದೇವೆ ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಶಾಸಕ ಗಣೇಶ್ ಪ್ರಸಾದ್ ಮಾತನಾಗಿ, ರಾಜಮಾತೆಯವರು ನಮ್ಮ ತಾಲ್ಲೂಕನ್ನು ಗುರುತಿಸಿ ಮಕ್ಕಳಿಗೆ ಅನುಕೂಲವಾಗಲಿ ಎಂದು ವಾರ್ಮರ್ ಮಾನಿಟರ್ ನೀಡಿದ್ದಾರೆ. ಇತಿಹಾಸ ಓದಿದಾಗ ರಾಜರು ಒಂದು ಜಾಗಕ್ಕೆ ಸೀಮಿತವಾಗಿಲ್ಲ. ಹಾಗಾಗಿ ಇಂದಿಗೂ ಅವರ ಸೇವಾ ಕಾರ್ಯ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಅವರು ಸಹಕಾರ ನೀಡಲಿದ್ದಾರೆ. ಜೊತೆಗೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಎಚ್ ಎಸ್ ನಂಜಪ್ಪ, ಪುರಸಭೆ ಅಧ್ಯಕ್ಷ ಮಧುಸೂದನ್, ತಾಲ್ಲೂಕು ಆರೋಗ್ಯಾಧಿಕಾರಿ ಅಲೀಂ ಪಾಷ, ಅಸ್ಪತ್ರೆ ಆಡಳಿತಾಧಿಕಾರಿ ಡಾ.ಮಂಜುನಾಥ್, ಪುರಸಭೆ ಸದಸ್ಯರು, ವೈದ್ಯರುಗಳು ಸೇರಿದಂತೆ ಹಲವಾರು ಸಾರ್ವಜನಿಕರು ಹಾಜರಿದ್ದರು.
ಹನೂರು : ಕಾವೇರಿ ವನ್ಯಜೀವಿಧಾಮದ ಹೊಲೆಮುರಿದಟ್ಟಿ ಕರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಶೂಟ್ಔಟ್ ನಡೆದ ಸ್ಥಳಕ್ಕೆ ಪ್ರಕರಣದ ಪ್ರಮುಖ ಸಾಕ್ಷಿ…
ಸಿಎಂ ಭೇಟಿಯಾಗಿ ಚರ್ಚೆ ; ಖಚಿತಪಡಿಸದ ಕಾಂಗ್ರೆಸ್ ನಾಯಕರು ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕ್ರೇಜಿಸ್ಟಾರ್…
ಸಚಿವರಾದ ಕೆಲವೇ ದಿನಗಳಲ್ಲಿ ಸಂಪುಟದಿಂದ ನಾಗೇಂದ್ರ ಹೊರಕ್ಕೆ ಬೆಂಗಳೂರು: ಮಾಜಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್…
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ಸಾವಿನ ಸಂಖ್ಯೆ 682ಕ್ಕೆ ಏರಿಕೆಯಾಗಿದೆ. 2400ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಇದುವರೆಗೂ 4400ಕ್ಕೂ…
ನವದೆಹಲಿ: ದೇಶವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಿ 'ವಿಕಸಿತ ಭಾರತ'ವಾಗಿ ರೂಪುಗೊಳ್ಳಬೇಕಾದರೆ, ಯುವ ಜನತೆ ಮಾದಕ ವಸ್ತುಗಳ ಪಿಡುಗಿನಿಂದ…
ಮೈಸೂರು: ಮೊದಲ ಹಂತದಲ್ಲಿ ಆಗಮಿಸಿರುವ ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದೆ. ಶ್ರೀಕಂಠ ಆನೆ ಹೆಚ್ಚು ತೂಕ ಹೊಂದಿದೆ. ಆದರೆ…