ಚಾಮರಾಜನಗರ

ಚಾ.ನಗರ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ: ತಾಲೂಕಿನ ಸಂತೆಮರಹಳ್ಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 8 ಅಂಗನವಾಡಿ ಕಾರ್ಯಕರ್ತೆ ಹಾಗೂ 19 ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು  ಇಲಾಖಾ ವೆಬ್ ಸೈಟ್  https://karnemakaone.kar.nic.in/abcd/‌ ನಲ್ಲಿ ಫೆಬ್ರವರಿ 7 ರೊಳಗೆ ಸಲ್ಲಿಸಬೇಕು.  ಆನ್‌ಲೈನ್ ಮೂಲಕವೇ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಇತರೇ ಯಾವುದೇ ಮೂಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ.

ಒಬ್ಬರೇ ಅಭ್ಯರ್ಥಿ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ  ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಯ ಕುಂಟಗುಡಿ ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ದೇಮಹಳ್ಳಿ ಗ್ರಾಮಪಂಚಾಯಿತಿಯ ಹೆಬ್ಬಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಬಿ.ಎಂ.ಕೆ ಹುಂಡಿ ಅಂಗನವಾಡಿ ಕೇಂದ್ರ (ಇತರೆ), ಕೆಂಪನಪುರ ಗ್ರಾಮಪಂಚಾಯಿತಿಯ ಕೆಂಪನಪುರ ಕೇಂದ್ರ-೪ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಇರಸವಾಡಿ ಗ್ರಾಮಪಂಚಾಯಿತಿಯ ಕಳ್ಳಿಪುರ ಅಂಗನವಾಡಿ ಕೇಂದ್ರ (ಇತರೆ), ಭೋಗಾಪುರ ಗ್ರಾಮಪಂಚಾಯಿತಿಯ ಕಸ್ತೂರು ಅಂಗನವಾಡಿ ಕೇಂದ್ರ (ಇತರೆ), ಕಾಗಲವಾಡಿ ಗ್ರಾಮ ಪಂಚಾಯಿತಿಯ ಕಾಗಲವಾಡಿಮೋಳೆ-೧ನೇ ಅಂಗನವಾಡಿ ಕೇಂದ್ರ (ಇತರೆ), ಆಲೂರು ಗ್ರಾಮಪಂಚಾಯಿತಿಯ ಬಸಪನಪಾಳ್ಯ -೨ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಮಾದಪುರ ಗ್ರಾಮಪಂಚಾಯಿತಿಯ ಕಾಡಹಳ್ಳಿ-೨ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಇರಸವಾಡಿ ಗ್ರಾಮಪಂಚಾಯಿತಿಯ ಸುತ್ತೂರು ೩ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಗಂಗವಾಡಿ-೧ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಜ್ಯೋತಿಗೌಡನಪುರ ಗ್ರಾಮಪಂಚಾಯಿತಿಯ ನಲ್ಲೂರು ೧ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಕುರುಬರಹುಂಡಿ (ಇತರೆ), ದೇಮಳ್ಳಿ ಗ್ರಾಮಪಂಚಾಯಿತಿಯ ಮೂಡಲ ಅಗ್ರಹಾರ ೨ನೇ ಅಂಗನವಾಡಿ ಕೇಂದ್ರ (ಇತರೆ ೩ನೆ ಬಾರಿ), ಹೊಂಗನೂರು ಗ್ರಾಮಪಂಚಾಯಿತಿಯ ಹೊಂಗನೂರು ೭ನೇ ಅಂಗನವಾಡಿ ಕೇಂದ್ರ (ಇತರೆ), ಕೆಂಪನಪುರ ಗ್ರಾಮ ಪಂಚಾಯಿತಿಯ ಚುಂಗಡಿಪುರ ಅಂಗನವಾಡಿ ಕೇಂದ್ರ (ಇತರೆ), ಮಸಣಾಪುರ ಗ್ರಾಮಪಂಚಾಯಿತಿಯ ಚಾಟೀಪುರ ೩ನೇ ಅಂಗನವಾಡಿ ಕೇಂದ್ರ (ಇತರೆ), ನಾಗವಳ್ಳಿ ಗ್ರಾಮಪಂಚಾಯಿತಿಯ ಪುಟ್ಟನಪುರ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಬಿಎಂಕೆ ಹುಂಡಿ ಅಂಗನವಾಡಿ ಕೇಂದ್ರ (ಇತರೆ), ಗಣಿಗನೂರು ೧ನೇ ಅಂಗನವಾಡಿ ಕೇಂದ್ರ (ಇತರೆ), ಬಾಗಳಿ ಗ್ರಾಮಪಂಚಾಯಿತಿಯ ಬಾಗಳಿ-೪ ಅಂಗನವಾಡಿ ಕೇಂದ್ರ (ಇತರೆ), ಬದನಗುಪ್ಪೆ ಗ್ರಾಮಪಂಚಾಯಿತಿಯ ಬದನಗುಪ್ಪೆ-೨ನೇ ಅಂಗನವಾಡಿ ಕೇಂದ್ರ (ಇತರೆ), ಮಂಗಲ ಗ್ರಾಮಪಂಚಾಯಿತಿಯ ಹುಲ್ಲೇಪುರ ಅಂಗನವಾಡಿ ಕೇಂದ್ರ (ಇತರೆ), ಹೆಗ್ಗೋಠಾರ ಗ್ರಾಮಪಂಚಾಯಿತಿಯ ಪಣ್ಯದಹುಂಡಿ ಅಂಗನವಾಡಿ ಕೇಂದ್ರ (ಇತರೆ), ನವಿಲೂರು ಗ್ರಾಮಪಂಚಾಯಿತಿಯ ಸೊತ್ತನಹುಂಡಿ ಅಂಗನವಾಡಿ ಕೇಂದ್ರ (ಇತರೆ), ಭೋಗಾಪುರ ಗ್ರಾಮಪಂಚಾಯಿತಿಯ ಕೆ.ಮೂಕಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ಆಲೂರು ಗ್ರಾಮಪಂಚಾಯಿತಿಯ ಲಿಂಗರಾಜಪುರ ಅಂಗನವಾಡಿ ಕೇಂದ್ರ (ಇತರೆ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

೧೯ ರಿಂದ ೩೫ ವಯೋಮಿತಿಯೊಳಗಿನ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.  ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಂತೇಮರಹಳ್ಳಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಸಿಎಂ ಬದಲಾವಣೆ ಸಮಯ ಬಂದಿದೆ: ವಿಜಯೇಂದ್ರ

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾಗುವ ಸಮಯ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಇಂದು…

7 mins ago

ಸುತ್ತೂರು ಶಾಖಾ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಇಂದು ಬೆಳಿಗ್ಗೆ ಮಠಕ್ಕೆ…

33 mins ago

ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ಸಾವು

ಪಾಂಡವಪುರ: ಪಾಂಡವಪುರ ತಾಲ್ಲೂಕಿನ ಕೆ.ಆರ್.ಎಸ್ ಹಿನ್ನೀರಿನಲ್ಲಿ ಬೋಟಿಂಗ್ ವೇಳೆ ಗಾಳಿಯ ಹೊಡೆತಕ್ಕೆ ಸಿಲುಕಿ ಬೋಟ್ ಮೊಗಚಿ ಕೇರಳ ಮೂಲದ ಇಬ್ಬರು…

41 mins ago

ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಕುಸಿದು ದುರಂತ ಪ್ರಕರಣ: ಇಬ್ಬರು ಅಧಿಕಾರಿಗಳು ಸಸ್ಪೆಂಡ್‌

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಗೆ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಕುಸಿದು ಏಳು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ…

2 hours ago

ಹಾಸನ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ: ಎಕರೆಗಟ್ಟಲೇ ಬಾಳೆ ಬೆಳೆ ನಾಶ

ಹಾಸನ: ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಗೆ ಲಕ್ಷಾಂತರ ರೂ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. ಅರಕಲಗೂಡು ತಾಲ್ಲೂಕಿನ…

3 hours ago

ಗಂಡು ಮಗುವಿಗೆ ಜನ್ಮ ನೀಡಿದ ಡಾಲಿ ಧನಂಜಯ್ ಪತ್ನಿ ಧನ್ಯತಾ

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಸಿಹಿ ಸುದ್ದಿಯನ್ನು ಡಾಲಿ ಧನಂಜಯ್‌…

3 hours ago