ಜಿಲ್ಲೆಗಳು

ಚಾ.ನಗರದಲ್ಲಿ ಸೊನೆ ಅವರೆ ಘಮಘಮ!

ಮಾರುಕಟ್ಟೆಗೆ ಬಂದಿರುವ ಅವರೆ; ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ಕಿಲೋಗೆ 80 ರೂ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಜಿಲ್ಲೆಯಲ್ಲಿ ಚುಮು ಚುಮು ಚಳಿಯೊಂದಿಗೆ ಸೊನೆ ಅವರೆಕಾಯಿಯ ಘಮಲೂ ಪ್ರಾರಂಭವಾಗಿ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಾರಂಭಿಸಿದೆ.
ಮಂಗಳವಾರ ಷಷ್ಠಿ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾದಿನ ನಗರದಲ್ಲಿ ಅವರೆಕಾಯಿ ಕಿಲೋಗೆ ೮೦ರೂ.ಗೆ ಮಾರಾಟವಾಯಿತು. ಜನರ ಪಾಲಿಗೆ ಈ ಬೆಲೆ ತುಟ್ಟಿ! ಅಲ್ಲಲ್ಲಿ ಕೊಯ್ಲು ಶುರುವಾಗಿ ಅವರೆಕಾಯಿ ಈಗಷ್ಟೇ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೊಯ್ಲು ಸಾರ್ವತ್ರಿಕವಾಗಿ ನಡೆಯತೊಡಗಿ ಎಲ್ಲೆಡೆಯಿಂದ ಅವರೆ ಬರತೊಡಗಿದರೆ ಬೆಲೆ ದುಬಾರಿ ಇರಲ್ಲ. ನವೆಂಬರ್ ಕೊನೆಯಿಂದ ಜನವರಿ ಅಂತ್ಯದವರೆಗೆ ಅವರೆಕಾಯಿ ಸೀಜನ್ ಇರುವುದಾಗಿ ವ್ಯಾಪಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಮಳೆ ಆಶ್ರಿತ ಖುಷ್ಕಿ ಜಮೀನಿನಲ್ಲಿ ಅಧಿಕವಾಗಿ ಅವರೆ ಬೆಳೆಯಲಾಗುತ್ತದೆ. ನೀರಾವರಿಯಲ್ಲಿ ಬೆಳೆದಿದ್ದಕ್ಕಿಂತ ಖುಷ್ಕಿ ಜಮೀನಿನಲ್ಲಿ ಬೆಳೆದ ಅವರೆೆಯೇ ಹೆಚ್ಚು ಸ್ವಾದಿಷ್ಟ. ಮಂಜಿನ ಹನಿಯಿಂದ ತೊಯ್ದು ಘಮಘಮಿಸುವ ಸೊನೆ ಸೊಗಡಿನ ಅವರೆ ಬಹಳ ರುಚಿಕರವಾಗಿರುತ್ತದೆ. ಯಾವುದರಲ್ಲಿ ಈ ಸೊಗಡು ಇರುವುದಿಲ್ಲವೋ ಅದು ಅಷ್ಟೊಂದು ರುಚಿಯಾಗಿರುವುದಿಲ್ಲ ಎಂದು ಗ್ರಾಹಕ ಮಲ್ಲು ಹೇಳಿದರು.
ಎಲ್ಲಾ ಕಾಲದಲ್ಲಿ ಹೈಬ್ರಿಡ್ ಅವರೆ ಸಿಗುತ್ತದೆ. ಅದರಲ್ಲಿ ಅವರೆ ಪರಿಮಳವೇ ಇರುವುದಿಲ್ಲ. ಹೀಗಾಗಿ ಚಳಿಗಾಲದ ಅವರೆಕಾಯಿಯನ್ನು ಜನ ಇಷ್ಟಪಡುವುದಾಗಿ ಹೇಳುತ್ತಾರೆ ಅವರು.
ಹನೂರು, ಮಲೆಮಹದೇಶ್ವರಬೆಟ್ಟ, ರಾಮಾಪುರ, ಲೊಕ್ಕನಹಳ್ಳಿ ಹಾಗೂ ಕೊಳ್ಳೇಗಾಲ ಭಾಗದಲ್ಲಿ ಅವರೆಕಾಯಿಯನ್ನು ಹೆಚ್ಚು ಬೆಳೆಲಾಗುತ್ತದೆ. ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕುಗಳಲ್ಲೂ ಈ ಬೆಳೆ ಇದ್ದು ಈಗೀಗ ಕೊಯ್ಲಿಗೆ ಬರತೊಡಗಿದೆ. ಅನೇಕ ಕಡೆ ಇನ್ನೂ ಹೂ ಹಂತದಲ್ಲೇ ಇದೆ. ಟಿ.ನರಸೀಪುರ, ಹುಣಸೂರು ಕಡೆಯಿಂದಲೂ ನಗರದ ಮಾರುಕಟ್ಟೆಗೆ ಅವರೆಕಾಯಿ ಬರುತ್ತಿದೆ.
ಸಂಕ್ರಾಂತಿವರೆಗೂ ಅಡುಗೆ ಮನೆಗಳಲ್ಲಿ ಅವರೆಕಾಯಯದೇ ಕಾರುಬಾರು. ಇದು ದೇಹದ ಉಷ್ಣತೆ ಹೆಚ್ಚಿಸಲಿದೆ. ಹೀಗಾಗಿ ಚಳಿಯ ಋತುಮಾನದ ಬೆಳೆಗಳಲ್ಲಿ ಒಂದಾದ ಅವರೆಯನ್ನು ತಿಂಡಿ, ಊಟಕ್ಕೆ ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಲಾಗುತ್ತದೆ ಎಂದು ಪಾಕಪ್ರವೀಣರೊಬ್ಬರು ಮಾಹಿತಿ ನೀಡಿದರು.


ತಳ್ಳುಗಾಡಿಗಳಲ್ಲಿ ಮಾರಾಟ, ಬೇಡಿಕೆ
ಹೊರಗಿನಿಂದ ಮತ್ತು ಸ್ಥಳೀಯವಾಗಿ ಮಾರುಕಟ್ಟೆಗೆ ಬಂದಿರುವ ಅವರೆಕಾಯಿಯನ್ನು ರಸ್ತೆಬದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಯವರು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಷಷ್ಠಿ ಹಬ್ಬದಂದು ಬೆಳಿಗ್ಗೆ ಅವರೆಕಾಯಿ ಉಪ್ಪಿಟ್ಟು, ಕೋಸಂಬರಿ, ಪಂಚಾಮೃತ ಮಾಡಲಾಗುತ್ತದೆ. ಅಲ್ಲದೆ ಅವರೆ ಸಾಂಬಾರು ಮಾಡಿ ಸವಿಯಲಾಗುತ್ತದೆ. ಹೀಗಾಗಿ ಅವರೆಕಾಯಿಗೆ ಬೇಡಿಕೆ ಕಂಡುಬಂದಿತು.


ಜಿಲ್ಲೆಯಲ್ಲಿ ೧೫೧೦ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಅವರೆ ಬೆಳೆ ಬೆಳೆಯಲಾಗಿದ್ದು ಅಲ್ಲಲ್ಲಿ ಈಗ ಕೊಯ್ಲು ಪ್ರಾರಂಭವಾಗಿದೆ. ಕೊಳ್ಳೇಗಾಲ, ಹನೂರು ತಾಲ್ಲೂಕಿನಲ್ಲಿ ಹೆಚ್ಚು ಬೆಳೆ ಇದೆ. ಕಳೆದ ಮುಂಗಾರಿಗೆ ಹೋಲಿಸಿದರೆ ಈ ಬಾರಿ ಅವರೆ ಬೆಳೆ ಜಾಸ್ತಿ ಇದೆ.
-ಕೆ.ಮಧುಸೂದನ್, ಜಂಟಿ ಕೃಷಿ ನಿರ್ದೇಶಕರು.

andolanait

Recent Posts

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

2 mins ago

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

24 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

24 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

24 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

24 hours ago