ಜಿಲ್ಲೆಗಳು

‘ಕ್ಯಾಮರಾ / ಕುವೆಂಪು: ರಸಖುಷಿಗೆ ಸಲ್ಲಿಸುವ ಕಾಣಿಕೆ’

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ

ಮೈಸೂರು: ಕ್ಯಾಮರಾ / ಕುವೆಂಪು ಪುಸ್ತಕದಲ್ಲಿ ಕೃಪಾಕರ ಮತ್ತು ಸೇನಾನಿಯವರು ಚಿತ್ರಗಳಿಗೆ ಉತ್ತಮ ಶೀರ್ಷಿಕೆಯನ್ನು ನೀಡಿದ್ದು, ಕಲಾವಿದ ಮತ್ತು ಕವಿ ಎಂಬ ಇಬ್ಬರು ಭಾವ ಜೀವಿಗಳು ಒಂದೇ ಎನಿಸುತ್ತದೆ. ಅಷ್ಟರ ಮಟ್ಟಿಗೆ ಚಿತ್ರಗಳ ಜೊತೆ ಮಾತನಾಡಿರುವುದು ಈ ಪುಸ್ತಕದ ವಿಶೇಷವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ವಿಶ್ಲೇಷಿಸಿದರು.


ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿರುವ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕ್ಯಾಮರಾ / ಕುವೆಂಪು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಯಾಮರಾ / ಕುವೆಂಪು ಪುಸ್ತಕದ ಮೊದಲ ಪುಟ ನೋಡಿದರೆ ಪುಸ್ತಕದ ಮಹತ್ವ ತಿಳಿದು ಬಿಡುತ್ತದೆ. ಅಲ್ಲಿ ಕುವೆಂಪು ಅವರು ಸಿಕ್ಕುಕಟ್ಟಿದ ಕೈ ಅಲ್ಲಿನ ಶೀರ್ಷಿಕೆಗಳು ಅದ್ಬುತವಾಗಿವೆ. ಬಹುಶಃ ನಾನು ಒಂದೇ ಸುತ್ತಿನಲ್ಲಿ ಓದಿದ ಪುಸ್ತಕವೆಂದರೆ ಈ ಪುಸ್ತಕ ಮಾತ್ರ ಎಂದರು.
ಕುವೆಂಪುರವರ ಕೆಲವೊಂದು ಸಂದರ್ಭಗಳನ್ನು ಸುಂದರವಾಗಿ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ. ಕುವೆಂಪು ಅವರು ಮುಖ್ಯವಾಗಿ ಶಿಸ್ತು ಹಾಗೂ ಸಮಯ ಪಾಲನೆಗೆ ಮಹತ್ವ ನೀಡಿದವರು. ಬರೆದ ಹಾಗೆಯೇ ಬದುಕಿದವರು ಎಂದು ಖಚಿತವಾಗಿ ಹೇಳಬಹುದಾಗಿದೆ. ಅಂತಹ ದಾರ್ಶನಿಕ ಕವಿಯ ಭಾವನೆ ಮತ್ತು ಸಂವೇದನೆಗಳು ಚಿತ್ರದಲ್ಲಿವೆ. ಇಂತಹ ಒಂದು ವಿಶಿಷ್ಟವಾದ ಪುಸ್ತಕ ಬಹುಶಃ ಕನ್ನಡ ಮತ್ತು ಕುವೆಂಪುರವರಿಗೆ ಸಲ್ಲಿಬಹುದಾದ ಉತ್ತಮ ಕಾಣಿಕೆಯಾಗಿದೆ ಎಂದು ಬಣ್ಣಿಸಿದರು.
ನಟ ಪ್ರಕಾಶ್ ರಾಜ್ ಮಾತನಾಡಿ, ಕ್ಯಾಮರಾ / ಕುವೆಂಪು ಎಂಬುವುದರೊಂದಿಗೆ ಓದುಗ / ಕೃಪಾಕರ ಸೇನಾನಿ ಎಂಬಂತೆಯೂ ಮೂಡಿಬಂದಿದೆ. ಕಾವ್ಯ, ಸಾಹಿತ್ಯ, ಕಾದಂಬರಿ, ಕಥೆಯನ್ನು ಎಲ್ಲ ಪ್ರಕಾರಗಳೊಂದಿಗೆ ಈ ಪುಸ್ತಕ ವಿಭಿನ್ನವೆನಿಸಿತ್ತು. ಇವರು ನೋಡಿದ ಕಣ್ಣುಗಳು ನನಗೆ ಬಹಳ ಆಸಕ್ತಿ ಎನಿಸಿತ್ತು. ಪ್ರಸ್ತುತ ಒಂದು ವಿಷಯವನ್ನು ಗ್ರಹಿಸುವ, ಜೀರ್ಣಿಸಿ ಕೊಳ್ಳುವ, ಅರ್ಥೈಸಿಕೊಳ್ಳುವ, ನೋಡುವ ದೃಷ್ಟಿ ಕಡಿಮೆಯಾಗಿದೆ. ಆದರೆ, ಈ ಪುಸ್ತಕದಲ್ಲಿ ಅವರ ನೋಟ ಆಳವಾಗಿದೆ. ನೋಡುವ ದೃಷ್ಟಿಯನ್ನು ಕಲಿಸಿದೆ ಎಂದು ತಿಳಿಸಿದರು.
ಬಳಿಕ ಪುಸ್ತಕ ಪ್ರಕಾಶನದ ಬಿ.ಎನ್.ಶ್ರೀರಾಮ್ ಮಾತನಾಡಿ, ಸಾಮಾನ್ಯ ಒಬ್ಬ ವ್ಯಕ್ತಿಯ ವ್ಯಕ್ತಿಚಿತ್ರ ಹಿಡಿದಿಡುವುದು ಕಷ್ಟದ ಕೆಲಸ. ಆದರೆ ಇಲ್ಲಿ ಕೃಪಾಕರ ಮತ್ತು ಸೇನಾನಿರವರು ಮಹಾನ್ ಕವಿ ಕುವೆಂಪುರವರ ವ್ಯಕ್ತಿಚಿತ್ರವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅಲ್ಲಿ ಕುವೆಂಪುರವರ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದು, ಪುಸ್ತಕ ಸಂಚಲನ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ‘ಆಂದೋಲನ’ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ಡಾ.ಸುಮನ, ಡಾ.ಸಂತೃಪ್ತ, ಗೋವಿಂದರಾಜು, ಪ್ರಸನ್ನ, ದೇವನೂರು ಶಿವಮಲ್ಲು, ನಾಗೇಶ್, ಸ್ನೇಹ, ಬೇಸಗರಹಳ್ಳಿ ರವಿಪ್ರಸಾದ್ ಮತ್ತಿತರರು ಹಾಜರಿದ್ದರು.


ನಾನು ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ ಇದು ನನಗೆ ಬಹಳ ವಿಶಿಷ್ಟವೆನಿಸಿದೆ. ಇಲ್ಲಿ ಮೂಡಿರುವ ಚಿತ್ರಗಳು, ಸನ್ನಿವೇಶಗಳು, ಕುವೆಂಪು ಎಂದರೆ ನೆರೆಹೊರೆಯವರ ಸಂಭ್ರಮ ಹಕ್ಕಿಗಳ ಬಗ್ಗೆ ಸಾಕಷ್ಟು ಸುಂದರ ಸನ್ನಿವೇಶಗಳು ಅಲ್ಲಿವೆ. ಈ ಪುಸ್ತಕವನ್ನು ಓದಿದ ಬಳಿಕ ನನಗೆ ಪುಸ್ತಕ ಮೌನವನ್ನು ಕಲಿಸಿತು.
-ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಿತಿ.


ಯಾವುದೇ ಕ್ಷೇತ್ರದಲ್ಲಿ ಸಾಕಷ್ಟು ಸಮಯ ಕಳೆದ ನಂತರ ಅದು ಮುಗಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಬೇರೆಯವರಿಗೆ ಹೇಳಬೇಕೆನಿಸುತ್ತದೆ. ಆ ಜರ್ನಿಯಲ್ಲಿ ನಾವು ಕಂಡ ಖುಷಿ ಎನ್ನುವುದು ಇದ್ದೇ ಇರುತ್ತದೆ. ಅಂತಹದ್ದೇ ಒಂದು ಪ್ರಯತ್ನವಿದು.
-ಕೃಪಾಕರ, ವನ್ಯಜೀವಿ ತಜ್ಞ.


ಕುವೆಂಪು ಅವರನ್ನು ವ್ಯಕ್ತಿ ಚಿತ್ರದಲ್ಲಿ ಹಿಡಿದಿಡಲು ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುಬೇಕು. ಕಳೆದು ೩೦ ವರ್ಷಗಳಿಂದ ಪ್ರಯತ್ನ ಮಾಡಿ ಕೈಬಿಟ್ಟಿದ್ದೇ. ಕಳೆದ ೬ ತಿಂಗಳಿನಿಂದ ಮನಸ್ಸಿನಲ್ಲಿ ಈ ಆಲೋಚನೆ ಓಡಲು ಆರಂಭಿಸಿ ಈಗ ಈ ರೂಪದೊಂದಿಗೆ ಹೊರಬಂದಿದೆ. ಈಗ ಪುಸ್ತಕದ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.
-ಸೇನಾನಿ, ವನ್ಯಜೀವಿ ತಜ್ಞ.

andolanait

Recent Posts

ಯಾವುದೇ ಕಾರಣಕ್ಕೂ ಟಿ.ನರಸೀಪುರ ರೇಷ್ಮೆ ಕಾರ್ಖಾನೆ ಮುಚ್ಚಲ್ಲ: ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಕ್ರೀಡಾಂಗಣಕ್ಕಾಗಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ…

30 mins ago

ಹಾಸನ: ಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಹಾಸನ: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಆಲೂರು…

40 mins ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಸಾರಂಗ: ಅರಣ್ಯ ಇಲಾಖೆಯಿಂದ ರಕ್ಷಣೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿಸಿಲ ಬೇಗೆ ತಾಳಲಾರದೆ ನೀರು ಕುಡಿಯಲು ಹೋದ ಸಾರಂಗ ಕೆಸರು…

51 mins ago

ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಮುಂಚೂಣಿಯಲ್ಲಿದೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮುಂದಿನ ಎರಡು ವರ್ಷಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳ ಅಭಿವೃದ್ಧಿಗಿಂತ ಮುಂಚೂಣಿಯಲ್ಲಿರಲಿದ್ದು, ಇದಕ್ಕೆ ಶ್ರಮಿಸುತ್ತಿರುವ ಸ್ಥಳೀಯ…

58 mins ago

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗುತ್ತಿದೆ: ಸಚಿವ ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರ ವಿದೇಶ ನೀತಿಯಿಂದಾಗಿ ಅಮೇರಿಕಾದ ವಿದೇಶಾಂಗ ಸಚಿವರು ಸೇರಿದಂತೆ…

1 hour ago

ಇರಾನ್-‌ಇಸ್ರೇಲ್‌ ಸಂಘರ್ಷದ ಎಫೆಕ್ಟ್:‌ ಭಾರತದ ಭಾಸುಮತಿ ರಫ್ತು ಉದ್ಯಮಕ್ಕೆ ಹೊಡೆತ

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷದ ಪರಿಸ್ಥಿತಿಯು ಭಾರತದ ಭಾಸುಮತಿ ಅಕ್ಕಿ ರಫ್ತಿನ ಮೇಲೆ ತೀವ್ರ ಹೊಡೆತ ನೀಡಿದೆ. ದೆಹಲಿಯ ಗೋದಾಮುಗಳಲ್ಲಿ ಸುಮಾರು…

2 hours ago