ಜಿಲ್ಲೆಗಳು

‘ಕ್ಯಾಮರಾ / ಕುವೆಂಪು: ರಸಖುಷಿಗೆ ಸಲ್ಲಿಸುವ ಕಾಣಿಕೆ’

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ

ಮೈಸೂರು: ಕ್ಯಾಮರಾ / ಕುವೆಂಪು ಪುಸ್ತಕದಲ್ಲಿ ಕೃಪಾಕರ ಮತ್ತು ಸೇನಾನಿಯವರು ಚಿತ್ರಗಳಿಗೆ ಉತ್ತಮ ಶೀರ್ಷಿಕೆಯನ್ನು ನೀಡಿದ್ದು, ಕಲಾವಿದ ಮತ್ತು ಕವಿ ಎಂಬ ಇಬ್ಬರು ಭಾವ ಜೀವಿಗಳು ಒಂದೇ ಎನಿಸುತ್ತದೆ. ಅಷ್ಟರ ಮಟ್ಟಿಗೆ ಚಿತ್ರಗಳ ಜೊತೆ ಮಾತನಾಡಿರುವುದು ಈ ಪುಸ್ತಕದ ವಿಶೇಷವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ವಿಶ್ಲೇಷಿಸಿದರು.


ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿರುವ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕ್ಯಾಮರಾ / ಕುವೆಂಪು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ಯಾಮರಾ / ಕುವೆಂಪು ಪುಸ್ತಕದ ಮೊದಲ ಪುಟ ನೋಡಿದರೆ ಪುಸ್ತಕದ ಮಹತ್ವ ತಿಳಿದು ಬಿಡುತ್ತದೆ. ಅಲ್ಲಿ ಕುವೆಂಪು ಅವರು ಸಿಕ್ಕುಕಟ್ಟಿದ ಕೈ ಅಲ್ಲಿನ ಶೀರ್ಷಿಕೆಗಳು ಅದ್ಬುತವಾಗಿವೆ. ಬಹುಶಃ ನಾನು ಒಂದೇ ಸುತ್ತಿನಲ್ಲಿ ಓದಿದ ಪುಸ್ತಕವೆಂದರೆ ಈ ಪುಸ್ತಕ ಮಾತ್ರ ಎಂದರು.
ಕುವೆಂಪುರವರ ಕೆಲವೊಂದು ಸಂದರ್ಭಗಳನ್ನು ಸುಂದರವಾಗಿ ಈ ಪುಸ್ತಕದಲ್ಲಿ ಚಿತ್ರಿಸಲಾಗಿದೆ. ಕುವೆಂಪು ಅವರು ಮುಖ್ಯವಾಗಿ ಶಿಸ್ತು ಹಾಗೂ ಸಮಯ ಪಾಲನೆಗೆ ಮಹತ್ವ ನೀಡಿದವರು. ಬರೆದ ಹಾಗೆಯೇ ಬದುಕಿದವರು ಎಂದು ಖಚಿತವಾಗಿ ಹೇಳಬಹುದಾಗಿದೆ. ಅಂತಹ ದಾರ್ಶನಿಕ ಕವಿಯ ಭಾವನೆ ಮತ್ತು ಸಂವೇದನೆಗಳು ಚಿತ್ರದಲ್ಲಿವೆ. ಇಂತಹ ಒಂದು ವಿಶಿಷ್ಟವಾದ ಪುಸ್ತಕ ಬಹುಶಃ ಕನ್ನಡ ಮತ್ತು ಕುವೆಂಪುರವರಿಗೆ ಸಲ್ಲಿಬಹುದಾದ ಉತ್ತಮ ಕಾಣಿಕೆಯಾಗಿದೆ ಎಂದು ಬಣ್ಣಿಸಿದರು.
ನಟ ಪ್ರಕಾಶ್ ರಾಜ್ ಮಾತನಾಡಿ, ಕ್ಯಾಮರಾ / ಕುವೆಂಪು ಎಂಬುವುದರೊಂದಿಗೆ ಓದುಗ / ಕೃಪಾಕರ ಸೇನಾನಿ ಎಂಬಂತೆಯೂ ಮೂಡಿಬಂದಿದೆ. ಕಾವ್ಯ, ಸಾಹಿತ್ಯ, ಕಾದಂಬರಿ, ಕಥೆಯನ್ನು ಎಲ್ಲ ಪ್ರಕಾರಗಳೊಂದಿಗೆ ಈ ಪುಸ್ತಕ ವಿಭಿನ್ನವೆನಿಸಿತ್ತು. ಇವರು ನೋಡಿದ ಕಣ್ಣುಗಳು ನನಗೆ ಬಹಳ ಆಸಕ್ತಿ ಎನಿಸಿತ್ತು. ಪ್ರಸ್ತುತ ಒಂದು ವಿಷಯವನ್ನು ಗ್ರಹಿಸುವ, ಜೀರ್ಣಿಸಿ ಕೊಳ್ಳುವ, ಅರ್ಥೈಸಿಕೊಳ್ಳುವ, ನೋಡುವ ದೃಷ್ಟಿ ಕಡಿಮೆಯಾಗಿದೆ. ಆದರೆ, ಈ ಪುಸ್ತಕದಲ್ಲಿ ಅವರ ನೋಟ ಆಳವಾಗಿದೆ. ನೋಡುವ ದೃಷ್ಟಿಯನ್ನು ಕಲಿಸಿದೆ ಎಂದು ತಿಳಿಸಿದರು.
ಬಳಿಕ ಪುಸ್ತಕ ಪ್ರಕಾಶನದ ಬಿ.ಎನ್.ಶ್ರೀರಾಮ್ ಮಾತನಾಡಿ, ಸಾಮಾನ್ಯ ಒಬ್ಬ ವ್ಯಕ್ತಿಯ ವ್ಯಕ್ತಿಚಿತ್ರ ಹಿಡಿದಿಡುವುದು ಕಷ್ಟದ ಕೆಲಸ. ಆದರೆ ಇಲ್ಲಿ ಕೃಪಾಕರ ಮತ್ತು ಸೇನಾನಿರವರು ಮಹಾನ್ ಕವಿ ಕುವೆಂಪುರವರ ವ್ಯಕ್ತಿಚಿತ್ರವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಅಲ್ಲಿ ಕುವೆಂಪುರವರ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದು, ಪುಸ್ತಕ ಸಂಚಲನ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ‘ಆಂದೋಲನ’ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ಡಾ.ಸುಮನ, ಡಾ.ಸಂತೃಪ್ತ, ಗೋವಿಂದರಾಜು, ಪ್ರಸನ್ನ, ದೇವನೂರು ಶಿವಮಲ್ಲು, ನಾಗೇಶ್, ಸ್ನೇಹ, ಬೇಸಗರಹಳ್ಳಿ ರವಿಪ್ರಸಾದ್ ಮತ್ತಿತರರು ಹಾಜರಿದ್ದರು.


ನಾನು ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅದರಲ್ಲಿ ಇದು ನನಗೆ ಬಹಳ ವಿಶಿಷ್ಟವೆನಿಸಿದೆ. ಇಲ್ಲಿ ಮೂಡಿರುವ ಚಿತ್ರಗಳು, ಸನ್ನಿವೇಶಗಳು, ಕುವೆಂಪು ಎಂದರೆ ನೆರೆಹೊರೆಯವರ ಸಂಭ್ರಮ ಹಕ್ಕಿಗಳ ಬಗ್ಗೆ ಸಾಕಷ್ಟು ಸುಂದರ ಸನ್ನಿವೇಶಗಳು ಅಲ್ಲಿವೆ. ಈ ಪುಸ್ತಕವನ್ನು ಓದಿದ ಬಳಿಕ ನನಗೆ ಪುಸ್ತಕ ಮೌನವನ್ನು ಕಲಿಸಿತು.
-ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಿತಿ.


ಯಾವುದೇ ಕ್ಷೇತ್ರದಲ್ಲಿ ಸಾಕಷ್ಟು ಸಮಯ ಕಳೆದ ನಂತರ ಅದು ಮುಗಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಬೇರೆಯವರಿಗೆ ಹೇಳಬೇಕೆನಿಸುತ್ತದೆ. ಆ ಜರ್ನಿಯಲ್ಲಿ ನಾವು ಕಂಡ ಖುಷಿ ಎನ್ನುವುದು ಇದ್ದೇ ಇರುತ್ತದೆ. ಅಂತಹದ್ದೇ ಒಂದು ಪ್ರಯತ್ನವಿದು.
-ಕೃಪಾಕರ, ವನ್ಯಜೀವಿ ತಜ್ಞ.


ಕುವೆಂಪು ಅವರನ್ನು ವ್ಯಕ್ತಿ ಚಿತ್ರದಲ್ಲಿ ಹಿಡಿದಿಡಲು ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುಬೇಕು. ಕಳೆದು ೩೦ ವರ್ಷಗಳಿಂದ ಪ್ರಯತ್ನ ಮಾಡಿ ಕೈಬಿಟ್ಟಿದ್ದೇ. ಕಳೆದ ೬ ತಿಂಗಳಿನಿಂದ ಮನಸ್ಸಿನಲ್ಲಿ ಈ ಆಲೋಚನೆ ಓಡಲು ಆರಂಭಿಸಿ ಈಗ ಈ ರೂಪದೊಂದಿಗೆ ಹೊರಬಂದಿದೆ. ಈಗ ಪುಸ್ತಕದ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.
-ಸೇನಾನಿ, ವನ್ಯಜೀವಿ ತಜ್ಞ.

andolanait

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

4 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

5 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

6 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

6 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

6 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

7 hours ago