ನಗರದ ವಿವಿಧೆಡೆ ‘ಮೈಸೂರು ಗ್ರಾಹಕರ ಪರಿಷತ್’ ಬೆಂಬಲಿತರ ಮೌನ ಪ್ರತಿಭಟನೆ
ಮೈಸೂರು: ಉತ್ತಮ ಆಡಳಿತಕ್ಕಾಗಿ ಸಾರ್ವಜನಿಕರನ್ನು ‘ಯಜಮಾನರು’ ಎಂದು ಪರಿಗಣಿಸಬೇಕು ಎಂಬುದೂ ಸೇರಿದಂತೆ ನಗರದ ನಾಗರಿಕ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ‘ಮೈಸೂರು ಗ್ರಾಹಕರ ಪರಿಷತ್’ ವತಿಯಿಂದ ಉತ್ತಮ ಆಡಳಿತಕ್ಕಾಗಿ ಕರೆ ನೀಡಿದ ಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು.
ಭಾನುವಾರ ನಗರದ ಚೆಲುವಾಂಬ ಪಾರ್ಕ್ನಲ್ಲಿ ಹೋರಾಟಗಾರ ಭಾಮಿನಿ ವಿ.ಶೆಣೈ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು. ಜತೆಗೆ ವಿವಿಧ ಬಡಾವಣೆಗಳಾದ ಯಾದವಗಿರಿ, ಒಂಟಿಕೊಪ್ಪಲು, ಜಯಲಕ್ಷ್ಮೀಪುರಂ, ವಿಜಯನಗರ 4ನೇ ಬ್ಲಾಕ್ ಪಾರ್ಕ್ನಲ್ಲಿ, ವಿಜಯನಗರ 3ನೇ ಹಂತದ ಪಾರ್ಕ್, ಮಧುವನ ಪಾರ್ಕ್, ಜಯನಗರ ಪಾರ್ಕ್, ಎನ್.ಆರ್ ಮೊಹಲ್ಲಾದ ಶಿವಾಜಿ ಪಾರ್ಕ್ನಲ್ಲಿ, ಸಾತಗಳ್ಳಿಯ ಲರ್ನರ್ ಪಿಯು ಕಾಲೇಜು, ನ್ಯಾಯಾಲಯದ ಮುಂಭಾಗ ಸೇರಿದಂತೆ 9ಕಡೆಗಳಲ್ಲಿ ತಮ್ಮ ಹೊಣೆಗಾರಿಕೆಯನ್ನು ಅರಿತು ನಾಗರಿಕರು ಸತ್ಯಾಗ್ರಹ ನಡೆಸಿದರು.
ಚಾಮುಂಡಿಬೆಟ್ಟದಲ್ಲಿನ ಪ್ರಾಣಿ-ಪಕ್ಷಿಗಳ ಹಿತ ದೃಷ್ಟಿಯಿಂದ ಅವೈಜ್ಞಾನಿಕವಾದ ವಾಣಿಜ್ಯೀಕರಣದ ಕಾಮಗಾರಿ ಮಾಡುವುದು ಬೇಡ. ಕೂಡಲೇ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಬೇಕು. ಉದ್ಯಾನವನ ಕಾಯಿದೆ ಮತ್ತು ಕಾನೂನಿನ ಆದೇಶವನ್ನು ಮೀರಿ ಕಟ್ಟಡ ಕಾಮಗಾರಿ ಮಾಡುತ್ತಿದ್ದು, ಕೂಡಲೇ ನಿಲ್ಲಿಸಿ ಇಲ್ಲವಾದರೆ ಪರಿಸರ ವಾದಿಗಳು ಎಲ್ಲ ಅಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಪಿಐಎಲ್ ಹೂಡಬೇಕಾಗುತ್ತದೆ ಎಂದು ಪರಿಸರವಾದಿ ಭಾನು ಮೋಹನ್ ನಗರದ ನ್ಯಾಯಾಲಯದ ಮುಂಭಾಗ ಪ್ಲೇ ಕಾರ್ಡ್ ಹಿಡಿದು ಸತ್ಯಾಗ್ರಹ ನಡೆಸಿದರು.
ಮೈಸೂರು ಗ್ರಾಹಕರ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಭಾಮಿ ಶೆಣೈ, ಪರಿಷತ್ ಅಧ್ಯಕ್ಷರಾದ ಶ್ರೀಶೈಲ ರಾಮಣ್ಣನವರ್, ಶಂಕರ್, ಶೋಭಾನಾ, ಮೇಜರ್ ಜನರಲ್ ಸುಧೀರ್ ಓಂಭತ್ಕೇರೆ, ಸಿಎಫ್ಟಿಆರ್ಐ ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್, ಪ್ಲಾಸ್ಟಿಕ್ ಸರ್ಜನ್ ಡಾ.ಜಯರಾಮ್, ಡಾ.ನಂಜಪೂರ್ ಯದುರಾಜ್, ಗೀತಾ ಮೇಲುಮನಿ, ಪ್ರೊ.ದ್ವಾರಕಿ, ಅರುಣ್ ಕುಮಾರ್ ಶೆಟ್ಟರ , ರಾಕೇಶ್ , ಮುನಿರ್, ಮುರುಳಿ ಮೋಹನ್, ಕೊ.ಸು.ನರಸಿಂಹಮೂರ್ತಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅನೇಕರು ಪರೋಕ್ಷವಾಗಿ ಬೆಂಬಲ ನೀಡಿದರು.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಖೆ ಅರಣ್ಯದಲ್ಲಿ ನಡೆದ ಗುಂಡಿನ…
ಕುಶಾಲನಗರ: ತಾಲ್ಲೂಕಿನ ಕೂಡಿಗೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಹೆಗ್ಗಡಹಳ್ಳಿ ಗ್ರಾಮದ…
ಜಕಾರ್ತ: ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಶನಿವಾರ ಮುಂಜಾನೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.…
ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಅರ್ಚಕರಿಗೆ ಹಳದಿ ರೇಷ್ಮೆ ಧೋತಿಯನ್ನು ಹೊಸ ಡ್ರೆಸ್ ಕೋಡ್ ಆಗಿ ಜಾರಿಗೆ ತರಲಾಗಿದೆ. ರಾಮನಂದಿ ಸಂಪ್ರದಾಯಕ್ಕೆ…
ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…