ಜಿಲ್ಲೆಗಳು

ಜನವರಿ 26ರಿಂದ ಬಿಆರ್‌ಟಿಯಲ್ಲಿ ಹಕ್ಕಿ ಸಮೀಕ್ಷೆ

ಪಕ್ಷಿಗಳ ಪ್ರಭೇದ ಪತ್ತೆಗಾಗಿ ಈ ಸರ್ವೆ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.26ರಿಂದ 29ರತನಕ ಹಕ್ಕಿಗಳ ಸಮೀಕ್ಷೆ ನಡೆಯಲಿದೆ.
2012ರ ಆಸುಪಾಸಿನಲ್ಲಿ ನಡೆದಿದ್ದ ಸಮೀಕ್ಷೆ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಕಂಡುಬಂದಿದ್ದವು. ಈಗೆಷ್ಟು ಪ್ರಭೇದಗಳಿವೆ ಎಂಬುದನ್ನು ತಿಳಿಯಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಇದು ಹಕ್ಕಿಗಳ ಸಂಖ್ಯೆಯನ್ನು ಎಣಿಸುವ ಸಮೀಕ್ಷೆಯಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಂಜಾನೆ ಮಂಜು ಆವರಿಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆ 8.30ರ ಸುಮಾರಿಗೆ ಪ್ರಾರಂಭಿಸಿ ಸಂಜೆ 4ಗಂಟೆವರೆಗೂ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿಂದೆ ಎಲ್ಲಾದರೂ ಪಕ್ಷಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೆ ಅಥವಾ ಈ ಬಗ್ಗೆ ತರಬೇತಿ ಹೊಂದಿದ್ದರು ಅಂಥವರನ್ನು ಸಮೀಕ್ಷೆಗೆ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ.
ಬಿಆರ್‌ಟಿ ಕಚೇರಿಯಲ್ಲಿ ನೇರವಾಗಿ ಅಥವಾ ಆನ್‌ಲೈನ್‌ನಲ್ಲಿ ಪಕ್ಷಿ ವೀಕ್ಷಕರು ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.  574.82ಚದರ ಕಿಮೀ ಪ್ರದೇಶ ಹೊಂದಿರುವ ಬಿಆರ್‌ಟಿಯಲ್ಲಿ ಬಫರ್ ಏರಿಯಾ  215.72ಚಕಿಮೀ., ಕೋರ್ ಏರಿಯಾ 359.10ಚಕಿಮೀ ಇದೆ. ಕೆ.ಗುಡಿ, ಪುಣಜನೂರು, ಚಾ.ನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಬೈಲೂರು ವನ್ಯಜೀವಿ ವಲಯಗಳಿದ್ದು ಸಮೀಕ್ಷೆ ಸಂದರ್ಭದಲ್ಲಿ ಯಾವ ವಲಯದತ್ತ ಯಾರ್ಯಾರು ಹೋಗಬೇಕೆಂದು ವಿಂಗಡಿಸಲಾಗುತ್ತದೆ. ಹಾಗಾಗಿ ಮೊದಲೆರಡು ದಿನ ಅರಣ್ಯ ವೀಕ್ಷಕರ ಆಯ್ಕೆ, ವಿಂಗಡಣೆಗೇ ಹಿಡಿಯಲಿದೆ. ಕೊನೆಯ 2ದಿನಗಳು ಮಾತ್ರ ಸಮೀಕ್ಷೆ ಜರುಗಲಿದೆ ಎಂದು ಬಿಆರ್‌ಟಿ ನಿರ್ದೇಶಕಿ ದೀಪ್ ಜೆ.ಕಾಂಟ್ರಾಕ್ಟರ್ ಪತ್ರಿಕೆಗೆ ತಿಳಿಸಿದರು.
ಪಕ್ಷಿಗಳ ಶಬ್ದ, ಗೂಡುಕಟ್ಟಿರುವ ಸ್ಥಳ ಗಮನಿಸಿಕೊಂಡು ಅವನ್ನು ಬೈನಾಕ್ಯುಲರ್ ಮುಖಾಂತರ ಗುರುತಿಸಲಾಗುತ್ತದೆ. ಈಗಿನ ವಾತಾವರಣ ಗಮನಿಸಿದರೆ ಅಪರೂಪದ ಹಾಗೂ ವಿಭಿನ್ನ ಪ್ರಭೇದದ ಪಕ್ಷಿಗಳು ಸಮೀಕ್ಷೆ ಸಂದರ್ಭದಲ್ಲಿ ಕಂಡುಬರುವಂತೆ ಕಾಣುತ್ತದೆ. ದಟ್ಟ ಅರಣ್ಯದ ಒಳಗೆ ಸಮೀಕ್ಷೆ ನಡೆಯುವುದರಿಂದ ಭದ್ರತೆಗಾಗಿ ಇಲಾಖೆ ಸಿಬ್ಬಂದಿ ಜೊತೆಯಲ್ಲಿರುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.


ಗೂಗಲ್ ಪಾರಂ ಮುಖಾಂತರ ರಾಜ್ಯದ ಹೊರಗಿನ 12ಜನರ ಸಹಿತ 122ಮಂದಿ ಪಕ್ಷಿ ವೀಕ್ಷಕರು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಜ.18ರವರೆಗೂ ನೊಂದಣಿ ನಡೆಯಲಿದ್ದು ಯಾರು ಅರ್ಹರಿದ್ದಾರೆ ಅವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ,
ದೀಪ್ ಜೆ.ಕಾಂಟ್ರಾಕ್ಟರ್, ಬಿಆರ್‌ಟಿ ನಿರ್ದೇಶಕರು.


ಸಮೀಕ್ಷೆ ಚಳಿಗಾಲದಲ್ಲೇ ಯಾಕೆ?
ಹಕ್ಕಿಗಳು ಮರಿಗಳ ಜೊತೆ ಇರುವ ಮತ್ತು ಸಂತಾನೋತ್ಪತ್ತಿಯ ಸಮಯವಿದು. ಮರಿಗಳ ಕಾರಣಕ್ಕೆ ಹಕ್ಕಿಗಳು ಪದೇಪದೇ ಗೂಡಿನತ್ತ ಎಡತಾಕುತ್ತಿರುತ್ತವೆ. ಈ ಕಾರಣಕ್ಕೆ ಸಾಮಾನ್ಯವಾಗಿ ಚಳಿಗಾಲದಲ್ಲೇ ಸಮೀಕ್ಷೆ ನಡೆಯುತ್ತದೆ.
2020ರ ಡಿಸೆಂಬರ್‌ನಲ್ಲಿ ಬಿಆರ್‌ಟಿಯಲ್ಲಿ ಹಕ್ಕಿಗಳ ಹಬ್ಬ ಕೂಡ ನಡೆದಿತ್ತು. 2021ರ ಫೆಬ್ರವರಿಯಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಪಕ್ಷಿಗಳ ಸಮೀಕ್ಷೆ ಜರುಗಿತ್ತು.

andolanait

Recent Posts

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

1 hour ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

7 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

13 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

13 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

13 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

13 hours ago