ಜಿಲ್ಲೆಗಳು

ಸಂತನಾಗುವುದು ಅಷ್ಟು ಸುಲಭವಲ್ಲ…

-ಶಿವಾನಂದ ತಗಡೂರು, ಹಿರಿಯ ಪತ್ರಕರ್ತರು

ಅದೇ ಜೇಬುಗಳಿಲ್ಲದ ಬಿಳಿ ಜುಬ್ಬ, ಬಿಳಿ ಪಂಚೆ ಧರಿಸಿದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮಾಮೂಲಿ ಚಪ್ಪಲಿ ಮೆಟ್ಟಿಕೊಂಡು ನಡೆದು ಬರುತ್ತಿದ್ದರೆ, ಅವರ ಮುಖದಲ್ಲಿನ ತೇಜಸ್ಸು ಸಂತ ಎಂದೇ ಪ್ರತಿಬಿಂಬಿಸುತಿತ್ತು.ನನಿಜ.
ಸಿದ್ದೇಶ್ವರ ಶ್ರೀಗಳ ಪ್ರವಚನಗಳನ್ನು ಕೇಳಿದವರು ಅವರನ್ನು ಸಂತ ಎಂದು ಎದೆಯೊಳಗೆ ಭಕ್ತಿಯ ಅಪ್ಪುಗೆಯಲ್ಲಿ ಧ್ಯಾನಿಸಿದವರು ಕೋಟ್ಯಾನುಕೋಟಿ…

ಘಟನೆ 1
ವಿಜಯಪುರದಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳನದ ಸಿದ್ದತಾ ಸಭೆಗೆ ಹೋಗಿದ್ದೆ. ಸಭೆಯಲ್ಲಿ ಸಮ್ಮೇಳನದ ಸಾನಿಧ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರದ್ದಾಗಬೇಕು ಎಂದು ಸರ್ವಸಮ್ಮತ ಅಭಿಪ್ರಾಯ ಮೂಡಿಬಂತು. ಸಮ್ಮೇಳನಕ್ಕೆ ಸಾನಿಧ್ಯ ವಹಿಸುವ ಕೋರಿಕೆ ಸಲ್ಲಿಸಿ ಬರೋಣ ಎಂದು ವಿಜಯಪುರ ಜಿಲ್ಲಾ ಪತ್ರಕರ್ತರ ಜತೆಗೆ ಹೊರಟೆ. ವಿಜಯಪುರದಿಂದ ಮುಕ್ಕಾಲು ಗಂಟೆ ಪಯಣ. ಕಾಖಂಡಕಿ ಗ್ರಾಮದ ಸಮೀಪ ಬೋರೆಯ ಮೇಲೆ ಪ್ರವಚನ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಅಕ್ಷರಶಃ ಒಬ್ಬ ಸಂತ ಹೇಗಿರಬೇಕು ಎನ್ನುವುದನ್ನು ಅಲ್ಲಿ ಸಿದ್ದೇಶ್ವರ ಶ್ರೀ ತೋರಿಸಿಕೊಟ್ಟಿದ್ದರು. ಅಲ್ಲಿ ಯಾವುದೇ ಹೋಟೆಲ್ ವಗೈರೆ ಏನೂ ಇರಲಿಲ್ಲ. ದೊಡ್ಡ ಆಲದ ಮರದ ಬಳಿ ಚಿಕ್ಕದಾದ ಮನೆ. ಅಲ್ಲಿಯೇ ನೆಲ ಸಮತಟ್ಟು ಮಾಡಲಾಗಿತ್ತು. ಇನ್ನು ಉಳಿದವರಿಗೆ ಕುಟೀರಗಳನ್ನು ನಿರ್ಮಿಸಿ ನೆಲೆ ಕಲ್ಪಿಸಲಾಗಿತ್ತು. ಒಂದೆಡೆ ಭಜನೆ, ಮತ್ತೊಂದೆಡೆ ಉಪದೇಶ, ಮಾರ್ಗದರ್ಶನ ನಡೆದಿದ್ದವು. ಅಷ್ಟೇ ಅಲ್ಲ, ಬಂದವರಿಗೆ ಊಟೋಪಚಾರ ಎಲ್ಲವೂ ಅಲ್ಲಿತ್ತು.

ಸ್ವಾಮೀಜಿ ಹುಡುಕುತ್ತಾ ಕಾಖಂಡಕಿಗೆ ಅಂದು ಹೋದಾಗ ಅಲ್ಲಿ ಆದ ಅನುಭವ ಮರೆಯಲಾಗದು.
ರಾಜ್ಯ ಪತ್ರಕರ್ತರ ಸಮ್ಮೇಳನದ ಬಗ್ಗೆ ಅವರೊಂದಿಗೆ ಮಾತನಾಡಿ, ಸಾನಿಧ್ಯ ವಹಿಸಿಕೊಳ್ಳಲು ಅರಿಕೆ ಮಾಡಿಕೊಂಡವು. ಒಪ್ಪುತ್ತಾರೊ ಇಲ್ಲವೊ ಎನ್ನುವ ಆತಂಕವಿತ್ತು. ಆದರೆ, ಖುಷಿಯಿಂದ ಒಪ್ಪಿದರು. ರಾಜ್ಯ ಪತ್ರಕರ್ತರ ಸಮ್ಮೇಳನ ಬಿಜಾಪುರದಲ್ಲಿಯೇ ಮಾಡಿ. ಈ ಭಾಗದಲ್ಲಿ ನಮ್ಮ ಜನರು ಎಲ್ಲಾ ರೀತಿಯ ಸಹಕಾರ ಕೊಡ್ತಾರ, ಸಮ್ಮೇಳನ ಚೆಂದವಾಗಿ ನಡೆಯಲಿದೆ ಎಂದು ಹಾರೈಸಿದರು.

ಘಟನೆ ೨

೨೦೦೩ ರಲ್ಲಿ ಹೊಸದಿಲ್ಲಿಯಲ್ಲಿ ಸುತ್ತೂರು ಮಠದ ಇಂಜಿನಿಯರಿಂಗ್ ಕಾಲೇಜು ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ರಾಷ್ಟಪತಿ ಅಬ್ದುಲ್ ಕಲಾಂ ಅವರ ಜೊತೆಗೆ ವೇದಿಕೆಯಲ್ಲಿ ಇದ್ದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ. ಅವರ ಮಾತಿಗೆ, ವಿಚಾರ ಲಹರಿಗೆ ಅನಾಮತ್ತಾಗಿ ಮನಸೋತಿದ್ದೆ. ಅಲ್ಲಿಂದಲೇ ಅವರ ಸುತ್ತಲೂ ಮನಸ್ಸು ಗಿರಕಿ ಹೊಡೆಯುತ್ತಲಿತ್ತು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣ ಕಾದು ಓದುತ್ತಿದ್ದವರಲ್ಲಿ ನಾನು ಒಬ್ಬ.
ಈ ಎರಡೂ ಘಟನೆಗಳ ನಡುವೆ ಸುತ್ತೂರು ಮಠದ ಕಾರ್ಯಕ್ರಮ ಸೇರಿದಂತೆ ಹಲವಾರು ಬಾರಿ ಅವರ ಮಾತಿಗೆ ಕಿವಿಯಾಗಿದ್ದೇನೆ. ಪ್ರವಚನ ಆಲಿಸಿದ್ದೇನೆ. ಒಂದು ಕ್ಷಣ ಕೂಡ ಅವರ ಬಗ್ಗೆ ನನಗಿದ್ದ ಅಖಂಡ ಧನ್ಯತಾ ಭಾವ ಕಡಿಮೆ ಆಗಲಿಲ್ಲ, ಬದಲಿಗೆ ಹೆಚ್ಚಾಗುತ್ತಲೇ ಹೋಯಿತು.
ಎಲ್ಲವೂ ಬೇಕು ಎನ್ನುವ ಮನಸ್ಸುಗಳ ನಡುವೆ ಪದವಿ ಪುರಸ್ಕಾರ, ಪ್ರಶಸ್ತಿಗಳು ಬೇಡ ಎಂದು ನಿರ್ಲಿಪ್ತವಾಗಿ ಬಯಲ ಆಲಯದ ಕಡೆಗೆ ಮುಖ ಮಾಡಿ, ತನ್ನ ಬದುಕನ್ನು ಆದರ್ಶಮಯವಾಗಿಸಿಕೊಂಡ ಇಂತಹ ಸಂತರು ಅಪರೂಪ.

 

 

andolanait

Recent Posts

ಗ್ಯಾಸ್ ಬೆಲೆ ಗಗನಕ್ಕೆ : ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ…

4 hours ago

ಸಮೀಕ್ಷೆ ಭವಿಷ್ಯ : ದ್ರಾವಿಡ ಕೋಟೆ ಅಲುಗಾಟ ; ಕಿಂಗ್‌ ಮೇಕರ್‌ ಆಗ್ತಾರಾ ದಳಪತಿ ವಿಜಯ್?‌

ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’…

4 hours ago

ಕಾರ್ಮಿಕರು ದೇಶದ ಆರ್ಥಿಕ, ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಕೆಪಿಸಿಸಿ ಕಚೇರಿಯಲ್ಲಿ…

6 hours ago

ಹೊರ್ಮುಜ್‌ ಅನ್ನು ʼಟ್ರಂಪ್‌ ಜಲಸಂಧಿʼ ಎಂಬ ಹೆಸರಿನ ನಕ್ಷೆ ಹಂಚಿಕೊಂಡ ಟ್ರಂಪ್‌

ವಾಷಿಂಗ್ಟನ್‌ : ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್‌ ನಡುವಿನ ಸಂಘರ್ಷದಲ್ಲಿ ಹೊರ್ಮುಜ್‌ ಜಲಸಂಧಿ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಈಗಾಗಲೇ ಅಮೆರಿಕ ನೌಕಾಪಡೆ ಈ ಜಲಸಂಧಿಯಲ್ಲಿ…

8 hours ago

ಮೈಸೂರು | ಮರುಮೌಲ್ಯಮಾಪನ ; ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ

ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ  ಮೈಸೂರು : ಬಡತನದ ಬೇಗೆಯ ನಡುವೆಯೂ ಸಾಧನೆಯ ಛಲ…

8 hours ago

ಜಾತ್ರೆ, ಧಾರ್ಮಿಕ ಆಚರಣೆಯಿಂದ ಸಂಸ್ಕೃತಿ, ಪರಂಪರೆಯ ಪುನರುತ್ಥಾನ : ಈಶ್ವರ ಖಂಡ್ರೆ

ಮಳವಳ್ಳಿ : ಜಾತ್ರೆ, ಉತ್ಸವ, ರಾಜಗೋಪುರ ಲೋಕಾರ್ಪಣೆಯಂತಹ ಧಾರ್ಮಿಕ ಆಚರಣೆಗಳಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ನಮ್ಮ ಸಂಸ್ಕೃತಿ,…

8 hours ago