ವಾರ್ಷಿಕ ರಂಗೋತ್ಸವಕ್ಕೆ ರಂಗಾಯಣ ಸಜ್ಜು, ಉದ್ಘಾಟನೆಗೆ ಪರೇಶ್ ರಾವಲ್
ಭಾರತೀಯತೆʼಯಡಿ ಏಳು ರಾಜ್ಯಗಳ ಏಳು ಭಾಷೆಗಳ 20 ನಾಟಕಗಳ ಪ್ರದರ್ಶನ
ಮೈಸೂರು: ರಂಗಾಯಣ ಮತ್ತೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಜ್ಜಾಗಿದೆ. ಡಿಸೆಂಬರ್ ಎಂಟರಿಂದ 15ರವರೆಗೆ ಒಂದು ವಾರ ಕಾಲ ರಂಗಾಯಣದಲ್ಲಿ ಏಳು ರಾಜ್ಯಗಳ ಏಳು ಭಾಷೆಗಳ ಒಟ್ಟು 20 ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕದ ಉದ್ಘಾಟನೆಗೆ ದಿಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ, ಖ್ಯಾತ ನಟ ಪರೇಶ್ ರಾವಲ್ ಆಗಮಿಸುತ್ತಿರುವುದು ಈ ವಿಶೇಷ.
ಈ ಬಾರಿಯ ರಂಗೋತ್ಸವಕ್ಕೆ “ಭಾರತೀಯತೆʼ ಎಂದು ಶೀರ್ಷಿಕೆ ನೀಡಲಾಗಿದೆ. ಇವುಗಳಲ್ಲಿ 12 ಕನ್ನಡ ನಾಟಕಗಳು, ಒಂದು ತುಳು, ಒಂದು ಸಂಸ್ಕ್ರತ ನಾಟಕ ಸೇರಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.
ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ವಿವರ
15 ತಾ. ರಂದು ಭೂಮಿಗೀತದಲ್ಲಿ ಡಾ.ಚಂದ್ರದಾಸನ್ ನಿರ್ದೇಶನದ ಛಾಯಾ ಚಿತ್ರಂ ಮಾಯಾ ಚಿತ್ರಂ(ಮಲಯಾಳಂ) ಸಂಜೆ.6.30, ಕಿರುರಂಗಮಂದಿರದಲ್ಲಿ ಅಕ್ಷತಾ ಮಾಯಸಂದ್ರ ನಿರ್ದೇಶನದ ಅವನಿ(ಕನ್ನಡ) ಸಂಜೆ.7.00 ಕಲಾಮಂದಿರದಲ್ಲಿ ಸುರಭಿ ಜಯಚಂದ್ರವರ್ಮ ನಿರ್ದೇಶನದ ಮಾಯಬಜಾರ್(ತೆಲುಗು) ಸಂಜೆ.7.30 ಕ್ಕೆ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…
ಬೆಳಗಾವಿ: ಬೆಳಗಾವಿ ಅಧಿವೇಶನದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ಬೆಂಗಳೂರು: ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು 377 ಪ್ರಕರಣಗಳ ಪೈಕಿ…
ಎಚ್.ಡಿ.ಕೋಟೆ: ತಾಲ್ಲೂಕಿನ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಿಸಲು ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಕಾಡಂಚಿನ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯ ಹಮ್ಮಿಕೊಂಡಿದ್ದಾರೆ. ತಾಲ್ಲೂಕಿನ ಗಡಿಭಾಗದ…
ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ…