ಜಿಲ್ಲೆಗಳು

ಬಹುರೂಪಿಯಲ್ಲೂ ಪ್ರದರ್ಶನಗೊಳ್ಳಲಿದೆ ‘ಟಿಪ್ಪು ನಿಜಕನಸು’

ವಾರ್ಷಿಕ ರಂಗೋತ್ಸವಕ್ಕೆ ರಂಗಾಯಣ ಸಜ್ಜು, ಉದ್ಘಾಟನೆಗೆ ಪರೇಶ್‌ ರಾವಲ್‌

ಭಾರತೀಯತೆʼಯಡಿ ಏಳು ರಾಜ್ಯಗಳ ಏಳು ಭಾಷೆಗಳ 20 ನಾಟಕಗಳ ಪ್ರದರ್ಶನ

ಮೈಸೂರು: ರಂಗಾಯಣ ಮತ್ತೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಜ್ಜಾಗಿದೆ. ಡಿಸೆಂಬರ್‌ ಎಂಟರಿಂದ 15ರವರೆಗೆ ಒಂದು ವಾರ ಕಾಲ ರಂಗಾಯಣದಲ್ಲಿ ಏಳು ರಾಜ್ಯಗಳ ಏಳು ಭಾಷೆಗಳ ಒಟ್ಟು 20 ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕದ ಉದ್ಘಾಟನೆಗೆ ದಿಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ, ಖ್ಯಾತ ನಟ ಪರೇಶ್‌ ರಾವಲ್‌ ಆಗಮಿಸುತ್ತಿರುವುದು ಈ ವಿಶೇಷ.

ಈ ಬಾರಿಯ ರಂಗೋತ್ಸವಕ್ಕೆ “ಭಾರತೀಯತೆʼ ಎಂದು ಶೀರ್ಷಿಕೆ ನೀಡಲಾಗಿದೆ. ಇವುಗಳಲ್ಲಿ 12 ಕನ್ನಡ ನಾಟಕಗಳು, ಒಂದು ತುಳು, ಒಂದು ಸಂಸ್ಕ್ರತ ನಾಟಕ ಸೇರಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.
ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ವಿವರ

 

  • ಡಿಸೆಂಬರ್‌ 9 ರಂದು ಭೂಮಿಗೀತದಲ್ಲಿ ಅಡ್ಡಂಡ ಕಾರ್ಯಪ್ಪ ನಿರ್ದೇಶನದ ಟಿಪ್ಪು ನಿಜಕನಸುಗಳು(ಕನ್ನಡ). ಸಮಯ: ಸಂಜೆ 3.30
  • ಡಿಸೆಂಬರ್‌ 10 ರಂದು ಭೂಮಿಗೀತದಲ್ಲಿ ಕೆ.ಎನ್.ಫಣಿಕ್ಕರ್ ನಿರ್ದೇಶನದ ಕರ್ಣಭಾರಂ( ಸಂಸ್ಕ್ರತ). ಸಮಯ ಸಂಜೆ ೬.೩೦.
  • ಕಿರುರಂಗಮಂದಿರದಲ್ಲಿ ಹೆಚ್.ಎಸ್.ಸುರೇಶ್ ಬಾಬು ನಿರ್ದೇಶನದ ಚಿದಂಬರ ರಹಸ್ಯ(ಕನ್ನಡ).ಸಮಯ ಸಂಜೆ 7 ಕಲಾಮಂದಿರದಲ್ಲಿ ಬಿ.ಜಯಶ್ರೀ ನಿರ್ದೇಶನದ ಕರಿಮಾಯಿ(ಕನ್ನಡ). ಸಮಯ ಸಂಜೆ 7.30.
  • ಡಿಸೆಂಬರ್‌ 11 ರಂದು ಭೂಮಿಗೀತದಲ್ಲಿ ಪ್ರೊ.ಹೆಚ್.ಎಸ್.ಉಮೇಶ್ ನಿರ್ದೇಶನದ ಲೀಲಾವತಿ(ಕನ್ನಡ).ಸಂಜೆ 6.30 ಕಿರುರಂಗಮಂದಿರದಲ್ಲಿ ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಚಂದ್ರಹಾಸ(ಕನ್ನಡ).ಸಂಜೆ 7.00 ಕಲಾಮಂದಿರದಲ್ಲಿ ಎಸ್.ಮುರುಘಭೂಪತಿ ನಿರ್ದೇಶನದ ಇಡಕಿಣಿ ಕಥಾಯರಥಂ(ತಮಿಳು).ಸಂಜೆ 7.30.
  • ಡಿಸೆಂಬರ್‌ 12 ರಂದು ಭೂಮಿಗೀತದಲ್ಲಿ ಹೈಸ್ನಾಂ ತೋಂಬ ನಿರ್ದೇಶನದ ಇಮಾ ನಂಗಿ ನತಂಬಾಕ್ತ(ಮಣಿಪುರಿ) ಸಂಜೆ 6.30, ಕಿರುರಂಗಮಂದಿರದಲ್ಲಿ ದಿವಾಕರ್ ಕಟೀಲ್ ನಿರ್ದೇಶನದ ಕಾಪ(ತುಳು ನಾಟಕ).ಸಂಜೆ 7.00., ಕಲಾಮಂದಿರದಲ್ಲಿ ಮಾಲತಿ ಸುಧೀರ್ ನಿರ್ದೇಶನದ ಗೌಡ್ರ ಗದ್ಲ(ಕನ್ನಡ) ಸಂಜೆ.7.30.
  • ಡಿಸೆಂಬರ್‌ 13 ರಂದು ಭೂಮಿಗೀತದಲ್ಲಿ ಅಭಿಷೇಕ್ ಅಯ್ಯಂಗಾರ್ ನಿರ್ದೇಶನದ ಬೈ2 ಕಾಫಿ (ಕನ್ನಡ) ಸಂಜೆ 6.30 ಕಿರುರಂಗಮಂದಿರದಲ್ಲಿ ವಾಲ್ಟರ್ ಡಿಸೋಜಾ ನಿರ್ದೇಶನದ ತುಕ್ಕೋಜಿ(ಕನ್ನಡ), ಕಲಾಮಂದಿರದಲ್ಲಿ ಪ್ರಶಾಂತ್ ಉದ್ಯಾವರ ನಿರ್ದೇಶನದ ಉಡಿಯೊಳಗಣ ಕಿಚ್ಚು(ಕನ್ನಡ)ಸಂಜೆ 7.30. ವನರಂಗದಲ್ಲಿ ನಿತಿನ್ ಶರ್ಮಾ ನಿರ್ದೇಶನದ ಬೋಡಾಸ್ ದೇ ಸಾಂಗ್ರೆ( ಪಂಜಾಬಿ) ಸಂಜೆ 7.30
  • ಡಿಸೆಂಬರ್‌ 14 ರಂದು ಭೂಮಿಗೀತದಲ್ಲಿ ಆಶಿಷ್ ಶ್ರೀವಾಸ್ತವ್ ನಿರ್ದೇಶನದ ಬೆಟರ್ ಹಾಫ್(ಹಿಂದಿ) ಸಂಜೆ 6.30 ,ಕಿರುರಂಗಮಂದಿರದಲ್ಲಿ ಡಾ.ಅರವಿಂದ ಕುಲಕರ್ಣಿ ನಿರ್ದೇಶನದ ಪಂಚಕನ್ಯಾಸ್ಮರೇನಿತ್ಯಂ(ಕನ್ನಡ).ಸಂಜೆ 7.00.,ಕಲಾಮಂದಿರದಲ್ಲಿ ಟಿ.ಎಸ.ನಾಗಾಭರಣ ನಿರ್ದೇಶನದ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ(ಕನ್ನಡ), ಸಂಜೆ.7.30.

    15 ತಾ. ರಂದು ಭೂಮಿಗೀತದಲ್ಲಿ ಡಾ.ಚಂದ್ರದಾಸನ್ ನಿರ್ದೇಶನದ ಛಾಯಾ ಚಿತ್ರಂ ಮಾಯಾ ಚಿತ್ರಂ(ಮಲಯಾಳಂ) ಸಂಜೆ.6.30, ಕಿರುರಂಗಮಂದಿರದಲ್ಲಿ ಅಕ್ಷತಾ ಮಾಯಸಂದ್ರ ನಿರ್ದೇಶನದ ಅವನಿ(ಕನ್ನಡ) ಸಂಜೆ.7.00 ಕಲಾಮಂದಿರದಲ್ಲಿ ಸುರಭಿ ಜಯಚಂದ್ರವರ್ಮ ನಿರ್ದೇಶನದ ಮಾಯಬಜಾರ್(ತೆಲುಗು) ಸಂಜೆ.7.30 ಕ್ಕೆ ಪ್ರದರ್ಶನಗೊಳ್ಳಲಿದೆ.

andolanait

Recent Posts

ಯೋಗೇಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ. 17ನೇ ಆರೋಪಿ ಕಾಂಗ್ರೆಸ್ ಶಾಸಕ ವಿನಯ್…

1 hour ago

ಮೈಸೂರು | ಮನೆಯ ಮಂಚದ ಕೆಳಗೆ ಚಿರತೆ ಪ್ರಕ್ಷತ್ಯ, ಆತಂಕಕ್ಕೀಡಾದ ಮನೆಮಂದಿ

ಮೈಸೂರು : ನಗರದ ಸಿದ್ದಾರ್ಥ ನಗರದಲ್ಲಿ ಚಿರತೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುರೇಶ್ ಎಂಬುವವರ ಮನೆಯಲ್ಲಿ…

2 hours ago

ಚಾರಣಿಗರ ಮೊಬೈಲ್ ಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಕಡ್ಡಾಯ: ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ…

3 hours ago

ಅಮೆರಿಕ-ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು…

3 hours ago

ಕಾರು-ಖಾಸಗಿ ಬಸ್‌ ಡಿಕ್ಕಿ : 6 ಮಂದಿ ಸಜೀವ ದಹನ

ಯಾದಗಿರಿ : ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿಯುರಿದಿದ್ದು, 6 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ…

4 hours ago

ಕುಡಿಯಲು ಶುದ್ಧ ನೀರಿಲ್ಲದೆ ಆಲಗೂಡು ಗ್ರಾಮಸ್ಥರ ಪರದಾಟ

ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಶ್ರೀರಂಗಪಟ್ಟಣ ವಿಧಾನಸಭಾ…

5 hours ago