ವಾಣಿಜ್ಯ

ಹಣಕೊಡದೇ ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸಿ…

ನವದೆಹಲಿ : ಟಿಕೆಟ್ ಗೆ ಕಾಸಿಲ್ಲದಿದ್ದರೂ ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ರೈಲ್ವೆ ಇಲಾಖೆ ನೀಡಿದೆ. ಆದರೆ, ನೀವು ಕ್ಯಾಷ್ ಇ ಪಾವತಿ ಆಯ್ಕೆ ಬಳಸಿ ಐಆರ್ ಟಿಸಿ ಆ್ಯಪ್ ನಲ್ಲಿ ಟಿಕೆಟ್ ಕಾಯ್ದಿರಿಸಬೇಕು, ಆದರೆ ಹಣವನ್ನು ಆಗಲೇ ಪಾವತಿಸಬೇಕಿಲ್ಲ, ಬದಲಿಗೆ ನಂತರ ಇಎಂಐ ಮೂಲಕ ಪಾವತಿ ಮಾಡಬಹುದು. ‘ಈಗ ಪ್ರಯಾಣಿಸಿ, ಆಮೇಲೆ ಪಾವತಿಸಿ’ ಎಂಬ ಈ ಹೊಸ ಯೋಜನೆಯನ್ನು ಭಾರತೀಯ ರೈಲ್ವೆ ಇಲಾಖೆಯ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು ಹಣಕಾಸು ಸೇವೆಗಳನ್ನು ಒದಗಿಸುವ ಕ್ಯಾಶ್ ಇ ಸಂಸ್ಥೆ ಸಹಯೋಗದಲ್ಲಿ ಪರಿಚಯಿಸಿದೆ. ಈ ಸೇವೆಯು ರೈಲ್ವೆ ಇಲಾಖೆಯ ಐಆರ್ ಸಿಟಿಸಿ ಟ್ರಾವೆಲ್ ಆ್ಯಪ್ ನಲ್ಲಿ ಕ್ಯಾಶ್ ಇ ಪಾವತಿ ಆಯ್ಕೆ ಮೂಲಕ ಟಿಕೆಟ್ ಬುಕ್ ಮಾಡಿ ಹಣವನ್ನು 3 ಅಥವಾ 6 ತಿಂಗಳ ಅವಧಿಯ ತನಕದ ಇಎಂಐ ಮೂಲಕ ಪಾವತಿಸುವ ಅವಕಾಶವನ್ನು ಕಲ್ಪಿಸಿದೆ. ಇಎಂಐ ಪಾವತಿ ಆಯ್ಕೆಯು ಐಆರ್ ಸಿಟಿಸಿ ಟ್ರಾವೆಲ್  ಆ್ಯಪ್ ನಲ್ಲಿ ಕಾಯ್ದಿರಿಸಿದ ಹಾಗೂ ತತ್ಕಾಲ ಟಿಕೆಟ್ ಗಳ ಬುಕ್ಕಿಂಗ್ ಗೆ ಇರುವ ಚೆಕ್ ಔಟ್ ಪುಟದಲ್ಲಿದೆ.

ಕ್ಯಾಶ್ ಇಯ ಟಿಎನ್ ಪಿಎಲ್ ಇಎಂಐ ಪಾವತಿ ಆಯ್ಕೆ ಈ ಸೌಲಭ್ಯವನ್ನು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಎಲ್ಲ ಬಳಕೆದಾರರು ಬಳಸಲು ಅನುವು ನೀಡಿದೆ. ಹೀಗಾಗಿ ಕ್ಯಾಶ್ ಇ ಟಿಎನ್ ಪಿಎಲ್ ಇಎಂಐ ಆಯ್ಕೆಯನ್ನು ಪ್ರಯಾಣಿಕರು ಸುಲಭವಾಗಿ ಬಳಸಿಕೊಳ್ಳಬಹುದು. ಐಆರ್ ಟಿಸಿ ಆ್ಯಪ್ 9 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಇದರ ಮೂಲಕ ಪ್ರತಿ ದಿನ 15 ಲಕ್ಷ ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗುತ್ತಿದೆ.

‘ಐಆರ್ ಸಿಟಿಸಿ ನೆರವಿನಿಂದ ಇದು ಭಾರತದ ಅತೀದೊಡ್ಡ ಈಗ ಪ್ರಯಾಣಿಸಿ ನಂತರ ಪಾವತಿಸಿ ಎಂಬ ಇಎಂಐ ಪಾವತಿ ವ್ಯವಸ್ಥೆಯಾಗಿದೆ. ಐಆರ್ ಸಿಟಿಸಿ ಜೊತೆಗಿನ ನಮ್ಮ ಸಹಯೋಗ ದೇಶದಲ್ಲಿ ಡಿಜಿಟಲ್ ಇಎಂಐ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆಯಾಗಿದೆ. ಈ ಸಹಭಾಗಿತ್ವವು ಕ್ಯಾಶ್ ಇಗೆ ಐಆರ್ ಸಿಟಿಸಿಯ ಲಕ್ಷಾಂತರ ಗ್ರಾಹಕರನ್ನು ತಲುಪಲು ಹಾಗೂ ಅವರಿಗೆ ಈ ಹಿಂದೆ ಎಂದೂ ಸಿಗದ ಹಾಗೂ ಈಗ ಆರಾಮದಾಯಕವಾಗಿ ಪ್ರಯಾಣಿಸಿ ನಂತರ ಅವರ ರೈಲ್ವೆ ಟಿಕೆಟ್ ಗೆ ಇಎಂಐ ಮುಖಾಂತರ ಹಣ ಪಾವತಿಸುವ ಅವಕಾಶ ಕಲ್ಪಿಸಿದೆ’ ಎಂದು ಕ್ಯಾಶ್ ಇ ಸಂಸ್ಥಾಪಕ ಅಧ್ಯಕ್ಷ ವಿ.ರಮಣ್ ಕುಮಾರ್ ತಿಳಿಸಿದ್ದಾರೆ.

ಕ್ಯಾಶ್ ಇ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಈಗ ಟಿಕೆಟ್ ಖರೀದಿಸಿ ನಂತರ ಪಾವತಿ ಮಾಡುವ ಆಯ್ಕೆ ನೀಡಿದ್ರೆ ಮೋಸ ಹೋಗುವ ಸಾಧ್ಯತೆ ಇಲ್ವಾ? ಎಂಬ ಪ್ರಶ್ನೆಯೂ ಮೂಡಬಹುದು. ಕ್ಯಾಶ್ ಇ ಕೃತಕ ಬುದ್ಧಿಮತ್ತೆ ಆಧಾರಿತ ಅಲ್ಗೊರಿಥಮ್ ಪ್ಲ್ಯಾಟ್ ಫಾರ್ಮ್ ನಲ್ಲಿ ಸೋಷಿಯಲ್ ಲೋನ್ ಕೋಟಿಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ SLQ ಸಾಲಗಾರನ ಪಾವತಿ ಸಾಮರ್ಥ್ಯವನ್ನು ಆತನ ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ದತ್ತಾಂಶಗಳ ಆಧಾರದಲ್ಲಿ ಗ್ರಹಿಸುತ್ತದೆ. ಆ ಬಳಿಕ ಆತ ಇಎಂಐ ಸೌಲಭ್ಯ ಪಡೆಲು ಅರ್ಹ ಹೌದು, ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಇಎಂಐ ಮೂಲಕ ರೈಲ್ವೆ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಅನೇಕ ರೈಲ್ವೆ ಪ್ರಯಾಣಿಕರಿಗೆ ನೆರವಾಗೋದರಲ್ಲಿ ಸಂಶಯವಿಲ್ಲ.

andolana

Share
Published by
andolana

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

4 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

6 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

7 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

7 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

10 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

11 hours ago